ನನ್ನ ಮನಸ್ಸು

13 July, 2015

ಹ್ರಸ್ವ ಕತೆ..


ಇಬ್ಬರೂ ಪೈಪೋಟಿಯಲ್ಲಿ ಎಳೆದಾಗ ಮೊದಲೇ ಶಿಥಿಲವಾಗಿದ್ದ ರೇಶ್ಮೆ ಪತ್ತಲ ಎರಡು ಭಾಗ!
’ಹ್ಮ್, ಅವನಿಗೆ ಬೇಡವಾದದ್ದು ನನಗೂ ಯಾಕೆ! ನಾನೇನು ಕಡಿಮೆ, ಹೊಸತೇ ಕೊಳ್ಳುವೆ.’
ರಸ್ತೆ ದಾಟಿ ಕಸದ ಬುಟ್ಟಿಯತ್ತ ನಡೆದವಳಿಗೆ ತಾನೇ ನೇಯ್ದ ಕಸೂತಿ ಕಾಣಿಸಿತು..
ಕೈ ತಡೆಯಿತು, ಕಾಲು ಬಂದ ದಾರಿಯಲ್ಲೇ ಮತ್ತೆ ಸಾಗಿತು.
ತೇಪೆ ಹಚ್ಚಲು ಕುಳಿತವಳ ಕಣ್ಣಲ್ಲಿ ಮತ್ತೆ ಹೊಸ ಬೆಳಕು!


"Take the road less travelled", they said.
She checked the travelogue and called travel office, booked her tickets to home.
- Priyanka

ಇಬ್ಬರೂ ಎಳೆದಾಡಿ ಹರಿದ ರೇಶ್ಮೆ ಪತ್ತಲದೊಂದಿಗೆ ಹೊಸ್ತಿಲು ದಾಟಿದವಳಿಗೆ ತಾನೇ ನೇಯ್ದ ಕಸೂತಿ ಬೇಡಿಯಾಯ್ತು. ಮತ್ತೆ ಅದೇ ಬದುಕಿನೊಂದಿಗೆ ಹೊರಾಡುವ ಸಂಕಲ್ಪದೊಂದಿಗೆ ಮನೆಯೊಳಗೆ ನಡೆದಳು!

No comments:

Post a Comment