ನಮಗೆ ನಮ್ಮ ಆಲೋಚನೆಗಳನ್ನು ಮತ್ತು ಜೀವನಕ್ರಮವನ್ನು ಉತ್ತಮಗೊಳಿಸಲು ಸಮಯವಿಲ್ಲವೆಂದರೆ ತುಂಬಾ ದೂರದ ಪ್ರಯಾಣದ ಮಧ್ಯೆ ಇಂದನವನ್ನು ತುಂಬಿಸಲು ಸಮಯವಿಲ್ಲವೆಂದೇ ತಾನೆ! ಪ್ರಯಾಣ ಎಲ್ಲಿ ನಿಲ್ಲುತ್ತದೆಂಬುದು ಯಾರಿಗೆ ಗೊತ್ತು?

21 August, 2011

ಗೋಪಾಲನಲ್ಲೊಂದು ಮನವಿ!







     

ಇಳಿದು ಬಾ  ಬುವಿಗೆ,
ಬಾಡಿ  ಬಳಲಿದ್ದಾಳಾಕೆ!
ಕಾದಿದ್ದಾಳೆ ಶಬರಿಯಂತೆ, 
ನಿನ್ನ ಮತ್ತೊಂದು ಅವತಾರಕ್ಕೆ!
ನನಗೆ ಗೊತ್ತು,
ನೀನೂ ಕಾದಿರುವಿ;
ಸರಿಯಾದ ಕಾಲಕ್ಕಾಗಿ!
ಆದರೆ, ಈ ಸಾರಿ ಪೂರ್ಣಾವತಾರ ತಾಳು!
ಈ ಭುವಿಯಲ್ಲೀಗ ಮುಖವಾಡ 
ಹೊತ್ತ ಹಲವು ಮುಖಗಳಿವೆ;
ನಿನಗೂ ಕಷ್ಟವಾದೀತು ಯಾರು ಮಾನವರು, 
ಯಾರು ದೈತ್ಯರೆಂದು ಅರಿಯಲು.
ಕೊನೆಗೂ ಜಯವು ನಿನ್ನದೇ....ಆದರೆ
 ಸುಖವ ಅನುಭವಿಸಲು ಯಾರೂ ಉಳಿಯರು...
ಇದು ಸತ್ಯ ಅಲ್ಲವೇ...ಗೋಪಾಲ?

No comments:

ಈ ಬರಹಗಳೂ ನಿಮಗಿಷ್ಟವಾಗಬಹುದು!

Related Posts Plugin for WordPress, Blogger...