ನನ್ನ ಮನಸ್ಸು

24 October, 2013

ವೇದ ಪುರುಷನ ಸುತನ ಸುತನ ಸಹೋದರನ ಹೆಮ್ಮಗನ ಮಗನ ತಳೋದರಿಯ ಮಾತುಳನ ಮಾವನ ಅತುಳ ಭುಜಬಲದಿ, ಕಾದಿಗೆಲಿದನಣ್ಣನವ್ವೆಯ ನಾದಿನಿಯ ಜಠರದಲಿ ಜನಿಸಿದ ಅನಾದಿ ಮೂರುತಿ ಸಲಹೋ ಕೃಷ್ಣ ಗದುಗಿನ ವೀರ ನಾರಾಯಣ||


ಇದು ಸುಮಾರು ೩೦ ವರ್ಷದ ಹಿಂದೆ ಕೇಳುತ್ತಿದ್ದ ಹಾಡು.  ಈ ಹಾಡನ್ನು ಶ್ರೀ ವಾಸುದೇವಾಚಾರ್ಯರು ಪ್ರವಚನ ಪ್ರಾರಂಭಿಸುವ ಮೊದಲು ಶ್ರೀ ನಾರಾಯಣಾಚಾರ್ಯರು ಸುಶ್ರಾವ್ಯವಾಗಿ ಹಾಡುತ್ತಿದ್ದರು. ಅದರ ಅರ್ಥ ತಿಳಿದ ನಂತರ ಮತ್ತೂ ಹತ್ತಿರವಾಗಿತ್ತು ಹೃದಯಕ್ಕೆ ಈ ಹಾಡು.!  ಈ ಹಾಡು ನಮ್ಮೆಲ್ಲರಿಗೂ ಬಹಳ ಪ್ರಿಯವಾಗಿತ್ತು. ಇವತ್ತು ಪೂರ್ವಾಹ್ನ ಅಮ್ಮ ಹಾಡುವುದನ್ನು ಕೇಳಿ ಮನಸ್ಸು ಮತ್ತೆ ೩೦ ವರ್ಷ ಹಿಂದೆ ಹೋಯಿತು. ಪ್ರಫುಲ್ಲವಾಯಿತು. ಫೇಸ್ ಬುಕ್ ಮಿತ್ರರೊಂದಿಗೆ ಹಂಚಿಕೊಳ್ಳುವ ಅನಿಸಿತು. ಮಿತ್ರರೇ, ಈ ಹಾಡಿನಲ್ಲಿ ಬರುವ ಒಗಟಿನಂತಿರುವ ಸಂಬಂಧಗಳನ್ನು ಬಿಡಿಸಲು ಯತ್ನಿಸುವಿರಾ? ಸರಿಯಾದ ಉತ್ತರ ನಾಳೆ ಹಾಕುವೆ!

No comments:

Post a Comment