ನಮಗೆ ನಮ್ಮ ಆಲೋಚನೆಗಳನ್ನು ಮತ್ತು ಜೀವನಕ್ರಮವನ್ನು ಉತ್ತಮಗೊಳಿಸಲು ಸಮಯವಿಲ್ಲವೆಂದರೆ ತುಂಬಾ ದೂರದ ಪ್ರಯಾಣದ ಮಧ್ಯೆ ಇಂದನವನ್ನು ತುಂಬಿಸಲು ಸಮಯವಿಲ್ಲವೆಂದೇ ತಾನೆ! ಪ್ರಯಾಣ ಎಲ್ಲಿ ನಿಲ್ಲುತ್ತದೆಂಬುದು ಯಾರಿಗೆ ಗೊತ್ತು?

15 April, 2014

ಎಲ್ಲವೂ ಸ್ಪಷ್ಟ.. ಸತ್ಯ!


ನಮ್ಮೊಳಗಿನ ಕಸ ಕಲ್ಮಷ ಗುಡಿಸುತ್ತಾ ಒಳಹೋದಂತೆ..


ಸುರಂಗದಲ್ಲಿ ತನ್ನಿಂದ ತಾನೇ ಉರಿಯುವ ಹಣತೆಗಳು ಅಲ್ಲಲ್ಲಿ..


ಹಣತೆ ಚೆಲ್ಲುವ ಬೆಳಕಿನಲಿ ಸುಟ್ಟುಕೊಳ್ಳುತ್ತಾ ತೆರೆದುಕೊಳ್ಳುತ್ತದೆ ಸತ್ಯದ ಹಾದಿ..


ಬದುಕನು ಬದುಕುವ ಕಲೆಯ ಪಾಠ..


ಮನದಲಿ ಘರ್ಷಣೆ, ಮಂಥನ ಎಲ್ಲಾ ಮುಕ್ತಾಯ


ಜ್ಞಾನೋದಯ..


ಇದೀಗ ಎಲ್ಲವೂ ಸ್ಪಟಿಕದಂತೆ ಸ್ಪಷ್ಟ!

No comments:

ಈ ಬರಹಗಳೂ ನಿಮಗಿಷ್ಟವಾಗಬಹುದು!

Related Posts Plugin for WordPress, Blogger...