ನನ್ನ ಮನಸ್ಸು

04 November, 2013

ನಾ ಪಾಮರ.. ಆದರೂ ನನ್ನ ಕಿಂಚಿತ್ ಬುದ್ಧಿಗೆ ನಿಲುಕಿದೀ ಮಾತನು ಹೇಳದಿರಲಾರೆ!


“ಬುದ್ಧಿಯ ಪಕ್ವತೆಗೆ, ಉದ್ಧೀಪನಕ್ಕೆ ಬೇಕಾದ  ಸರಕುಗಳು ಬದುಕಿನ ಪಥದಲಿಲ್ಲ”
ಅನ್ನುವರು ಶ್ರೀಮಾನ್ಯ ಮಿತ್ರರು!

ನಾ ಪಾಮರ.. ಆದರೂ ನನ್ನ ಕಿಂಚಿತ್ ಬುದ್ಧಿಗೆ ನಿಲುಕಿದೀ ಮಾತನ್ನು ಹೇಳದಿರಲಾರೆ,

ಮುಂದಡಿಯಿಡಲು ಎತ್ತಿದ ಹೆಜ್ಜೆಯನು ಅಲ್ಲೇ ಇಟ್ಟು ಒಮ್ಮೆ ಹಿಂದಿರುಗಿ ನೋಡಿದರೆ ಬಂದ ಹಾದಿಯಲಿ ಮೂಡಿದ ಹೆಜ್ಜೆ ಗುರುತು ನಮ್ಮ ವ್ಯಕ್ತಿತ್ವಕ್ಕೆ ಕನ್ನಡಿಯಾಗುತ್ತದೆ..
“ತಪ್ಪುಗಳನ್ನು ಪುನರಾವರ್ತಿಸಬೇಡ ಅನ್ನುತ್ತದೆ!”
ಸಾಕಲ್ಲವೆ, ಅರಿಯಲು ಯತ್ನಿಸಿದರೆ ಪಕ್ವತೆಗೆ ದಾರಿ ಹುಟ್ಟುತ್ತದೆ!

ಮುನ್ನಡಿ ಇಡುವ ಮೊದಲು ಈ ಮೊದಲು ಸಾಗಿದ ಹೆಜ್ಜೆಗಳ ಗುರುತುಗಳು.. ಸಾರಿ ಸಾರಿ ಹೇಳುತ್ತದೆ, ಇತಿಹಾಸದ ಪುಟಗಳು ತೆರೆದುಕೊಳ್ಳುತ್ತದೆ.. ಅರಿಯಲೆತ್ನಿಸಿದರೆ ಉದ್ಧೀಪನಕ್ಕೆ ಬೇಕಾದ ಸರಕುಗಳು ಬಿದ್ದಿವೆ..
ಎತ್ತಿಕೊಳ್ಳುವವರು ಎತ್ತಿಕೊಂಡು ಬೆಳಕಿನತ್ತ ಹೆಜ್ಜೆ ಹಾಕುತ್ತಾರೆ!!!

No comments:

Post a Comment