ನಮಗೆ ನಮ್ಮ ಆಲೋಚನೆಗಳನ್ನು ಮತ್ತು ಜೀವನಕ್ರಮವನ್ನು ಉತ್ತಮಗೊಳಿಸಲು ಸಮಯವಿಲ್ಲವೆಂದರೆ ತುಂಬಾ ದೂರದ ಪ್ರಯಾಣದ ಮಧ್ಯೆ ಇಂದನವನ್ನು ತುಂಬಿಸಲು ಸಮಯವಿಲ್ಲವೆಂದೇ ತಾನೆ! ಪ್ರಯಾಣ ಎಲ್ಲಿ ನಿಲ್ಲುತ್ತದೆಂಬುದು ಯಾರಿಗೆ ಗೊತ್ತು?

27 February, 2014

ಹರ ಹರ ಮಹಾದೇವ..


ನುಡಿ ಮನವೇ ಶಿವನ ನಾಮಾವಳಿ |
ಇದುವೆ ಪರಮ ತತ್ವದ ಸಾರವು ||
|| ಓಂ ನಮಃ ಶಿವಾಯ ||
|| ಓಂ ನಮಃ ಶಿವಾಯ ||
|| ಓಂ ನಮಃ ಶಿವಾಯ || ಪಲ್ಲವಿ ||

ದೇವನ ನಾಮವು ಹೃದಯದಿ ತುಂಬಿ |
ಚಿನುಮಯನಾದೆನು ನಿನ್ನನು ನಂಬಿ |
ಜನುಮ ಜನುಮಗಳ ಭವಣೆಯ ಬೇಗೆ |
ಮರಳಿ ಮರಳಿ ಬಾರದು ಬಳಿಗೆ ||
|| ಓಂ ನಮಃ ಶಿವಾಯ ||
|| ಓಂ ನಮಃ ಶಿವಾಯ ||
|| ಓಂ ನಮಃ ಶಿವಾಯ || ಪಲ್ಲವಿ ||

ಚಂದ್ರಶೇಖರ ಸಲಹೋ ಎನ್ನುತ |
ವಂದಿಸಿ ಕೂಗಲು ಓಡುತ ಬರುವ |
ಭವಸಾಗರವ ದಾಟಿಸದಾವ |
ಮರಳಿ ಮರಳಿ ಬಾರದು ಬಳಿಗೆ ||
|| ಓಂ ನಮಃ ಶಿವಾಯ ||
|| ಓಂ ನಮಃ ಶಿವಾಯ ||
|| ಓಂ ನಮಃ ಶಿವಾಯ || ಪಲ್ಲವಿ ||

-      ಅಮ್ಮನ ಭಜನೆಗಳ ಸಂಗ್ರಹದಿಂದ


No comments:

ಈ ಬರಹಗಳೂ ನಿಮಗಿಷ್ಟವಾಗಬಹುದು!

Related Posts Plugin for WordPress, Blogger...