ನನ್ನ ಮನಸ್ಸು

10 June, 2014

ಮುಂಡಕೋಪನಿಷತ್

ಯಥಾ ನದ್ಯಃ ಸ್ಯಂದಮಾನಾಃ ಸಮುದ್ರೆ‍sಸ್ತಮ್ ಗಚ್ಛಂತಿ ನಾಮರೂಪೇಣ ವಿಹಾಯ|
ತಥಾ ವಿದ್ವಾನ್  ನಾಮರೂಪದ್ವಿಮುಕ್ತಃ  ಪರಾತ್ಪರಂ  ಪುರುಷಮುಪೈತಿ ದ್ವಿವ್ಯಮ್||

- ಮುಂಡಕೋಪನಿಷತ್

ನೇತ್ರಾವತಿ ಕಾವೇರಿ ಗಂಗಾ ಜಮುನಾ
ಉದ್ದ ಅಗಲ ರುಚಿ ರೂಪ ವಿವಿಧ
ಕಟ್ಟೆಕಟ್ಟಿ ನಿಲ್ಲೆಂದರೂ ನಿಲ್ಲದೆ
ಹಾದಿ ಬೀದಿ ಕ್ರಮಿಸುತ
ತನ್ನತನ ತೊರೆಯುವ ಹಂಬಲದಿ
ಉಪ್ಪುಪ್ಪು ಸಾಗರನಲಿ ಲೀನ!

ಹೆಸರು-ಬಣ್ಣವಿಲ್ಲ ಹುಟ್ಟು-ಸಾವಿಲ್ಲ
ನೋವು- ನಲಿವಿಲ್ಲ ಆಯ-ಆಕಾರವಿಲ್ಲ
ದೇಹದ ಕರ್ಮಕೆ ಸಾಕ್ಷಿ ಮಾತ್ರ
ಕರ್ಮಗಳ ಲೆಕ್ಕ ಸವೆಸುತ ಕಾದು
ಕಾಡಿ ಬೇಡಿ ಕೊನೆಗೂ ಕರೆ ಬಂದಾಗ
ಸೃಷ್ಟಿಕರ್ತ ಒಡೆಯನಲಿ ಲೀನ

ಹತ್ತು ಹಲವು ಕನಸುಗಳನ್ನು ನನಸು ಮಾಡುವ ಯತ್ನ, ಇನ್ನೂ ಹಾಲುಗಲ್ಲದ ಕುಡಿ, ತನ್ನದೇ ಪುಟ್ಟ ಅರಮನೆಯಲಿ ನೆಲೆಸುವ ಛಲ ಎಲ್ಲವೂ ಬಿಟ್ಟು ಯಮನ ಒಂದೇ ಕರೆಗೆ ಓಗೊಟ್ಟು ಹೊರೆಟೆ ಬಿಟ್ಟೆಯಲ್ಲವೇ ಗೆಳತಿ, ಹೇಗೆ ಮನಸ್ಸು ಬಂತು!

ಅಕಾಲಕ್ಕೆ ಉಸಿರಾಟ ನಿಲ್ಲಿಸಿ ಹೊರಟ ಗೆಳತಿಯ ಆತ್ಮದ ಶಾಂತಿಗಾಗಿ..

No comments:

Post a Comment