ನಮಗೆ ನಮ್ಮ ಆಲೋಚನೆಗಳನ್ನು ಮತ್ತು ಜೀವನಕ್ರಮವನ್ನು ಉತ್ತಮಗೊಳಿಸಲು ಸಮಯವಿಲ್ಲವೆಂದರೆ ತುಂಬಾ ದೂರದ ಪ್ರಯಾಣದ ಮಧ್ಯೆ ಇಂದನವನ್ನು ತುಂಬಿಸಲು ಸಮಯವಿಲ್ಲವೆಂದೇ ತಾನೆ! ಪ್ರಯಾಣ ಎಲ್ಲಿ ನಿಲ್ಲುತ್ತದೆಂಬುದು ಯಾರಿಗೆ ಗೊತ್ತು?

10 December, 2013

ಮುಸ್ಸಂಜೆ ಗೆಜ್ಜೆ ಹೆಜ್ಜೆ..


ನುರಿತ ಚಿತ್ರಗಾರನಂತೆ ರಂಗುಗಳ ಹದವಾಗಿ ಬೆರೆಸಿ.. ಅಲ್ಲಲ್ಲಿ ಚೆಲ್ಲಿ, ಚೌಕಟ್ಟಿಲ್ಲದ ವಿಸ್ತಾರದ ಕ್ಯಾನ್ವಾಸಿನಲಿ ತನ್ನ ಸಹಿ ಮಾಡಿ ಅತ್ತ ನಡೆವ ಅವಸರ ಅವನಿಗೆ..

ಮಾಗಿಯ ಚಳಿಯಲಿ ತನ್ನ ಪೂರ್ಣ ಮೊಗ ತೋರಿ ನಲ್ಲ ನಲ್ಲೆಯರಿಗೆ ನಶೆಯೇರಿಸುವ ಹಂಬಲದಿ ಉದಯಿಸುವ ಅವಸರ ಇವನಿಗೆ..

ಮನದ ಅಂಗಣಕೆ ಬಡಿದು ನವಿರು ಕಂಪನ ಕೊಡುವ ಭಾವಲೆಗಳ ಹೊಡೆತದ ಕಾಟ ಕಳಚುವ ಅವಸರ ಇವಳಿಗೆ..

ಈ ವೇದಿಕೆಯಲಿ ಅವನಿವನು, ಅವಳಿವಳು ತನ್ನ ಬಣ್ಣಿಸುವ ಕಾವ್ಯವರ್ಷದಲಿ ಮುಳುಗೇಳಿ, ಗೆಜ್ಜೆ ಕಟ್ಟಿ “ತಕಿಟ ತಕಿಟ ಧಿಂ ಧಿಮಿತ ತಕಿಟ ತಾಂ” ಕುಣಿದು ದಣಿಯುವ ತವಕ ಅವಳಿಗೆ,

ಅದೇ ನಮ್ಮ ಮುದ್ದು ಮುಸ್ಸಂಜೆಗೆ!


No comments:

ಈ ಬರಹಗಳೂ ನಿಮಗಿಷ್ಟವಾಗಬಹುದು!

Related Posts Plugin for WordPress, Blogger...