ನನ್ನ ಮನಸ್ಸು

26 July, 2013

ಮುಂಜಾವಿನ ಜತೆಗೊಂದು ಆಲಾಪನೆ!

-
ನಾನು: ಬಿಸಿಲು ಸುಡುವದೆಂದು ಮರದಡಿ ನಾ ಪೋದೆ, ಮರ ಬಗ್ಗಿ ಶಿರದ ಮೇಲೊರಗಿತು ಹರಿಯೆ.

ಯಾರಿಗೆ ಯಾರುಂಟು ಎರವಿನ ಸಂಸಾರ ನೀರಮೆಲಣಗುಳ್ಳೆ ನಿಜವಲ್ಲ ಹರಿಯೇ||


ಮುಂಜಾವು: ಗೊಂಬೆಯಾಟವಯ್ಯ ಬ್ರಹ್ಮಾಂಡವೇ ಆ ದೇವನಾಡುವ ಬೊಂಬೆಯಾಟವಯ್ಯ

ಅಂಬುಜನಾಭನ ಅಂತ್ಯವಿಲ್ಲದ ಧಾತನ ತುಂಬು ಮಾಯವಯ್ಯಾ ಈ ಲೀಲೆಯು

ಬೊಂಬೆಯಾಟವಯ್ಯ ಬ್ರಹ್ಮಾಂಡವೇ ಆ ದೇವನಾಡುವ ಬೊಂಬೆಯಾಟವಯ್ಯ||

ಜಗವ ಸೃಜಿಸಿ, ಗತಿ ಸೂತ್ರವನಾಡಿಸಿ

ನಗುನಗುತಾ ಕುಣಿಸಿ ಮಾಯೆ ಬೀಸಿ

ರಾಗದ ಭೋಗದ ಉರಿಯೊಳು ನಿಲ್ಲಿಸಿ

ಆಗೊಮ್ಮೆ ಈಗೊಮ್ಮೆ ತಾನಾಡಿ ತಾನಲಿವ... “

ನಸುನಗುತಾ ಅನ್ನುತ್ತಾಳೆ ಮುಂಜಾನೆ, “ ಅವನನ್ನೇ ಕೇಳು,

“ತಿಳಿ ಹೇಳಯ್ಯಾ ಒಳಮರ್ಮ ತೋರಯ್ಯಾ, ನಳಿನಾಕ್ಷ ನಿನ್ನಯ ಸಂಕಲ್ಪವೇನಯ್ಯ?”

No comments:

Post a Comment