ನನ್ನ ಮನಸ್ಸು

20 April, 2014

ಕಾಲ ಮಹಿಮೆ!

ಒಲವೇ,

ಶಿಶಿರನ ಶುಷ್ಕ ನೋಟಕೆ ಒಣಗಿ ಬತ್ತಲಾಯಿತು ತರು..
ನಂಬಿಕೆ, ಭರವಸೆ ಎದೆಯ ಗೂಡಲಿ ಭದ್ರ
ಕಾಲನ ನಿಯಮದಂತೆ ಮರಳಿದನೇನು ಸರಿ,
ವಸಂತನ ಒಲುಮೆಯ ನೋಟಕೆ ಧರಿಸಿ
ಹಸಿರು ಪತ್ತಲ ಚಿಮ್ಮಿಸಿತು ಗೆಲುವಿನ ನಗೆ..
ಕಾಲನಾಣತಿಯಂತೆ ಮತ್ತೆ ತೆರಳುವನೆಂಬುದನು ಮರೆತು!

-ಪ್ರೇರಣೆ ರೂಮಿ

No comments:

Post a Comment