ನಮಗೆ ನಮ್ಮ ಆಲೋಚನೆಗಳನ್ನು ಮತ್ತು ಜೀವನಕ್ರಮವನ್ನು ಉತ್ತಮಗೊಳಿಸಲು ಸಮಯವಿಲ್ಲವೆಂದರೆ ತುಂಬಾ ದೂರದ ಪ್ರಯಾಣದ ಮಧ್ಯೆ ಇಂದನವನ್ನು ತುಂಬಿಸಲು ಸಮಯವಿಲ್ಲವೆಂದೇ ತಾನೆ! ಪ್ರಯಾಣ ಎಲ್ಲಿ ನಿಲ್ಲುತ್ತದೆಂಬುದು ಯಾರಿಗೆ ಗೊತ್ತು?

26 October, 2012

ಮನದ ಮೊರೆಯ ಕೇಳುವೆಯಾ, ನನ್ನೊಡೆಯ!


ಎಂದಿನಂತಿತ್ತಲ್ಲವೇ ಆ ಬೆಳಗು 
ಇತ್ತೇ ಬಿರುಗಾಳಿ ಬರುವರಿವು
ದಟ್ಟನೆಯ ಕಾರ್ಮೋಡ ಕವಿದು
ಇದ್ದಕ್ಕಿದ್ದಂತೆ ಸುರಿಯಿತು ಮುಗಿಲು
ಬಿರುಗಾಳಿಗಂಜಿದವು ಮನದ ಪುಟಗಳು
ಗಾಢಾ೦ಧಕಾರವು ಕವಿಯಿತು ಸುತ್ತಲೂ
ಮೂಕರಾಗವು ಹೊಮ್ಮಿತು ಮನದೊಳು
ಭಾರವ ಹೊರಲಾರದಿರಲು ಮನವು 
ಧಾವಿಸಿ ನೀ ಬಂದೆ ಅರಿತು
ತಂಪನೀವ ನುಡಿಯ ಉಸುರಲು
ಮನವಿಂದು ತುಂಬಿ ಬಂದು
ಒಡೆಯನನು ಬೇಡಿತು;
ಹರಸೆನ್ನ ತಮ್ಮನನು, ಸದಾ 
ಈ ಅಕ್ಕನ ಜೊತೆಯಿರಲೆಂದು!"

?????.......


ಗೊಂದಲವೆ...ಪ್ರಶ್ನೆಗಳು ಹುಟ್ಟುತ್ತವೆಯೇ.....
ಮನಸ್ಸನ್ನು ಮೌನವಾಗಿಸು ಮತ್ತು ಹೃದಯವನ್ನು ಭೇಟಿಯಾಗು.
ಅದುವೇ ನಿನ್ನೊಳಗಿನ ಪರಮಾತ್ಮನ ಭೇಟಿಗಿರುವ ನೇರ ದಾರಿ!

25 October, 2012

ಮನದೊಳಗಿನ ಕಿಚ್ಚು....ತನ್ನನ್ನೇ ಸುಡುವುದಲ್ಲವೆ!

    ಕಿಚ್ಚು- ಹೊರಗೇ ಇರಲಿ, ಒಳಗೇ ಇರಲಿ....ಮಾಡುವ  ಕೆಲಸ  ಒಂದೇ ಸುಡುವುದು. ಹೊರಗಿನ ಕಿಚ್ಚು ಕಣ್ಣಿಗೆ ಕಾಣಬಲ್ಲದು, ಅದನ್ನು ಆರಿಸಲು ಸಾಧ್ಯವಿದೆ. ಆದರೆ ಒಳಗಿನ ಕಿಚ್ಚು ಪರರನ್ನು ಮಾತ್ರವಲ್ಲದೆ ತನ್ನನ್ನೂ ಸುಡುವುದು. ಈ ಸತ್ಯವನ್ನು ಅರಿತಿದ್ದರೂ ನಾವದನ್ನು ಆರಿಸಲು ಪ್ರಯತ್ನಿಸುವುದಿಲ್ಲವೆ! ಏಕೆ ಹೀಗೆ? ಹಳೆ ಸುಧಾ ಪತ್ರಿಕೆಯ  "ವಿಚಾರ ಲಹರಿಯ" ಅಂಕಣದಲ್ಲಿ  ಒಂದು ಹೃದಯ ವಿದ್ರಾವಕ ಘಟನೆಯನ್ನು ನಿರೂಪಿಸಿದ್ದಾರೆ ವೈನತೇಯರು.

    ತಾಂಜಾವೂರು ರಾಜರ ಆಸ್ಥಾನದಲ್ಲಿ ವೀಣಾವಾದನದಲ್ಲಿ ಅದ್ವಿತೀಯ ಪಾಂಡಿತ್ಯವುಳ್ಳ ಕಾಳಹಸ್ತಿಯೆಂಬ ವೀಣಾವಾದಕರಿದ್ದರು. ತಮ್ಮಂತಹ ಮತ್ತೊಬ್ಬ ವಿದ್ವಾಂಸರು ಇರಬಾರದೆಂದು  ತಮ್ಮ ಪಾಂಡಿತ್ಯವನ್ನು ಯಾರೊಂದಿಗೂ ಹಂಚದೇ ಕಾಪಾಡಿಕೊಂಡಿದ್ದರು. ಮೈಸೂರಿನ ಅರಸರ ಆಮಂತ್ರಣದ ಕಾರಣ ಅವರಿಗೆ ಕೆಲವು ದಿನದ ಮಟ್ಟಿಗೆ ತಮ್ಮೂರಿನಿಂದ ದೂರವುಳಿಯಬೇಕಾಯಿತು. ಅರಸರ ಪೂಜೆಯ ಹೊತ್ತಿಗೆ ಹೊಸ ವೈಣಿಕನ ವಾದನ ಆಲಿಸಿದ ಅರಸರಿಗೆ ಬಹಳ ಮೆಚ್ಚಿಗೆಯಾಯಿತು. ಆ ಹೊಸ ವೈಣಿಕ ಬೇರ್ಯಾರಾಗಿರದೇ ಕಾಳಹಸ್ತಿಯವರ ಮಗನೇ ಆಗಿದ್ದನು. ಮೈಸೂರಿನಿಂದ ಹಿಂದಿರುಗಿ ಬಂದ ಕಾಳಹಸ್ತಿಯವರಿಗೆ ಮಗ ತಮಗಿಂತ ಚೆನ್ನಾಗಿ ನುಡಿಸುವನೆಂಬ ವಿಷಯ ಹಿಡಿಸಲಿಲ್ಲ. ತಡೆಯಲಾಗದಷ್ಟು ಈರ್ಷೆ ಸ್ವಂತ ಮಗನ ಮೇಲೆ ಉಂಟಾಯಿತು. ತಾವೇನೂ ಮಾಡುತ್ತಿದ್ದೇನೆಂಬ ಪರಿವೆಯಿಲ್ಲದೆ ಮಗನನ್ನು ಅಭಿನಂದಿಸುವ ನೆವನದಲ್ಲಿ ಅವನ ನಡುಬೆರಳನ್ನೇ ಕಚ್ಚಿತುಂಡು ಮಾಡಿಬಿಟ್ಟರು! ಅಕಟಕಟಾ!

    ಏಕಲವ್ಯನು ದ್ರೋಣರ ಮಾತ್ಸರ್ಯದಿಂದ ಹೆಬ್ಬೆರಳನ್ನೇ ಕಳಕೊಂಡನು. ದುರ್ಯೋಧನನು ತನ್ನ ಮಾತ್ಸರ್ಯದಿಂದ ತನ್ನ ವಂಶವನ್ನೆ ನಾಶಮಾಡಿದನು.    ಅಯ್ಯೋ ಮಾತ್ಸರ್ಯವು ಏನೇನು ಮಾಡಬಲ್ಲದು. ಅರಿಷಡ್ವರ್ಗಗಳ ವಾಸವು ಈ ನರ ದೇಹದೊಳು...ದೇವನು ಇತ್ತ ಸಹಜ ಸ್ವಭಾವವದು. ಅದು ಬೇರೊಬ್ಬರಿಗೆ ಹಾನಿ ಮಾಡುವ ಮಟ್ಟಕ್ಕೆ ಎಂದೂ ಏರಲು ಬಿಡಕೂಡದು. ಈರ್ಷೆಯು ನಮ್ಮ ಮಟ್ಟವನ್ನು ಹೆಚ್ಚಿಸಲು ಸಹಾಯಕವಾಗಬೇಕೇ ಹೊರತು  ಮತ್ತೊಬ್ಬರನ್ನು ಮಟ್ಟ ಹಾಕುವಂತೆ ಮಾಡಿಸಕೂಡದು.

   ಉಪಸಂಹಾರದಲ್ಲಿ ಚಿಕ್ಕ ಕತೆ:
        ಮಗ ಗಣಕಯಂತ್ರದಲ್ಲಿ ಏನೋ ಅತ್ಯಾಧುನಿಕ ತಂತ್ರಜ್ಞಾನವುಳ್ಳ ಆಟ ಆಡುತ್ತಿದ್ದಾನೆ.....ಗೆಲುವಿನ ಮೇಲೆ ಗೆಲುವು ಸಾಧಿಸುತ್ತಿದ್ದಾನೆ...ಮಧ್ಯಮಧ್ಯದಲ್ಲಿ ತನ್ನ ಗೆಲುವನ್ನು ಮನೆಯಲ್ಲಿ ಎಲ್ಲರಿಗೂ ಕೇಳುವ ಹಾಗೆ ಹೂ ಹಾ..ಶಬ್ದಗಳು! ಕೊನೆಗೂ ಆಟ ಮುಗಿದು ಅಗಲ ಮುಖಮಾಡಿಕೊಂಡು ಹೊರ ಬಂದವನನ್ನು ನೋಡಿ " ಇದೇನು ಮಹಾ...ನಾನು ಒಂದಷ್ಟು ಆ ಗೇಮ್ ಕಲಿತರೆ ನಿನ್ನನ್ನು ಸೋಲಿಸುತ್ತಿದ್ದೆ." ಮಗನ ಮುಖ ಚಿಕ್ಕದಾಯಿತು. .....ಮಾತೇ ಇಲ್ಲ. ಮರುದಿನ ತನ್ನ ತಾಯಿಯ ಹತ್ತಿರ ತನ್ನನ್ನು ಚುಚ್ಚುತ್ತಿದ್ದ ಆ ಮಾತನ್ನು ಹೇಳಿಕೊಂಡ ಮಗ ಅಂದ, " ಅಮ್ಮ, ಅಪ್ಪನಿಗೆ ನನ್ನ ಮೇಲೆ ಹೊಟ್ಟೆಕಿಚ್ಚು." ಕೇಳಿದ ಅಮ್ಮನಿಗೆ ಹುಚ್ಚುಹಿಡಿಯುವುದು ಮಾತ್ರ ಬಾಕಿ!

     ಮಗ ತನ್ನ ದೊಡ್ಡ್ಪಪ್ಪನ ಊರಿಗೆ ಹೋದವನು ಮರಳಿ ಬಂದಿದ್ದಾನೆ. ಮೊದಲಬಾರಿಗೆ ತನ್ನ ದೊಡ್ಡಪ್ಪ, ದೊಡ್ಡಮ್ಮ, ತನ್ನ ಅಣ್ಣ, ಅಕ್ಕಂದಿರನ್ನು ಭೇಟಿಯಾಗಿದ್ದಾನೆ. ( ಬುದ್ಧಿಬಂದ ನಂತರ) ಸಮಯವಲ್ಲಿ ಆನಂದದಿಂದ ಕಳೆಯಿತು ಎಂಬುದನ್ನು ಆತನ ಮುಖವು ಸಾರಿ ಸಾರಿ ಹೇಳುತಿತ್ತು. ಅಷ್ಟರಲ್ಲೇ ಅವನ ದೊಡ್ಡಮ್ಮನ ಫೋನು. ಅವನ ಅಮ್ಮನಿಗೆ ಅಭಿನಂದನೆಗಳ ಸುರಿಮಳೆ..... ಎಂತಹ ಸುಪುತ್ರನೇ ನಿನ್ನ  ಮಗ...... ಅಪ್ಪಟ ಚಿನ್ನ...... ನಡತೆಯಲ್ಲಿ ಮಾತ್ರವಲ್ಲ ಜ್ಞಾನದಲ್ಲೂ ಅವನಿಗೆ ಅವನೇ ಸರಿಸಾಟಿ.....      ಇದನ್ನು ಕೇಳಿದ ಪೋಷಕರಿಗೆ ಮಹಾನಂದವಾಗದಿರಲು ಸಾಧ್ಯವೇ. ಆದರೆ ಅವನ ತಂದೆ ಮಾತ್ರ ಕೊಕ್ಕೆ ಹಾಕಿಯೇ ಬಿಟ್ಟರು. ಅವರೆಲ್ಲ ಒಂದಿಷ್ಟು ಕೂಡಿಸಿ(ಉತ್ಪ್ರೇಕ್ಷಿಸಿ)  ಮಾತನಾಡುವವರು........ ಇವನದೇನು ಮಹಾ......!  ಕೋಚಿಂಗ್ ಕ್ಲಾಸ್ ಹೋಗದೇ, ತರಗತಿಯಲ್ಲೂ ಚೆನ್ನಾಗಿ ಕಲಿಸದೇ ಇದ್ದರೂ ತನ್ನದೇ ಬಲದಲ್ಲಿ ಸರಕಾರಿ ಸೀಟ್ ಪಡೆದು, ಇದೀಗ ತರಗತಿಯಲ್ಲಿ  ಗುರುಗಳಿಗೆ ಮಾತ್ರವಲ್ಲದೆ ತನ್ನ ಗೆಳೆಯ ಗೆಳತಿಯರಿಗೂ ನೆಚ್ಚಿನವನಾದ ಈ ಹುಡುಗ ತನ್ನ ಪೋಷಕರಿಂದ ಇಂತಹ ಮಾತನ್ನು ಕೇಳಿಸಿಕೊಂಡರೆ ಅವನ ಮನಸ್ಥಿತಿ ಏನಾಗಬಹದು!

ನನ್ನ ಗೆಳತಿಯ ಕತೆ ಕೇಳಿದ ದಿನವೇ ಕಾಕತಾಳಿಯವಾಗಿ ಈ ಲೇಖನವನ್ನು ಓದಿದೆ. ಮನಸ್ಸಿನ ಸಂಕಟ ತಡೆಯಲಾರದೆ ಹೀಗೆ ಹಂಚಿ  ಭಾರ ಇಳಿಸಿಕೊಂಡೆ!

ಸಾವು ತಂದ ಭಾವ!



ಫೇಸ್‍ಬುಕ್ ಗೆಳತಿಯೊಬ್ಬಳ ಪತಿ ಅಕಸ್ಮಾತ್ತಾಗಿ ಅಘಾತಕ್ಕೀಡಾಗಿ ಇಹ ಲೋಕವನ್ನು ತ್ಯಜಿಸಿದರು ಎಂಬ ಸುದ್ದಿ ಕೇಳಿ ಬೇಸರ ಮಾಡಿಕೊಂಡ ಸುನಿತಾ ಮಂಜುನಾಥ್ ಅವರ ಬರಹ ಓದಿದಾಗ ನನ್ನ ಮನದಲ್ಲಿ ಮೂಡಿದ ಭಾವ ಈ ರೀತಿಯಾಗಿ ಹೊಮ್ಮಿತು.

ನಮ್ಮೊಳಗೇ ಇರುವ 
ಅವನಿರುವಿಕೆಯನ್ನು 
ನಾವಾಗಿ ಅರಿತರೇ ಚೆನ್ನ.
ಚದುರಂಗದ 
ಪಡೆಗಳು ನಾವು.
ಅವ ನಡೆಸಿದ 
ನಡೆಯನ್ನು ಒಪ್ಪಲೇಬೇಕು.
ಅವನ ಕರೆ ಬಂದಾಗ 
ಹೊರಡಲೇಬೇಕು.
ಕಷ್ಟವಾದರೂ ಹೊರಟವರ
ಒಮ್ಮನಸಿನಿಂದಲೇ 
ಬೀಳ್ಕೊಡಬೇಕು ಆ 
ಆತ್ಮ ಪರಮಾತ್ಮನಲಿ
ಲೀನವಾಗಲಿ 
ಎಂಬ ಹಾರೈಕೆಯಲಿ.
**************
ಸುನಿತಾ ಮಂಜುನಾಥ್ ಅವರ ಬರಹ
_________________________


ಹುಟ್ಟು ನೀಡಿ ಬಂಧಗಳಿಂದ ಬಂಧಿಸುಯಾದರೆ 
ಸಾವ ಕಳುಹಿ ಎಲ್ಲ ತೊರೆಸುವೆಯೇಕೆ ...
ಆ ಮನೆಗೆ ಹೊಸ ಬೆಳಕ ನೀಡುವಾಗ...
ಈ ಮನೆಯ ಬೆಳಕ ನಂದಿಸುವ ಆಟವೇಕೆ...
ಹುಟ್ಟಿನ ಸಿರಿಯೇಕೆ....
ಮರಣ ಮೃದಂಗವೇಕೇ....
ನಿನ್ನ ಲೀಲೆಯ ನಾ ಅರಿಯಲು 
ನೀನೀ ಆಟ ಕಟ್ಟುವೆಯಾದರೆ...
ನಾ ನಿನ್ನ ಪ್ರೀತಿಸಬೇಕೆ..
ನಿನಗೆ ಹೆದರಬೇಕೇ..
ನಿನ್ನ ದ್ವೇಷಿಸಬೇಕೇ..
ನಿನ್ನಿರುವಿಕೆಯ ಪ್ರಶ್ನಿಸಬೇಕೆ...!!!??!!!?????
______________________________

ಅನುರಾಧ ಸಾಮಗ ಅವರ ಭಾವ!
________________________________


ಸಾವಲ್ಲೇ ಗೆಲುವೆ?!
--------------
ವಾತ್ಸಲ್ಯದಡಿಯಲ್ಲಿ ಮಗುವಾಗಿ ಬೆಳೆಯುತಿದ್ದವಳಲಿ
ಪ್ರೇಮ ಮೂಡಿಸಿ ಮಗುವಾಗುಳಿದಿಲ್ಲ ಎನಿಸಿದವ
ಎಲ್ಲಿಂದಲೋ ಬಂದು ಅವನಿಲ್ಲದೇನಿಲ್ಲ ಅನಿಸಿದವ
ಹೆಸರಿಗೆ ಅಪ್ಪನದರ ಜೊತೆ ತೆಗೆದು ತನ್ನದನ್ನಿತ್ತವ
ಅಸ್ತಿತ್ವವೊಂದಾಗಿದ್ದುದು ಅಚ್ಚರಿಯೆಂಬಂತೆ 
ಜೊತೆ ಪಡೆದೂ ಒಂದಾಗುಳಿವುದ ತೋರಿಸಿದವ
ಮಡಿಲಲ್ಲಿ ತಾಯ್ತನದ ಸೊಬಗ ಅರಳಿಸಿ
ಉಡಿ ತುಂಬಿ ತವರಿಗೆ ಕಣ್ತುಂಬಿ ಕಳಿಸಿದವ 
ಕೂಸ ಕಣ್ಣಲಿ ತಮ್ಮ ಪ್ರೇಮ ಬಿಂಬಿಸಿದಾಗ
ಹೊಸತು ಕಂಡವನಂತೆ ಸಂಭ್ರಮಿಸಿ ನಕ್ಕವ
ಬೇರೇನಿಲ್ಲವೆಂಬಂತೆ ಇಬ್ಬರ ಸುತ್ತಲೇ ಗಿರಕಿಯಾಡಿ
ಪ್ರಪಂಚ ಕೈಯ್ಯೊಳಗಿದ್ದಂತೆ ಮೆರೆಯುತ್ತಿದ್ದವ..

ಹಠಾತ್ತಾಗಿ ಹೀಗೆ ಬಿಟ್ಟು ನಡೆದರೆ.....?! 
ಕಣ್ಣೀರು ಹಸುಗಂದಗೆ, ತಾಯ್ತಂದೆಗೆ ಅರಗದು
ಮುಚ್ಚಿಟ್ಟ ಒಣದುಃಖ ಹಸಿಒಡಲು ಭರಿಸದು
ತಿಂಗಳಕಾಲ ಅಗಲದೆ ಬಂದುಬಂದು ಕಾಡಿದವನ
ಹಿಂಬಾಲಿಸಿ ಹೋಗುವ ದಾರಿಯೂ ಕಾಣದು
ಕಂಗಾಲಾಗಿ ಕೂತವಳ ಕಂಡನಿಸಿತು-
"ಸಾವಿಗಂಜಲೇಬೇಕೆ........?
ಸಾವಪ್ಪಿದಲ್ಲೇ ಗೆಲುವೇ..? ಅದು ಬಳಿಸಾರಿಯೂ
ಬಿಟ್ಟುಳಿಸಿದವರ ಪಾಲಿಗೆ ಬರೀ ಸೋಲೇ ಇರುವುದೇ?!"
( ಗೆಳತಿಯ ದುಃಖದ ಗುಂಗಲ್ಲಿ ಕಣ್ಣೀರಿನ ಮೌನಸಾಂತ್ವನದ ಜೊತೆ)














21 October, 2012

ಬರೆದದ್ದು ಮಗಳು, ಕೋಡು ಮೂಡಿದ್ದು ಅಮ್ಮನಿಗೆ




ಇವತ್ತು ಪವಾಡ ನಡೆಯಿತು ಅಂತಲೇ ಹೇಳಬಹುದು....ನನ್ನ ಮಗಳು ಕವಿತೆ ಬರೆದಳು...ಅಂದರೆ ಹಿಂದೆ ಬರೆದಿಲ್ಲವೆಂದಲ್ಲ...ಎರಡು, ಮೂರು ಸಾಲಿನ ಚುಟುಕುಗಳನ್ನು ಬರೆದಿದ್ದಳಾದರೂ ಅದನ್ನು ರೂಢಿಸಿಕೊಂಡು ಹೋಗುವ ಮನಸಿರಲಿಲ್ಲ...ನಾನಂತು ಹೇಳಿ ಹೇಳಿ ಸೋತಿದ್ದೆ. ಪ್ರತಿಭಾವಂತೆಯಾದರೂ ಮನೆತನದ ಬಳುವಳಿಯಾದ ಆಲಸ್ಯ ಅವಳಿಗೆ ಸ್ವಲ್ಪ ಹೆಚ್ಚೇ ಇತ್ತು...ನೃತ್ಯ(ಚಲನ ಚಿತ್ರ) ಮತ್ತು ಸಂಗೀತ( ಆಂಗ್ಲ, ಹಿಂದಿ ಚಲನಚಿತ್ರ) ಇವೆರಡು ಬಿಟ್ಟು ಮತ್ಯಾವುದರಲ್ಲಿ ಅಷ್ಟೊಂದು ಆಸಕ್ತಿ ತೋರಿಸುತ್ತಿರಲಿಲ್ಲ...ಅಂತವಳು ಇಂದು ತಾನಾಗಿಯೇ ಕವನ ಬರೆದು ನನಗೆ ತೋರಿಸಿದಾಗ ನನ್ನ ಆನಂದಕ್ಕೆ ಮಿತಿಯೇ ಇರಲಿಲ್ಲ. 
ಇಲ್ಲಿದೆ ನೋಡಿ ಅವಳ ಕವನ!

Unaware of who I was,

Spending time doing things of loss.

You made the real 'me' come alive,

Bringing within me the motive, the drive.

Now I realise how stupid I was,

Giving opportunities for people to boss.

And now that you've done so much for me,

Its time for me to pay back the same to you.

Do not know the 3W's-where, when and what,

But I assure you I'll make you Proud!

20 October, 2012

ಹೇಗೆ ಸಮಾಧಾನ ಪಡಿಸಲಿ ಎಂದಷ್ಟೇ ಹೇಳು ನಿನ್ನ ದಮ್ಮಯ್ಯ!

ಇನ್ನೆಷ್ಟು ಕಾಲ  ಈ ಮೌನ ಒಲವೇ
ಹುಂ, ನಿನ್ನನೇನು ಕೇಳುವುದು...
ನಿನಗೂ ಉತ್ತರ ತಿಳಿದಿರಲಿಕ್ಕಿಲ್ಲ!
ಆದರೆ, ನಾನಿವರನ್ನು ಹೇಗೆ ಸಮಾಧಾನ ಪಡಿಸಲಿ
ಎಂದಷ್ಟೇ ಹೇಳು ನಿನ್ನ ದಮ್ಮಯ್ಯ!

ಆ ಉದಯರಾಗದ ಸ್ವರವ ಕೇಳದ ಹೊರತು
ತಮ್ಮ ನಿತ್ಯಕಾಯಕ ಮಾಡಲಾರೆವು ಅನ್ನುವ
ನನ್ನ ಕಿವಿಗಳನ್ನು ಹೇಗೆ ಸಂತೈಸಲಿ!

ನಿನ್ನ ಸ್ವರಲಯಕ್ಕೆ ತನ್ನ ತಾಳ
ಕೂಡಿಸುತ್ತಿದ್ದ ನನ್ನ ಹೃದಯದ
ಗತಿ ಮರಳಿ ಹೇಗೆ  ಪಡೆಯಲಿ!

ನಿನ್ನೊಡನೆ ಸಂಭಾಷಿಸದ ಹೊರತು
ರುಚಿಯನ್ನು ಮರಳಿಸಲಾರೆ ಅನ್ನುವ 
ಈ ನಾಲಿಗೆಗೆ ಹೇಗೆ ತಿಳಿ ಹೇಳಲಿ!

ಸ್ವರ ಮಾಧುರ್ಯವ ಭುಂಜಿಸದ ಹೊರತು
ಜೀರ್ಣಶಕ್ತಿಯ ಮರಳಿಸಲಾರೆನೆಂದು ಪಣತೊಟ್ಟಿರುವ
ಜಠರಾಗ್ನಿಗೆ ಏನೆಂದು ಜವಾಬು ಕೊಡಲಿ!

ತಮ್ಮ ನಿತ್ಯ ಕಾಯಕವ ಮರೆತು,
ಸತ್ಯಾಗ್ರಹ ಮಾಡುತ್ತಿರುವ ಅಂಗಗಳಿಗೆ
ಉತ್ತರವನ್ನಿತ್ತು ಬಿಕ್ಕಟ್ಟಿನಿಂದ ಪಾರುಗಾಣಿಸು 
ದಯವಿಟ್ಟು ನಿನ್ನ ದಮ್ಮಯ್ಯ!


17 October, 2012

ಅವಳು, ಅವನು ಮತ್ತು ಇವಳು!


ನಾಲ್ಕು ದಿನದ 
ಸವಾರಿಯೆಂದೆಣಿಸಿ,
ಕನಿಕರ ತೋರಿ 
ಅವಳನು ತೆರೆದ 
ಬಾಹುಗಳಿಂದಲೇ 
ಸ್ವಾಗತಿಸಿದನವನು.

ಮಾಯಾಂಗನೆಯ 
ದೂರವಟ್ಟಲು
ಹೇಳಿದೋಪಾಯವನ್ನೆಲ್ಲಾ
ಗಾಳಿಗೆ ತೂರಿದನವನು.

ಇದೀಗ ಉಸಿರುಗಟ್ಟುವಂತಿರುವ 
ಆ ಪ್ರೀತಿಯ
ಬಲೆಯಿಂದ ಹೊರಬರಲು
ಚಡಪಡಿಸುತ್ತಿರುವನವನು.

ನೋಡಿ, ಪರಿತಪಿಸುವುದ
ಹೊರತು ಮತ್ತೇನು
ಮಾಡಬಲ್ಲಳು ಇವಳು!

___________________________

ಅವನು ಇವಳಿಗೆ ಹೀಗೆ ಉತ್ತರ ನೀಡಿರಬಹುದು....


ಕಾಡುತ್ತಿದ್ದಳು ನನ್ನನ್ನು  ನಿನ್ನಕ್ಕ
ಮಾಡಿಬಿಟ್ಟು ನನ್ನ ನಾಲಾಯಕ್ಕ

ಓಡಿಸಿದ್ದೇನೆ ನೋಡು ನಾ ಒದ್ದು
ಒಮ್ಮೆಗೇ ಓಡಿದ್ದಾಳೆ ಬಿದ್ದು ಎದ್ದು

12 October, 2012

ಜೀವದ್ರವ್ಯ ಬತ್ತಿಹೋದ ಮರವೊಂದು ಬಳ್ಳಿಗಾಸರೆಯಾದ ಭಾವಚಿತ್ರಕ್ಕೆ ಆಸುಮನದ ಕಾವ್ಯಸ್ಪಂದನ!





ಅಂದು ಹಸಿರು, ಎಂಥ ವೈಭವ 
ದೃಷ್ಟಿ ಬೀಳುವ ತೆರದಲಿ 
ಸುಮಂಗಲಿಯಾ ಸಿರಿಯ ವೈಖರಿ 
ಮಾಸಿ ವಿಧವೆಯು ಆಗಿದೆ 

ಸುತ್ತ ಮುತ್ತಲು ಹತ್ತು ಮರಗಳು 
ಹಸಿರನುಟ್ಟು ಕುಣಿಯಲು 
ಇದ್ದ ಊರಿನ ಪರಿವೆಯಿಲ್ಲದೆ 
ಸ್ಥಬ್ಧಳಾಗಿ ನಿಂತಿದೆ 

ಅಂದು ಹಕ್ಕಿಯ ಬಳಗಕೆಲ್ಲ 
ಆಯಿತದುವು ಆಲಯ 
ಇಂದು ಎಲ್ಲವ ಕಳೆದುಕೊಂಡರೂ 
ಮನದಿ ಇಹುದು ಆಶಯ 

ಏನೇ ಆದರೂ, ಎಷ್ಟು ಸೋತರೂ 
ಧೈರ್ಯಗೆಡದೇ ನಿಂತಿದೆ 
ಅಂತ್ಯ ಕಾಲದಲ್ಲಿ ಕೂಡ 
ಬಳ್ಳಿಗಾಸರೆ ನೀಡಿದೆ

- ಮತ್ತೊಂದು ಸೂಪರ್ ಕವನ ಪರೇಶ್ ಸರಾಫ್‍ನವರಿಂದ!

 ಅಲ್ಲದೆ, ಉಷಾಕಟ್ಟೆಮನೆಯವರು, ಶ್ರೀವತ್ಸ ಕಂಚಿಮನೆಯವರು, ನನ್ನ ಭಾವನ ಮಗ ಅನುಜ್ ನಾಯಕ್, ಜಲಚರ ಬ್ಲಾಗಿನ ಆಝಾದ್ ಅಣ್ಣ, ನನ್ನ ತಮ್ಮ ಕಿರಣ್, ಗೋಪಾಲಕೃಷ್ಣ ಪ್ರಭು ಮತ್ತು ನನ್ನ ಮಗಳು ಮನಿಷಾ ಶೀರ್ಷಿಕೆಗಳನ್ನು ನೀಡಿದ್ದಾರೆ....



Azad IS :ತಾತ್ಕಾಲಿಕವಿದು ಒಣಗಿರುವೆನೆಂದು ಕಡಿಯಬೇಡಿ... ಆದರೂ ನಾನಾಗಿಲ್ಲವೇ ಹಸಿರುಲತೆಗೆ ಜೋಡಿ

Anuj Nayak :'THERE WILL ALWAYS BE HOPE EVEN IN THE SMALLEST THINGS IN THE WORLD'


Manisha Nayak K: You are never too weak to support others


Gopalkrishna Prabhu :Akin to moulting !

Usha Kattemane: ನೀನೊಲಿದರೆ ಕೊರಡು ಕೊನರುವುದಯ್ಯಾ..

Shrivatsa Kanchimane :ಜೀವದ್ರವ್ಯ ಬತ್ತಿದ ಮೇಲೂ ಲತೆಗೆ ಆಸರೆಯಾಗುವ ಒಣಮರದ ನಿಸ್ವಾರ್ಥ ಒಲವು ನನ್ನಲ್ಲೂ ಒಂದಿಷ್ಟು ಒಸರಿದ್ದರೆ......



ನಾಲ್ಕು ತಿಂಗಳ ಹಿಂದೆ ಬೇಸಿಗೆ ಶಿಬಿರಕ್ಕೆ ಭಾಗವಹಿಸಲು ಗಾಂಧಿನಗರದ ಕಡೆಗೆ ಹೋಗುತ್ತಿದ್ದಾಗ ಈ ಒಣಮರ ನನ್ನನ್ನು ಸೆಳೆದಿತ್ತು....ಆಗಲೇ ಆ ಹಸಿರು ಬಳ್ಳಿ ಮರದ ಕಡೆ ಪಯಣ ಬೆಳೆಸಿತ್ತು....ಆ ಸಮಯದಲ್ಲಿ ಛಾಯಾಚಿತ್ರ ತೆಗೆಯಲು ಅಷ್ಟೊಂದು ಧೈರ್ಯವಿರಲಿಲ್ಲ...ಆದರೆ ಮೊನ್ನೆ ಅಲ್ಲಿ ಹೋಗುವ ಕೆಲಸವಿದ್ದ ಕಾರಣ ಕ್ಯಾಮರಾ ತೆಗೆದುಕೊಂಡು ಹೋದೆ ಮತ್ತು ನನ್ನ ಗಣಕಯಂತ್ರದಲ್ಲಿ ಬಂಧಿಸಿಬಿಟ್ಟೆ...

    

ಈ ಬರಹಗಳೂ ನಿಮಗಿಷ್ಟವಾಗಬಹುದು!

Related Posts Plugin for WordPress, Blogger...