ನಮಗೆ ನಮ್ಮ ಆಲೋಚನೆಗಳನ್ನು ಮತ್ತು ಜೀವನಕ್ರಮವನ್ನು ಉತ್ತಮಗೊಳಿಸಲು ಸಮಯವಿಲ್ಲವೆಂದರೆ ತುಂಬಾ ದೂರದ ಪ್ರಯಾಣದ ಮಧ್ಯೆ ಇಂದನವನ್ನು ತುಂಬಿಸಲು ಸಮಯವಿಲ್ಲವೆಂದೇ ತಾನೆ! ಪ್ರಯಾಣ ಎಲ್ಲಿ ನಿಲ್ಲುತ್ತದೆಂಬುದು ಯಾರಿಗೆ ಗೊತ್ತು?

18 May, 2017

ಸುಭಾಷಿತ- ಅನುವಾದ

ವಿದ್ಯಾ ವಿವಾದಾಯ ಧನಂ ಮುದಾಯ
ಖಲಸ್ಯ ಶಕ್ತಿಃ ಪರಪೀಡನಾಯ|
ಸಾಧೋಸ್ತು ಸರ್ವಂ ವಿಪರೀತಮೇತತ್
ಜ್ಞಾನಾಯ ದಾನಾಯ ಚ ರಕ್ಷಣಾಯ||
ಒಲವೇ,
ವಿದ್ಯೆ ಅರಸನಂತೆ ಮೆರೆಯಲು,
ಧನ ಸರಿ-ಸಮಾನರಿಲ್ಲವೆಂದು ತೋರಲು,
ಪರರ ಹೀಗಳೆಯಲೇ ಖಳನ ಸಾಮರ್ಥ್ಯವೆಲ್ಲವೂ!
ಇದಕೆ ವಿಪರೀತವು ಸಜ್ಜನರ ನಡೆಯು
ಅರಿವು ಬೆಳೆಸಲು ಮತ್ತು  ಬೆಳೆಯಲು
ಸಂಪತ್ತು ಪರರ ಕಣ್ಣೊರಸಲು
ಶಕ್ತಿ ತನ್ನವರನು ಭದ್ರವಾಗಿಡಲು!



,



No comments:

ಈ ಬರಹಗಳೂ ನಿಮಗಿಷ್ಟವಾಗಬಹುದು!

Related Posts Plugin for WordPress, Blogger...