ನನ್ನ ಮನಸ್ಸು

26 October, 2012

ಈ ಪ್ರಕಾಶವು ನಾಂದಿ ಹಾಡಲಿ!










ಈ ಪುಟ್ಟ ಹಣತೆಯ ಬೆಳಕು 
ಬಾಳಿಗೆ ಹೊಸ ಕಾಂತಿಯ ತುಂಬಲಿ!
ನಮ್ಮೊಳಗೆ ಬೇರೂರಿರುವ
ನರಕಾಸುರನ ಕಿತ್ತೆಸೆಯಲಿ!
ಬೆಚ್ಚನೆ ಹೊದ್ದು ಮಲಗಿರುವ
ನೈತಿಕತೆಯ ಬಡಿದೆಬ್ಬಿಸಲಿ!
ಮರೆತ ಮಾನವತೆಯ 
ಗುಣಗಳನ್ನು ಮತ್ತೆ ನೆನಪಿಸಲಿ!
ನಮ್ಮ ಮಣ್ಣಿನ ಸಂಸ್ಕೃತಿಯ
ಬೇರುಗಳನ್ನು ಮತ್ತಿಷ್ಟು ಗಟ್ಟಿಗೊಳಿಸಲಿ!
ಪಾಶ್ಚಿಮಾತ್ಯರ ಷೋಕಿಗೆ ಮರುಳಾದ
ಯುವಜನಾಂಗವ ತಿದ್ದಿ ಹಾದಿಗೆ ತರಲಿ!
ನಾಡಿನ ಉಜ್ವಲ ಭವಿಷ್ಯಕ್ಕೆ
ಈ ಪ್ರಕಾಶವು ನಾಂದಿ ಹಾಡಲಿ!

No comments:

Post a Comment