ನಮಗೆ ನಮ್ಮ ಆಲೋಚನೆಗಳನ್ನು ಮತ್ತು ಜೀವನಕ್ರಮವನ್ನು ಉತ್ತಮಗೊಳಿಸಲು ಸಮಯವಿಲ್ಲವೆಂದರೆ ತುಂಬಾ ದೂರದ ಪ್ರಯಾಣದ ಮಧ್ಯೆ ಇಂದನವನ್ನು ತುಂಬಿಸಲು ಸಮಯವಿಲ್ಲವೆಂದೇ ತಾನೆ! ಪ್ರಯಾಣ ಎಲ್ಲಿ ನಿಲ್ಲುತ್ತದೆಂಬುದು ಯಾರಿಗೆ ಗೊತ್ತು?

16 June, 2014

ಮುಂಗಾರು ಮಳೆಯ ಹನಿಯಲಿ ನಲ್ನುಡಿಯ ಕಿಲಿ ಕಿಲಿ..

ಒಲವಿನ ನಲ್ನುಡಿ ಬೆರೆತು ಮುಂಗಾರು ಮಳೆಯ ಹನಿಯಲಿ
ಕಪ್ಪು ಕತ್ತಲೆಯಲಿ ಬೆಳಕು ಚಿಮ್ಮಿಸುತ ಕೊಳಲಿನ ದನಿಯ ಹಿನ್ನಲೆಯಲಿ
ಹೊದಿಕೆಯೊಳಗೆ ನುಸುಳಿ ಕೇಳಿಸಿತಲ್ಲವೆ ನನಗದು ಮಾರ್ದನಿಯಾಗಿ,
“ಮುನ್ನಡೆ, ಕಣ್ಣು ಮುಚ್ಚಿ ಹಾದಿಯಲಿ ಅಳುಕದೆ ಹೆಜ್ಜೆಯಿಡು..
ನಡುಗಿ ಬೆಚ್ಚಿ ಬೀಳುವ ಕಾಯಕೆ ನಾನಾಗುವೆ ಆಸರೆ
ನಿಷ್ಕಲ್ಮಶ ಮನದಲಿ ನೀ ನೀಡಲು ನನಗಾಸರೆ!


No comments:

ಈ ಬರಹಗಳೂ ನಿಮಗಿಷ್ಟವಾಗಬಹುದು!

Related Posts Plugin for WordPress, Blogger...