ಸಾಧಾರಣ ಮೂರು, ನಾಲ್ಕು ತಿಂಗಳು ಗಣಕ ಯಂತ್ರದ ಪ್ರಪಂಚದಿಂದ ದೂರವಾಗಿ ನನ್ನ ಸಂಸಾರದಲ್ಲಿ ಮುಳುಗಿದ್ದೆ. ಮಕ್ಕಳ ಹಿತಕ್ಕೋಸ್ಕರ ಹೀಗೆ ಮಾಡಬೇಕಾಯಿತು. ಆದರೂ ಈ ಎರಡು ತಿಂಗಳು ಬೇಸಿಗೆಯ ರಜೆಯನ್ನು ವ್ಯರ್ಥಮಾಡದೇ ಕಲಾ ಶಿಬಿರವನ್ನೂ ಮತ್ತು ೧೦ನೇ ತರಗತಿಯ ಮಕ್ಕಳಿಗೆ ಸಂಸ್ಕೃತ ತರಗತಿಯನ್ನೂ ನಡೆಸಿ ಆರ್ಥಿಕ ಸಂಪಾದನೆಯ ಜೊತೆ ಕಲಾಸೇವೆಯನ್ನು ಮಾಡಿದ ತೃಪ್ತಿ ನನ್ನಲ್ಲಿ ಉಳಿದಿದೆಯಾದರೂ ನನ್ನ ಮತ್ತು ಪ್ರಪಂಚದ ಕೊಂಡಿಯಾದ ಅಂತರ್ಜಾಲದಿಂದ ದೂರ ಉಳಿದ ನೋವು ಇನ್ನೂ ದೂರವಾಗಲಿಲ್ಲ. ಪ್ರಾರಂಭದಲ್ಲಿ ಶೂರಳಂತೆ ಬ್ಲಾಗ್ ನಲ್ಲಿ ಮೊದಲ್ಮೊದಲು ನನ್ನ ಮನ ಬಿಚ್ಚಿ, ಒಂದು ದಿನ ಮಾಯವಾಗಿ ಹೋಗಬೇಕಾದ ಅಪಕೀರ್ತಿ ಹೊರಬೇಕಾಯಿತು. ಪರವಾಗಿಲ್ಲ.... ಮಕ್ಕಳಿಗೋಸ್ಕರ ಅಷ್ಟೆಲ್ಲ ಮಾಡಬೇಕಾದುದು ತಾಯಂದಿರ ಹೊಣೆಯಾಗಿದೆ. ಮೊದಲು ಗೃಹಿಣಿಯ ಧರ್ಮ ಮತ್ತೆ ಉಳಿದುದು ಅಲ್ಲವೇ?
ಕಲಾ ಶಿಬಿರದ ಕೆಲವೊಂದು ಚಿತ್ರ ಹಾಕಿ ನನ್ನ ಬರಹಕ್ಕೆ ಸಾಕ್ಷಿ ಕೊಡುತ್ತೇನೆ!

