ನಮಗೆ ನಮ್ಮ ಆಲೋಚನೆಗಳನ್ನು ಮತ್ತು ಜೀವನಕ್ರಮವನ್ನು ಉತ್ತಮಗೊಳಿಸಲು ಸಮಯವಿಲ್ಲವೆಂದರೆ ತುಂಬಾ ದೂರದ ಪ್ರಯಾಣದ ಮಧ್ಯೆ ಇಂದನವನ್ನು ತುಂಬಿಸಲು ಸಮಯವಿಲ್ಲವೆಂದೇ ತಾನೆ! ಪ್ರಯಾಣ ಎಲ್ಲಿ ನಿಲ್ಲುತ್ತದೆಂಬುದು ಯಾರಿಗೆ ಗೊತ್ತು?

10 April, 2012

ಶ್ರಾವಣ ವರ್ಷವಷ್ಟೇ, ತೃಷೆಯ ಇಂಗಿಸಬಹುದಷ್ಟೇ!


ಅತ್ತ ಕರಿಮೋಡವು ಕರಗಿ 
ಬುವಿಯ ಒಂದಿಷ್ಟು ಒದ್ದೆ ಮಾಡಿತ್ತು!
ಇತ್ತ ನಲ್ಲನ ಮುನಿಸೂ ಕರಗಿ
ನಲ್ಲೆಗೆ ಪ್ರೀತಿಯ ಸಿಂಚನ ಸಿಕ್ಕಿತ್ತು!

ಒದ್ದೆಯಾದ ಮಣ್ಣ ಕಂಪು 
ಆಘ್ರಾಣಿಸಲು ಬಂದವಳೆಡೆ,
ವಸುಂಧರೆ ಪ್ರಶ್ನೆಯೊಂದನ್ನು
ಬಾಣದಂತೆ ತೂರಿದಳು, 
ತೃಪ್ತಳೇ ನೀನು?

ಉತ್ತರಿಸಲು ಚಡಪಡಿಸಿದವಳಿಗಂದಳು,
ಗೊತ್ತು ಹೆಣ್ಣೇ! ನನಗದರರಿವುಂಟು,
ಧೋ ಎಂದು ಸುರಿಯುವ 
ಶ್ರಾವಣ ವರ್ಷವಷ್ಟೇ, 
ತೃಷೆಯ ಇಂಗಿಸಬಹುದಷ್ಟೇ!
ನಿನಗೂ ಅಷ್ಟೇ! 

No comments:

ಈ ಬರಹಗಳೂ ನಿಮಗಿಷ್ಟವಾಗಬಹುದು!

Related Posts Plugin for WordPress, Blogger...