ನಮಗೆ ನಮ್ಮ ಆಲೋಚನೆಗಳನ್ನು ಮತ್ತು ಜೀವನಕ್ರಮವನ್ನು ಉತ್ತಮಗೊಳಿಸಲು ಸಮಯವಿಲ್ಲವೆಂದರೆ ತುಂಬಾ ದೂರದ ಪ್ರಯಾಣದ ಮಧ್ಯೆ ಇಂದನವನ್ನು ತುಂಬಿಸಲು ಸಮಯವಿಲ್ಲವೆಂದೇ ತಾನೆ! ಪ್ರಯಾಣ ಎಲ್ಲಿ ನಿಲ್ಲುತ್ತದೆಂಬುದು ಯಾರಿಗೆ ಗೊತ್ತು?

12 October, 2012

ಜೀವದ್ರವ್ಯ ಬತ್ತಿಹೋದ ಮರವೊಂದು ಬಳ್ಳಿಗಾಸರೆಯಾದ ಭಾವಚಿತ್ರಕ್ಕೆ ಆಸುಮನದ ಕಾವ್ಯಸ್ಪಂದನ!





ಅಂದು ಹಸಿರು, ಎಂಥ ವೈಭವ 
ದೃಷ್ಟಿ ಬೀಳುವ ತೆರದಲಿ 
ಸುಮಂಗಲಿಯಾ ಸಿರಿಯ ವೈಖರಿ 
ಮಾಸಿ ವಿಧವೆಯು ಆಗಿದೆ 

ಸುತ್ತ ಮುತ್ತಲು ಹತ್ತು ಮರಗಳು 
ಹಸಿರನುಟ್ಟು ಕುಣಿಯಲು 
ಇದ್ದ ಊರಿನ ಪರಿವೆಯಿಲ್ಲದೆ 
ಸ್ಥಬ್ಧಳಾಗಿ ನಿಂತಿದೆ 

ಅಂದು ಹಕ್ಕಿಯ ಬಳಗಕೆಲ್ಲ 
ಆಯಿತದುವು ಆಲಯ 
ಇಂದು ಎಲ್ಲವ ಕಳೆದುಕೊಂಡರೂ 
ಮನದಿ ಇಹುದು ಆಶಯ 

ಏನೇ ಆದರೂ, ಎಷ್ಟು ಸೋತರೂ 
ಧೈರ್ಯಗೆಡದೇ ನಿಂತಿದೆ 
ಅಂತ್ಯ ಕಾಲದಲ್ಲಿ ಕೂಡ 
ಬಳ್ಳಿಗಾಸರೆ ನೀಡಿದೆ

- ಮತ್ತೊಂದು ಸೂಪರ್ ಕವನ ಪರೇಶ್ ಸರಾಫ್‍ನವರಿಂದ!

 ಅಲ್ಲದೆ, ಉಷಾಕಟ್ಟೆಮನೆಯವರು, ಶ್ರೀವತ್ಸ ಕಂಚಿಮನೆಯವರು, ನನ್ನ ಭಾವನ ಮಗ ಅನುಜ್ ನಾಯಕ್, ಜಲಚರ ಬ್ಲಾಗಿನ ಆಝಾದ್ ಅಣ್ಣ, ನನ್ನ ತಮ್ಮ ಕಿರಣ್, ಗೋಪಾಲಕೃಷ್ಣ ಪ್ರಭು ಮತ್ತು ನನ್ನ ಮಗಳು ಮನಿಷಾ ಶೀರ್ಷಿಕೆಗಳನ್ನು ನೀಡಿದ್ದಾರೆ....



Azad IS :ತಾತ್ಕಾಲಿಕವಿದು ಒಣಗಿರುವೆನೆಂದು ಕಡಿಯಬೇಡಿ... ಆದರೂ ನಾನಾಗಿಲ್ಲವೇ ಹಸಿರುಲತೆಗೆ ಜೋಡಿ

Anuj Nayak :'THERE WILL ALWAYS BE HOPE EVEN IN THE SMALLEST THINGS IN THE WORLD'


Manisha Nayak K: You are never too weak to support others


Gopalkrishna Prabhu :Akin to moulting !

Usha Kattemane: ನೀನೊಲಿದರೆ ಕೊರಡು ಕೊನರುವುದಯ್ಯಾ..

Shrivatsa Kanchimane :ಜೀವದ್ರವ್ಯ ಬತ್ತಿದ ಮೇಲೂ ಲತೆಗೆ ಆಸರೆಯಾಗುವ ಒಣಮರದ ನಿಸ್ವಾರ್ಥ ಒಲವು ನನ್ನಲ್ಲೂ ಒಂದಿಷ್ಟು ಒಸರಿದ್ದರೆ......



ನಾಲ್ಕು ತಿಂಗಳ ಹಿಂದೆ ಬೇಸಿಗೆ ಶಿಬಿರಕ್ಕೆ ಭಾಗವಹಿಸಲು ಗಾಂಧಿನಗರದ ಕಡೆಗೆ ಹೋಗುತ್ತಿದ್ದಾಗ ಈ ಒಣಮರ ನನ್ನನ್ನು ಸೆಳೆದಿತ್ತು....ಆಗಲೇ ಆ ಹಸಿರು ಬಳ್ಳಿ ಮರದ ಕಡೆ ಪಯಣ ಬೆಳೆಸಿತ್ತು....ಆ ಸಮಯದಲ್ಲಿ ಛಾಯಾಚಿತ್ರ ತೆಗೆಯಲು ಅಷ್ಟೊಂದು ಧೈರ್ಯವಿರಲಿಲ್ಲ...ಆದರೆ ಮೊನ್ನೆ ಅಲ್ಲಿ ಹೋಗುವ ಕೆಲಸವಿದ್ದ ಕಾರಣ ಕ್ಯಾಮರಾ ತೆಗೆದುಕೊಂಡು ಹೋದೆ ಮತ್ತು ನನ್ನ ಗಣಕಯಂತ್ರದಲ್ಲಿ ಬಂಧಿಸಿಬಿಟ್ಟೆ...

    

No comments:

ಈ ಬರಹಗಳೂ ನಿಮಗಿಷ್ಟವಾಗಬಹುದು!

Related Posts Plugin for WordPress, Blogger...