ನನ್ನ ಮನಸ್ಸು

15 April, 2014

ಎಲ್ಲವೂ ಸ್ಪಷ್ಟ.. ಸತ್ಯ!


ನಮ್ಮೊಳಗಿನ ಕಸ ಕಲ್ಮಷ ಗುಡಿಸುತ್ತಾ ಒಳಹೋದಂತೆ..


ಸುರಂಗದಲ್ಲಿ ತನ್ನಿಂದ ತಾನೇ ಉರಿಯುವ ಹಣತೆಗಳು ಅಲ್ಲಲ್ಲಿ..


ಹಣತೆ ಚೆಲ್ಲುವ ಬೆಳಕಿನಲಿ ಸುಟ್ಟುಕೊಳ್ಳುತ್ತಾ ತೆರೆದುಕೊಳ್ಳುತ್ತದೆ ಸತ್ಯದ ಹಾದಿ..


ಬದುಕನು ಬದುಕುವ ಕಲೆಯ ಪಾಠ..


ಮನದಲಿ ಘರ್ಷಣೆ, ಮಂಥನ ಎಲ್ಲಾ ಮುಕ್ತಾಯ


ಜ್ಞಾನೋದಯ..


ಇದೀಗ ಎಲ್ಲವೂ ಸ್ಪಟಿಕದಂತೆ ಸ್ಪಷ್ಟ!

No comments:

Post a Comment