ನನ್ನ ಮನಸ್ಸು

31 March, 2014

ಮನದೊಲವಿನ ಗೀತೆ..

ಒಲವೇ,

ನಂದನ ಹಳತಾಗಿ, ವಿಜಯ ಮುಗಿದು, ಜಯ ಮರಳಿದೆ
ಕಾಲಚಕ್ರ ಕ್ಷಣದ ಕ್ಷಣವೂ ನಿಲ್ಲದೇ ಸುತ್ತುತಲೇ ಇದೆ
ನೆನಪುಗಳು ಆವಿಯಾಗಿ ಮನದಲಿ ದಟ್ಟವಾದ ಮುಗಿಲು ಮೂಡಿದೆ
’ಜಯ’ ಗಾಳಿ ಸೋಕುತಲೇ ಕರಗಿ ರಭಸದಿ ಸುರಿದು ನಯನ ಆರ್ದ್ರವಾಗಿದೆ
ಕವಲಾದ ಹಾದಿಯಲಿ ಕಾದು ಕುಳಿತ ಮನದ ಮರುಳಿಗೆ ಕಾಯ ನಕ್ಕಿದೆ
ಉಪದೇಶವಿತ್ತ ಕಾಯಕೆ ಮನದ ಮುತ್ತಿನಂಥ ವಾಣಿ ತಟ್ಟಿದೆ
ವಿದಾಯ ಗೀತೆಯು ಬರೇ ಈ ಪಂಚಭೂತ ನಿರ್ಮಿತ ದೇಹಕೆ ಅನ್ವಯ
ದೈಹಿಕ ಭಾವವನು ಮೀರಿದ ಬೆಳೆದ ನನ್ನ ಅನುರಾಗಕೆ ಆಗದದು ಅನ್ವಯ..

No comments:

Post a Comment