ನಮಗೆ ನಮ್ಮ ಆಲೋಚನೆಗಳನ್ನು ಮತ್ತು ಜೀವನಕ್ರಮವನ್ನು ಉತ್ತಮಗೊಳಿಸಲು ಸಮಯವಿಲ್ಲವೆಂದರೆ ತುಂಬಾ ದೂರದ ಪ್ರಯಾಣದ ಮಧ್ಯೆ ಇಂದನವನ್ನು ತುಂಬಿಸಲು ಸಮಯವಿಲ್ಲವೆಂದೇ ತಾನೆ! ಪ್ರಯಾಣ ಎಲ್ಲಿ ನಿಲ್ಲುತ್ತದೆಂಬುದು ಯಾರಿಗೆ ಗೊತ್ತು?

10 January, 2014

ಜಬ್ ದೀಪ ಜಲೇ ಆನಾ...

ದೀಪ ಹಚ್ಚುವ ಹೊತ್ತಿಗೆ ಬಾ ನನ್ನವಳೇ..
ಸಂಜೆ ಮುಸುಕುತಿರುವಾಗ ಬಾ..
ಮರೆಯಬೇಡ ಮಿಲನದ ಗುರುತಿದು
ಮರೆಯಬೇಡ ನನ್ನೊಲವನು, ಗೆಳತಿ
ದೀಪ ಹಚ್ಚುವ ಹೊತ್ತಿಗೆ ಬಾ..

ಕಣ್ಣ ನೋಟ ಹಾದಿಯಲಿ  ಹಬ್ಬಿಸಿದ್ದೇನೆ
ನಿನ್ನ ಬರುವಿಕೆಯನು ಕಾಯುತಿದ್ದೇನೆ
ನನ್ನೀ ಕಣ್ಣಂಚಿನ ಕಪ್ಪು, ನಿನ ನಯನಗಳಿಗೆ ತಂಪು
ದೀಪ ಹಚ್ಚುವ ಹೊತ್ತಿಗೆ ಬಾ..

ಮೊದಲ ಬಾರಿಗೆ ಸಂಧಿಸಿದಲಿ
ಜತೆಗೆ ಹೆಜ್ಜೆ ಹಾಕಿದ ಜಾಗದಲಿ
ನದಿಯ ದಡದಲಿ, ಇಂದು ಮತ್ತದೇ
ತೀರದಲಿ ಮೆಲನೆ ಬಳುಕುತ ಬಾ
ದೀಪ ಹಚ್ಚುವ ಹೊತ್ತಿಗೆ,..

ನಿರಿಗ ರಿಗ ಮಗರಿಸಸನಿ
ಪಪಮ ರಿಗ ಸನಿಸಗಪಮಪ
ಆಆಆsss...

ನಿತ್ಯವೂ  ಹಗಲು ಸಂಜೆಗಳ ಮಿಲನ
ಆ ಮುದಕೆ ಅರಳಿ ಮಿನುಗುವವು ಚುಕ್ಕಿಗಳು
ವಿಧಿಯಿಲದೆ ಅಗಲುವವು ಒಂದನೊಂದು
ಮತ್ತೆ ಭೇಟಿಯಾಗುವ ಭರವಸೆಯೊಂದಿಗೆ
ದೀಪ ಹಚ್ಚುವ ಹೊತ್ತಿಗೆ ಬಾ ಗೆಳತೀ,
ಸಂಜೆ ಮುಸುಕುವ ಹೊತ್ತಿಗೆ ಬಾ.

09 January, 2014



Untold stories of life are unfolded in an unusual way! 
ಬದುಕಿನ ಬಚ್ಚಿಟ್ಟ ಕತೆಗಳೆಲ್ಲ ಬಿಚ್ಚಿಕೊಂಡವು ಬೆಚ್ಚುಬೀಳಿಸುವಂತೆ!

ಸುಭಾಷಿತ

ಹರ್ಷಸ್ಥಾನಸಹಸ್ರಾಣಿ ಭಯಸ್ಥಾನ ಶತಾನಿ ಚ|
ದಿವಸೆ ದಿವಸೆ ಮೂಢಮ್  ಆವಿಶಂತಿ ನ ಪಂಡಿತಮ್||


|| ಜೀವನದಲ್ಲಿ ಹರ್ಷಗೊಳ್ಳಲು ಸಾವಿರ ಕಾರಣಗಳಿದ್ದರೆ, ಭಯ ಹುಟ್ಟಿಸಲು ನೂರು ಕಾರಣಗಳಿವೆ.
ಮೂಢನು ದಿನದಿನವೂ ನೂರು ಭಯಗಳ ಕಾರಣಗಳಿಂದ ಅಶಾಂತನಾಗುತ್ತಾನೆ, ಪಂಡಿತನು ಸಾವಿರ ಹರುಷಗಳ ಕಾರಣಗಳಿಗಾಗಿ ಖುಷಿ ಪಡುತ್ತಾನೆ ||

ಬೂದಿಯಾಗಿಯಾದರೂ ಉಳಿಯಲಿ ನನ್ನೊಳಗೆ..

ಬೂದಿಯಾಗಿಯಾದರೂ ಉಳಿಯಲಿ ನನ್ನೊಳಗೆ..
---------------------------
ಒಲವೇ,

ಶಿಶಿರ ಮೈಮುರಿದೆದ್ದು ಕೆಣಕುತ್ತಿದ್ದಾನೆ
ಬಿರು ಬಿಸಿಲು, ಒಣ ಹವೆ

ಬಾಡಿ ಉದುರಿವೆ ಭಾವದೆಲೆಗಳು
ಚೆಲ್ಲಾಪಿಲ್ಲಿಯಾಗಿ ಎದೆಯೊಳಗೆ
ದಿಕ್ಕು ದಿಕ್ಕುಗಳಿಂದಲೂ ಕುಳಿರ್ಗಾಳಿ ಬೀಸಿ
ತಪ್ಪು ಒಪ್ಪುಗಳ ಲೆಕ್ಕ  ಹಾಕುತಿದೆ

ನೀ ತೋರಿದ ದಾರಿಯಲಿ
ಹೆಜ್ಜೆ ಹಾಕಿದಕೆ ಕೊಂಕು
ಮತ್ತೆ ಆಗಲಾರೆ ಮಂಕು

ವಿದಾಯ ಹೇಳುತಿರುವ ಕನಸ
ನಾ ಇನ್ನು ತಡೆಯಲಾರೆ
ಹಾಗಂತ ಮುನಿಯದೇ ಬೀಳ್ಕೊಡಲಾರೆ

ಹರಡಿವೆ ಕಾಯದ ಉದ್ದಗಲಕ್ಕೂ
ಒಮ್ಮೆ ಗುಡಿಸಿ ಬೆಂಕಿ ಹಚ್ಚಿಬಿಡು
ನನಸಾಗದ ಕನಸು ಬೂದಿಯಾಗಲಿ
ನಾನಳಿಯುವ ತನಕ ಉಳಿಯಲಿ ನನ್ನೊಳಗೇ!

05 January, 2014

“ಸಾಹಿತಿ ಶಬ್ದಗಳಿಗೆ ಭಾವ ಕೊಡುವ ಸಾಮರ್ಥ್ಯ ಉಳ್ಳವನು,  ನಿನ್ನಂತಹ ಸಾಮಾನ್ಯರು ಭಾವಕೆ ಶಬ್ದಗಳನು ಕೊಡಬಲ್ಲಿರಿ!”

-ಗೆಳತಿಯ ಮಾತು

04 January, 2014

ಸುಭಾಷಿತ

ಪಿಂಡೆ ಪಿಂಡೆ ಮತಿರ್ಭಿನ್ನಾ ಕುಂಡೆ ಕುಂಡೆ ನವಂ ಪಯಃ|
ಜಾತೌ ಜಾತೌ ನವಾಚಾರಾಃ ನವಾ ವಾಣೀ ಮುಖೆ ಮುಖೆ||

ಬೇರೆ ಬೇರೆ ಪಿಂಡ-ಭಿನ್ನ  ಭಿನ್ನ ಬುದ್ಧಿ
ಬೇರೆ ಬೇರೆ ಗಾತ್ರದ ಪಾತ್ರೆ- ಹೊಸ ಹೊಸ ನೀರು
ಬೇರೆ ಬೇರೆ ಹುಟ್ಟು(ಬೆಳವಣಿಗೆ, ವಾತಾವರಣ)- ಹೊಸ ಹೊಸ ಆಚಾರ, ವಿಚಾರ

ಬೇರೆ ಬೇರೆ ಮುಖ- ಹೊಸ ಹೊಸ ಮಾತು (ಅರ್ಥ)s

ಸುಭಾಷಿತ

ದುರ್ಬಲಸ್ಯ ಬಲಂ ರಾಜಾ ಬಾಲಾನಾಮ್ ರೋಧನಮ್ ಬಲಮ್|
ಬಲಂ ಮೂರ್ಖಸ್ಯ ಮೌನಿತ್ವಂ ಚೌರಾಣಾಂ ಅನೃತಂ ಬಲಮ್||

ಬಲಹೀನನಿಗೆ ರಾಜನೇ ಬಲ, ಶಿಶುಗಳಿಗೆ ಅಳುವೇ ಬಲ|

ಮೂರ್ಖನಿಗೆ ಮೌನದಿಂದಿರುವುದೇ ಬಲ, ಕಳ್ಳಕಾಕರಿಗೆ ಸುಳ್ಳೇ ಬಲ||

03 January, 2014

|| ಮರುಳರ ಬದುಕನ್ನು ಪುನರತ್ಥಾನಗೊಳಿಸಲು ಒಲುಮೆಗೆ, ಬರೇ ಒಲುಮೆಗೆ ಮಾತ್ರ ಸಾಧ್ಯ ||
||“ಒಲುಮೆ” “ಮಮತೆ”ಗಾಗಿ ಹಂಬಲಿಸುವ ಮನವೇ

ಕಲುಷ ಮಾಡದಿರು ಪೆಡಸು ನುಡಿಗೆ ಕಿವಿಯನಿತ್ತು||

ಈ ಬರಹಗಳೂ ನಿಮಗಿಷ್ಟವಾಗಬಹುದು!

Related Posts Plugin for WordPress, Blogger...