ನಮಗೆ ನಮ್ಮ ಆಲೋಚನೆಗಳನ್ನು ಮತ್ತು ಜೀವನಕ್ರಮವನ್ನು ಉತ್ತಮಗೊಳಿಸಲು ಸಮಯವಿಲ್ಲವೆಂದರೆ ತುಂಬಾ ದೂರದ ಪ್ರಯಾಣದ ಮಧ್ಯೆ ಇಂದನವನ್ನು ತುಂಬಿಸಲು ಸಮಯವಿಲ್ಲವೆಂದೇ ತಾನೆ! ಪ್ರಯಾಣ ಎಲ್ಲಿ ನಿಲ್ಲುತ್ತದೆಂಬುದು ಯಾರಿಗೆ ಗೊತ್ತು?

29 August, 2015

||ವಿನಾಶ ಕಾಲೇ ವಿಪರೀತ ಬುದ್ಧಿಃ||

ಪೌಲಸ್ತ್ಯಃ ಕಥಮನ್ಯದಾರಹರಣೆ ದೋಷಂ ನ ವಿಜ್ಞಾತವಾನ್
ರಾಮೇಣಾಪಿ ಕಥಂ ನ ಹೇಮಹರಿಣಸ್ಯಾಸಂಭವೋsಲಕ್ಷಿತಃ|
ಅಕ್ಷೈಶ್ಚಾಪಿ ಯುಧಿಷ್ಠಿರೇಣ ಸಹಸಾ ಪ್ರಾಪ್ತೋ ಹಯನರ್ಥಃ ಕಥಮ್
ಪ್ರತ್ಯಾಸನ್ನವಿಪತ್ತಿಮೂಢಮನಸಾಂ ಪ್ರಾಯೋ ಮತಿಃ ಕ್ಷೀಯತೆ||
-ಪಂಚತಂತ್ರ
ಕಠಿಣ ತಪಗೈದು ಶಿವನನ್ನೇ ಒಲಿಸಿದ ಪೌಲಸ್ತ್ಯನು ಪರಪತ್ನಿಯನ್ನು ಅಪಹರಿಸುವಂತ ನೀಚ ಕಾರ್ಯ ಮಾಡಿದನೇಕೆ,
ಸುವರ್ಣ ಚಿಂಕೆಯೆಂಬುವುದಿಲ್ಲವೆಂದು ರಾಮನಿಗೆ ಅರಿವಾಗಲಿಲ್ಲ ಅದೇಕೆ,
ದ್ಯೂತವು ಕಷ್ಟಗಳ ಸಾಗರವನ್ನೇ ಹೊತ್ತುತರುವುದೆಂಬ ವಿವೇಕ ಯುಧಿಷ್ಠಿರನಿಗೆ ಇರಲಿಲ್ಲವೇಕೆ,
ಪ್ರಾಯಃ ವಿಧಿಯ ಕಪಿಮುಷ್ಠಿಯಲ್ಲಿ ಸಿಲುಕಿದರೆ ಇಂದ್ರಿಯಗಳು ಮಂಕಾಗಿ ಬುದ್ಧಿ ಬಲಹೀನವಾಗುತ್ತದೆ!

-ಪಂಚತಂತ್ರ

No comments:

ಈ ಬರಹಗಳೂ ನಿಮಗಿಷ್ಟವಾಗಬಹುದು!

Related Posts Plugin for WordPress, Blogger...