ನಮಗೆ ನಮ್ಮ ಆಲೋಚನೆಗಳನ್ನು ಮತ್ತು ಜೀವನಕ್ರಮವನ್ನು ಉತ್ತಮಗೊಳಿಸಲು ಸಮಯವಿಲ್ಲವೆಂದರೆ ತುಂಬಾ ದೂರದ ಪ್ರಯಾಣದ ಮಧ್ಯೆ ಇಂದನವನ್ನು ತುಂಬಿಸಲು ಸಮಯವಿಲ್ಲವೆಂದೇ ತಾನೆ! ಪ್ರಯಾಣ ಎಲ್ಲಿ ನಿಲ್ಲುತ್ತದೆಂಬುದು ಯಾರಿಗೆ ಗೊತ್ತು?

14 August, 2013

ಅವಳ ಪರವಾಗಿ..

ಅವಳ ಪರವಾಗಿ!
-----------------

ಅವನು: ಸುಖ ದುಃಖೆ ಸಮೇ ಕೃತ್ವಾ ಲಾಭಾ ಲಾಭೌ ಜಯಾ ಜಯೌ

ತಥೋ ಯುದ್ಧಯಾ ಯುಜ್ಯಸ್ವ ನೈವಮ್ ಪಾಪಮ್ ಅವಪ್ಸ್ಯಸಿ||

ಅವಳು ಪಕಪಕನೆ ನಕ್ಕಳು!

ಅವನು: ಶಾಂತಂ ಪಾಪಂ! (ಕೆನ್ನೆಗೆ ಬಡಕೊಂಡ) ಏನೇ! ಭಗವದ್ಗೀತೆಗೆ ಅಪಮಾನ ಮಾಡುತ್ತಿಯೇ!

ಅವಳು: ಮತ್ತೇನನ್ನಲಿ ನಾನು! ನಿಂಗೆ ಗೊತ್ತಾ..
ಅತೀ ನೋವು ಮತ್ತು ಅತೀ ನಲಿವಿನಲ್ಲೇ ಸುಂದರ ಕಾವ್ಯಗಳು ಸೃಷ್ಟಿಯಾಗೋದು ಬೆಪ್ಪಾ!!!
ನೋವು ಹೆಚ್ಚು ಅನುಭವಿಸಿದಷ್ಟು ಮತ್ತಷ್ಟು ಸುಂದರ ಕಾವ್ಯ!
ಹಾಗೆಯೇ ನಲಿವು!
ಹಾ! ನೋವಾಗಲಿ ನಲಿವಾಗಲಿ ತಡಕೊಳ್ಳುವ ಪರಧಿ ದಾಟಿದರೆ ಮತ್ತೆ ಮೌನ.. ಸಮಾಧಿ ಸ್ಥಿತಿ! ಅಲೌಕಿಕ ಭಾವ!

ಅವನು ಮತ್ತೆ ಮಾತನಾಡಲಿಲ್ಲ.. ಅರ್ಥವಾಗಿರಬಹುದೆಂದು ಕಾಣುತ್ತೆ ಅವಳ ಮನಸ್ಸು!

[Detachment and equanimity are essential for the spiritual seeker.
Work as such does not bind any but it is the attachment to the results of actions that binds the individual. ]
ಸುಖ-ದುಃಖ, ಜಯ-ಅಪಜಯ, ಲಾಭ-ನಷ್ಟ ಎಲ್ಲವನ್ನೂ ಸಮಾನವಾಗಿ ಸೇವಿಸಿ ತಾವರೆಯ ಪತ್ರದಮೇಲಿನ ನೀರಿನ ಹನಿಯಂತೆ ಸಂಸಾರದಲ್ಲಿದ್ದು ಜಯಿಸಬೇಕು ಎಂದು ಅವನು ಅವಳಿಗೆ ಉಪದೇಶ ಕೊಟ್ಟಾಗ ಅವಳು ಅವನಿಗಂದದನ್ನು ನನಗೆ ಹೇಳಿದಳು.. ಮತ್ತದನ್ನು ನಾನು ಅವಳಂದಂತೆ ಇಲ್ಲಿ ಬರೆದಿದ್ದೇನೆ!


-ಇತೀ
 ಅವಳ ಪರವಾಗಿ ನಾನು

No comments:

ಈ ಬರಹಗಳೂ ನಿಮಗಿಷ್ಟವಾಗಬಹುದು!

Related Posts Plugin for WordPress, Blogger...