ನಮಗೆ ನಮ್ಮ ಆಲೋಚನೆಗಳನ್ನು ಮತ್ತು ಜೀವನಕ್ರಮವನ್ನು ಉತ್ತಮಗೊಳಿಸಲು ಸಮಯವಿಲ್ಲವೆಂದರೆ ತುಂಬಾ ದೂರದ ಪ್ರಯಾಣದ ಮಧ್ಯೆ ಇಂದನವನ್ನು ತುಂಬಿಸಲು ಸಮಯವಿಲ್ಲವೆಂದೇ ತಾನೆ! ಪ್ರಯಾಣ ಎಲ್ಲಿ ನಿಲ್ಲುತ್ತದೆಂಬುದು ಯಾರಿಗೆ ಗೊತ್ತು?

14 November, 2013

ಈ ಪಯಣ ನಿನ್ನತ್ತಲೇ ನನ್ನೊಲವೇ..

ಈ ಪಯಣ ನಿನ್ನತ್ತಲೇ ನನ್ನೊಲವೇ..
--------------------------

ಮುಳ್ಳುಗಳು ಇಣುಕಿ ಬೆದರಿಸಿ ಚುಚ್ಚುತ್ತಿದ್ದವು ಕಣ್ಗಳಿಗೆ
ಹಾದಿಯುದ್ದಕ್ಕೂ ಹರಡಿದ ಗುಲಾಬಿ ಪಕಳೆಗಳೆಡೆಯಿಂದ

ಪಯಣ ನಿಲ್ಲಿಸುವಂತೆ ಒತ್ತಡ, ಅಬ್ಬರ ಅಲ್ಲಿಲ್ಲಿ..
ಗಾಳಿ ತೇಲಿಸಿ ತಂದ ಒಲವಿನ ಪಿಸುಮಾತುಗಳಲಿ
ಖಳನಾಯಕರ ಅಟ್ಟಹಾಸದ ಮಾರುಲಿಯೂ..

ಅನುಮಾನ, ಹತಾಶೆ, ಹೆದರಿಕೆ..
ಬೇತಾಳದಂತೆ ಬೆನ್ನ ಏರಿ ಮನ ಭಾರ..
ಶಪಥ ತೊಟ್ಟು ಬಿಡದೆ ಚೆಂಡಾಡಿದವು..
ಕನಸುಗಳು ಚಿಂದಿಚೂರು, ರಸ್ತೆಪಾಲು..

ಹ್ಮುಂ! ಸಿಂಹಿಣಿ ನಾನು ಹಿಮ್ಮೆಟ್ಟುವೆನೆ..
ತೊಟ್ಟೆನೀಗ ರಕ್ಷಾಕವಚ
ಹೊರಟೆ ಮತ್ತೆ ಒಲವಿನತ್ತ..

ಒಲವಿನ ಜಪವ ಬಿಟ್ಟು ನಾನುಳಿಯಲಾರೆ
ಲೋಕ ಅಪವಾದಕೆ ನಾ ಬೆಲೆಕೊಡಲಾರೆ!

No comments:

ಈ ಬರಹಗಳೂ ನಿಮಗಿಷ್ಟವಾಗಬಹುದು!

Related Posts Plugin for WordPress, Blogger...