ಎಲ್ಲೆಲ್ಲೂ ಹಾಹಾಕಾರ!!! ಪೆಟ್ರೋಲ್ ಬೆಲೆ ಹೆಚ್ಚಿದೆ...ಸೃಜನಶೀಲರಿಗೆ ಒಂದು ನೆವನ..ಹೊಸ ಹೊಸ ಫಾರ್ವರ್ಡ್ ಮೆಸೇಜ್ಗಳು, ಜೋಕುಗಳು ಹುಟ್ಟಿಕೊಂಡವು. ಮತ್ತೆ ಕೆಲವ್ರು ಜಪಾತ್ರ, ಗಿಪಾತ್ರ..ಹೀಗೆ ಹಾಗೆ ಅಂತ ನಮ್ಮ ವಿಜ್ಞಾನಿಗಳನ್ನು, ಶೋಧಕರನ್ನು ಹಂಗಿಸಲು, ಪ್ರಶ್ನಿಸಲು ಶುರುಮಾಡಿದರು..ಅಂತೂ ಇಂತೂ ಎರಡು ದಿನ ಎಲ್ಲರೂ ಬೆಲೆ ಏರಿಕೆ ಬಗ್ಗೆ ಮಾತಾಡಿಕೊಂಡರು. ಸರಿ, ಈಗ ಎಲ್ಲರೂ ತಣ್ಣಗೆ ಅವರವರ ವಾಹನದಲ್ಲಿ ಹಿಂದಿನ ಹಾಗೆಯೇ ಪೆಟ್ರೋಲ್ ಹಾಕಿಕೊಂಡು ತಿರುಗುತ್ತಿದ್ದಾರೆ. ಅಲ್ಲ, ಒಂದಿಷ್ಟು ಆಲೋಚನೆ ಮಾಡಿ ನೋಡಿರಂತೆ..ಪೆಟ್ರೋಲ್ ಬೆಲೆ ಹೆಚ್ಚಾಗುತ್ತಲೇ ಹೋಗುತ್ತಿದೆ..ಹಾಗಂತ ಜನರು ವಾಹನ ತೆಗೆದುಕೊಳ್ಳುವುದು ಕಡಿಮೆಯಾಗಿದೆಯೇನು? ನಾವು ಕಾಲೇಜಿಗೆ ಹೋಗುತ್ತಿರುವಾಗ ನನಗೆ ನೆನಪಿದ್ದ ಹಾಗೆ ಕೆಲವು ಅತೀ ಶ್ರೀಮಂತರ ಮಕ್ಕಳಿಗೆ ಮಾತ್ರ ಸ್ಕೂಟರ್ ಚಲಾಯಿಸಿಕೊಂಡು ಹುಡುಗಿಯರನ್ನು ಇಂಪ್ರೆಸ್ ಮಾಡಲು ಸಾಧ್ಯವಿತ್ತು..ಆದರೆ ಈಗ ಹೆಚ್ಚಿನ ಮಕ್ಕಳ ಬಳಿ ಅವರದ್ದೇ ಸ್ವಂತ ವಾಹನವಿದೆ..ಹೇಳಿ, ಇನ್ನೂ ಸಂಪಾದಿಸಲು ಪ್ರಾರಂಭಿಸದವರಿಗೆ ವಾಹನ ಅಗತ್ಯವಿದೆಯೇ...ಧಾರಾಳವಾಗಿ ಬಸ್ಸುಗಳಲ್ಲಿ ಓಡಾಟ ಮಾಡಬಹುದಲ್ಲಾ!!!..ಅಪ್ಪಾಪ್ಪಾ ಏನೂ ಪ್ರೀತಿ ಈಗಿನ ಅಪ್ಪ ಅಮ್ಮಂದಿರಿಗೆ, ಇನ್ನೂ ಲೈಸೆನ್ಸ್ ಸಿಗದ ಎಳೆ ಹುಡುಗ ಹುಡುಗಿಯರೂ ತಮ್ಮ ತಮ್ಮ ಕೋಚಿಂಗ್ ಕ್ಲಾಸಿಗೆ ಸ್ಕೂಟಿಯಲ್ಲೇ ಬರೋದು...ಅಷ್ಟು ಮಾತ್ರ ಅಲ್ಲ..ಅವರು ಸುಮ್ಮನೆ ಮನೆಗೆ ಹೋಗ್ತಾರಾ...ಇಲ್ಲ ಹಿಂದೆ ತಮ್ಮ ತಮ್ಮ ಗರ್ಲ್ ಫೆಂಡುಗಳನ್ನು ಕೂರಿಸಿ ಸಮ್ಮನೆ ರೈಡೂ ಮಾಡ್ಲಿಕ್ಕುಂಟು! ಅಂದಮೇಲೆ ಸುಮ್ಮನೆ ಯಾಕ್ರೀ ಈ ಹಾರಾಟ ಗೀರಾಟ!!! ನಿಜವಾಗಿ ಈ ಬೆಲೆ ಏರಿಕೆಯಿಂದ ಪೆಟ್ಟು ತಿನ್ನೋದು ಬಡತನದ ರೇಖೆಗಿಂತ ಕೆಳಗಿರೋರು....ಅಂದರೆ ದಿನಗೂಲಿಯವರು...ನಾನು ನೋಡಿದ್ದೇನೆರೀ..ಪಾಪ ಬಡಕೊಳ್ಳುತ್ತಾರೆ ರೇಶನ್ ಬೆಲೆ ಹೆಚ್ಚಿದೆಯಂತ..ತರಕಾರಿ, ಅಕ್ಕಿ, ಎಣ್ಣೆ, ಕಾಳುಗಳ ಬೆಲೆ ಹೆಚ್ಚಿ ಇವರಿಗೆ ತೊಂದರೆಯಾಗಿದೆ..ಅವರಲ್ಲೂ ಕೆಲವರಿದ್ದಾರೆ...ಸಿಕ್ಕ ಹಣವನ್ನು ಸಹ ಶೇಂದಿ, ಮೊಬೈಲ್ ಮೇಲೆ ಉಡಾಯಿಸುತ್ತಾರೆ. ಅಮ್ಮನ ಹಿತ್ತಲಲ್ಲಿರುವ ರೂಮುಗಳಲ್ಲಿ ಈ ಬಳ್ಳಾರಿ ಕಡೆಯವರು ವಾಸವಾಗಿದ್ದಾರೆ..ಅಮ್ಮನಿಗೆ ಈ ಹುಡುಗರ ಮೇಲೆ ಕೋಪ...ಮೊಬೈಲ್ ಮೇಲೆ ಹಣ ಹಾಕೋದು ಹೆಚ್ಚಾಗಿದೆಯಂತ. ಸಿಕ್ಕಿದಾಗಲೆಲ್ಲ ಉಪದೇಶ ಕೊಡ್ತಾ ಇರ್ತಾರೆ...ಅವರೂ ಅಮ್ಮನ ಕಣ್ಣು ತಪ್ಪಿಸಿ ತಿರುಗ್ತಾರೆ!
ಬದುಕಿನಲ್ಲಿ ನಡೆದ, ನಡೆಯುವ, ತಿಳಿದ, ತಿಳಿಯದ ವಿಷಯಗಳನ್ನು ಮನದಲ್ಲಿ ಇಡಲಾಗದೆ, ತೋಡಿಕೊಳ್ಳಲು ಕಂಡುಕೊಂಡ ಮಾರ್ಗ!
ನಮಗೆ ನಮ್ಮ ಆಲೋಚನೆಗಳನ್ನು ಮತ್ತು ಜೀವನಕ್ರಮವನ್ನು ಉತ್ತಮಗೊಳಿಸಲು ಸಮಯವಿಲ್ಲವೆಂದರೆ ತುಂಬಾ ದೂರದ ಪ್ರಯಾಣದ ಮಧ್ಯೆ ಇಂದನವನ್ನು ತುಂಬಿಸಲು ಸಮಯವಿಲ್ಲವೆಂದೇ ತಾನೆ! ಪ್ರಯಾಣ ಎಲ್ಲಿ ನಿಲ್ಲುತ್ತದೆಂಬುದು ಯಾರಿಗೆ ಗೊತ್ತು?
29 May, 2012
ನಮಗೆಲ್ಲಾ ಮೈಗಳ್ಳತನ-ಹಾಗಾಗಿ ಬೆಲೆ ಏರುತ್ತಲೇ ಹೋಗೋದು ಸಹ ಗ್ಯಾರಂಟಿ!!
ಎಲ್ಲೆಲ್ಲೂ ಹಾಹಾಕಾರ!!! ಪೆಟ್ರೋಲ್ ಬೆಲೆ ಹೆಚ್ಚಿದೆ...ಸೃಜನಶೀಲರಿಗೆ ಒಂದು ನೆವನ..ಹೊಸ ಹೊಸ ಫಾರ್ವರ್ಡ್ ಮೆಸೇಜ್ಗಳು, ಜೋಕುಗಳು ಹುಟ್ಟಿಕೊಂಡವು. ಮತ್ತೆ ಕೆಲವ್ರು ಜಪಾತ್ರ, ಗಿಪಾತ್ರ..ಹೀಗೆ ಹಾಗೆ ಅಂತ ನಮ್ಮ ವಿಜ್ಞಾನಿಗಳನ್ನು, ಶೋಧಕರನ್ನು ಹಂಗಿಸಲು, ಪ್ರಶ್ನಿಸಲು ಶುರುಮಾಡಿದರು..ಅಂತೂ ಇಂತೂ ಎರಡು ದಿನ ಎಲ್ಲರೂ ಬೆಲೆ ಏರಿಕೆ ಬಗ್ಗೆ ಮಾತಾಡಿಕೊಂಡರು. ಸರಿ, ಈಗ ಎಲ್ಲರೂ ತಣ್ಣಗೆ ಅವರವರ ವಾಹನದಲ್ಲಿ ಹಿಂದಿನ ಹಾಗೆಯೇ ಪೆಟ್ರೋಲ್ ಹಾಕಿಕೊಂಡು ತಿರುಗುತ್ತಿದ್ದಾರೆ. ಅಲ್ಲ, ಒಂದಿಷ್ಟು ಆಲೋಚನೆ ಮಾಡಿ ನೋಡಿರಂತೆ..ಪೆಟ್ರೋಲ್ ಬೆಲೆ ಹೆಚ್ಚಾಗುತ್ತಲೇ ಹೋಗುತ್ತಿದೆ..ಹಾಗಂತ ಜನರು ವಾಹನ ತೆಗೆದುಕೊಳ್ಳುವುದು ಕಡಿಮೆಯಾಗಿದೆಯೇನು? ನಾವು ಕಾಲೇಜಿಗೆ ಹೋಗುತ್ತಿರುವಾಗ ನನಗೆ ನೆನಪಿದ್ದ ಹಾಗೆ ಕೆಲವು ಅತೀ ಶ್ರೀಮಂತರ ಮಕ್ಕಳಿಗೆ ಮಾತ್ರ ಸ್ಕೂಟರ್ ಚಲಾಯಿಸಿಕೊಂಡು ಹುಡುಗಿಯರನ್ನು ಇಂಪ್ರೆಸ್ ಮಾಡಲು ಸಾಧ್ಯವಿತ್ತು..ಆದರೆ ಈಗ ಹೆಚ್ಚಿನ ಮಕ್ಕಳ ಬಳಿ ಅವರದ್ದೇ ಸ್ವಂತ ವಾಹನವಿದೆ..ಹೇಳಿ, ಇನ್ನೂ ಸಂಪಾದಿಸಲು ಪ್ರಾರಂಭಿಸದವರಿಗೆ ವಾಹನ ಅಗತ್ಯವಿದೆಯೇ...ಧಾರಾಳವಾಗಿ ಬಸ್ಸುಗಳಲ್ಲಿ ಓಡಾಟ ಮಾಡಬಹುದಲ್ಲಾ!!!..ಅಪ್ಪಾಪ್ಪಾ ಏನೂ ಪ್ರೀತಿ ಈಗಿನ ಅಪ್ಪ ಅಮ್ಮಂದಿರಿಗೆ, ಇನ್ನೂ ಲೈಸೆನ್ಸ್ ಸಿಗದ ಎಳೆ ಹುಡುಗ ಹುಡುಗಿಯರೂ ತಮ್ಮ ತಮ್ಮ ಕೋಚಿಂಗ್ ಕ್ಲಾಸಿಗೆ ಸ್ಕೂಟಿಯಲ್ಲೇ ಬರೋದು...ಅಷ್ಟು ಮಾತ್ರ ಅಲ್ಲ..ಅವರು ಸುಮ್ಮನೆ ಮನೆಗೆ ಹೋಗ್ತಾರಾ...ಇಲ್ಲ ಹಿಂದೆ ತಮ್ಮ ತಮ್ಮ ಗರ್ಲ್ ಫೆಂಡುಗಳನ್ನು ಕೂರಿಸಿ ಸಮ್ಮನೆ ರೈಡೂ ಮಾಡ್ಲಿಕ್ಕುಂಟು! ಅಂದಮೇಲೆ ಸುಮ್ಮನೆ ಯಾಕ್ರೀ ಈ ಹಾರಾಟ ಗೀರಾಟ!!! ನಿಜವಾಗಿ ಈ ಬೆಲೆ ಏರಿಕೆಯಿಂದ ಪೆಟ್ಟು ತಿನ್ನೋದು ಬಡತನದ ರೇಖೆಗಿಂತ ಕೆಳಗಿರೋರು....ಅಂದರೆ ದಿನಗೂಲಿಯವರು...ನಾನು ನೋಡಿದ್ದೇನೆರೀ..ಪಾಪ ಬಡಕೊಳ್ಳುತ್ತಾರೆ ರೇಶನ್ ಬೆಲೆ ಹೆಚ್ಚಿದೆಯಂತ..ತರಕಾರಿ, ಅಕ್ಕಿ, ಎಣ್ಣೆ, ಕಾಳುಗಳ ಬೆಲೆ ಹೆಚ್ಚಿ ಇವರಿಗೆ ತೊಂದರೆಯಾಗಿದೆ..ಅವರಲ್ಲೂ ಕೆಲವರಿದ್ದಾರೆ...ಸಿಕ್ಕ ಹಣವನ್ನು ಸಹ ಶೇಂದಿ, ಮೊಬೈಲ್ ಮೇಲೆ ಉಡಾಯಿಸುತ್ತಾರೆ. ಅಮ್ಮನ ಹಿತ್ತಲಲ್ಲಿರುವ ರೂಮುಗಳಲ್ಲಿ ಈ ಬಳ್ಳಾರಿ ಕಡೆಯವರು ವಾಸವಾಗಿದ್ದಾರೆ..ಅಮ್ಮನಿಗೆ ಈ ಹುಡುಗರ ಮೇಲೆ ಕೋಪ...ಮೊಬೈಲ್ ಮೇಲೆ ಹಣ ಹಾಕೋದು ಹೆಚ್ಚಾಗಿದೆಯಂತ. ಸಿಕ್ಕಿದಾಗಲೆಲ್ಲ ಉಪದೇಶ ಕೊಡ್ತಾ ಇರ್ತಾರೆ...ಅವರೂ ಅಮ್ಮನ ಕಣ್ಣು ತಪ್ಪಿಸಿ ತಿರುಗ್ತಾರೆ!
Subscribe to:
Post Comments (Atom)
2 comments:
ನೀವು ಹೀಗೆಲ್ಲಾ ಬರೆದು ಇಲ್ಲಿ ಕಾಂಕ್ರೀಟ್ ಕಾಡಿನಲ್ಲಿರುವ ನಮಗೆ ಎಷ್ಟೆಲ್ಲಾ ಹೊಟ್ಟೆ ಉರಿಸುತ್ತೀರಿ ಗೊತ್ತಾ? :(
ಮತ್ತೆ ಬರೆದದ್ದು ಸಾರ್ಥಕ ಆಯ್ತಲ್ಲ ವಿಕಾಸ್, ಹೊಟ್ಟೆ ಉರಿತಿದ್ರೆ ಅದಕ್ಕೂ ಮದ್ದು ಉಂಟು ಮಹರಾಯ..ಅದನ್ನೂ ಹೇಳ್ತೇನೆ. . ವೀಕೆಂಡ್ ರಜದಲ್ಲಿ ತೋಟ ಮಾಡುವುದಕ್ಕೆ ಶುರು ಮಾಡು..ಕೊತ್ತಂಬರಿ ಸೊಪ್ಪು, ಮೆಂತೆ ಸೊಪ್ಪು, ಹಸಿ ಮೆಣಸಿನ ಕಾಯಿ ಇದೆಲ್ಲಾ ಬೆಳಿಲಿಕ್ಕೆ ಸಣ್ಣ ಜಾಗ ಸಾಕು.. ಮನೆಯಲ್ಲಿದ್ದ ಹಳೆ ಪ್ಲಾಸ್ಟಿಕ್ ಡಬ್ಬಗಳಲ್ಲಿ ಮಣ್ಣು ಹಾಕೋದು..ನೆಡುವುದು.....ಮಾಡಿ ನೋಡು..ಮತ್ತ ನನಗ ರಿಸಲ್ಟ್ ಹೇಳ್ಲಿಕ್ಕೆ ಮರೀಬ್ಯಾಡ!
Post a Comment