ನಮಗೆ ನಮ್ಮ ಆಲೋಚನೆಗಳನ್ನು ಮತ್ತು ಜೀವನಕ್ರಮವನ್ನು ಉತ್ತಮಗೊಳಿಸಲು ಸಮಯವಿಲ್ಲವೆಂದರೆ ತುಂಬಾ ದೂರದ ಪ್ರಯಾಣದ ಮಧ್ಯೆ ಇಂದನವನ್ನು ತುಂಬಿಸಲು ಸಮಯವಿಲ್ಲವೆಂದೇ ತಾನೆ! ಪ್ರಯಾಣ ಎಲ್ಲಿ ನಿಲ್ಲುತ್ತದೆಂಬುದು ಯಾರಿಗೆ ಗೊತ್ತು?

22 March, 2012

ಯುಗಾದಿಗೊಂದು ಶುಭಾಶಯ!



 [ ಚಿತ್ರ ಅಂತರ್ಜಾಲ ಕೃಪೆ!




ಎಂದಿನಂತೆ ಮತ್ತೆ ಯುಗಾದಿ ಬಂದು ಹೊಸ್ತಿಲಲ್ಲಿ ನಿಂತಿದೆ.
ಕಳೆದ ವರುಷದ ಕಹಿಯ ನೆನಪ  ಮರೆತು; 
ಸುಖದ ಸಿಹಿ ನೆನಪಲಿ; 
ತುಂಬು ಮನದ ಸ್ವಾಗತ ಕೋರೋಣ!
ಪರರ ಕಷ್ಟಕೆ  ಮರುಗಿ ತಾಪ ತಗ್ಗಿಸೋಣ!
ಸುಖಕೆ ಸ್ಪಂದಿಸಿ ಇಮ್ಮಡಿ ಮಾಡೋಣ!
ಹೊಸ ವರುಷದಲಿ ಹೊಸ ಚಿಂತನೆ ನಡೆಸೋಣ!
ಮಾನವ ಧರ್ಮವ ಮೆರೆಸೋಣ!
ಸರಳ ಜೀವನದೆಡೆ ಹೆಜ್ಜೆ ಹಾಕೋಣ!
ಹಸಿರ ಹುಲುಸಾಗಿ ಬೆಳೆಸೋಣ! 
ಜನನ ಮರಣದ ಗಾಲಿಯಿಂದ ಬಿಡುಗಡೆ 
ಪಡೆಯುವೆಡೆ ನಡೆಯೋಣ!

2 comments:

ಆಸು ಹೆಗ್ಡೆ said...

ತಮ್ಮ ಕವನದ ಭಾವ ಮತ್ತು ಆಶಯಗಳು ಇಷ್ಟವಾದವು.

Sheela Nayak said...

Thank you, Suresh Sir!

ಈ ಬರಹಗಳೂ ನಿಮಗಿಷ್ಟವಾಗಬಹುದು!

Related Posts Plugin for WordPress, Blogger...