ನನ್ನ ಮನಸ್ಸು

08 April, 2012

ಇನ್ನಾದರೂ ತಿಳಿವಳಿಕೆ ಬಂದಿತೇ ಜನರಿಗೆ!



ಸುಡುವ ಉರಿಬಿಸಿಲು ತಲೆಯ ಮೇಲೆ,
ನೀರಿನ ಬರದಿಂದ 
ಜನರು ತತ್ತರಿಸುತ್ತಿರುವರು ಕೆಳಗೆ!

ಟ್ಯಾಂಕರಗಳಲ್ಲಿ ನೀರಿನ ವ್ಯಾಪಾರ 
ಸಾಗುತ್ತಿರುವುದು ಭರದಿಂದ!
ಬಾವಿಯ ನೀರಿಗಾಗಿ 
ನಡೆಯುತ್ತಿರುವುದು ದಾಯಾದಿಗಳ ಹೋರಾಟ!
ಎತ್ತರೆತ್ತರ ಮಹಡಿಗಳ ಒಡೆಯರು 
ಭುವಿಯ ಒಡಲ ಬಸೆದು ಖಾಲಿ
ಮಾಡುತ್ತಿರುವರು ಅಂತರ್ಜಲದ  ಒಸರನ್ನು!

ಮಳೆರಾಯನು ದೂರದಲ್ಲೆಲ್ಲೋ 
ಒಂದಿಷ್ಟು ಸುರಿದು ಮಾಯವಾಗುವನು!
ಇನ್ನಾದರೂ ತಿಳಿವಳಿಕೆ ಬಂದಿತೇ ನಮಗೆ!
ಮಾಡದೇ ಇರಲು ಜಲದ ಪೋಲು!

No comments:

Post a Comment