ನನ್ನ ಮನಸ್ಸು

31 December, 2014

ರಾಧೆಯ ಪತ್ರ..

ಕೃಷ್ಣ,

ಸೂಜಿ-ದಾರದ ಹಂಗಿಲ್ಲದ ನಮ್ಮೀ ಬಂಧ
ಜತೆಯಿರದೆಯೂ ಜತೆಗೆ ಉಳಿದ ಸಂಬಂಧ..

ಸಪ್ತಪದಿಯ ನಡೆಯಿಲ್ಲ, ಮಂತ್ರ ಘೋಷವಿಲ್ಲದ ಬಂಧ..
ಯುಗಯುಗದಲೂ ಮರಳುವ ಅನುಬಂಧ..

ಪಾರಿಜಾತದ ಘಮದಲಿ ಮಿಂದೇಳುವ ಒಲವು..
ಮುರಳಿಯ ನಾದದಲಿ ನಲಿಯುವ ಒಲವು..

ರಂಗಿನ ಗರಿಯ ಒಲುಮೆಯ ನೋಟದ ಕಚುಕುಳಿಯು..
ನಿನ್ನೀ ರಾಧೆಗೆ ಅದೇ ನೂರಾನೆಗಳ ಬಲವು!

No comments:

Post a Comment