ನಮಗೆ ನಮ್ಮ ಆಲೋಚನೆಗಳನ್ನು ಮತ್ತು ಜೀವನಕ್ರಮವನ್ನು ಉತ್ತಮಗೊಳಿಸಲು ಸಮಯವಿಲ್ಲವೆಂದರೆ ತುಂಬಾ ದೂರದ ಪ್ರಯಾಣದ ಮಧ್ಯೆ ಇಂದನವನ್ನು ತುಂಬಿಸಲು ಸಮಯವಿಲ್ಲವೆಂದೇ ತಾನೆ! ಪ್ರಯಾಣ ಎಲ್ಲಿ ನಿಲ್ಲುತ್ತದೆಂಬುದು ಯಾರಿಗೆ ಗೊತ್ತು?

02 June, 2014

ಮಿರ್ಜಾ ಗಾಲಿಬ್ ಕೆಹತೆ ಹೈ..

ಊರು ಬದಲಾಯಿಸುವರು ಅವರು,
ವೇಷ ಭೂಷಣ ಬದಲಾಯಿಸುವರು,
ಸಂಬಂಧಗಳನು ಕಡಿದು ಹಾಕಿ ಹೊಸದನ್ನು ಕಟ್ಟುವರು,
ಮೈತ್ರಿ ಬದಲಾಯಿಸುವರು ಸಮಯ ಸಾಧಕರಂತೆ,
ಏನನ್ನು ಬದಲಾಯಿಸಿದರೂ ಶಾಂತಿ-ಸಮಾಧಾನ ಸಿಗಲಿಲ್ಲವಲ್ಲ..
ತಮ್ಮನ್ನು ತಾವು ಬದಲಾಯಿಸಲು ಪ್ರಯತ್ನ ಪಡಲೇ ಇಲ್ಲವಲ್ಲ!

ಮಿರ್ಜಾ ಗಾಲಿಬ್ ಹೇಳುತ್ತಾನೆ,

"ಬದುಕೆಲ್ಲಾ ಇದೇ ತಪ್ಪು ಮಾಡಿದೆ ನಾನು
ಧೂಳು ಮುಖವನ್ನೇ ಮುಸುಕಿತ್ತು..
ನಾನಾದರೋ ಮತ್ತೆ ಮತ್ತೆ ತಿಕ್ಕುತ್ತಿದ್ದೆ ದರ್ಪಣವನ್ನು!"

-ಭಾವಾನುವಾದ

No comments:

ಈ ಬರಹಗಳೂ ನಿಮಗಿಷ್ಟವಾಗಬಹುದು!

Related Posts Plugin for WordPress, Blogger...