ನನ್ನ ಮನಸ್ಸು

21 August, 2011

ಗೋಪಾಲನಲ್ಲೊಂದು ಮನವಿ!







     

ಇಳಿದು ಬಾ  ಬುವಿಗೆ,
ಬಾಡಿ  ಬಳಲಿದ್ದಾಳಾಕೆ!
ಕಾದಿದ್ದಾಳೆ ಶಬರಿಯಂತೆ, 
ನಿನ್ನ ಮತ್ತೊಂದು ಅವತಾರಕ್ಕೆ!
ನನಗೆ ಗೊತ್ತು,
ನೀನೂ ಕಾದಿರುವಿ;
ಸರಿಯಾದ ಕಾಲಕ್ಕಾಗಿ!
ಆದರೆ, ಈ ಸಾರಿ ಪೂರ್ಣಾವತಾರ ತಾಳು!
ಈ ಭುವಿಯಲ್ಲೀಗ ಮುಖವಾಡ 
ಹೊತ್ತ ಹಲವು ಮುಖಗಳಿವೆ;
ನಿನಗೂ ಕಷ್ಟವಾದೀತು ಯಾರು ಮಾನವರು, 
ಯಾರು ದೈತ್ಯರೆಂದು ಅರಿಯಲು.
ಕೊನೆಗೂ ಜಯವು ನಿನ್ನದೇ....ಆದರೆ
 ಸುಖವ ಅನುಭವಿಸಲು ಯಾರೂ ಉಳಿಯರು...
ಇದು ಸತ್ಯ ಅಲ್ಲವೇ...ಗೋಪಾಲ?

No comments:

Post a Comment