ಅತ್ತ ಕರಿಮೋಡವು ಕರಗಿ 
ಬುವಿಯ ಒಂದಿಷ್ಟು ಒದ್ದೆ ಮಾಡಿತ್ತು!
ಇತ್ತ ನಲ್ಲನ ಮುನಿಸೂ ಕರಗಿ
ನಲ್ಲೆಗೆ ಪ್ರೀತಿಯ ಸಿಂಚನ ಸಿಕ್ಕಿತ್ತು!
ಒದ್ದೆಯಾದ ಮಣ್ಣ ಕಂಪು
ಆಘ್ರಾಣಿಸಲು ಬಂದವಳೆಡೆ,
ವಸುಂಧರೆ ಪ್ರಶ್ನೆಯೊಂದನ್ನು
ಬಾಣದಂತೆ ತೂರಿದಳು, 
ತೃಪ್ತಳೇ ನೀನು?
ಉತ್ತರಿಸಲು ಚಡಪಡಿಸಿದವಳಿಗಂದಳು,
ಗೊತ್ತು ಹೆಣ್ಣೇ! ನನಗದರರಿವುಂಟು,
ಧೋ ಎಂದು ಸುರಿಯುವ 
ಶ್ರಾವಣ ವರ್ಷವಷ್ಟೇ, 
ತೃಷೆಯ ಇಂಗಿಸಬಹುದಷ್ಟೇ!
ನಿನಗೂ ಅಷ್ಟೇ! 
No comments:
Post a Comment