ನನ್ನ ಮನಸ್ಸು

27 November, 2013

ಒಲವೇ, ವಾಸ್ತವದೆಚ್ಚರಿಕೆ ಬೇಡ ಎನಗೆ..


ಒಲವೇ,

ಅವರಿವರು ಕರೆಯಲೆನ್ನ “ಮೂರ್ಖಿ”
ಕರೆಯದಿರೆಂದೂ ಹಾಗೆ ನೀ
ಗುರು ನೀನು, ಪರಮ ದೈವವೂ

ಅಂದೆನ್ನ ಅಂತಃಚಕ್ಷು ಬಿಡಿಸಿ
ಹೃದಯದಲಿ ಗುಡಿ ಕಟ್ಟಿಸಿ
ಮನದಂಗಣದಲಿ ರಂಗಿನ ಚುಕ್ಕಿಯಿಕ್ಕಿ

ಮೈಮನದಲಿ ಜಲತರಂಗ ಮೀಟಿ
ಕಂಪನದಲೆಯಲಿ ತೇಲಿಸಿ
ಭಾವಗಳ ಅಗೆದು ಬಗೆದು..

ಕೈಗೆ ಕೈ ಬೆಸೆದು ನಡೆಸಿ
ತಲುಪಿಸಿದೆ ಸಮಾಧಿ ಸ್ಥಿತಿ..
ಬೇಡ ಎಚ್ಚರಿಸಬೇಡ

ವಾಸ್ತವದರಿವಿನ ತಿಳಿವೂ ಬೇಡೆನಗೆ
ಜಗದೊಡೆಯನಲಿ ಲೀನವಾಗುವ ತನಕ
ಜತೆಯಿರೆ ಮನದಲಿ ಅಂದಿನ ಬೆಚ್ಚಗಿನ ಬಂಧನ!

No comments:

Post a Comment