ನಮಗೆ ನಮ್ಮ ಆಲೋಚನೆಗಳನ್ನು ಮತ್ತು ಜೀವನಕ್ರಮವನ್ನು ಉತ್ತಮಗೊಳಿಸಲು ಸಮಯವಿಲ್ಲವೆಂದರೆ ತುಂಬಾ ದೂರದ ಪ್ರಯಾಣದ ಮಧ್ಯೆ ಇಂದನವನ್ನು ತುಂಬಿಸಲು ಸಮಯವಿಲ್ಲವೆಂದೇ ತಾನೆ! ಪ್ರಯಾಣ ಎಲ್ಲಿ ನಿಲ್ಲುತ್ತದೆಂಬುದು ಯಾರಿಗೆ ಗೊತ್ತು?

06 November, 2013

ಅವಳು ಅಮರಳು..

ಅವಳು ಅಮರಳು..
----------------
ಅವಳ ದೃಷ್ಟಿ  ಹೊಸ್ತಿಲ ಬಳಿ ಎಳೆದ ರೇಖೆಗಳ ಮೇಲೆ..
ಹ್ಮ್.. ರಾಮ ( ಹೌದೇ?) ಒಳಗೆ..
ಅವಳಿವಳು ಅವನಿವನು ಅಡ್ಡಾದಿಡ್ಡಿ ರೇಖೆಗಳನ್ನೆಳೆದು ಬಿಟ್ಟಿದ್ದಾರೆ..
ಇವು ಲಕ್ಷಣ ರೇಖೆಗಳೆ!

ಅಂಗಣದಾಚೆ ಇರುವವರೆಲ್ಲಾ ರಾವಣರೇ, ಶೂರ್ಪನಖಿಯರೇ?
ಅವಳ ಮನವಂದಿತು..
ರಾಮನೂ ಕೃಷ್ಣನೂ ಇರುವರಲ್ಲಿ 
ರಾವಣ ದುಶ್ಯಾಸನರ ನಡುವಿನಲ್ಲಿ..
ಮತ್ತೆ ಸೀತೆಯೂ.. ರಾಧೆಯೂ..
ಶೂರ್ಪನಖಿ ರುಕ್ಮಿಣಿ ಸತ್ಯಭಾಮೆಯರೆಡೆಯಲ್ಲಿ!

ತಂಗಾಳಿ ಮುಂಗುರಳ ಸರಿಸಿತು..
ಹೊತ್ತು ತಂದ ವಸಂತ ಸುಗಂಧವನು..
ರತಿ ಮದನರ ಸಲ್ಲಾಪ ಹೂಗಿಡಗಳೆಡೆಯಲ್ಲಿ..
ಅವಳಿಗೇಕೆ ಉರಿ..
ದೂರದಲ್ಲಿ ಕೋಗಿಲೆಯ ಪಂಚಮ ಗಾನ..
ಎದೆಯೊಳಗೇಕೆ ಮಿಂಚು!

ನಸುಗೆಂಪು ಉಗುರುಗಳ ಹಸ್ತ ಕಾಣಿಸಿತು..
ಹಸ್ತದ ಒಡೆಯ ಸೆಳೆದನು.. 
ಹೊರ ಕರೆದನು..
ಕ್ಷಣಮಾತ್ರಕೂ ಚಿಂತಿಸದೇ ದಾಟಿ ನಡೆದವಳು ರೇಖೆಗಳನು..
ಕೊನೆಗೂ ಆತ್ಮಕರೆಗೆ ಮಣಿದಳು!

ಒಲಿದಳು ಒಲವಿನ ಒಲುಮೆಗೆ..
ಗೋಪಿಯಾದಳು  ಗೋಪಾಲನ ಮುರಳಿಯ ನಾದಕೆ..
ಶಿವೆಯಾದಳು ಸದಾಶಿವನ ಡಮರಿನ ನಾದಕೆ..
ನದಿಯಾದಳು ಸಾಗರನ ಶಂಖ ನಾದಕೆ..
ಪ್ರಾಣವನೇ ಅರ್ಪಿಸಿ ಅಮರಳಾದಳು ಒಲವಿನ ಅಮೃತಕೆ!

No comments:

ಈ ಬರಹಗಳೂ ನಿಮಗಿಷ್ಟವಾಗಬಹುದು!

Related Posts Plugin for WordPress, Blogger...