ನಮಗೆ ನಮ್ಮ ಆಲೋಚನೆಗಳನ್ನು ಮತ್ತು ಜೀವನಕ್ರಮವನ್ನು ಉತ್ತಮಗೊಳಿಸಲು ಸಮಯವಿಲ್ಲವೆಂದರೆ ತುಂಬಾ ದೂರದ ಪ್ರಯಾಣದ ಮಧ್ಯೆ ಇಂದನವನ್ನು ತುಂಬಿಸಲು ಸಮಯವಿಲ್ಲವೆಂದೇ ತಾನೆ! ಪ್ರಯಾಣ ಎಲ್ಲಿ ನಿಲ್ಲುತ್ತದೆಂಬುದು ಯಾರಿಗೆ ಗೊತ್ತು?

14 February, 2013

ಈ ಮುಸ್ಸಂಜೆಯಲಿ ಮೂಡಿದ ವ್ಯಾಲಂಟೈನ್ ಗೀತೆ!





ನಕ್ಷತ್ರಗಳ ಪಡೆಯ ನಡುವೆ ಹೊಳೆಯುವ ಅರ್ಧಚಂದಮನೇ,
ಒಯ್ಯೋ ನನ್ನೀ ಕಾವ್ಯವ ಅತ್ತ ಅವಳೆಡೆ..
ಕಾದಿರುವಳು ಆಕೆ ದಿನವಿಡೀ...
ಅದೇಕೋ ಇಂದೇ ಮಲಗಿದೆ ಅಡ್ಡ ಜಂಗಮವಾಣಿ...
ಒಂದಿಷ್ಟು ಪುಣ್ಯ ಕಟ್ಟಿಕೋ...
ನನ್ನೆದೆಯ ಭಾವವೇ ಹರಿದಿದೆ... 
ಒಲುಮೆಯ ಕಾವ್ಯದ ಓಲೆಯಾಗಿ...
ಕಣ್ಣಾಡಿಸಬೇಡ... ನಗಬೇಡ...
ನಾ ಕಾಳಿದಾಸನೂ ಅಲ್ಲ,
ನಾ ಕೆ.ಎಸ್ ನರಸಿಂಹ ಸ್ವಾಮಿಯೂ ಅಲ್ಲ...
ನಾ ಕೇವಲ ಹುಚ್ಚ...
ನನ್ನೊಲುಮೆಯ ದಾಸ...
ಅದರರಿವಿದೆ ಅವಳಿಗೆ..
ನನಗಷ್ಟು ಸಾಕು...
ಇನ್ನೇನು ಬೇಕು 
ವಿರಹಿ ಪ್ರೇಮಿಗೆ!
ಈ ಮುಸ್ಸಂಜೆಯಲಿ ಮೂಡಿದ ವ್ಯಾಲಂಟೈನ್ ಗೀತೆ!

No comments:

ಈ ಬರಹಗಳೂ ನಿಮಗಿಷ್ಟವಾಗಬಹುದು!

Related Posts Plugin for WordPress, Blogger...