ಹನಿ ಹನಿ ಚಿತ್ತಾರ!
ಹನಿ ಹನಿ ಮುತ್ತುಗಳು ಚೆಲ್ಲಾಡಿವೆ ತೋಟದ ತುಂಬಾ...
ಆರಿಸಿ, ಮಾಲೆಯ ಕಟ್ಟಲು ಅನುವಾದರೆ.....
ಇಗೋ, ಕುಸುಮಗಳ ಅಪ್ಪಣೆ....
ತಡೆ, ಅಗೋ ನಮ್ಮೊಡೆಯನು ಹೊನ್ನ ತೇರನೇರಿ ಬರುತಿಹನು..
ಈ ಮುತ್ತು, ರತ್ನಗಳು ಅವಗೇ ಅರ್ಪಣೆ..
ತಡಮಾಡಬೇಡ..
ನಿನ್ನ ಮನೆಯಂಗಳದಲಿ ಹರಡಿಹ ಮುತ್ತುರತ್ನಗಳ..
ನಿನ್ನ ಮನದಂಗಳದಲಿ ಶಾಶ್ವತವಾಗಿ ಸೆರೆಯಾಗಿಸು.....
ಅಷ್ಟೇ ಪ್ರಾಪ್ತಿ ನಿನಗೆ!!!
ಒಳ್ಳೆಯ ಸಚಿತ್ರ ಕವನ ಇದು. ರಮ್ಯ ಪರಿಸರದ ನಡುವೆ ಜೀವವನ ಸುಖ ಅನುಭವಿಸುವ ನೀವೆ ಧನ್ಯರು. ನಮ್ಮದೇನಿದೆ ಕಾಂಕ್ರಿಟ್ ಕಾಡು.
ReplyDeleteನಿಜ ಬದರಿನಾಥ್, ಇಂತಹ ಸುಂದರ ಪರಿಸರ ಮತ್ತು ಪರಿಸರ ಪ್ರೇಮಿ ಹೆತ್ತಮ್ಮಳನ್ನು ಕೊಟ್ಟ ಆ ಭಗವಂತನಿಗೆ ಎಷ್ಟು ಕೃತಜ್ಞತೆ ಸಲ್ಲಿಸಿದರೂ ಕಡಿಮೆ! ಮೆಚ್ಚಿದಕ್ಕೆ ಧನ್ಯವಾದ!
ReplyDelete