ನಮಗೆ ನಮ್ಮ ಆಲೋಚನೆಗಳನ್ನು ಮತ್ತು ಜೀವನಕ್ರಮವನ್ನು ಉತ್ತಮಗೊಳಿಸಲು ಸಮಯವಿಲ್ಲವೆಂದರೆ ತುಂಬಾ ದೂರದ ಪ್ರಯಾಣದ ಮಧ್ಯೆ ಇಂದನವನ್ನು ತುಂಬಿಸಲು ಸಮಯವಿಲ್ಲವೆಂದೇ ತಾನೆ! ಪ್ರಯಾಣ ಎಲ್ಲಿ ನಿಲ್ಲುತ್ತದೆಂಬುದು ಯಾರಿಗೆ ಗೊತ್ತು?

05 November, 2013

ಬದುಕು ಸಾರ್ಥಕವಾಯಿತೆಂಬ ಭಾವ.. ತಂದ ಸಂದೇಶ!


shiela...and photography!
shiela ..and painting!!
shiela ...and drawing!!!
shiela ... and kannada!!!!
and now...... shiela .... and sanskrit!!!!!!!!!!!
 loving it!!!

ಇಂದು ಅಪರಾಹ್ನ ಪಟಕ್ಕಂತ ನನ್ನ ಇನ್‍ಬಾಕ್ಸ್ ಗೆ ಬಂದು ಬಿದ್ದಾಗ.. ನಾನು ಅಯೋಮಯಳಾದೆ!!!

ಅಪ್ಪ, ಗುರು.. ಹೀಗೆ ಅತ್ಯಂತ ಹೆಚ್ಚಿನ ಸ್ಥಾನ ಪಡೆದ ಈ ಮಹನೀಯರು ಎಂದೂ ನನಗೆ ಯಾವ ಸಂದೇಶವನ್ನೂ ಕಳುಹಿಸಿರಲಿಲ್ಲ. ಮತ್ತವರಿಗೆ ನನ್ನ ಮನದಲ್ಲಿನ ಅವರ ಸ್ಥಾನದ ಅರಿವೂ ಇರಲಿಲ್ಲ!

ನನಗಿದೆಯೇ ಈ ಗೌರವಕ್ಕೆ ಅರ್ಹತೆ???”

’ಹ್ಮುಂ, ಇದೆ ಶೀಲಾ.. ನಿನಗಿದೆ. ಒಂಚೂರು ಹಿಂದಿರುಗಿ ನೀ ನಡೆದು ಬಂದ ಹೆಜ್ಜೆ ಗುರುತುಗಳನ್ನು ನೋಡಂತೆ ಒಮ್ಮೆ!’
ಮನ ಪಿಸುನುಡಿಯಿತು!

1994ರ ಹೆಜ್ಜೆ ಗುರುತು ಕಾಣಿಸಿತು..


“ಮೇಡಂ, ಪ್ಲೀಸ್ ನಂಗೆ ಸ್ಪೆಲ್ಲಿಂಗ್ ಎಲ್ಲಾ ಬರೊಲ್ಲ.. ಹೆಲ್ಪ್ ಮಾಡ್ತಿರಾ?”

ಮೂರುವರೆ ವರ್ಷದ ಮಗನ ಜತೆ ಅವನ ಸ್ಕೂಲಿಗೆ ಹೋಗಿದ್ದಾಗ ಆಕೆ ಬಂದು ನನ್ನನ್ನು ಕೇಳಿದಳು!

ಇದ್ದಕ್ಕಿದ್ದಂತೆ ಅಳುಕು ನನ್ನಲ್ಲಿ ಕಾಣಿಸಿತು! ಮೊನ್ನೆ ಮಗನ ಅಪ್ಲಿಕೇಷನ್ ಫಾರ್ಮ್ ತುಂಬಿದ್ದು ಅವನ ತಂದೆ! ನಾನು ಪೆನ್ನು ಹಿಡ್ಕೊಂಡು ನಾಲ್ಕು ವರ್ಷವಾಯಿತಲ್ಲ!

ಇಲ್ಲ ಅನ್ನಲು ಅಹಂ ಬಿಡಲಿಲ್ಲ!

“ಸರಿ, ಹೇಳಿಯಮ್ಮಾ!”

“ನನ್ನ ಮಗನಿಗೆ ಗಾಂಧಿ ಬಗ್ಗೆ ಬರೆಯಲು ಹೇಳಿದ್ದಾರೆ. ನನಗೆ ಕನ್ನಡದಲ್ಲಿ ಗೊತ್ತಾಗುತ್ತೆ, ಇಂಗ್ಲೀಷಿನಲ್ಲಿ ಗೊತ್ತಾಗೊಲ್ಲ. ಪ್ಲೀಸ್ ಹೆಲ್ಪ್ ಮಾಡಿ!”

ಪೆನ್ನು ತೆಗೆದು ಮೋಹನದಾಸ ಕರಮಚಂದಯೇನೋ ಬರೆದೆ.. ಗಾಂಧಿ ಬರೆಯುವಾಗ.. ಅರೇ Gha.. ಮತ್ತೆ dhi.. ನಾ ಅಥವಾ di ನಾ..ಅಲ್ಲಲ್ಲ.. Ga ಅಲ್ವಾ? ಓಹ್! ನಂಗೆ ಏನೂ ನೆನಪಿಲ್ಲ.. ಕುಸಿದುಹೋದೆ! ಮುಗಿತು ನನ್ನ ಕತೆ.. ಮೊದಲೇ ನೆಂಟರ ಸ್ನೇಹಿತರೆಲ್ಲ ಹೆಸರು.. ಘಟನೆಗಳು ಮಸುಕಾಗ್ತಿತ್ತು.. ಈಗ ಕಲಿತ ವಿದ್ಯೆಯೂ ತೀರ್ಥವಾಗಿಬಿಟ್ಟಿತೆ???

ಮನೆಗೆ ಮರಳಿದವಳು ಕೆಲವೊಂದು ನಿರ್ಧಾರ ತೆಗೆದುಕೊಂಡೆ! ಮಗನಿಗೆ ಕಲಿಸುತ್ತ ಮತ್ತೆ ಮರೆತ ವಿದ್ಯೆಯನ್ನು ನೆನಪಿಗೆ ತಂದೆ!

ಹುಟ್ಟಿದ 11ನೇ ದಿನ ಆಆಆ.. ಅಂತ ಶುರು ಮಾಡಿದ ಬಾಯಿ ಮಗ ಮುಚ್ಚಿದಾಗ ಅವನಿಗೆ ಎರಡುವರೆ! ಆಗಲೇ ಮಗಳು ಆಆಆ.. ಅಂದಳು. ಅವಳು ಮುಚ್ಚಿದಾಗ ಭರ್ತಿ 12ವರ್ಷ! ಮತ್ತೆ ಎಲ್ ಕೆಜಿಯಿಂದ ಕಲಿಯಲು ಆರಂಭಿಸುತ್ತಾ ಆತ್ಮವಿಶ್ವಾಸ ವೃದ್ಧಿಯಾಯಿತು. ಮಕ್ಕಳು ತರುವ ಶೀಳ್ಡ್ ಗಳಲ್ಲಿ ನನ್ನ ಕನಸು ನನಸಾಗುತ್ತಿತ್ತು.. ಪ್ರಶಸ್ತಿ ಪತ್ರಗಳ ಪಟ್ಟಿ ಬೆಳೆಯುತ್ತಲೇ ಹೋಯಿತು. ಕೊನೆಗೂ ಹುಸ್ ಅಂತ ಆರಾಮದ ದಿನಗಳೂ ಬಂದವು.. ಸಮಯನೂ ಕೂಡಿ ಬಂತು!

ಕುಂಚ ಮರಳಿತು ಬೆರಳಿಗೆ! ಅಂತರ್ಜಾಲ ಬೆಳೆಸಿತು.. ಕನಸನ್ನು ಬಿತ್ತಿತು! ನನ್ನದೇ ಚಿತ್ರ ಪ್ರದರ್ಶನದ ಕನಸು ಕಾಣುವ ಮನಸೀಗ!  ಮಧ್ಯದಲ್ಲೇ ಬರೆಯುವ ಸೆಳೆತ.. ಕೆಮರಾ ಹಿಡಕೊಂಡು ಸಿಕ್ಕಿದೆಲ್ಲ ಕ್ಲಿಕ್ಕಿಸುವ ಆಸೆ! ನಿಧಾನವಾಗಿ ಕೆಮರಾದಲ್ಲಿನ ಎಲ್ಲಾ ಸೌಲಭ್ಯ ಬಳಸುವ ಉಮೇದು.. ಫೇಸ್ ಬುಕ್ ಅಣ್ಣಂದಿರ ಭೇಷ್! ಮತ್ತೆ ಹಿಂದಿರುಗಿ ನೋಡಲಿಕ್ಕುಂಟೇ! ಮುಂಜಾವು ಸ್ನೇಹಿತರ ಹಿತಮಿತ ಚಪ್ಪಾಳೆ.. ಮತ್ತಷ್ಟು ಬರಹಗಳ ಸಾಲು.. ಭಾವಗಳು ನಡೆದವು ತೆರೆದ ಮನದಿಂದ ಅಕ್ಷರ ರೂಪಗಳಾಗಿ.. ತೇರನೇರಿ ಕುಳಿತವು! ಆತ್ಮತೃಪ್ತಿ.. ಇನ್ನು ಸಾವು ಬಂದರೂ ಅಪ್ಪಿಕೊಳ್ಳುವ ತವಕ! ಸ್ನೇಹಹಸ್ತಗಳ ಸಿಹಿ ಮಾತು, ಕಣ್ಣೊರಸುವಿಕೆ.. ಆ ಅಪ್ಪುಗೆ.. ಇದುವೇ ನನ್ನ ಬದುಕು.. ಈಗ ನಾ ಬಾಳುತಿರುವೆ ನಿಜದಿ!


ಹ್ಮೂಂ.. ಇದೆಲ್ಲ ಅಲ್ಪ ತೃಪ್ತಿ! ಇಂದಿದ್ದದು ನಾಳೆ ಇರೊಲ್ಲ..ಸೆಳೆಯುವುದು ವಿಧಿ.. ಬಂದು ಹುಳಿ ಹಿಂಡುತ್ತದೆ. ಇರಲಿ, ಇವತ್ತಿನ ಖುಷಿ ಇವತ್ತಿಗೆ! ನಾಳೆ ಬರುವ ನೋವು ನಾಳೆಗೆ.. ಎದುರಿಸಲು ಕೊಡು ಎನಗೆ ಆತ್ಮಸ್ಥೈರ್ಯವನು ನನ್ನೊಡೆಯ!!!

No comments:

ಈ ಬರಹಗಳೂ ನಿಮಗಿಷ್ಟವಾಗಬಹುದು!

Related Posts Plugin for WordPress, Blogger...