ಕರ್ನಾಟಕದ ಹಣೆಬರಹ!
ಅಂತೂ ಇಂತೂ ಕರ್ನಾಟಕದ ರಾಜ ಭವನದಲ್ಲಿ ಮತ್ತೆ ಬಿರುಸಿನ ಚಟುವಟಿಕೆಗಳು ಪ್ರಾರಂಭವಾಗಿವೆ. ಯಡ್ಯೂರಪ್ಪನವರ ತಂಡ ಮತ್ತೆ ಬಣ್ಣಹಚ್ಚಿಕೊಂಡಿದೆ, ಗೆಜ್ಜೆ ಗಿಜ್ಜೆ ಎಲ್ಲಾ ಕಟ್ಟಿಯಾಯಿತು. ಹೊಸ ಪ್ರಸಂಗ! ಇನ್ನೇನೂ ಠಾಕೂರರ ಮತ್ತು ದೆಹಲಿಯಿಂದ ಒಪ್ಪಿಗೆ ಮಾತ್ರ ಬರುವುದು ಬಾಕಿ! ದೆಹಲಿ ಒಡೆಯರು ಒಪ್ಪಿಗೆ ಕೊಡುವುದು ಮಾತ್ರ ಸಂಶಯ.
ಕುಮಾರಸ್ವಾಮಿಯ ಸಂಧಾನ ಕಾರ್ಯ ಯಶಸ್ವಿಯಾಯಿತೆಂದು ತೋರುತ್ತದೆ. ಸ್ವಲ್ಪವೇ ದಿನಗಳ ಹಿಂದೆ ಒಬ್ಬರ ಮೇಲೊಬ್ಬರು ವಾಗ್ಭಾಣವನ್ನು ಬಿಡುತ್ತಿದ್ದವರು ಈಗ ಮತ್ತೊಮ್ಮೆ ಒಂದಾಗಿದ್ದಾರೆ.. ಎಷ್ಟು ವಿಚಿತ್ರ! ರಾಜಕಾರಣದಲ್ಲಿ ಯಾವಾಗ ದೋಸ್ತಿಗಳಾಗುತ್ತಾರೆ, ಯಾವಾಗ ವೈರಿಗಳಾಗುತ್ತಾರೆ ಎಂದು ಹೇಳಲು ಸಾಧ್ಯವಿಲ್ಲ..ಒಂದಂತೂ ಸತ್ಯ ... ಬಿ.ಜೆ.ಪಿಗೆ ಇನ್ನೂ ಬುದ್ಧಿ ಬಂದಿಲ್ಲ. ಈ ಜೆಡಿ(ಯೆಸ್) ನವರು ಯಾವಾಗ ಕಾಲೆಳೆಯುತ್ತಾರೆಂದು ಹೇಳಲು ಸಾಧ್ಯವಿಲ್ಲ. ಆದರೂ ಗದ್ದುಗೆಯ ಅಸೆ!
ಗೌಡನವರ ಆಲೋಚನೆಯೇನೋ? ಇಲ್ಲದ್ದಿದ್ದರೆ ಬಿ.ಜೆ. ಪಿಗೆ ಅಧಿಕಾರ ಕೊಡುತ್ತಿರಲ್ಲಿಲ್ಲ!
ಧರ್ಮಯುದ್ಧ, ನ್ಯಾಯಯುದ್ಧ ಎಲ್ಲಾ ಬದಿಗೆ ಸರೆಯಿತು... ಈಗ ಹೊಸ ಆಟ!
ಕೆಲವು ದಿನಗಳ ಹಿಂದೆ ಪೇಪರ್ ನಲ್ಲಿಯೆಡ್ಯೂರಪ್ಪ ನವರಿಗೆ ಮುಖ್ಯ ಮಂತ್ರಿಯಾಗುವ ಯೋಗವಿಲ್ಲವೆಂದು ಒಬ್ಬ ಜ್ಯೋತಿಷಿಗಳು ಭವಿಷ್ಯ ನುಡಿದಿದ್ದರು.. ಯಡ್ಯೂರಪ್ಪರ ಪಟ್ಟಾಭಿಷೇಕವಾಗುತ್ತದೆಯೋ ಎಂದು ಕಾದು ನೋಡಬೇಕು!
ಬದುಕಿನಲ್ಲಿ ನಡೆದ, ನಡೆಯುವ, ತಿಳಿದ, ತಿಳಿಯದ ವಿಷಯಗಳನ್ನು ಮನದಲ್ಲಿ ಇಡಲಾಗದೆ, ತೋಡಿಕೊಳ್ಳಲು ಕಂಡುಕೊಂಡ ಮಾರ್ಗ!
ನನ್ನ ಮನಸ್ಸು
▼
31 October, 2007
ಪ್ರೇಮಾ ಕಾರಂತರಿಗೆ ಶೃದ್ಧಾಂಜಲಿ!
ರಂಗಭೂಮಿಯ ಹಿರಿಯ ತಾರೆ ಪ್ರೇಮಾ ಕಾರಂತ ತೆರೆಮರೆಗೆ ಸರಿದರು. ಅವರಿಗಿದೋ ಭಾವಪೂರ್ಣ ಶೃದ್ಧಾಂಜಲಿ! ಪತಿ ದಿವಂಗತ ಬಿ.ವಿ. ಕಾರಂತರ ಜತೆ ರಂಗಭೂಮಿಗೆ ೪೦ವರ್ಷಗಳಿಗಿಂತಲೂ ಹೆಚ್ಚು ಕಾಲ ಸೇವೆ ಸಲ್ಲಿಸಿ ನಮಗೆ ಅನೇಕ ನಾಟಕಗಳ ಸವಿಯುಣ್ಣಿಸಿದರು. " ಬೆನಕ ಮಕ್ಕಳ ಕೇಂದ್ರ" ಸ್ಥಾಪಿಸಿ ಮಕ್ಕಳ ರಂಗಭೂಮಿಗೆ ಅಪಾರ ಸೇವೆ ಸಲ್ಲಿಸಿದ್ದ ಇವರು ಫಣಿಯಮ್ಮ, ಹಂಸಗೀತೆ, ಗೋಧೂಳಿ, ಕುದುರೆ ಮೊಟ್ಟೆ ಮೊದಲದ ಚಲನ ಚಿತ್ರಗಳಿಗೆ ವಸ್ತ್ರವಿನ್ಯಾಸ ಮಾಡಿ ಪ್ರಸಿದ್ಧರಾಗಿದ್ದಾರೆ.
ಸ್ವಲ್ಪ ಸಮಯದ ಹಿಂದೆ ನಾವು ತೇಜಸ್ವಿಯವರನ್ನು ಕಳೆದುಕೊಂಡೆವು. ಈಗ ಮತ್ತೊಂದು ಭರಿಸಲಾಗದ ನಷ್ಟ. ಇಂತವರು ಕನ್ನಡ ನಾಡಿನಲ್ಲೇ ಮತ್ತೊಮ್ಮೆ ಹುಟ್ಟಿ ಬರಲಿ ಎಂದು ಹಾರೈಸೋಣ!
******************************************************
ರಂಗಭೂಮಿಯ ಹಿರಿಯ ತಾರೆ ಪ್ರೇಮಾ ಕಾರಂತ ತೆರೆಮರೆಗೆ ಸರಿದರು. ಅವರಿಗಿದೋ ಭಾವಪೂರ್ಣ ಶೃದ್ಧಾಂಜಲಿ! ಪತಿ ದಿವಂಗತ ಬಿ.ವಿ. ಕಾರಂತರ ಜತೆ ರಂಗಭೂಮಿಗೆ ೪೦ವರ್ಷಗಳಿಗಿಂತಲೂ ಹೆಚ್ಚು ಕಾಲ ಸೇವೆ ಸಲ್ಲಿಸಿ ನಮಗೆ ಅನೇಕ ನಾಟಕಗಳ ಸವಿಯುಣ್ಣಿಸಿದರು. " ಬೆನಕ ಮಕ್ಕಳ ಕೇಂದ್ರ" ಸ್ಥಾಪಿಸಿ ಮಕ್ಕಳ ರಂಗಭೂಮಿಗೆ ಅಪಾರ ಸೇವೆ ಸಲ್ಲಿಸಿದ್ದ ಇವರು ಫಣಿಯಮ್ಮ, ಹಂಸಗೀತೆ, ಗೋಧೂಳಿ, ಕುದುರೆ ಮೊಟ್ಟೆ ಮೊದಲದ ಚಲನ ಚಿತ್ರಗಳಿಗೆ ವಸ್ತ್ರವಿನ್ಯಾಸ ಮಾಡಿ ಪ್ರಸಿದ್ಧರಾಗಿದ್ದಾರೆ.
ಸ್ವಲ್ಪ ಸಮಯದ ಹಿಂದೆ ನಾವು ತೇಜಸ್ವಿಯವರನ್ನು ಕಳೆದುಕೊಂಡೆವು. ಈಗ ಮತ್ತೊಂದು ಭರಿಸಲಾಗದ ನಷ್ಟ. ಇಂತವರು ಕನ್ನಡ ನಾಡಿನಲ್ಲೇ ಮತ್ತೊಮ್ಮೆ ಹುಟ್ಟಿ ಬರಲಿ ಎಂದು ಹಾರೈಸೋಣ!
******************************************************