ನಮಗೆ ನಮ್ಮ ಆಲೋಚನೆಗಳನ್ನು ಮತ್ತು ಜೀವನಕ್ರಮವನ್ನು ಉತ್ತಮಗೊಳಿಸಲು ಸಮಯವಿಲ್ಲವೆಂದರೆ ತುಂಬಾ ದೂರದ ಪ್ರಯಾಣದ ಮಧ್ಯೆ ಇಂದನವನ್ನು ತುಂಬಿಸಲು ಸಮಯವಿಲ್ಲವೆಂದೇ ತಾನೆ! ಪ್ರಯಾಣ ಎಲ್ಲಿ ನಿಲ್ಲುತ್ತದೆಂಬುದು ಯಾರಿಗೆ ಗೊತ್ತು?

09 June, 2014

ಮನಶಾಸ್ತ್ರದ ಪಾಠ


ಡಿಸೆಂಬರ್ 2013ರರ ತರಂಗದಲ್ಲಿ ಪ್ರಕಟವಾದ ಎಸ್. ಸೀತಾರಾಮು ಬರೆದ ಕತೆ ಅಂತರಾಳದಲ್ಲಿ ಬರುವ ಈ ಸಾಲುಗಳು ಬಹಳ ಇಷ್ಟವಾಯಿತು.  ನಮ್ಮ ಬಗ್ಗೆ ನಾವು ಎಲ್ಲರೂ ತಿಳಿಯಬೇಕಾದ ಎಂದು ಅನಿಸಿ ಇಲ್ಲಿ ಹಂಚಿಕೊಂಡೆ.

ಜೋ ಮತ್ತು ಹ್ಯಾರಿ ಅನ್ನುವ ಇಬ್ಬರು ವರ್ತನಾಶಾಸ್ತ್ರಿಗಳು ಮಾನವನ ವ್ಯಕ್ತಿತ್ವವನ್ನ ಒಂದು ಚೌಕಾಕೃತಿ ಎಂದು ಪರಿಗಣಿಸಿ, ಅದನ್ನ ನಾಲ್ಕು ಭಾಗಗಳಾಗಿ ವಿಂಗಡಿಸಿದ್ದಾರೆ.

ಒಂದು ಭಾಗ ತನಗೂ ಮತ್ತು ಇತರರಿಗೂ ತಿಳಿದಿರುವಂಥದು. ಉದಾಹರಣೆಗೆ ನಮ್ಮ ರೂಪ, ಇದನ್ನ ತೆರೆದ ಭಾಗ ಎಂದು ಕರೆಯಲಾಗಿದೆ.

ಇನ್ನು ಎರಡನೆಯ ಭಾಗ ತನಗೆ ತಿಳಿದಿರುವುದು. ಆದರೆ ಇತರರಿಗೆ ತಿಳಿಯದೇ ಇರುವುದು. ಉದಾಹರಣೆಗೆ ನಮ್ಮ ಇಷ್ಟಾನಿಷ್ಟಗಳು, ನಮ್ಮ ರಹಸ್ಯಗಳು, ಇದನ್ನ ನಾವು ಇತರರಿಗೆ ತಿಳಿಸಿದರಷ್ಟೇ ಅವರಿಗೆ ತಿಳಿಯುತ್ತದೆ. ನಾವು ನಮ್ಮ ರಹಸ್ಯಗಳನ್ನು ಭಾವನೆಗಳನ್ನ ನಮ್ಮಲ್ಲೇ ಇಟ್ಟುಕೊಂಡಿರುತ್ತೇವೆ. ಅಂದರೆ ಒಂದು ಮುಖವಾಡವನ್ನ ಧರಿಸಿರುತ್ತೇವೆ. ಈ ಭಾಗಕ್ಕೆ ಮುಖವಾಡವೆಂದೇ ಹೆಸರು.

ಇನ್ನು ಮೂರನೆಯ ಭಾಗ ತನ್ನ ಬಗ್ಗೆ ತನಗೇ ಗೊತ್ತಿಲ್ಲದಿರುವುದು, ಆದರೆ ಇತರರಿಗೆ ಗೊತ್ತಿರುವುದು. ಉದಾಹರಣೆಗೆ ನಮ್ಮ ಅಂಗಚೇಷ್ಟೆಗಳು, ಮಾತನಾಡುವ ಶೈಲಿ. ಇದನ್ನ ಅಡಗಿರುವ ಭಾಗ ಎನ್ನಬಹುದು.

ಇನ್ನು ನಾಲ್ಕನೆಯ ಭಾಗ ತನಗೂ ತಿಳಿಯದೆ, ಇತರರಿಗೂ ತಿಳಿಯದೇ ಇರುವುದು. ಇದನ್ನು ಕತ್ತಲ ಕೋಣೆ ಎನ್ನಬಹುದು. ಇದರಲ್ಲಿ ನಮಗೆ ತಿಳಿಯದ ನಮ್ಮ ಎಷ್ಟೋ ಭಾವನೆಗಳು, ಅನುಭವ ಜನ್ಮ ನೋವು, ದುಃಖ ಹುದುಗಿದ್ದು, ಅವು ನಮ್ಮ ವರ್ತನೆಯ ಮೇಲೆ ನಮ್ಮ ಮನಸ್ಸಿನ ಶಂತಿಯ ಮೇಲೆ ಪರಿಣಾಮ ಬೀರುತ್ತಿರುತ್ತದೆ.

ಒಂದು ಆನಂದಕರವಾದ, ಶಂತಿಯುತವಾದ, ಸ್ನೇಹಪೂರ್ಣ ವ್ಯಕ್ತಿತ್ವ ಬೆಳೆಸಿಕೊಳ್ಳಬೇಕಾದರೆ ನಮ್ಮ ತೆರೆದ ಭಾಗ ಹೆಚ್ಚು ದೊಡ್ಡದಾಗಿರಬೇಕು. ಆಗ ಇತರರೊಡನೆ ನಮ್ಮ ವ್ಯವಹಾರ, ಸಂಬಂಧ ಸುಗಮವಾಗಿ, ಸಂತೋಷವಾಗುತ್ತದೆ. ಇದು ಕೇವಲ ನಮ್ಮ ಸಂಸಾರದಲ್ಲಷ್ಟೇ ಅಲ್ಲದೆ ಕಾರ್ಯಕ್ಷೇತ್ರದಲ್ಲೂ ಅನ್ವಯಿಸುವ ಮಾತು.


 ತೆರೆದ ಭಾಗವನ್ನ ದೊಡ್ಡದು ಮಾಡಿಕೊಳ್ಳುವ ಉಪಾಯವೆಂದರೆ, ಇತರ ಮೂರು ಭಾಗಗಳನ್ನು ಕಮ್ಮಿ ಮಾಡಿಕೊಳ್ಳುವುದು. ನಮ್ಮ ವಿಷಯವನ್ನು ಹೆಚ್ಚು ಹೆಚ್ಚು ಇತರರೊಡನೆ ಹಂಚಿಕೊಂಡಾಗ, ನಮ್ಮ ಮುಖವಾಡ ಕಳಚಿಕೊಳ್ಳುತ್ತಾ ಹೋಗುತ್ತದೆ. ಹಾಗೇ ಇತರರು ನಮ್ಮ ಬಗ್ಗೆ ಹೇಳುವ ಅಭಿಪ್ರಾಯಗಳನ್ನು ಸ್ವೀಕರಿಸಿದರೆ ನಮ್ಮ ಅಡಗಿರುವ ಭಾಗವನ್ನ ಕಮ್ಮಿ ಮಾಡುತ್ತದೆ. ಇವೆರಡರಿಂದ ನಮ್ಮ ಕತ್ತಲಕೋಣೆ ತನಗೆ ತಾನೇ ಸ್ವಲ್ಪ ಸ್ವಲ್ಪ ತೆರೆದುಕೊಳ್ಳುತ್ತದೆ. “

No comments:

ಈ ಬರಹಗಳೂ ನಿಮಗಿಷ್ಟವಾಗಬಹುದು!

Related Posts Plugin for WordPress, Blogger...