ನಮಗೆ ನಮ್ಮ ಆಲೋಚನೆಗಳನ್ನು ಮತ್ತು ಜೀವನಕ್ರಮವನ್ನು ಉತ್ತಮಗೊಳಿಸಲು ಸಮಯವಿಲ್ಲವೆಂದರೆ ತುಂಬಾ ದೂರದ ಪ್ರಯಾಣದ ಮಧ್ಯೆ ಇಂದನವನ್ನು ತುಂಬಿಸಲು ಸಮಯವಿಲ್ಲವೆಂದೇ ತಾನೆ! ಪ್ರಯಾಣ ಎಲ್ಲಿ ನಿಲ್ಲುತ್ತದೆಂಬುದು ಯಾರಿಗೆ ಗೊತ್ತು?

22 May, 2012

ಮಿನಿ ಕವನಗಳು!


ಬೆಂಗಾಡಿನಲ್ಲಿ ಅಲೆದಾಟ!
ನೀರಡಿಕೆಯ ಕಾಟ!
ಒಯಸಿಸ್‍ನ ನೋಟ!
ಮನಕೆ ತಂದಿತು ಮಾಟ!
****************


ಪ್ರೀತಿ ಮತ್ತೇನನ್ನು ಬೇಡುವುದಿಲ್ಲ
ಪ್ರೀತಿಯ ಹೊರತು,
ಮತ್ತೇನಲ್ಲದಿದ್ದರೂ ಒಂದಿಷ್ಟು ನಗು,
ಒಂದಿಷ್ಟು ಒಲವಿನ ಮಾತು,
ಮತ್ತಿಷ್ಟು ಅಪ್ಪುಗೆ,
   ಸಾಕಷ್ಟು ಮುತ್ತು,
ಸಾಕಪ್ಪ! ಇವುಗಳ ಮುಂದೆ
ಅಷ್ಟೈಶ್ವರ್ಯವೂ ಕಸಕೆ ಸಮಾನ!
********************


ಈ ಮನಸೋ 
ಸಂಶಯದ ಗೂಡು,
ಹೃದಯದಲ್ಲಾದರೋ 
ಸಂತಸದ ಹಾಡು,
ಇವೆರಡರ ಮಧ್ಯೆ 
ಹೇಗಿರಬಹುದು ನನ್ನ ಪಾಡು?
******************




ಅಧಿಕಾರದ ಲಾಲಸೆ,
ಹಣದ ಅಭಿಲಾಷೆ,
ಇನ್ನಿಲ್ಲದ ದುರಾಶೆ,
ಎಲ್ಲಾ ಕುಲಗೆಟ್ಟು ಹೋಗಿದೆ.
ರಾಡಿಯಾಗಿದೆ ಬಾಳು.
****************


ಬಳಿ ಸಾರುವ ದಿನಕರನ ಮೋಹದ
ನೋಟಕ್ಕೆ ಬಿಸಿಯೇರುವಳು ಇಳೆ!
ತಣ್ಣಗಾಗಿಸಲು ಅವಳ, 
ಸುರಿಸುವನು ಅವನು ಮಳೆ!

  ನೀನೇನು ಕಡಿಮೆಯಿಲ್ಲ ಬಿಡು, 
ದೂರವಿದ್ದೇ ಬಿಸಿಯೇರಿಸುವೆ!
 ಬಳಿಸಾರಿ ಮುತ್ತಿನ ಮಳೆ ಕೊಡು,
ಆಗುವೆ  ಆಗ ನಾ ಸಂತೃಪ್ತಳು!
****************



ನನ್ನವನ ನಗುವೆಂದೂ ಮಾಸದಿರಲಿ;
ಸದಾ ನಿನ್ನಯ ಅನುಗ್ರಹವಿರಲಿ;
ನನ್ನನ್ನಾಲಿಸುವೆ ಎಂಬ ಬಯೆಕೆಯಲಿ;
ನಾನಾಗ್ರಹಿಸುವೆ ನನ್ನೊಡೆಯನಲಿ!
*****************

ಮಾಸದಿರಲಿ ನಗುವೆಂದೂ ನನ್ನ;
ಅನುಗ್ರಹವಿರಲಿ ಸದಾ ನಿನ್ನ;
ಆಲಿಸು  ಬಯಕೆಯ ಎನ್ನ;
ಎಂದಾಗ್ರಹಿಸುವೆ ಒಡೆಯನನ್ನ!
*******************









5 comments:

ಜಲನಯನ said...

ಹಹಹಹ ಶೀಲಾ, ತುಂಬಾ ಚನ್ನಾಗಿವೆ ಗುಟುಕುಗಳು...ಅದರಲ್ಲೂ ಅಷ್ಟೈಶ್ವರ್ಯ...ಯಾರಿಗೆ ಬೇಡ ಹೇಳಿ...

Sheela Nayak said...

Thank you Ajad!

Anonymous said...

Super 😁

Unknown said...

Nice ri

Unknown said...

Nice ri

ಈ ಬರಹಗಳೂ ನಿಮಗಿಷ್ಟವಾಗಬಹುದು!

Related Posts Plugin for WordPress, Blogger...