ನನ್ನ ಮನಸ್ಸು

20 September, 2013

ಭಾವಗಳ ದಾಸ ನನ್ನೀ ಆತ್ಮ!

|| ನೈನಂ ಛಿಂದಂತಿ ಶಸ್ತ್ರಾಣಿ ನೈನಂ ದಹತಿ ಪಾವಕಃ

ನ ಚೈನಂ ಕ್ಲೇದಯನ್ತ್ಯಾಪೋ ನ ಶೋಷಯತಿ ಮಾರುತಃ||

ಯಾವ ಮಂತ್ರಾಸ್ತ್ರಗಳಿಂದಲೂ ತುಂಡರಿಸಲಾಗುವುದಿಲ್ಲವಂತೆ,
 ಪ್ರಜ್ವಲಿಸುವ ಅಗ್ನಿಗೂ ಬೂದಿ ಮಾಡಲಸಾಧ್ಯವಂತೆ,
 ಯಾವುದೇ ಜಲಪಾತದಡಿಯಲ್ಲೂ ಒದ್ದೆಯಾಗುವುದಿಲ್ಲವಂತೆ,
 ಬಿರುಗಾಳಿಯೂ ಒಣಗಿಸಲು ಅಶಕ್ತವಂತೆ..

ನಿಜವಿರಬಹುದೋ ಏನೊ!
ಆದರೆ ಅಂತಹ ಆತ್ಮವೂ ಭಾವಗಳ ದಾಸ!

ಹರಿತಾದ ಬರಹವೊಂದೇ ಸಾಕು, ನೂರಾರು ಹೋಳು ಆ ಆತ್ಮ..
ಸಣ್ಣ ಬೆಂಕಿಕಡ್ಡಿಯಂತಹ ಮಾತೇ ಸಾಕು ಬೂದಿ ಮಾತ್ರ ಉಳಿಯುವುದು..
ಭಾವವಿಲ್ಲದ ನೋಟವೇ ಸಾಕು ಆರ್ದ್ರವಾಗಲು..

ಮೌನವೇ ಸಾಕು ಒಣಗಿ ಹೋಗಲು!

No comments:

Post a Comment