ಇಳಿದು ಬಾ ಭುವಿಗೆ,
ಬಾಡಿ ಬಸವಳಿದ್ದಾಳಾಕೆ!
ಕಾದಿದ್ದಾಳೆ ಶಬರಿಯಂತೆ, ನಿನ್ನ ಮತ್ತೊಂದು ಅವತಾರಕ್ಕೆ!
ನನಗೆ ಗೊತ್ತು,
ನೀನು ಕಾದಿರುವಿ;
ಸರಿಯಾದ ಕಾಲಕ್ಕಾಗಿ!
ಆದರೆ, ಈ ಸಾರಿ ಪೂರ್ಣಾವತಾರ ತಾಳು!
ಈ ಭುವಿಯಲ್ಲೀಗ ಮುಖವಾಡ ಹೊತ್ತ ಹಲವು ಮುಖಗಳಿವೆ;
ನಿನಗೂ ಕಷ್ಟವಾದೀತು ಯಾರು ಮಾನವರು, ಯಾರು ದೈತ್ಯರೆಂದು ಅರಿಯಲು.
ಕೊನೆಗೂ ಜಯ ನಿನ್ನದೇ....ಆದರೆ
ಜಯದ ಸುಖ ಅನುಭವಿಸಲು ಯಾರೂ ಉಳಿಯರು...
ಇದು ಸತ್ಯ ಅಲ್ಲವೇ...ಗೋಪಾಲ?
0 ಅಭಿಪ್ರಾಯ:
Post a Comment