ನಮಗೆ ನಮ್ಮ ಆಲೋಚನೆಗಳನ್ನು ಮತ್ತು ಜೀವನಕ್ರಮವನ್ನು ಉತ್ತಮಗೊಳಿಸಲು ಸಮಯವಿಲ್ಲವೆಂದರೆ ತುಂಬಾ ದೂರದ ಪ್ರಯಾಣದ ಮಧ್ಯೆ ಇಂದನವನ್ನು ತುಂಬಿಸಲು ಸಮಯವಿಲ್ಲವೆಂದೇ ತಾನೆ! ಪ್ರಯಾಣ ಎಲ್ಲಿ ನಿಲ್ಲುತ್ತದೆಂಬುದು ಯಾರಿಗೆ ಗೊತ್ತು?

20 January, 2013

ನಂಬಿದವರ ಕೈಯ ಬಿಡ ನಮ್ಮ ದೊರೆಯು ಅಂಬುಜಾಕ್ಷ ಪುರಂದರ ವಿಠಲರಾಯನು!


ನಂಬಿದವರ ಕೈಯ ಬಿಡ ನಮ್ಮ ದೊರೆಯು ಅಂಬುಜಾಕ್ಷ ಪುರಂದರ ವಿಠಲರಾಯನು!
+++++++++++++++++++++++++++++++++++++++++

ಹಿಂದಿನ ಶನಿವಾರ ಬಸ್ಸು ಅಫಘಾತಕ್ಕೊಳಗಾಗಿ ನನ್ನ ಮಗನಿಗೆ ಒಂದಿಷ್ಟು ತರಚಿದ ಗಾಯಗಳಾಗಿತ್ತು. ಆದರೆ ಮರುದಿನ ಮೂಗಿನಲ್ಲಿ ರಕ್ತ ಬಂದಾಗ ಒಂದಿಷ್ಟು ಹೆದರಿ ಆಸ್ಪತ್ರೆಗೆ ಹೋದರೆ ಮೂಗಿನ ಎಲುಬು ಬಿರುಕು ಬಿಟ್ಟಿರಬಹುದು..ಯಾವುದಕ್ಕೂ ಕ್ಷ-ಕಿರಣ ಮಾಡಿಸುವುದು ಒಳ್ಳೆಯದೆಂದಾಗ, ಸಾಧಾರಣವಾಗಿ ಯಾವುದಕ್ಕೂ ಹೆದರದ ಅವನು ತುಂಬಾ ಗಾಬರಿಯಾಗಿದ್ದ. ಯಾಕೆಂದರೆ ಮುಂದಿನ ವಾರದಲ್ಲಿ ಸಿಮೆನ್ಸ್ ಕಂಪನಿ ಅವನ ಕಾಲೇಜಿಗೆ ಬರಲಿತ್ತು. ಈಗಾಗಲೇ ವಿಪ್ರೊದಲ್ಲಿ ಆಯ್ಕೆಯಾಗಿದ್ದರೂ ಸಿಮೆನ್ಸ್ ಸೇರುವುದು ಅವನ ಕನಸಾಗಿತ್ತು. ಅದರಲ್ಲಿ ಆಯ್ಕೆಯಾಗುದು ಸಹ ಸುಲಭವಾಗಿರಲಿಲ್ಲ. ಜೆತೆಗೆ ಈ ಮೂಗಿನ ಎಲುಬಿನಲ್ಲಿ ಏನಾದರೂ ತೊಂದರೆಯಾದರೆ ಅವನು ಆಸ್ಪತ್ರೆಗೆ ಸೇರಬೇಆಗುತ್ತಿತ್ತು. ಮತ್ತು ಅಪರೇಷನ್ ನಂತರ ಅವನಿಗೆ ಕಾಲೇಜಿಗೆ ಹೋಗಲೂ ಸಾಧ್ಯವಾಗುತ್ತಿರಲಿಲ್ಲ. ಹಾಗಾಗಿ ಅವನು ಒಂದು ಚೂರು ಧೃತಿಗೆಟ್ಟಿದ್ದನು. ಅದು ನನಗೆ ಸ್ಪಷ್ಟವಾಗಿ ಕಾಣುತ್ತಿತ್ತು. ನನ್ನ ಮಂತ್ರ ಒಂದೇ..ಯಾವುದು ನಮ್ಮ ಕೈಯಲ್ಲಿ ಇಲ್ಲ. ನಮಗೆ ಸಾಧ್ಯವಿರುವುದು ಒಂದೇ ಅವನಲ್ಲಿ ವಿಶ್ವಾಸವಿಡುವುದು ಮತ್ತು ಅವನ ಆದೇಶ ಪಾಲಿಸುವುದು. ಪವಾಡ ನಡೆಯಿತು. ವೈದ್ಯರು ಕ್ಷ-ಕಿರಣ ತೆಗೆಸಿದಾಗ ಮೂಗಿನ ಎಲುಬಿಗೆ ಯಾವುದೇ ಹಾನಿಯಾಗಿಲ್ಲವೆಂದು ತಿಳಿಸಿದರು. ಅದೇ ದಿನ ಅಪರಾಹ್ನ ಅವನು ನಿಟ್ಟೆಗೆ ಹೋದನು. ಶುಕ್ರವಾರ ಅಪರಾಹ್ನ ಅವನ ಫೋನು. ಅಮ್ಮ ನಾನು ಸಿಮೆನ್ಸ್ ಕಂಪನಿಯಲ್ಲಿ ಆಯ್ಕೆಯಾದೆನು, ಎರಡನೆಯ ಸುತ್ತಿನಲ್ಲಿ ಮೊದಲಿಗನಾಗಿ!
ಇದು ನನ್ನ ಮಟ್ಟಿಗೆ ಮಾತ್ರವಲ್ಲ ಅವನ ಮಟ್ಟಿಗೂ ಒಂದು ಪವಾಡವೇ ಎನ್ನಬಹುದು. ಇಡೀ ಕಾಲೇಜಿನಲ್ಲಿ ಕೇವಲ ನಾಲ್ಕು ಮಂದಿ ಆಯ್ಕೆಗೊಂಡಿದ್ದಾರೆ. ಅದರಲ್ಲೂ ಇಲೆಕ್ಟ್ರಿಕಲ್ ಡಿಪಾರ್ಟ್ಮೆಂಟಿನಿಂದ ಇವನೊಬ್ಬನೇ ಅದರಲ್ಲೂ R &D ಗೆ ಆಯ್ಕೆಯಾದನು. ಅವನ ಪ್ರತಿಭೆಗೆ ಇಂತಹುದೇ ಒಂದು ಕಂಪನಿಯ ಅಗತ್ಯವಿತ್ತು. 
ಈಗಾಗಲೇ ನನ್ನ ಒಡೆಯನಿಗೆ ನನ್ನ ಕೃತಜ್ಞತೆಯನ್ನು ಅರ್ಪಿಸಿದ್ದೇನೆ..ಎಂದಿನಂತೆ! ನನ್ನ ಖುಷಿ ತಮ್ಮೆಲ್ಲರೊಂದಿಗೂ ಹಂಚಿಕೊಂಡು ಇಮ್ಮಡಿ ಮಾಡಿಕೊಳ್ಳೋಣವೆಂದೆನಿಸಿತು

No comments:

ಈ ಬರಹಗಳೂ ನಿಮಗಿಷ್ಟವಾಗಬಹುದು!

Related Posts Plugin for WordPress, Blogger...