ನಮಗೆ ನಮ್ಮ ಆಲೋಚನೆಗಳನ್ನು ಮತ್ತು ಜೀವನಕ್ರಮವನ್ನು ಉತ್ತಮಗೊಳಿಸಲು ಸಮಯವಿಲ್ಲವೆಂದರೆ ತುಂಬಾ ದೂರದ ಪ್ರಯಾಣದ ಮಧ್ಯೆ ಇಂದನವನ್ನು ತುಂಬಿಸಲು ಸಮಯವಿಲ್ಲವೆಂದೇ ತಾನೆ! ಪ್ರಯಾಣ ಎಲ್ಲಿ ನಿಲ್ಲುತ್ತದೆಂಬುದು ಯಾರಿಗೆ ಗೊತ್ತು?

19 January, 2013

ಎಂದರಿಯುವರು ಮಂದಿ ಒಲವಿನ ಹಿರಿಮೆ!


ಎಂದರಿಯುವರು ಮಂದಿ ಒಲವಿನ ಹಿರಿಮೆ!
_______________________________
ಒಲವೇ,
ಅಚ್ಚರಿಯಾಗುವುದೆನಗೆ
ಎಲ್ಲೆಲ್ಲೂ ನಾ
ಕಾಣುವೆನೋ
ದ್ವೇಷ, ಮತ್ಸರ, 
ಕೋಪ, ಜಗಳ, 
ಆಕ್ರಮಣ, ಕುಹಕತನ, 
ವಂಚನೆ, ಸಮರ 
ಇವುಗಳದೇ ಆಡಳಿತ!
ಎಂದರಿವರೋ ನಾ 
ಅರಿತಂತೆ ನಿನ್ನ 
"ಹಿರಿಮೆ" ಈ ಮಂದಿ!

18 January, 2013

ಮುಸ್ಸಂಜೆ ತಂದ ಸುಂದರ ಕನಸು!


ನಭದಲಿ ಹೊಳೆಯುತಿರುವ ಹುಣ್ಣಿಮೆಯ 
ಚಂದಿರನ ಬಿಂಬವ ತೋರುತ್ತಾ 
ಬಾಲ ರಾಮಚಂದಿರನಿಗೆ ತುತ್ತು 
ಉಣಿಸುತಿರುವ ಕೌಸಲ್ಯೆ ನಾನಾದೆನೆಂದು
ಕ್ಷಣ ಕಾಲ ಕನಸು ಕಂಡ ಮುಸ್ಸಂಜೆ!

ಮುಕ್ತಾದ ಮಂಗಲತ್ತೆ ಒಂದಿಷ್ಟು ಪ್ರಶ್ನೆ ಎಸೆದರು...ನನ್ನುತ್ತರ ಹೀಗಿತ್ತು ಅವುಗಳಿಗೆ!!!


Jayalaxmi Patil:
ಪ್ರೀತಿ, ಸ್ನೇಹ, ಪರಿಚಯ, ಆತ್ಮೀಯತೆ, ನನ್ನವರು, ನಂಬಿಕೆ, ವೈರಿ...... ಈ ಎಲ್ಲದಕ್ಕೂ ಸೆಡ್ಡು ಹೊಡೆದು ನಿಲ್ಲುವುದು, ಎಲ್ಲವನ್ನೂ ಸುಳ್ಳಾಗಿಸುವುದು ಯಾವುದು ಗೊತ್ತಾ?
Shiela Nayak:
 ಜವಾಬ್ದಾರಿ, ಮರ್ಯಾದೆ, ಅಹಂ ಮತ್ತು ಸಂಪತ್ತು
*******************************
Jayalaxmi Patil:
ಸ್ನೇಹವೆಂದರೆ.....
Shiela Nayak:
ಗಟ್ಟಿ ಅಪ್ಪುಗೆ!
*******************************
Jayalaxmi Patil:
ಪರಿಚಯವೆಂದರೆ......
Shiela Nayak:
ಹಿಂದಿನ ಜನ್ಮದ ಅಳಿದುಳಿದ ಬಂಧ!
****************************

Jayalaxmi Patil:
ನನ್ನವರು ಎಂದರೆ.......
Shiela Nayak:
ನನ್ನೊಳಗಿನ ನನ್ನನ್ನು ಅರಿತವರು...ಕಣ್ಣ ಭಾಷೆ, ಹೃದಯ ಭಾಷೆ ಅರಿತವರು!
***************
Jayalaxmi Patil:
ವೈರಿಯೆಂದರೆ......
Shiela Nayak:
ದ್ವೇಷ, ರೋಷ, ಕೋಪ ಮತ್ತು ಮಾತ್ಸರ್ಯ!
*****************

Jayalaxmi Patil:
ಆತ್ಮೀಯತೆಯೆಂದರೆ......
Shiela Nayak:
ಒಬ್ಬರನೊಬ್ಬರು ಅರ್ಥಮಾಡಿಕೊಳ್ಳುವುದು.....ಮಾತಿನ ಹಂಗಿಲ್ಲದೆ!
*****************************
Jayalaxmi Patil:
ನಂಬಿಕೆಯಂದರೆ.........
Shiela Nayak :
ನೀನೆ ನಾನು, ನಾನೇ ನೀನು!
*************
Jayalaxmi Patil:
ಪ್ರೀತಿಯೆಂದರೆ.....
Shiela Nayak:
 ಆತ್ಮ ಬಲ!
*************

16 January, 2013

ಭಾವಗಳೇ ರಂಗುಗಳಾದವು!


ಭಾವಗಳೇ ರಂಗುಗಳಾದವು!
_________________________
ಒಲವೇ,
ಕೇಳಿತೇ..
ಅನ್ನುತ್ತಿದ್ದಾರೆ ನೋಡು
ಭೇಷ್ ಭೇಷ್  
ನನ್ನೀ ಕಲಾಕೃತಿಯ
ಮೋಹಕತೆಗೆ ಮಾರುಹೋಗಿದ್ದಾರಲ್ಲ..
ಲೋಕದ ಜನರು!
ಅವರಿಗದು ತಿಳಿದಿಲ್ಲ
ನನ್ನೀ ಭಾವಗಳೇ
ಈ ಚಿತ್ರಕೆ 
ರಂಗನಿತ್ತವು ಎಂದು!

ಲಾಲಿ ಹಾಡುವ ಮುಸ್ಸಂಜೆ!


ಬಿಸಿಲ ತಾಪದಿಂದ ನಲುಗಿದ ವಸುಂಧರೆಗೆ
ಮಿಣಿ ಮಿಣಿ ಮಿಂಚುವ ಹರಳುಗಳಿಂದ 
ನೇಯ್ದ ಕಡುನೀಲಿ ಚಾದರವನ್ನು ಹೊದಿಸಿ
ಜೋಜೋ ಲಾಲಿ ಹಾಡುತಿಹ ಮುಸ್ಸಂಜೆ!

15 January, 2013

ನಮಿಸುವೆನೋ ನರಹರಿಯೇ!


ಕೃತಜ್ಞತೆ!
_____________________

ಮನ ಕಲಕಿತ್ತು..
ಒಂದಿಷ್ಟು ಅಳುಕಿತ್ತು..
ಏನೋ ಹೇಗೋ
ಹೆದರಿಕೆಯೂ ಇತ್ತು..
ಆದರೂ ನಿನ್ನ ಬೆಂಬಲವಿದೆ
ಎಂಬರಿವೂ ಜತೆಗಿತ್ತು!
"ನಂಬಿದವರ ಕೈಯ ಬಿಡ"
ದಾಸವರೇಣ್ಯರು ಹಾಡುವರಲ್ಲ
ನಾನೂ ಇಂದು 
ಮತ್ತೊಮ್ಮೆ ಮಗದೊಮ್ಮೆ
ಹಾಡಿ ಕೊಂಡಾಡುವೆನೋ
ನಿನ್ನ ನರಹರಿಯೆ!
ಇಂದು ಒಡಹುಟ್ಟಿದವನ
ರೂಪದಲಿ ತ್ವರದಲಿ
ನೀ ಕಾಯ್ದೆಯೋ 
ನನ್ನೊಡೆಯನೇ ನನ್ನ 
ಕರುಳ ಕುಡಿಯ 
ಪೊರೆದೆಯಲ್ಲೋ!
ನಿನಗಿದೋ ಮತ್ತೆ 
ಶಿರ ಬಾಗಿ
ನಮಿಸುವೆನೋ ನರಹರಿಯೇ!

14 January, 2013

ನೀನೇ ಮೆಚ್ಚದಿರೆ ಹೇಗೆ!







ನೀನೇ ಮೆಚ್ಚದಿರೆ ಹೇಗೆ!

ಒಲವೇ,
ಒಮ್ಮೆ ಕೇಳಿಲ್ಲಿ
"ಕವಯತ್ರಿ"  ಎಂದೆಣಿಸಿದ್ದಾರೆ
ಜನರು ನನ್ನನ್ನು !
ಆದರೆ ನಿನಗದು 
ತಿಳಿದಿದೆ ತಾನೇ
ಇವೆಲ್ಲಾ ಬರಹಗಳು
ನನ್ನೊಳಗಿಹ ನಿನ್ನೊಳಗಿನಿಂದಲೇ
ಹೊರ ಹೊಮ್ಮಿತೆಂದು
ಅಂದ ಮೇಲೆ
ನಿನ್ನೀ ಬರಹಗಳನ್ನು
ನೀನೇ ಮೆಚ್ಚದಿರೆ ಹೇಗೆ?



ಒಲವ ಕಂಡೇ ಬಿಟ್ಟೆ !

 ಕಂಡು ಹಿಡಿದೆ ಒಲವ..
-------------------

ವರುಷಗಳಿಂದ ಅಲೆದಾಟ
ಅದರಸ್ತಿತ್ವದ ಗುರುತಿಗಾಗಿ
ಹುಡುಕಾಟ ನಡೆದಿತ್ತು.
ನಿತ್ಯವೂ ವಿಶಾಲವಾದ ಬಾನಿನಂಚಿನವರೆಗೂ
ದೃಷ್ಟಿ ಹಾಯಿಸಿದರೂ ಏನೂ ಕಾಣಿಸಿರಲಿಲ್ಲ...
ಮತ್ತೇರಿ ಅಡ್ಡಾದಿಡ್ಡಿಯಾಗಿ ಏರಿಬರುವ
ಕಡಲ ತೆರೆಗಳನೂ ಬಿಡಲಿಲ್ಲ..
ಅಲ್ಲೂ ಉತ್ತರ ಇರಲಿಲ್ಲ...
ಸೂತ್ರದಾರ ಅವನೆಂದು ನಂಬಿ ಕಲ್ಲಿನ ಮೂರ್ತಿಗಳನ್ನ ಬೇಡಿದೆ..
ಮತ್ತೆ ಮತ್ತೆ ಕಾಡಿದೆ..
ಹ್ಞೂಂ...
ಮೌನದ ಪ್ರತಿಧ್ವನಿಯೇ ಎಲ್ಲೆಡೆ...
ಸೋತು ಸುಣ್ಣವಾಗಿ ಹುಡುಕಾಟವ ನಿಲ್ಲಿಸಿಯೇ ಬಿಟ್ಟೆ.
ಅರೇ ಒಲವ ಕಂಡೇ ಬಿಟ್ಟೆ
ಅದೇ ಘಳಿಗೆಯಲ್ಲಿ..
ಎಲ್ಲೆನ್ನುವಿರಾ
ನನ್ನೊಳಗೇ..
ಮತ್ತೀಗ ಒಲವ ಬಿಂಬ ನಿನ್ನೊಳಗೂ.. 

ಇದನ್ನೇ ವಿಧಿಯಾಟ ಅನ್ನುವರೇನು!



   ಇದನ್ನೇ ವಿಧಿಯಾಟ ಅನ್ನುವರೇನು!




      ಮೊನ್ನೆ ಶನಿವಾರ ೧೨ರಂದು ನಿಟ್ಟೆಯಿಂದ ಮನೆಗೆ ಬರಲು ಬಸ್ಸಿಗಾಗಿ ಕಾದು ನಿಂತಿದ್ದ ನನ್ನ ಮಗ ಮೊದಲು ಬಂದ ನಾಲ್ಕು ಬಸ್ಸುಗಳನ್ನು ಹತ್ತಲಿಲ್ಲ. ಕಾರಣ ಅವುಗಳು ಜನರಿಂದ ತುಂಬಿ ತುಳುಕುತ್ತಿದ್ದವು! ಅವನ ಕೈಯಲ್ಲಿ ಅವನ ಬಟ್ಟೆ, ಗಣಕ ಯಂತ್ರಗಳಿದ್ದ ಲಗೇಜು ಇದ್ದ ಕಾರಣ ಅವನು ನಿಲ್ಲಲೂ ಜಾಗವಿಲ್ಲದ ಆ ಬಸ್ಸುಗಳನ್ನು ಹತ್ತಲಿಲ್ಲ. ಕೊನೆಗೆ ಬಂದ ೫ನೇ ಬಸ್ಸನ್ನು ಹತ್ತಿದ. ಅದರಲ್ಲೂ ಕುಳಿತುಕೊಳ್ಳಲು ಸ್ಥಳವಿರಲಿಲ್ಲ. ಕೊನೆಯ ಸೀಟಿನ ಮತ್ತು ಅದರ ಎದುರಿರುವ ಬಲಗಡೆಯ ಸೀಟಿನ ಮಧ್ಯದಲ್ಲಿರುವ ಖಾಲಿ ಜಾಗಲ್ಲಿ ನಿಂತುಕೊಂಡಿದ್ದ. ಆ ದಿನ ಎಂದಿನಂತೆ ತನ್ನ ಲಗೇಜನ್ನು ಮೇಲಿರಿಸಲಿಲ್ಲ.  ಬಸ್ಸು ವೇಗವಾಗಿ ಹೋಗುತ್ತಿತ್ತು...ಇನ್ನೂ ನಿಟ್ಟೆಯನ್ನು ದಾಟಿರಲಿಲ್ಲ...ಇದ್ದಕ್ಕಿದ್ದಂತೆ ಮುಖ ಹೋಗಿ ಎದುರು ಬಡಿದದು ಮಾತ್ರ ಗೊತ್ತಾಯಿತು. ಕೆಲವು ಕ್ಷಣ ಕಣ್ಣಿಗೆ ಕತ್ತಲು ಬಂದತ್ತಾಯಿತು. ಇದು ಹೇಗೆ ನಡೆಯಿತು ಎಂದು ಅಲ್ಲಿದ್ದವರಿಗ್ಯಾರಿಗೂ ಗೊತ್ತಾಗಲಿಲ್ಲ. ತನ್ನ ಮುಖ ಯಾವುದಕ್ಕೆ ಹೋಗಿ ಬಡಿಯಿತು ಅಂತ ಅವನಿಗೆ ಈಗಲೂ ಅರ್ಥವಾಗಿಲ್ಲ. ಹಾಗೆ ನೋಡಿದರೆ ಅವನು ಈವರೆಗೆ ಎರಡು ಅಫಘಾತದ ಪ್ರತ್ಯಕ್ಷ ಸಾಕ್ಷಿಯಾಗಿದ್ದರೂ ಅವನ ಕೂದಲು ಕೂಡ ಕೊಂಕಗದೇ ಪಾರಾಗಿದ್ದನು. ಕ್ಷಣ ಮಾತ್ರದಲ್ಲಿ ಅವನ ಕಣ್ಣಿಗೆ ಕಂಡದ್ದು ರಕ್ತ ಚಿಮ್ಮುವಿಕೆ..ಜನರ ನರಳಾಟ! ಬಸ್ಸಿನ ರೋಡುಗಳು ಬಗ್ಗಿ ಎಲ್ಲವೂ ಅವನತ್ತ ಮುಖಮಾಡಿಕೊಂಡು ನಿಂತಿವೆ! ತಲೆ ಮೇಲಿನ ಮಾಡು ಕಾಣುತ್ತಿಲ್ಲ! ಸ್ವಲ್ಪ ಸುಧಾರಿಸ್ಕೊಂಡು ಹಿಂದಿನಿಂದ ಬಂದ ಕಾಲೇಜು ಬಸ್ಸಿನಲ್ಲಿ ಮಂಗಳೂರಿಗೆ ಬಂದು ತಲುಪಿದನು. ಅಲ್ಲಿ ಯಾರೋ ಹೇಳಿದರಂತೆ..ಮನೆಗೆ ಫೋನು ಮಾಡು..ಇವನು ಮಾಡಲಿಲ್ಲ! 
   ಮುಖದಲ್ಲಿ ಕಣ್ಣಿನ ಕೆಳಗೆ ಒಂದು ಸಣ್ಣ ವೃತ್ತಾಕಾರದಲ್ಲಿ ಚರ್ಮ ಕಿತ್ತು ಹೋಗಿ ಮಾಂಸ ಕಾಣಿಸುತ್ತಿತ್ತು. ಕಣ್ಣಿನ ಕೆಳಗೆ ಚರ್ಮ ಉಬ್ಬಿಕೊಂಡಿತ್ತು ಅಂತ ಬಿಟ್ಟರೆ ಆ ಕ್ಷಣಕ್ಕೆ ಅಂತಹದೇನು ಆಗಿಲ್ಲವೆಂದೇ ಭಾವಿಸಿದೆ. ಆದರೂ ನಮ್ಮ ಮನೆಯ ಬಳಿಯಲ್ಲಿರುವ ಆಸ್ಪತ್ರೆಗೆ ಕಳುಹಿಸಿದೆ. ಅವರು ಕುಲಂಕುಷವಾಗಿ ಪರೀಕ್ಷಿಸಿದಾಗ ಕಾಲಿಗೂ ಆದ ಗಾಯ ಕಾಣಿಸಿತು. ರಾತ್ರಿ ಮೈ ಕೈ ನೋವು ಕಾಣಿಸಿತು...ಮರುದಿನ ಮತ್ತಿನ್ನೊಮ್ಮೆ ಎಕ್ಸ್ ರೇ ತೆಗೆಯಲು ಕಳುಹಿಸಿದಾಗ ಮೂಗಿನ ಎಲುಬಿನಲ್ಲಿ ಬಿರುಕು ಬಿಟ್ಟಿದೆ ಅಂತ   ಗೊತ್ತಾಯ್ತು! 
    ಆ ಅಫಘಾತದಲ್ಲಿ ಯಾರೂ ಸಾವನಪ್ಪಲಿಲ್ಲ..ಆದರೆ ನೋವು... ಎಷ್ಟೋ ಮಂದಿಗೆ ತಲೆಗೆ ಪೆಟ್ಟಾಗಿದೆ ಅಂತ ಹೇಳುತ್ತಿದ್ದಾನೆ. ಮತ್ತು ಬಸ್ಸು ಅಫಘಾತಕ್ಕೀಡಾದಾಗ ಮೇಲಿರಿಸಿದ ಲಗೇಜುಗಳು ಕೂಡ ಎಲ್ಲೆಲ್ಲೋ ಹೋಗಿ ಬಿದ್ದವು! ನನಗೆ ಮರುದಿನ ಅವನು ಆ ಅಫಘಾತದ ಚಿತ್ರ ತೋರಿಸಿದಾಗ ಅದರ ಭೀಕರತೆಯ ಬಗ್ಗೆ ಅರಿವಾಯಿತು!

12 January, 2013

ರಂಗಿನ ಮುಸ್ಸಂಜೆ!


ಝಗಮಗಿಸುವ ಹರಳುಗಳಿಂದ ನೇಯ್ದ 
ತನ್ನ ಸೆರಗನ್ನು ನಿಶೆ ಬಾನ 
ತುಂಬಾ ಚೆಲ್ಲಿ ಮೆರೆದಾಗ 
ಮೆಲ್ಲನದ ಸರಿಸಿ ಇಣುಕುವ 
ಚಂದಿರನ ತೋರುವ ಮುಸ್ಸಂಜೆ!

ಈ ಬರಹಗಳೂ ನಿಮಗಿಷ್ಟವಾಗಬಹುದು!

Related Posts Plugin for WordPress, Blogger...