ನನ್ನ ಮನಸ್ಸು

23 July, 2014

ಅಪೂರ್ಣ ಕುಂದುಕೊರತೆಗಳ ಪ್ರಕೃತಿಯವಳು ನಾನು.. ಪರಿಪೂರ್ಣ ಒಲವು!

ಮಣ್ಣಿನ ಹಂಟೆಗಳಲೊಂದು ಹೊಳೆಯುವ ಹೊನ್ನಾಯಿತು
ಮನುಜರ ಜನಾಂಗಕೆ ಕಾರಣವಾಯಿತು ಇನ್ನೊಂದು..
ಒಲವೇ,
ನಿನ್ನ ಉದಾತ್ತ ದೇಣಿಗೆ
ಜಗದ ಮೂಲ ತತ್ವಕೆ ನಾಂದಿಯಾಯಿತು..
ಮರೆವು ಮತ್ತು ತಪ್ಪುಗಳೋ ನನ್ನ ದೇಣಿಗೆ
ಬದಲಾಗಲಿ ಅವು ಆಗಿ ತಿಳಿವಳಿಕೆ..
ಅಪೂರ್ಣ, ಕುಂದುಕೊರತೆಗಳ ಪ್ರಕೃತಿಯ ನಾನು
ತಾಳಿಕೆ ಮತ್ತು ಸಹಿಷ್ಣುತೆ ಪಡೆಯಲಿ!

#ರೂಮಿ (ಭಾವಾನುವಾದ) 

No comments:

Post a Comment