ನಮಗೆ ನಮ್ಮ ಆಲೋಚನೆಗಳನ್ನು ಮತ್ತು ಜೀವನಕ್ರಮವನ್ನು ಉತ್ತಮಗೊಳಿಸಲು ಸಮಯವಿಲ್ಲವೆಂದರೆ ತುಂಬಾ ದೂರದ ಪ್ರಯಾಣದ ಮಧ್ಯೆ ಇಂದನವನ್ನು ತುಂಬಿಸಲು ಸಮಯವಿಲ್ಲವೆಂದೇ ತಾನೆ! ಪ್ರಯಾಣ ಎಲ್ಲಿ ನಿಲ್ಲುತ್ತದೆಂಬುದು ಯಾರಿಗೆ ಗೊತ್ತು?

06 November, 2015

ಲಕ್ಷ್ಮಣ ರೇಖೆಗಳ ದಾಟಿದವಳು..

"So many lines are drawn at threshhold...  am I seethe!", she was wondering..

ಅವಳ ದೃಷ್ಟಿ  ಹೊಸ್ತಿಲ ಬಳಿ ಎಳೆದ ರೇಖೆಗಳ ಮೇಲೆ..
ಅವಳಿವಳು ಅವನಿವನು ಅಡ್ಡಾದಿಡ್ಡಿ ರೇಖೆಗಳನ್ನೆಳೆದು ಬಿಟ್ಟಿದ್ದಾರೆ..
ಇವು ಲಕ್ಷ್ಮಣ ರೇಖೆಗಳೇ!

ಅಂಗಣದಾಚೆ ಇರುವವರೆಲ್ಲಾ ರಾವಣರೇ, ಶೂರ್ಪನಖಿಯರೇ?
ಇಲ್ಲಿಲ್ಲ..
ರಾಮನೂ, ಕೃಷ್ಣನೂ ಇರುವರಲ್ಲಿ
ರಾವಣ, ದುಶ್ಯಾಸನರ ನಡುವಿನಲ್ಲಿ..
ಮತ್ತೆ ಸೀತೆಯೂ, ರಾಧೆಯೂ
ಶೂರ್ಪನಖಿ,  ಮಂಥರೆಯರೆಡೆಯಲ್ಲಿ

ಹೆಜ್ಜೆ ಮೊದಲು ತಡವರಿಸಿತು...
ಆದರೆ,
ತಂಗಾಳಿ ಮುಂಗುರಳ ಸರಿಸಿತು..
ಗಂಧವಿಳಿಯಿತು ಎದೆಯೊಳಗೆ
ರತಿ ಮದನರ ಸಲ್ಲಾಪ ಹೂಗಿಡಗಳೆಡೆಯಲ್ಲಿ..
ದೂರದಲ್ಲಿ ಕೋಗಿಲೆಯ ಪಂಚಮ ಗಾನ..
ಎದೆಯೊಳಗೇಕೆ ಮಿಂಚಿನ ಸಂಚು!

ಒಲವಿನ  ಕರೆಯೇ...
ಕ್ಷಣ ಮಾತ್ರದಲಿ
ದಾಟಿ ನಡೆದವಳು ರೇಖೆಗಳನು..
ಕೊನೆಗೂ ಆತ್ಮಕರೆಗೆ ಮಣಿದಳು!

ಗೋಪಿಯಾದಳು  ಗೋಪಾಲನ ಮುರಳಿಯ ನಾದಕೆ..
ಶಿವೆಯಾದಳು ಸದಾಶಿವನ ಡಮರಿನ ನಾದಕೆ..
ನದಿಯಾದಳು ಸಾಗರನ ಶಂಖ ನಾದಕೆ..
ಬದುಕನ್ನೇ ಪಣಕ್ಕಿಟ್ಟು
ಅಮರಳಾದಳು ಒಲವಿನ ಅಮೃತಕೆ!

No comments:

ಈ ಬರಹಗಳೂ ನಿಮಗಿಷ್ಟವಾಗಬಹುದು!

Related Posts Plugin for WordPress, Blogger...