ನಮಗೆ ನಮ್ಮ ಆಲೋಚನೆಗಳನ್ನು ಮತ್ತು ಜೀವನಕ್ರಮವನ್ನು ಉತ್ತಮಗೊಳಿಸಲು ಸಮಯವಿಲ್ಲವೆಂದರೆ ತುಂಬಾ ದೂರದ ಪ್ರಯಾಣದ ಮಧ್ಯೆ ಇಂದನವನ್ನು ತುಂಬಿಸಲು ಸಮಯವಿಲ್ಲವೆಂದೇ ತಾನೆ! ಪ್ರಯಾಣ ಎಲ್ಲಿ ನಿಲ್ಲುತ್ತದೆಂಬುದು ಯಾರಿಗೆ ಗೊತ್ತು?

09 July, 2012

ಹಂಬಲಿಸುತಿದೆ ನಿನ್ನ ದರುಶನಕ್ಕಾಗಿ ಎನ್ನಾತ್ಮವು ಹಗಲೂ ರಾತ್ರಿ!


ಹಂಬಲಿಸುತಿದೆ ನಿನ್ನ ದರುಶನಕ್ಕಾಗಿ
ಎನ್ನಾತ್ಮವು ಹಗಲೂ ರಾತ್ರಿ!  

ಹುಣ್ಣಿಮೆಯ ಚಂದ್ರ ಮೂಡುವುದನ್ನೇ
ಕಾಯುವುದು  ಚಕೋರ ಪಕ್ಷಿಯು!
ಅಂತೆಯೇ, ಸದಾ ನಿನ್ನಾಗಮನವನ್ನೇ
ಕಾಯುವುದು ಎನ್ನ ಮನವು!



ದೀಪಾವಳಿಯ ಸಮಯದಲಿ
ಚಿಗುರುವ ದೇವದಾರು ಗಿಡಗಳು
ಪಂಢರಾಪುರಕೆ ಬರುವ ಯಾತ್ರಿಕರ 
ಆಗಮನವ ಕಾಯುವ ಹಾಗೆ!



ಹಸಿವೆಯಿಂದ ಬಳಲಿದ ಮರಿ
ಅವ್ವನ ಬರುವಿಕೆಗಾಗಿ 
ಚಡಪಡಿಸುವುದು. ಎನ್ನಾತ್ಮವೂ
ಅಂತೆಯೇ, ಎನ್ನೊಡೆಯನೇ!

ನಿನ್ನ ಶ್ರೀಮುಖದ ದರುಶನಕಾಗಿ
ಹಂಬಲಿಸಿದೆನ್ನುವೆನು ತುಕಾರಾಮನು!
ಇನ್ನಾದರೂ ಕೃಪೆ 
ತೋರಯ್ಯಾ ಎನ್ನೊಡೆಯ!


ನನ್ನ ಮೆಚ್ಚಿನ ಅಭಂಗದ ಭಾವನುವಾದದ ಪ್ರಯತ್ನ!




  
bhetilagi  jeeva  lagalise aas
pahe ratrandiwas wat tuzi

purnimecha chandrama chakora jeevan
taise maze man wat pahe

diwalichya mula leki aasawali
pahatse watuli pandharichi

bhukeliya bal ati shok kari
wat pahe pari maulichi

tuka mahne maz laglise bhuk
dhauni shrimukh dawi dewa 


 


No comments:

ಈ ಬರಹಗಳೂ ನಿಮಗಿಷ್ಟವಾಗಬಹುದು!

Related Posts Plugin for WordPress, Blogger...