ನನ್ನ ಮನಸ್ಸು

12 January, 2014

ಏಕೀ ಅವಾಂತರ..



ಕಪ್ಪು ಮುಗಿಲಲಿ ಲಕ್ಷ ತಾರೆಗಳ ನಡುವೆ  ಕಪ್ಪು ಚಂದಿರ..
ಕೌಮುದಿ ಮುನಿದು ತೆರಳಿರುವಳಂತೆ ಬಿಟ್ಟು ಮಂದಿರ
ವಿಶಾಲ ಸುಪ್ಪತ್ತಿಗೆಯಲಿ ಹೊರಳುತ್ತ ನರಳುತ್ತಿರುವ ಕಾಂತ
ತೌರು ಮನೆಗೆ ತೆರಳಿದವಳಿಗೆ ಕಾಡಿಲ್ಲವೇಕೆ ಏಕಾಂತ

ನಲ್ಲಿರುಳಿಗೇಕೆ ಅಚ್ಚರಿ ಏಕೆ, ಯಾಕೆ, ಹೀಗೆ ಈ ಆವಾಂತರ!


No comments:

Post a Comment