ನಮಗೆ ನಮ್ಮ ಆಲೋಚನೆಗಳನ್ನು ಮತ್ತು ಜೀವನಕ್ರಮವನ್ನು ಉತ್ತಮಗೊಳಿಸಲು ಸಮಯವಿಲ್ಲವೆಂದರೆ ತುಂಬಾ ದೂರದ ಪ್ರಯಾಣದ ಮಧ್ಯೆ ಇಂದನವನ್ನು ತುಂಬಿಸಲು ಸಮಯವಿಲ್ಲವೆಂದೇ ತಾನೆ! ಪ್ರಯಾಣ ಎಲ್ಲಿ ನಿಲ್ಲುತ್ತದೆಂಬುದು ಯಾರಿಗೆ ಗೊತ್ತು?

27 September, 2013

ನಾವ್ಯಾಕೆ ಹೀಗೆ???



ನಾವ್ಯಾಕೆ ಹೀಗೆ???

ಅದ್ಯಾಕೆ ನಾವು ಯಾವುದೇ ಟೀಕೆಯನ್ನು ಸ್ವೀಕರಿಸಲಾಗದ ಮನಸ್ಥಿತಿಯನ್ನು ಹೊಂದಿದ್ದೇವೆ! ಮಾಧ್ಯಮಗಳಲ್ಲಿ ಒಂದೇ ತುಣುಕು ಪ್ರಕಟವಾಗುವುದೇ ತಡ, ವಾಕ್ ಪ್ರಹಾರವು ಆರಂಭವಾಗುತ್ತದೆ. ಪ್ರತೀಯೊಂದು ಮಾತಿಗೂ ಹಲವು ಆಯಾಮಗಳಿವೆ.. ಆ ಆ ಸಂದರ್ಭಗಳಲ್ಲಿ ಒಂದೇ ಶಬ್ದ ಬೇರೆ ಬೇರೆ ರೂಪಕಗಳನ್ನು ಧರಿಸುತ್ತದೆ! ಇದ್ಯಾವುದನ್ನು ಗಣನೆಗೆ ತೆಗೆದುಕೊಳ್ಳದೇ ನಾವು ನಮ್ಮ ವಾಕ್ ಸ್ವಾತಂತ್ರ್ಯವನ್ನು ದುರುಪಯೋಗಮಾಡಿಕೊಳ್ಳುತ್ತೇವೆ. ನಮ್ಮ ಮಾತು ನಮ್ಮ ಮಟ್ಟವನ್ನು ಎತ್ತಿ ಹಿಡಿದು ತೋರಿಸುತ್ತದೆ ಎಂಬ ಅಂಶವನ್ನು ಕೂಡ ಮರೆತು ವ್ಯಂಗ್ಯವಾಗಿಯೋ ಇಲ್ಲಾ ಮೊನಚಾದ ಶಬ್ದಗಳ ವರ್ಷವನ್ನೇ ಸುರಿಸುತ್ತೇವೆ.
   

ಟೀಕೆಗಳನ್ನು ಸ್ವೀಕರಿಸಿ, ನಮ್ಮ ಸರಿ ತಪ್ಪುಗಳನ್ನು ವಿಮರ್ಶಿಸುವ ಸಾವಧಾನತೆ ನಮಗ್ಯಾರಿಗೂ ಯಾಕೆ ಇಲ್ಲ. ಬೇರೆಯವರ ತಪ್ಪುಗಳಿಗೆ ಕಟು ವಿಮರ್ಶಕರಾಗುವ ಭರದಲ್ಲಿ ನಮ್ಮ ಮಾತಿನ ಮೇಲೆ ಹಿಡಿತಕಳಕೊಂಡು ಅದ್ಯಾಕೆ ಕುಲಗೆಟ್ಟ ಶಬ್ದಗಳನ್ನು ಬಳಸುತ್ತೇವೆ? ಪ್ರತಿಭಟನೆ ಚಂದ ರೀತಿಯಲ್ಲೂ ಮಾಡಬಹುದು.. ವ್ಯಕ್ತಿ ಪೂಜೆ ಮಾಡುವ ಭರದಲ್ಲಿ ಅರಾಜಕೀಯತೆಯನ್ನು ಹರಡುತ್ತಿದ್ದೇವೆ,, ನಾಗರೀಕತೆಯ ಪರಧಿಯನ್ನು ದಾಟಿಬಿಟ್ಟಿದ್ದೇವೆ!!!

ಜೋಗಿಯವರೂ ನನ್ನ ಮನದ ಮಾತು ಹೀಗೆ ಹೇಳ್ತಾರೆ...

No comments:

ಈ ಬರಹಗಳೂ ನಿಮಗಿಷ್ಟವಾಗಬಹುದು!

Related Posts Plugin for WordPress, Blogger...