<?xml version='1.0' encoding='UTF-8'?><rss xmlns:atom='http://www.w3.org/2005/Atom' xmlns:openSearch='http://a9.com/-/spec/opensearchrss/1.0/' xmlns:georss='http://www.georss.org/georss' version='2.0'><channel><atom:id>tag:blogger.com,1999:blog-6565981025284122780</atom:id><lastBuildDate>Sun, 08 Nov 2009 07:14:29 +0000</lastBuildDate><title>ತೆರದ ಮನಸಿನ ಪುಟಗಳು</title><description></description><link>http://teredamanasinaputagalu.blogspot.com/</link><managingEditor>noreply@blogger.com (ಶೀಲಾ)</managingEditor><generator>Blogger</generator><openSearch:totalResults>14</openSearch:totalResults><openSearch:startIndex>1</openSearch:startIndex><openSearch:itemsPerPage>25</openSearch:itemsPerPage><item><guid isPermaLink='false'>tag:blogger.com,1999:blog-6565981025284122780.post-6251127565776206846</guid><pubDate>Fri, 06 Jun 2008 04:49:00 +0000</pubDate><atom:updated>2008-07-10T11:43:20.847+05:30</atom:updated><category domain='http://www.blogger.com/atom/ns#'>ಪ್ರದರ್ಶನ</category><category domain='http://www.blogger.com/atom/ns#'>ಕಲೆ</category><title>ಮತ್ತೆ ಪ್ರತ್ಯಕ್ಷಳಾದೆ!</title><description>ಮೊದಲು ಕ್ಷಮೆ ಬೇಡುತ್ತೇನೆ!  ಮತ್ತೆ ಮುಂದುವರಿಸುತ್ತೇನೆ.&lt;br /&gt;                      ಸಾಧಾರಣ ಮೂರು, ನಾಲ್ಕು ತಿಂಗಳು ಗಣಕ ಯಂತ್ರದ ಪ್ರಪಂಚದಿಂದ ದೂರವಾಗಿ ನನ್ನ ಸಂಸಾರದಲ್ಲಿ ಮುಳುಗಿದ್ದೆ. ಮಕ್ಕಳ ಹಿತಕ್ಕೋಸ್ಕರ ಹೀಗೆ ಮಾಡಬೇಕಾಯಿತು. ಆದರೂ ಈ ಎರಡು ತಿಂಗಳು ಬೇಸಿಗೆಯ ರಜೆಯನ್ನು ವ್ಯರ್ಥಮಾಡದೇ ಕಲಾ ಶಿಬಿರವನ್ನೂ ಮತ್ತು ೧೦ನೇ ತರಗತಿಯ ಮಕ್ಕಳಿಗೆ ಸಂಸ್ಕೃತ ತರಗತಿಯನ್ನೂ ನಡೆಸಿ ಆರ್ಥಿಕ ಸಂಪಾದನೆಯ ಜೊತೆ ಕಲಾಸೇವೆಯನ್ನು ಮಾಡಿದ ತೃಪ್ತಿ ನನ್ನಲ್ಲಿ ಉಳಿದಿದೆಯಾದರೂ ನನ್ನ ಮತ್ತು ಪ್ರಪಂಚದ ಕೊಂಡಿಯಾದ ಅಂತರ್ಜಾಲದಿಂದ ದೂರ ಉಳಿದ ನೋವು ಇನ್ನೂ ದೂರವಾಗಲಿಲ್ಲ. ಪ್ರಾರಂಭದಲ್ಲಿ ಶೂರಳಂತೆ ಬ್ಲಾಗ್ ನಲ್ಲಿ ಮೊದಲ್ಮೊದಲು ನನ್ನ ಮನ ಬಿಚ್ಚಿ, ಒಂದು ದಿನ ಮಾಯವಾಗಿ ಹೋಗಬೇಕಾದ ಅಪಕೀರ್ತಿ ಹೊರಬೇಕಾಯಿತು. ಪರವಾಗಿಲ್ಲ.... ಮಕ್ಕಳಿಗೋಸ್ಕರ ಅಷ್ಟೆಲ್ಲ ಮಾಡಬೇಕಾದುದು ತಾಯಂದಿರ ಹೊಣೆಯಾಗಿದೆ. ಮೊದಲು ಗೃಹಿಣಿಯ ಧರ್ಮ ಮತ್ತೆ ಉಳಿದುದು ಅಲ್ಲವೇ?&lt;br /&gt;ಕಲಾ ಶಿಬಿರದ ಕೆಲವೊಂದು ಚಿತ್ರ ಹಾಕಿ ನನ್ನ ಬರಹಕ್ಕೆ ಸಾಕ್ಷಿ ಕೊಡುತ್ತೇನೆ!&lt;br /&gt;&lt;a onblur="try {parent.deselectBloggerImageGracefully();} catch(e) {}" href="http://bp2.blogger.com/_0OuRE6GJbt8/SEjDCnFyvlI/AAAAAAAAAYE/FWeiCiIQ9yE/s1600-h/DSCI1051.JPG"&gt;&lt;img style="margin: 0px auto 10px; display: block; text-align: center; cursor: pointer;" src="http://bp2.blogger.com/_0OuRE6GJbt8/SEjDCnFyvlI/AAAAAAAAAYE/FWeiCiIQ9yE/s320/DSCI1051.JPG" alt="" id="BLOGGER_PHOTO_ID_5208627418674413138" border="0" /&gt;&lt;/a&gt;&lt;br /&gt;&lt;a onblur="try {parent.deselectBloggerImageGracefully();} catch(e) {}" href="http://bp3.blogger.com/_0OuRE6GJbt8/SEjDc3FyvmI/AAAAAAAAAYM/bVL9yT7kRTQ/s1600-h/DSCI0876.JPG"&gt;&lt;img style="margin: 0px auto 10px; display: block; text-align: center; cursor: pointer;" src="http://bp3.blogger.com/_0OuRE6GJbt8/SEjDc3FyvmI/AAAAAAAAAYM/bVL9yT7kRTQ/s320/DSCI0876.JPG" alt="" id="BLOGGER_PHOTO_ID_5208627869645979234" border="0" /&gt;&lt;/a&gt;&lt;br /&gt;&lt;a onblur="try {parent.deselectBloggerImageGracefully();} catch(e) {}" href="http://bp3.blogger.com/_0OuRE6GJbt8/SEjEh3FyvnI/AAAAAAAAAYU/AVohP-I30lI/s1600-h/DSCI0864.JPG"&gt;&lt;img style="margin: 0px auto 10px; display: block; text-align: center; cursor: pointer;" src="http://bp3.blogger.com/_0OuRE6GJbt8/SEjEh3FyvnI/AAAAAAAAAYU/AVohP-I30lI/s320/DSCI0864.JPG" alt="" id="BLOGGER_PHOTO_ID_5208629055056952946" border="0" /&gt;&lt;/a&gt;&lt;br /&gt;&lt;a onblur="try {parent.deselectBloggerImageGracefully();} catch(e) {}" href="http://bp1.blogger.com/_0OuRE6GJbt8/SEjHVXFyvoI/AAAAAAAAAYc/EBHUHjHYnvM/s1600-h/collage.jpg"&gt;&lt;img style="margin: 0px auto 10px; display: block; text-align: center; cursor: pointer;" src="http://bp1.blogger.com/_0OuRE6GJbt8/SEjHVXFyvoI/AAAAAAAAAYc/EBHUHjHYnvM/s320/collage.jpg" alt="" id="BLOGGER_PHOTO_ID_5208632138843471490" border="0" /&gt;&lt;/a&gt;&lt;a onblur="try {parent.deselectBloggerImageGracefully();} catch(e) {}" href="http://bp3.blogger.com/_0OuRE6GJbt8/SEjHj3FyvpI/AAAAAAAAAYk/xW8Y5NVoUKA/s1600-h/collage1.jpg"&gt;&lt;img style="margin: 0px auto 10px; display: block; text-align: center; cursor: pointer;" src="http://bp3.blogger.com/_0OuRE6GJbt8/SEjHj3FyvpI/AAAAAAAAAYk/xW8Y5NVoUKA/s320/collage1.jpg" alt="" id="BLOGGER_PHOTO_ID_5208632387951574674" border="0" /&gt;&lt;/a&gt;&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/6565981025284122780-6251127565776206846?l=teredamanasinaputagalu.blogspot.com' alt='' /&gt;&lt;/div&gt;</description><link>http://teredamanasinaputagalu.blogspot.com/2008/06/blog-post.html</link><author>noreply@blogger.com (ಶೀಲಾ)</author><media:thumbnail xmlns:media='http://search.yahoo.com/mrss/' url='http://bp2.blogger.com/_0OuRE6GJbt8/SEjDCnFyvlI/AAAAAAAAAYE/FWeiCiIQ9yE/s72-c/DSCI1051.JPG' height='72' width='72'/><thr:total xmlns:thr='http://purl.org/syndication/thread/1.0'>4</thr:total></item><item><guid isPermaLink='false'>tag:blogger.com,1999:blog-6565981025284122780.post-427757818753368854</guid><pubDate>Wed, 16 Jan 2008 06:07:00 +0000</pubDate><atom:updated>2008-01-16T14:40:31.286+05:30</atom:updated><category domain='http://www.blogger.com/atom/ns#'>ವರ್ತಮಾನ</category><title>ಉಡುಪಿ ಪರ್ಯಾಯ : ವಿವಾದ?</title><description>&lt;a onblur="try {parent.deselectBloggerImageGracefully();} catch(e) {}" href="http://bp3.blogger.com/_0OuRE6GJbt8/R42g_xmd0gI/AAAAAAAAAUU/W5RppFTEkwo/s1600-h/udupi_sri_krishna.jpg"&gt;&lt;img style="margin: 0pt 10px 10px 0pt; float: left; cursor: pointer;" src="http://bp3.blogger.com/_0OuRE6GJbt8/R42g_xmd0gI/AAAAAAAAAUU/W5RppFTEkwo/s320/udupi_sri_krishna.jpg" alt="" id="BLOGGER_PHOTO_ID_5155954165915963906" border="0" /&gt;&lt;/a&gt;&lt;br /&gt;&lt;br /&gt;&lt;br /&gt;&lt;br /&gt;                     ಸಮಾಜಕ್ಕೆ ಮಾದರಿಯಾಗಬೇಕಾಗಿರುವ ಮಠಾಧಿಪತಿಗಳು ಈ ಪರ್ಯಾಯದ ಸುಸಮಯದಲ್ಲಿ ಸಾರ್ವಜನಿಕವಾಗಿ ಕಚ್ಚಾಡುವುದು ಸರಿಯೇ? ಉಡುಪಿಯ ಅಷ್ಟ ಮಠ, ಅದರ ಯತಿಗಳ ಮೇಲೆ ಅಪಾರ ವಿಶ್ವಾಸವಿರುವ ನನ್ನಂತವರಿಗೆ ಇದು ದೊಡ್ಡ ಅಘಾತ. ಕೇವಲ ವಿದೇಶ ಯಾತ್ರೆಯಂತಹ ಕ್ಷುಲಕ ವಿಷಯದಲ್ಲಿ ತಲೆಕೆಡಿಸಿ     ಮದ್ವಾಚಾರ್ಯರಿಂದ ಸ್ಥಾಪಿಸಲ್ಪಟ್ಟ ಶ್ರೀಕೃಷ್ಣನ ಪೂಜೆಯ ವಿಷಯವು  ನ್ಯಾಯಾಲಯದ ಮೆಟ್ಟಲೇರಿ ಹೋಗಿ ಹೀಗೆ ಸಾರ್ವಜನಿಕವಾಗಿ ನಗೆಗೀಡಾಗಿದೆ. ಎಂತಹ ವಿಪರ್ಯಾಸ!  ಸರಿ ಯಾವುದಾದರು ಮಠಾದೀಶರು ತಮ್ಮ ಹಠ ಬಿಟ್ಟು ಕೊಡಬಹುದಲ್ಲವೇ. ಇಲ್ಲ, ಇಲ್ಲಿ ಎಲ್ಲರೂ ತಮ್ಮ ತಮ್ಮ ಹಕ್ಕನ್ನು ಬಿಟ್ಟು ಕೊಡಲು ಸಿದ್ಧರಿಲ್ಲ. ಕೆಲವೇ ದಿನಗಳ ಹಿಂದೆ ಪೇಜಾವರ ಶ್ರೀಗಳು ಇದು ವಾದವಲ್ಲ ಬದಲಾಗಿ ಬೇರೆ ಬೇರೆ ದೃಷ್ಟಿ ಕೋನ ಅಷ್ಟೇ ಎಂದು ಹೇಳಿಕೆ ಕೊಟ್ಟಿದ್ದರು. ನಾವೆಲ್ಲ ಒಟ್ಟಿಗೆ ಕುಳಿತು ಇದನ್ನು ಬಗೆಹರಿಸುವೆವು ಎಂದಿದ್ದರು. ಆದರೆ ಮಕರ ಸಂಕ್ರಾತಿಯ ಹಿಂದಿನ ದಿನ ಈವಿಷಯ ನ್ಯಾಯಾಲಯದ ಮೆಟ್ಟಲೇರಿತ್ತು. ನ್ಯಾಯಾಲಯವು ದಾವೆಗಳನ್ನು ವಜಾಮಾಡಿದಾಗ, ಪುತ್ತಿಗೆ ಮಠದ ಕಡೆಯವರು ಪಟಾಕಿ ಸಿಡಿಸಿ ಸಂತೋಷ ಆಚರಿಸಿದರೆಂದು ಪತ್ರಿಕೆಯು ವರದಿ ಮಾಡಿದೆ. ಇದು ಸರಿಯೇ? ಇದನ್ನು ಓದಿದಾಗಲೇ ಇದು ಕೇವಲ ಒಣ ಪ್ರತಿಷ್ಠೆಯಗಾಗಿ ವಿವಾದ  ಮಾಡಿರುವುದು ಎಂದು ಸ್ಪಷ್ಟವಾಗುತ್ತದೆ.&lt;br /&gt;&lt;br /&gt;&lt;br /&gt;&lt;a onblur="try {parent.deselectBloggerImageGracefully();} catch(e) {}" href="http://bp2.blogger.com/_0OuRE6GJbt8/R42hNhmd0hI/AAAAAAAAAUc/HpKLgUP0wd8/s1600-h/seer.jpg"&gt;&lt;img style="margin: 0px auto 10px; display: block; text-align: center; cursor: pointer;" src="http://bp2.blogger.com/_0OuRE6GJbt8/R42hNhmd0hI/AAAAAAAAAUc/HpKLgUP0wd8/s320/seer.jpg" alt="" id="BLOGGER_PHOTO_ID_5155954402139165202" border="0" /&gt;&lt;/a&gt;&lt;br /&gt;&lt;br /&gt;&lt;br /&gt;&lt;br /&gt;     &lt;br /&gt;          ಶೀಕೃಷ್ಣನು ಜನಸಾಮಾನ್ಯರ ದೇವನು, ಗೋಪ ಬಾಲಕನು,  ಕೇವಲ ಒಂದು ತುಲಸೀದಳದ ಸಮರ್ಪಣೆಯಿಂದಲೇ ತೃಪ್ತನು. ಅಂತವನನ್ನು ಯಾರು ಪೂಜೆ ಮಾಡಿದರೇನು? ಇಡೀ ವಿಶ್ವವನ್ನೇ ವ್ಯಾಪಿಸಿರುವವನನ್ನು ವಿದೇಶಯಾತ್ರೆ ಮಾಡಿದವರು ಪೂಜಿಸಬಾರದೇಕೆ? ಪುತ್ತಿಗೆ ಶೀಗಳು ಪರ್ಯಾಯ ಪೀಠದಲ್ಲಿ ಕುಳಿತುಕೊಳ್ಳಬಹುದು ಆದರೆ ಕಡೆಗೋಲು ಹಿಡಿದ ಬಾಲಗೋಪಾಲನನ್ನು ಪೂಜಿಸಬಾರದು..... ಈ ನಿಯಮವೇಕೆ? ಈ ಯತಿಗಳೆಲ್ಲ ಸಾಮಾನ್ಯರಲ್ಲ. ವೇದಾಭ್ಯಾಸ ಮಾಡಿದ ವಿದ್ವಾಂಸರು.  ನಿತ್ಯ ಭಗವದ್ಗೀತೆಯ ಪಾರಾಯಣ ಮಾಡುವವರು, ಅಂತವರಿಗೆ ಹರಿಯ ಅಂತರ್ಯ ತಿಳಿಯದೇನು???? ಶುದ್ಧ ಭಕ್ತಿಯ ಬಯಸುವವನಿಗೆ ಬಂಗಾರ, ವಜ್ರ, ಮಾಣಿಕ್ಯಗಳ ಕವಚವೇನೋ ಮಾಡಿದರು. ಹೋಗಲಿ ಇದು ಭಕ್ತರು ಪ್ರೀತಿಯಿಂದ ಕೊಟ್ಟ ಕಾಣಿಕೆ ಪರವಾಗಿಲ್ಲ. ಆದರೆ ಅವನು ಎಂದಾದರೂ ಕೇವಲ ಭಾರತೀಯರು ಮಾತ್ರ ತನ್ನ ಭಕ್ತರು ಎಂದಿದ್ದಾನೆಯೇ? ಕುರುಬರ ಕನಕನು ಕರೆದನೆಂದು ಕಿಟಿಕಿಯಲ್ಲೇ ಅವನಿಗೆ ದರುಶನ ತೋರಿದವನನ್ನು ಪೂಜಿಸಲು ಯಾವ ನಿಯಮಗಳು ಬೇಕಾಗಿಲ್ಲ. ಅದೂ ಈ ಕಲಿಯುಗದಲ್ಲಿ ಅವನ ಅಸ್ಥಿತ್ವಕ್ಕೇ ಸಂಚಕಾರ ಬಂದಿರುವಾಗ. ಪುರಂದರ ದಾಸ ಮತ್ತೆ ಮತ್ತೆ ತಮ್ಮ ಪದ್ಯದಲ್ಲಿ ಹಾಡಿರುವಂತೆ ಹರಿಗೆ ತಾಳ ತಂಬೂರ ಜಾಗಟೆ  ಶಂಖಗಳಿಗಿಂತ ಭಕ್ತಿಯು  ಮುಖ್ಯ ಎಂದಿದ್ದಾರೆ.    ನನಗೆ ನೆನಪಿದಂತೆ ಸರಸ್ವತಿಯೇ ನಾಲಗೆಯಲಿ ನಲಿದಾಡುತ್ತಿರುವ ಬನ್ನಂಜೆ ಗೋವಿಂದಾಚಾರ್ಯರು ಒಮ್ಮೆ ಹೇಳಿರುವಂತೆ ದೇವನನ್ನು ಪೂಜಿಸಲು ಯಾವ ನಿಯಮಗಳೂ ಬೇಕಾಗಿಲ್ಲ, ಮೆಟ್ಟು ಹಾಕಿ ಸ್ಮರಿಸಿದರೂ ಭಕ್ತವತ್ಸಲನು ಓಗೊಡುತ್ತಾನೆ. ಮುಖ್ಯವಾಗಿ ಬೇಕಾಗಿರುವುದು ಶೃದ್ಧೆ, ವಿಶ್ವಾಸ ಮತ್ತು ಭಕ್ತಿ.&lt;br /&gt;           " ತೊಂಡರಿಗೆ ತೊಂಡನಾಗಿ ಸಂಚರಿಸುತಿಹನು" ಎಂದು ಪುರಂದರದಾಸರು ಹೇಳಿರುವಂತೆ ಭಕ್ತರ ಭಕ್ತನು ಆದ ಆ ವನಮಾಲಿಯು ಎಲ್ಲರಿಗೂ ಸದ್ಭುದ್ಧಿಯನ್ನು ಕೊಟ್ಟು ಈ ಪರ್ಯಾಯವನ್ನು ಸುಲಲಿತವಾಗಿ ನೆರವೇರಿಸಲಿ ಎಂದು ಆ ಜಗನ್ನಾಥನನ್ನು ಬೇಡಿಕೊಳ್ಳುವೆ.&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/6565981025284122780-427757818753368854?l=teredamanasinaputagalu.blogspot.com' alt='' /&gt;&lt;/div&gt;</description><link>http://teredamanasinaputagalu.blogspot.com/2008/01/blog-post_16.html</link><author>noreply@blogger.com (ಶೀಲಾ)</author><media:thumbnail xmlns:media='http://search.yahoo.com/mrss/' url='http://bp3.blogger.com/_0OuRE6GJbt8/R42g_xmd0gI/AAAAAAAAAUU/W5RppFTEkwo/s72-c/udupi_sri_krishna.jpg' height='72' width='72'/><thr:total xmlns:thr='http://purl.org/syndication/thread/1.0'>4</thr:total></item><item><guid isPermaLink='false'>tag:blogger.com,1999:blog-6565981025284122780.post-5502525884221751063</guid><pubDate>Sun, 13 Jan 2008 18:33:00 +0000</pubDate><atom:updated>2008-01-15T09:19:53.604+05:30</atom:updated><category domain='http://www.blogger.com/atom/ns#'>ಪ್ರದರ್ಶನ</category><category domain='http://www.blogger.com/atom/ns#'>ಪ್ರಕೃತಿ</category><title>ನನ್ನ ಮನೆಯಂಗಳದಲ್ಲಿ ಹಸುರುಸೀರೆ , ಬಣ್ಣ ಬಣ್ಣದ ರವಕೆ  ತೊಟ್ಟು ಮೆರೆಯುತ್ತಿರುವ ಭೂರಮೆ!</title><description>&lt;a onblur="try {parent.deselectBloggerImageGracefully();} catch(e) {}" href="http://bp3.blogger.com/_0OuRE6GJbt8/R4ws2Bmd0fI/AAAAAAAAAUM/BRRJo6vkMLg/s1600-h/IMG_0025.JPG"&gt;&lt;img style="margin: 0pt 10px 10px 0pt; float: left; cursor: pointer;" src="http://bp3.blogger.com/_0OuRE6GJbt8/R4ws2Bmd0fI/AAAAAAAAAUM/BRRJo6vkMLg/s320/IMG_0025.JPG" alt="" id="BLOGGER_PHOTO_ID_5155544980086706674" border="0" /&gt;&lt;/a&gt;&lt;br /&gt;&lt;a onblur="try {parent.deselectBloggerImageGracefully();} catch(e) {}" href="http://bp2.blogger.com/_0OuRE6GJbt8/R4wqxxmd0eI/AAAAAAAAAUE/CHPDBfL0bB8/s1600-h/DSCI0261.JPG"&gt;&lt;img style="margin: 0pt 10px 10px 0pt; float: left; cursor: pointer;" src="http://bp2.blogger.com/_0OuRE6GJbt8/R4wqxxmd0eI/AAAAAAAAAUE/CHPDBfL0bB8/s320/DSCI0261.JPG" alt="" id="BLOGGER_PHOTO_ID_5155542708049007074" border="0" /&gt;&lt;/a&gt;&lt;br /&gt;&lt;a onblur="try {parent.deselectBloggerImageGracefully();} catch(e) {}" href="http://bp3.blogger.com/_0OuRE6GJbt8/R4sK-Rmd0dI/AAAAAAAAAT8/aYm6YiIQS28/s1600-h/IMG_0665.JPG"&gt;&lt;img style="margin: 0pt 10px 10px 0pt; float: left; cursor: pointer;" src="http://bp3.blogger.com/_0OuRE6GJbt8/R4sK-Rmd0dI/AAAAAAAAAT8/aYm6YiIQS28/s320/IMG_0665.JPG" alt="" id="BLOGGER_PHOTO_ID_5155226263448572370" border="0" /&gt;&lt;/a&gt;&lt;br /&gt;&lt;a onblur="try {parent.deselectBloggerImageGracefully();} catch(e) {}" href="http://bp2.blogger.com/_0OuRE6GJbt8/R4sKUBmd0cI/AAAAAAAAAT0/2-UT9HxQTF0/s1600-h/IMG_0664.JPG"&gt;&lt;img style="margin: 0pt 10px 10px 0pt; float: left; cursor: pointer;" src="http://bp2.blogger.com/_0OuRE6GJbt8/R4sKUBmd0cI/AAAAAAAAAT0/2-UT9HxQTF0/s320/IMG_0664.JPG" alt="" id="BLOGGER_PHOTO_ID_5155225537599099330" border="0" /&gt;&lt;/a&gt;&lt;br /&gt;&lt;a onblur="try {parent.deselectBloggerImageGracefully();} catch(e) {}" href="http://bp2.blogger.com/_0OuRE6GJbt8/R4sJoBmd0bI/AAAAAAAAATs/aSjJQIrgMkI/s1600-h/IMG_0668.JPG"&gt;&lt;img style="margin: 0pt 10px 10px 0pt; float: left; cursor: pointer;" src="http://bp2.blogger.com/_0OuRE6GJbt8/R4sJoBmd0bI/AAAAAAAAATs/aSjJQIrgMkI/s320/IMG_0668.JPG" alt="" id="BLOGGER_PHOTO_ID_5155224781684855218" border="0" /&gt;&lt;/a&gt;&lt;br /&gt;&lt;a onblur="try {parent.deselectBloggerImageGracefully();} catch(e) {}" href="http://bp1.blogger.com/_0OuRE6GJbt8/R4sIlxmd0aI/AAAAAAAAATk/lLX4Xq7R-uE/s1600-h/IMG_0661.JPG"&gt;&lt;img style="margin: 0pt 10px 10px 0pt; float: left; cursor: pointer;" src="http://bp1.blogger.com/_0OuRE6GJbt8/R4sIlxmd0aI/AAAAAAAAATk/lLX4Xq7R-uE/s320/IMG_0661.JPG" alt="" id="BLOGGER_PHOTO_ID_5155223643518521762" border="0" /&gt;&lt;/a&gt;&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/6565981025284122780-5502525884221751063?l=teredamanasinaputagalu.blogspot.com' alt='' /&gt;&lt;/div&gt;</description><link>http://teredamanasinaputagalu.blogspot.com/2008/01/blog-post_13.html</link><author>noreply@blogger.com (ಶೀಲಾ)</author><media:thumbnail xmlns:media='http://search.yahoo.com/mrss/' url='http://bp3.blogger.com/_0OuRE6GJbt8/R4ws2Bmd0fI/AAAAAAAAAUM/BRRJo6vkMLg/s72-c/IMG_0025.JPG' height='72' width='72'/><thr:total xmlns:thr='http://purl.org/syndication/thread/1.0'>3</thr:total></item><item><guid isPermaLink='false'>tag:blogger.com,1999:blog-6565981025284122780.post-1711762410953151555</guid><pubDate>Mon, 07 Jan 2008 07:06:00 +0000</pubDate><atom:updated>2008-01-14T12:02:48.172+05:30</atom:updated><category domain='http://www.blogger.com/atom/ns#'>ಆಚರಣೆ</category><category domain='http://www.blogger.com/atom/ns#'>ವರ್ತಮಾನ</category><title>ಬೈಲಕೂರಿನ ಪೊರಕೆ ಏಟಿನ ಜಾತ್ರೆ!</title><description>ಈ ಬೈಲಕೂರನ್ನು ಆಧುನಿಕತೆ ಆವರಿಸಿದ್ದರೂ ವರ್ಷ ಪ್ರತಿ ಚಂದ್ರಮಾನ ಯುಗಾದಿಯ ನಂತರ ಬರುವ ತದಿಗೆಯಂದು  ಪೊರಕೆಯಿಂದ 'ಬಡಿ- ಹೊಡಿ’ ಎಂಬ ಜಾತ್ರೆ ತನ್ನ ಎಲ್ಲಾ ಹಳೆ ಸಂಪ್ರದಾಯವನ್ನು ಉಳಿಸಿಕೊಂಡಿದೆ. ಈ ಜಾತ್ರೆಯಲ್ಲಿ ಬಾಜಾಭಂತ್ರಿ ಬದಲು ಟಣ್..ಟಣಾ...ಟಣ್ ಎಂಬ ನಾದ ಹೊಮ್ಮಿಸುವ ವಾದ್ಯ ಕನ್ನಾಲಿಗೆ ಮತ್ತು ನಾಡು- ಕಾಡಿನ ತುಂಬ ಮಾರ್ದನಿಗೊಳ್ಳುವ ಮರ್ದನ ವಾದ್ಯವನ್ನು ಉಪಯೋಗಿಸುತ್ತಾರೆ. ಸಿಡಿಮದ್ದುಗಳ ಆರ್ಭಟವಿಲ್ಲ. ರಥೋತ್ಸವದ ಬದಲಾಗಿ ಮನುಷ್ಯ ಮನುಷ್ಯರನ್ನೇ ಹೆಗಲ ಮೇಲೆ ತಲೆ ಕೆಳಗೆ ಮಾಡಿ ಹೊತ್ತು ತರುವ ಸಂಪ್ರದಾಯವಿದೆ. ಮೆರವಣಿಗೆಯ ಮುಂದೆ ಕುಸ್ತಿ, ಒಬ್ಬರಿಗೊಬ್ಬರು ಮುಂಗೈ ಹಿಡಿದು ಶಕ್ತಿ ಪಣಕ್ಕಿಡುವ ಸ್ಪರ್ಧೆಗಳಿವೆ. ಸಮಾರಾಧನೆಯ ಬದಲು ಮನೆ ಮನೆಯಿಂದ ತಂದ ಬುಟ್ಟಿ ಅಡುಗೆಯೇ ಭೋಜನ. ಜಾತ್ರೆಯ ಕೊನೆಯಲ್ಲಿ ’ಬರಲಿನ’(ಪೊರಕೆಯ) ಹೊಡೆದಾಟವಿದೆ.&lt;br /&gt;     &lt;a onblur="try {parent.deselectBloggerImageGracefully();} catch(e) {}" href="http://bp0.blogger.com/_0OuRE6GJbt8/R4sBPhmd0UI/AAAAAAAAAS0/6ec-d0ikcYQ/s1600-h/DSCI0330.JPG"&gt;&lt;img style="float:left; margin:0 10px 10px 0;cursor:pointer; cursor:hand;" src="http://bp0.blogger.com/_0OuRE6GJbt8/R4sBPhmd0UI/AAAAAAAAAS0/6ec-d0ikcYQ/s320/DSCI0330.JPG" border="0" alt=""id="BLOGGER_PHOTO_ID_5155215564685037890" /&gt;&lt;/a&gt;&lt;br /&gt;         ಅಂದು ಬೆಳಿಗ್ಗೆ ದೇವಸ್ಥಾನ ಹಾಗೂ ಓಕುಳಿ ತುಂಬಿದ ಹೊಂಡದ ಸುತ್ತಲು ಹಸುರು ಹಂದರ ಹಾಕಲು ಆರಂಭವಾಗುತ್ತದೆ. ತೋರಣ ಕಟ್ಟಲು ಬೇಕಾದ ಬಾಳೆ ಕಂಬಗಳನ್ನು ತರಲು ಪರಂಪರೆಯಂತೆ ಊರಗೌಡರ ಮನೆಗೆ ಹೋಗುತ್ತಾರೆ ಅದೂ ಆರತಿ ವಾದ್ಯಗಳ ಸಮೇತ!  ಮೇಳದೊಂದಿಗೆ ಗೌಡರು ಮಾರುತಿಯ ಗುಡಿಗೆ  ತಲುಪಿ ಶಂಖನಾದದೊಂದಿಗೆ ಚಪ್ಪರ ಹಾಕಿ ಬಾಳೇ ಕಂಬಗಳನ್ನು ಕಟ್ಟುತ್ತಿದ್ದಂತೆ ಜಾತ್ರೆಗೆ ಚಾಲನೆ ದೊರೆತಂತಾಗುತ್ತದೆ.&lt;br /&gt;      &lt;a onblur="try {parent.deselectBloggerImageGracefully();} catch(e) {}" href="http://bp3.blogger.com/_0OuRE6GJbt8/R4sAoRmd0TI/AAAAAAAAASs/3JVGZgURxJE/s1600-h/DSCI0331.JPG"&gt;&lt;img style="float:left; margin:0 10px 10px 0;cursor:pointer; cursor:hand;" src="http://bp3.blogger.com/_0OuRE6GJbt8/R4sAoRmd0TI/AAAAAAAAASs/3JVGZgURxJE/s320/DSCI0331.JPG" border="0" alt=""id="BLOGGER_PHOTO_ID_5155214890375172402" /&gt;&lt;/a&gt;&lt;br /&gt;      ಜಾಲಗಾರ ಮನೆತನದವರು ಹೊಡೆಯಲು ಬೇಕಾದ ಪೊರಕೆಗಳನ್ನು ಜಾತ್ರೆಯ ಹಿಂದಿನ ದಿನವೇ ಸಂಗ್ರಹಿಸುತ್ತಾರೆ. ಲಿಪ್ಪಿ ಹಾಗೂ ಲಕ್ಕೆಯ ಬರಲುಗಳನ್ನು ಪೆಂಡಿ ಕಟ್ಟುತ್ತಾರೆ. ಅವರಲ್ಲಿಗೆ ಹೋಗಿ ಈ ಪೊರಕೆಯ ಗಂಟುಗಳನ್ನು ಮೇಳದೊಂದಿಗೆ ಊರ ತುಂಬೆಲ್ಲ ಮೆರವಣಿಗೆ ಮಾಡುತ್ತಾರೆ. ಇದೇ ಸಂದರ್ಭದಲ್ಲಿ ಗಟ್ಟಿ ಮುಟ್ಟಾಗಿರುವ ಪೊರಕೆಗಳನ್ನು ನೋಡಿದ ಜನರು" ಹೌದು ನೋಡಪಾ... ಬರ್ಲ ಅಂದ್ರ ಹೀಂಗಾ ಇರಬೇಕು, ಒಂದು ಹೊಡ್ತ ಬಿತ್ತಂದ್ರ ಮ್ಯಾಕೆ ಏಳಕ ಬಂದಿರಬಾರದು ಹಾಂಗ ಆದಾವು ನೋಡು" ಎಂದು ಜಾಲಗಾರ ಹುಡುಗರಿಗೆ ಶಹಬ್ಬಾಷಗಿರಿ ಕೊಡುತ್ತಾರೆ. ಊರ ಕುಂಬಾರರು ಓಕುಳಿಯಾಡಲು ಬೇಕಾದ ಮಡಕೆಗಳನ್ನು ಹೊತು ತರುತ್ತಾರೆ. ಹೀಗೆ ಜಾತ್ರೆಯಲ್ಲಿ ಸಹಕರಿಸಿದವರೆಲ್ಲರನ್ನೂ ಜಾತ್ರೆಯ ನಂತರ ಉಡುಗೊರೆ ಕೊಟ್ಟು ಗೌರವಿಸುತ್ತಾರೆ.&lt;br /&gt;              ಈ ಜಾತ್ರೆಗೆ ಬೈಲಕೂರಿನ ಸುತ್ತಮುತ್ತಲ ಹಳ್ಳಿಗಳಾದ ಅಮರಗೊಳ, ಹಡಗಲಿ, ಗರಸಂಗಿ, ಮದರಿ, ತಂಗಡಿಗೆಯಂಥ ಹಳ್ಳಿಯವರಿಗೂ ಆಮಂತ್ರಣವಿದ್ದೂ ಅವರೂ ಇದರಲ್ಲಿ ಭಾಗವಹಿಸಲು ಬರುತ್ತಾರೆ. ಹೀಗೆ ಬರುವವರನ್ನು ಮೆರವಣಿಗೆಯ ಮೂಲಕ ಓಕುಳಿ ಜಾತ್ರೆಗೆ ಕರೆತರುವಾಗ ದಾರಿಯುದ್ದಕ್ಕೂ ಮುಂಗೈ ಹಿಡಿದು ಆಡುವುದು, ಕುಸ್ತಿ ಮಾಡುವುದು, ಗಜ ನಿಲ್ಲುವುದು( ಹೆಗಲಮೇಲೆ ಮತ್ತೊಬ್ಬನನ್ನು ತಲೆಕೆಳಗೆ ಕಾಲು ಮೇಲೆ ಮಾಡಿ ಹೊತ್ತು ತರುವುದು) ..... ತಮ್ಮ ತಮ್ಮ ಶಕ್ತಿ ಹಾಗೂ ಸಾಮರ್ಥ್ಯ ತೋರುತ್ತಾ ಬರುವವರನ್ನು ಜನರು ಅವರ ತಲೆಯ ಮೇಲೆ ಮಂಡಕ್ಕಿ ಚೆಲ್ಲಿ ಪ್ರೋತ್ಸಾಹ ತುಂಬುತ್ತಾರೆ. &lt;br /&gt;     &lt;a onblur="try {parent.deselectBloggerImageGracefully();} catch(e) {}" href="http://bp3.blogger.com/_0OuRE6GJbt8/R4sABRmd0SI/AAAAAAAAASk/IPc0ZfqaAwo/s1600-h/DSCI0333.JPG"&gt;&lt;img style="display:block; margin:0px auto 10px; text-align:center;cursor:pointer; cursor:hand;" src="http://bp3.blogger.com/_0OuRE6GJbt8/R4sABRmd0SI/AAAAAAAAASk/IPc0ZfqaAwo/s320/DSCI0333.JPG" border="0" alt=""id="BLOGGER_PHOTO_ID_5155214220360274210" /&gt;&lt;/a&gt;  &lt;br /&gt;&lt;br /&gt;     ಹೀಗೆ ಗುಡಿಗೆ ಬರುವಾಗ ಗೋಧೂಳಿಯ ಸಮಯವಾಗುತ್ತದೆ.  ದೇವಸ್ಥಾನ ಮುಂದೆ ಸುಮಾರು ಎಂಟು ಅಡಿ ಅಗಲ ಹಾಗೂ ಐದಾರು ಆಳದ ಹೊಂಡದಲ್ಲಿ ಗುಲಾಬಿ ರಂಗನ್ನು ಅದ್ದಿರುತ್ತಾರೆ. ಹನುಮಂತನ ಮೂರ್ತಿಯನ್ನು ಪಲ್ಲಕ್ಕಿಯಲ್ಲಿಟ್ಟು ಬಣ್ಣದ ಹೊಂಡ ಸುತ್ತ ಐದು ಪ್ರದಕ್ಷಿಣೆ ಹಾಕುತ್ತಿರುವಾಗಲೇ ಜನರು ಓಕುಳಿಯಾಡಲೂ ಪೊರಕೆಯೇಟು ತಿನ್ನಲೂ ಸಿದ್ಧರಾಗುತ್ತಾರೆ.  ಪೂಜಾರಿ ಪೊರಕೆ ಪೆಂಡಿಗಳಿಗೂ ಬಣ್ಣದ ಹೊಂಡಕ್ಕೂ ಆರತಿ ಎತ್ತುತ್ತಾನೆ ಮತ್ತು ಸ್ವತಃ ತಾನೇ ಮೊದಲು ಹೊಂಡಕ್ಕೆ ಹಾರುತ್ತಾನೆ. ಜಾತ್ರೆಯ ನಿಜವಾದ ಸ್ವಾರಸ್ಯ ಈಗ ಪ್ರಾರಂಭವಾಯಿತು ನೋಡಿ! ಪುಜಾರಿ ಹೊರಬರಲಿಕ್ಕಿಲ್ಲ ಜನರು ಒಬ್ಬರಮೇಲೊಬ್ಬರು ಎರಗಿ  ಪೊರಕೆಗಳನ್ನು ಎಳೆಯುವ ಪೈಪೋಟಿಯಲ್ಲಿ ತೊಡಗುತ್ತಾರೆ. ಹೊಂಡಕ್ಕೆ ಇಳಿದವರು ಮಡಿಕೆಯೋ, ಬಕೆಟೋ, ಕೊಡದಲ್ಲೋ ಓಕುಳಿ ತುಂಬಿಕೊಂಡು ಬಂದು ನಿಂತಿರುವವರ  ಮೇಲೆ ಬಣ್ಣದ ನೀರೆರಚುತ್ತಾರೆ. ಬಣ್ಣ ಎರಚಿಸಿಕೊಂಡವರು ಪೊರಕೆಗಳಿಂದ ತಮ್ಮೆಲ್ಲ ಶಕ್ತಿ ಒಟ್ಟು ಮಾಡಿ ಓಕುಳಿ ಹಾಕಿದವರನ್ನು ಹೊಡೆಯುತ್ತಾರೆ. ಏಟು ಬಿದ್ದರೂ ಮತ್ತೆ ಹೊಂಡಕ್ಕೆ ಹಾರಿ ಮತ್ತೆ ಓಕುಳಿ ಎರಚಿ ಮತ್ತೊಮ್ಮೆ ಏಟು ತಿನ್ನುತ್ತಾರೆ.  ಏಟು ಕೊಡುತ್ತಿದ್ದವರೂ ತಾವೂ ಹೊಂಡಕ್ಕೆ ಹಾರಿ ಬೇರೆಯರ ಪೊರಕೆಯೇಟು ತಿನ್ನುತ್ತಾರೆ. ವಾತಾವರಣದಲ್ಲೆಲ್ಲ ದೀಪಾವಳಿಯ ಪಟಾಕಿ ಸದ್ದಿನಂತೆ ಪೊರಕೆ ಪೆಟ್ಟಿನಿಂದ ಬರುವ ಸದ್ದು ಹಾಗೂ ಜನರ ಕೇಕೇ ಶಬ್ದಗಳಿಂದ ಅನುಕರಣಿಸುತ್ತದೆ.  ಇಲ್ಲಿ ಯಾರೂ ಹೊಡೆತ ತಿನ್ನುವುದನ್ನು ತಪ್ಪಿಸಿಕೊಳ್ಳುವುದಿಲ್ಲ ಬದಲಿಗೆ ಬಾಸುಂಡೆಗಳು ಮೈ ತುಂಬ ಹೆಣೆದಿದ್ದರೂ ಮತ್ತೂ ಹೊಡೆಸಿಕೊಳ್ಳುತ್ತಾರೆ. ಹೊಡೆತ ತಿಂದವರು ಮತ್ತಷ್ಟು ಮಂದಿಗೆ ಹೊಡೆಯಬೇಕೆಂಬ ನಿಯಮವಿರುವುದರಿಂದ ಪೊರಕೆಯ ಪೆಟ್ಟಿನಿಂದ ಯಾರೂ ಮುಕ್ತರಾಗುವುದಿಲ್ಲ. ಬಣ್ಣಹಾಕಿ ಹೊಡೆತ ತಿನ್ನುವುದು ದೇವರ ಸೇವೆಯೆಂದೇ ತಿಳಿಯುತ್ತಾರೆ. ಹೊಂಡದ ನೀರು ಖಾಲಿಯಾಗುವರೆಗೂ ಇದು ನಡೆದು ಬಳಿಕ ಪೊರಕೆ ಸೇವೆಗೆ ತೆರೆ ಬೀಳುತ್ತದೆ. ಹಾ.... ಪೊರಕೆಗಳನ್ನು ಮನೆಗೊಯ್ದು ಮುಂದಿನ ಜಾತ್ರೆಯವರೆಗೂ ಜೋಪಾನವಾಗಿಡುತ್ತಾರೆ. ( ಯಾಕೆಂದು ನನಗೆ ಗೊತ್ತಾಗಿಲ್ಲ. ಹೇಗಿದ್ದರೂ ಮುಂದಿನ ಜಾತ್ರೆಗೆ ಜಾಲಗಾರರು ತಾನೆ ಪೊರಕೆಗಳ ವ್ಯವಸ್ಥೆ ಮಾಡುತ್ತಾರೆ. ಈ ಬಗ್ಗೆ ಲೇಖಕರೂ ಏನೂ ತಿಳಿಸಿಲ್ಲ.) &lt;br /&gt;                ಇದನ್ನು ಓದಿದಾಗ ವಿದೇಶದಲ್ಲಿ ನಡೆಯುವ ಕಿತ್ತಳೆ , ಟೊಮೇಟೋ ಹಣ್ಣುಗಳನ್ನು ಹೀಗೆ ಮೈಮೇಲೆರಚಿ ನಡೆಯುವ ಜಾತ್ರೆಯ ನೆನಪಾಯಿತು. ಈ ಪೊರಕೆಯೇಟು ತಿನ್ನುವ ಜಾತ್ರೆಯ ಬಗ್ಗೆ ಇಲ್ಲಿರುವ ಆಧುನಿಕ ಯುವಕರೂ ಏನೂ ಪ್ರಶ್ನಿಸದೆ ಎಲ್ಲವನ್ನೂ ಕ್ರಮಬದ್ಧವಾಗಿ ನಡೆಸುತ್ತಿರುವುದು ಒಂದು ಸೋಜಿಗವೇ ಸರಿ! ನಮ್ಮ ಪೂರ್ವಜರು ಏನೇ ಪದ್ಧತಿ ಮಾಡಿದ್ದರೂ ಅದಕ್ಕೊಂದು ಅರ್ಥವಿರುವುದು ಎಂದು ನಾನು ನಂಬಿದ್ದೆ. ಆದರೆ ಇದು.....!&lt;br /&gt;&lt;br /&gt;&lt;br /&gt;    ಈ ಲೇಖನವನ್ನು ತರಂಗ ಪತ್ರಿಕೆಯಲ್ಲಿ ಕಿಶನ್ ರಾವ್ ಕುಲಕರ್ಣಿ ಕುಷ್ಟಗಿ ಬರೆದಿರುವ " ಬೈಲಕೂರಿನ ಜಾತ್ರೆಗೆ ಬನ್ನಿ... ಪೊರಕೆ ಏಟು ತಿನ್ನಿ!" ಎಂಬ ಲೇಖನದಿಂದ ಆರಿಸಲಾಗಿದೆ.&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/6565981025284122780-1711762410953151555?l=teredamanasinaputagalu.blogspot.com' alt='' /&gt;&lt;/div&gt;</description><link>http://teredamanasinaputagalu.blogspot.com/2008/01/blog-post_06.html</link><author>noreply@blogger.com (ಶೀಲಾ)</author><media:thumbnail xmlns:media='http://search.yahoo.com/mrss/' url='http://bp0.blogger.com/_0OuRE6GJbt8/R4sBPhmd0UI/AAAAAAAAAS0/6ec-d0ikcYQ/s72-c/DSCI0330.JPG' height='72' width='72'/><thr:total xmlns:thr='http://purl.org/syndication/thread/1.0'>2</thr:total></item><item><guid isPermaLink='false'>tag:blogger.com,1999:blog-6565981025284122780.post-8314934303433896680</guid><pubDate>Sat, 05 Jan 2008 06:14:00 +0000</pubDate><atom:updated>2008-01-05T12:31:12.383+05:30</atom:updated><category domain='http://www.blogger.com/atom/ns#'>ವರ್ತಮಾನ</category><title>ಪರಂಪರೆಯನ್ನು ಕುಲಗೆಡಿಸುವ ಹೊಸ ಹವ್ಯಾಸ..... ಇನೋವೇಷನ್ ಹೆಸರಲ್ಲಿ!</title><description>ಬೈಲಕೂರಿನ ಪೊರಕೆ ಏಟಿನ ಜಾತ್ರೆಯ ಬಗೆ ತರಂಗದಲ್ಲಿ ಓದಿದನ್ನು ಇಲ್ಲಿ ಬ್ಲಾಗಿಸುತ್ತೇನೆಂದು ಹೇಳಿದ್ದೆ. ಆದರೆ ಅದರ ಮೊದಲು ತಾರೀಕು ೩೧-೧೨-೨೦೦೭ದ ಉದಯವಾಣಿ ಪತ್ರಿಕೆಯಲ್ಲಿ "ಕಲಿ-ಯುಗ"ವೆಂಬ ಅಂಕಣದಲ್ಲಿ ಶ್ರೀಯುತ ಬೇಳೂರು ಸುದರ್ಶನರಿಂದ ಪ್ರಸ್ತಾವಿಸಲ್ಪಟ್ಟ ವಿಷಯವು ನನ್ನ ಗಮನ ಸೆಳೆದುದರಿಂದ ನನ್ನ ಸಹಬ್ಲಾಗಿಗರ ಗಮನಕ್ಕೂ ಈ ವಿಷಯ ಬರಲಿ ಎಂದು ಇಲ್ಲಿ ಇದನ್ನು ಬರೆಯುತ್ತಿದ್ದೇನೆ.&lt;br /&gt;         ತಮ್ಮೆಲ್ಲರ ಗಮನಕ್ಕೆ ಬಂದಿರಬಹುದು ಈ ಖ್ಯಾತ ನಿರ್ದೇಶಕ ಶೇಖರ ಕಪೂರ್ ಅವರು ತಾವು ರಾಮಾಯಣ ಕಾಮಿಕ್ಸ ಪುಸ್ತಕವನ್ನು ಪ್ರಕಟಿಸುತ್ತೇನೆ ಎಂದು ಸ್ವಲ್ಪ ಕಾಲದ ಹಿಂದೆ ಘೋಷಿಸಿದ್ದು. ಈಗ ಈ ಕಾಮಿಕ್ಸಗಳು  " ರಾಮಾಯಣ ಕ್ರಿಸ್ತಶಕ ೩೩೯೨"  ಎಂಬ  ಹೆಸರಿನಿಂದ ಪ್ರಕಟವಾಗಿವೆ. ಈ ಬಗ್ಗೆನೇ ಬೇಳೂರುನವರು ಬರೆದದ್ದು. &lt;br /&gt;    ಇಲ್ಲಿ ಅವರು ಪ್ರಕಟಿಸಿದ್ದನ್ನು ಯಥಾವತ್ತಾಗಿ ಕಾಪಿ ಮಾಡಿ ಅಂಟಿಸಿದ್ದೇನೆ. ದಯವಿಟ್ಟು ತಾಳ್ಮೆಯಿಂದ ಓದಿ, ಮುಂದೆ ನಿಮ್ಮಿಂದ ಏನು ಮಾಡಲು ಸಾಧ್ಯವಾಗುವುದೆಂದು ನಿರ್ಧರಿಸಿ. ನಮ್ಮ ಅತ್ಯಂತ ಪುರಾತನ ಪರಂಪರೆ ಹಾಗೂ ಮುಂದಿನ ಜನಾಂಗದ ಬಗ್ಗೆ ನಿಮಗೇನಾದರೂ ಕಾಳಜಿಯಿದ್ದರೆ ನೀವೆಲ್ಲಾ ಈ  ಪ್ರತಿಭಟನೆಯಲ್ಲಿ ಪಾಲ್ಗೊಳ್ಳುವರೆಂದು ನಂಬುತ್ತೇನೆ.  ಬೇಳೂರುನವರ ತಾಣದ ವಿಳಾಸವನ್ನೂ ಹಾಗೂ ಅವರ ಮೈಲ್ ಐ ಡಿ ಯನ್ನೂ ಇಲ್ಲಿ ಹಾಕಿದ್ದೇನೆ. &lt;br /&gt;&lt;br /&gt; &lt;a href="http://mitramaadhyama.co.in"&gt; www.mitrmaadhyama.co.in&lt;/a&gt;&lt;br /&gt;  beluru@gmail.com&lt;br /&gt; &lt;br /&gt;    ************** ****** ***** **** *** *************************************&lt;br /&gt;&lt;br /&gt;   &lt;span style="font-weight:bold;"&gt;&lt;span style="font-weight:bold;"&gt;&lt;span style="font-style:italic;"&gt;ಮಕ್ಕಳಿಗಾಗಿ ಕಾಮಿಕ್ಸ್: ರಾಕ್ಷಸ ರಾಮಾಯಣ ಮತ್ತು ನಗ್ನ - ಅಗ್ನಿ ದೇಹಿ ದೇವಿ &lt;/span&gt;&lt;br /&gt;&lt;/span&gt;&lt;br /&gt;&lt;br /&gt;  " “ಬೇರೆ ಹೊತ್ತಿನಲ್ಲಿ ಬಂದಿದ್ದರೆ ನಿನ್ನನ್ನು ಮದುವೆಯಾಗೋ ಪ್ರಸ್ತಾಪ ಇಡುತ್ತಿದ್ದೆ; ನಾವು ರಾ-ಕ್ಷಸರನ್ನು ಹುಟ್ಟಿಸಬಹುದಿತ್ತು." - ತೃಷ್ಣಾ ಎಂಬ ರಾಕ್ಷಸಿಯ ಜೊತೆ ಯುದ್ಧ ಮಾಡುತ್ತ ಲಕ್ಷ್ಮಣ ಹೇಳುತ್ತಾನೆ. &lt;br /&gt;“ಸೀತೆಯನ್ನು ಮತ್ತೆ ಜೊತೆಗೆ ಕರೆದೊಯ್ಯುವುದೆ? ಲೋಕರಕ್ಷಣೆಯ ಕೆಲಸ ಸಾಕೋ ಸಾಕಾಗಿದೆ ವಿಶ್ವಾಮಿತ್ರ, ಅಂಥ ಕೆಲಸವನ್ನು ನಾನು ಯಾವಾಗಲೋ ಬಿಟ್ಟಿದ್ದೇನೆ." - ವಿಶ್ವಾಮಿತ್ರನಿಗೆ ರಾಮ ಹೇಳುತ್ತಾನೆ. &lt;br /&gt;“ಈತ ರಾಮನೆ? ಸಮರವೀರನೆ? ಅಲ್ಲ; ಕೊಲೆಗಡುಕ!!" - ವಿಶ್ವಾಮಿತ್ರನಿಗೆ ಸೀತೆ ಹೇಳುತ್ತಾಳೆ. &lt;br /&gt;ರಾಮ ಕೆಂಗಣ್ಣು ಬಿಡುತ್ತಾನೆ. ಮೊದಲೇ ಡಬ್ಲ್ಯು ಡಬ್ಲ್ಯು ಎಫ್‌ನಲ್ಲಿರುವಂತೆ ಉಬ್ಬಿದ ತೋಳುಗಳು, ಮಾಂಸಖಂಡಗಳು ಹುರಿಗೊಳ್ಳುತ್ತವೆ. ಸೆಟೆದುಕೊಂಡವನಂತೆ ಹೊರಟೇ ಹೋಗುತ್ತಾನೆ. ಮಾತೆತ್ತಿದರೆ ಉರಿಗಣ್ಣು ಮಾಡಿಕೊಂಡೇ ಪ್ರತಿಕ್ರಿಯಿಸುವ ರಾಮನಿಗೆ ಒಮ್ಮೆ ರೇಗಿಹೋಗುತ್ತದೆ; ರಾವಣನ ಮಗ ಮೇಘನಾದನನ್ನು ಕ್ಷಣಮಾತ್ರದಲ್ಲಿ ಹೊಡೆದುಹಾಕುತ್ತಾನೆ. ಇದರಿಂದ ರಾವಣ ಮತ್ತೆ ಪ್ರಚೋದನೆಗೊಂಡು ದಿಗಂತವೇ ಸೀಳಿಕೊಂಡ ಹಾಗೆ ರಾಮ - ಲಕ್ಷ್ಮಣ-ಸೀತೆ-ವಿಶ್ವಾಮಿತ್ರ ಇದ್ದೆಡೆಗೆ ಹಾರಿಬರುತ್ತಾನೆ. ಜೀವನವೃಕ್ಷದಿಂದ ರೂಪುಗೊಂಡ ಮಿಥಿಲಾನಗರವೇ ಸಿಡಿದುಹೋಗುತ್ತದೆ.&lt;br /&gt;ರಾವಣ ಎಂದರೆ ನೀವು ಹತ್ತು ತಲೆಗಳವನು, ಮಹಾಪಂಡಿತನ ಥರ ಕಾಣಿಸುತ್ತಾನೆ ಎಂಬ ಭ್ರಮೆಯಲ್ಲಿ ಇದ್ದರೆ ಅದರಿಂದ ಹೊರಬನ್ನಿ. ಇಲ್ಲಿ ರಾವಣ ಎಂದರೆ ಹಾಲಿವುಡ್‌ನ ಸ್ಪೆಶಿಯಲ್ ಎಫೆಕ್ಟ್ ಸಿನೆಮಾಗಳಲ್ಲಿ ಕಾಣುವ ರಾಕ್ಷಸ. ಮಾತೆತ್ತಿದರೆ ಹೊಡಿ, ಕಡಿ ಎಂದು ಕಿರುಚುತ್ತಾನೆ. ‘ನೀವು ಮೂವರೂ ತಪ್ಪಿಸಿಕೊಳ್ಳಿ, ನಾನು ಮತ್ತೆ ಕ್ಷಾತ್ರಭಾವವನ್ನು ಮೆರೆಸುತ್ತ ರಾವಣನೊಂದಿಗೆ ಯುದ್ಧ ಮಾಡುವೆ ಎನ್ನುತ್ತ ವಿಶ್ವಾಮಿತ್ರ ಮತ್ತೆ ಭುಜಕೀರ್ತಿಯನ್ನು ಧರಿಸಿ....... &lt;br /&gt;ಅರೆ, ಇದೆಂಥ ಕಥೆ ಮಾರಾಯ್ರೆ ಎಂದು ನೀವು ಗಲಿಬಿಲಿಗೊಂಡರೆ ಅದಕ್ಕೆ ನೀವೇ ಕಾರಣ. ಜಾಗತೀಕರಣದ ಈ ಹೊತ್ತಿನಲ್ಲಿ ಭಾರತದ ಸಂಸ್ಕೃತಿ - ಪರಂಪರೆಯ ಸೊಗಡನ್ನು ಹೊಸ ಹೊಸ ವಿಧಾನಗಳ ಮೂಲಕ ಸಗಟಿನಲ್ಲೋ, ಚಿಲ್ಲರೆಯಾಗಿಯೇ ಮಾರುವ ಭಾರತೀಯ ಮನಸ್ಸುಗಳೇ ಈ ಕಥೆಯನ್ನು ರೂಪಿಸಿವೆ. ಈ ಕಥೆಯನ್ನು ಹೊತ್ತ ಹತ್ತಾರು ಕಾಮಿಕ್ ಪುಸ್ತಕಗಳು (ಅಂದರೆ ಅಮರ ಚಿತ್ರಕಥೆಯಂಥ ಪುಸ್ತಕಗಳು, ಚಿತ್ರಗಳಿಂದಲೇ ತುಂಬಿರುವ ಪುಸ್ತಕ ಎಂಬುದಕ್ಕೆ ಮಾತ್ರ ಹೋಲಿಸಿಕೊಳ್ಳಿ ; ಚಿತ್ರಗಳ ನಿರೂಪಣೆ, ಕಥೆಯನ್ನು ಮಾತ್ರ ಅಮರಚಿತ್ರಕಥೆಗಳಿಗೆ ಹೋಲಿಸಿ ನಮ್ಮ ಅನಂತ ಪೈ ಅಜ್ಜನನ್ನು ಅವಮಾನಿಸಬೇಡಿ). ಅಮೆರಿಕಾದಿಂದ ಹಿಡಿದು ಎಲ್ಲ ವಿದೇಶಗಳಲ್ಲಿ ಬಿಕರಿಯಾಗುತ್ತಿವೆ. ಭಾರತದಲ್ಲೂ ಈ ಕಾಮಿಕ್ ಪುಸ್ತಕಗಳು ದೊರೆಯುತ್ತವೆ. &lt;br /&gt;‘ರಾಮಾಯಣ ಕ್ರಿಸ್ತಶಕ ೩೩೯೨’ ಎಂಬ ಶೀರ್ಷಿಕೆ ಹೊತ್ತ ಈ ಪುಸ್ತಕಗಳನ್ನು ನಾನು ಅಂತರಜಾಲದಲ್ಲಿ ಹುಡುಕಿದೆ. ಕೆಲವು ಸ್ಯಾಂಪಲ್‌ಗಳು ಸಿಕ್ಕಿದವು. ಅವನ್ನೆಲ್ಲ ನನ್ನ ಜಾಲತಾಣದಲ್ಲಿ ನಿಮ್ಮ ಹೆಚ್ಚಿನ ಓದಿಗಾಗಿ ಕೊಟ್ಟಿದ್ದೇನೆ. ಆದರೆ ಅಲ್ಲಿಗೆ ಹೋಗಿ ತಿಣುಕುವಕ್ಕಿಂತ ಮೊದಲು ನನ್ನ ಇನ್‌ಸ್ಟಂಟ್ ವಿಮರ್ಶೆಯನ್ನು ಓದಿ. ಯಾಕೆಂದರೆ ರಾಮಾಯಣದ ಕಥೆಯ ಬಗ್ಗೆ ನಂಬಿಕೆ ಹೇಗೇ ಇರಲಿ, ನಂಬಿಕೆಯನ್ನು ಪ್ರಶ್ನಿಸುವ ಪ್ರವೃತ್ತಿ ಬೇರೆ. ಆದರೆ ರಾಮಾಯಣದಲ್ಲಿ ನಂಬಿಕೆ ಇರುವ ಸಿರಿವಂತ / ಮಧ್ಯಮ ವರ್ಗದ ತಂದೆ ತಾಯಂದಿರಿಗೆ ಪುರಾಣ - ಮಹಾಕಾವ್ಯಗಳ ನೀತಿಕಥೆಯ ಮುಂದುವರಿದ ಭಾಗ ಎಂಬಂತೆ ಬಿಂಬಿಸಿ ಮಾರುತ್ತಿರುವ ಈ ಕಾಮಿಕ್ಸ್‌ಗಳನ್ನು ಮಾರಿ ಹಣ ದೋಚುವ ಖದೀಮರಿಗೆ ಏನೆನ್ನೋಣ? ಹೋಗಲಿ, ಕಥೆಯಾದರೂ ರಾಮಾಯಣದ ಮುಂದುವರಿಕೆಯಾ ಎಂದರೆ ಅದೂ ಇಲ್ಲ ಬಿಡಿ. ರಾಮಾಯಣದ ಪಾತ್ರಗಳ ಮೂಲಕ ನಾಲ್ಕನೇ ದರ್ಜೆಯ ಬಾಲಿವುಡ್ ಸಿನೆಮಾ ಥರ ಈ ಕಾಮಿಕ್ಸ್‌ಗಳು ಕಾಣಿಸುತ್ತವೆ. ಇದಕ್ಕೆ ರಾಮಾಯಣವೇ ಆಧಾರವಾಗಿದ್ದು ಯಾಕೆ ಎಂದು ನಾನು ಕಕಮಕನಾಗಿದ್ದೇನೆ. &lt;br /&gt;ಇನ್ನು ಈ ಕಾಮಿಕ್ಸ್‌ಗಳಲ್ಲಿ ಸೀತೆಯ ಚಿತ್ರಗಳನ್ನು ನೋಡಿಯೇ ತೀರ್ಮಾನಿಸಬಹುದು - ಇದೂ ಕೂಡಾ ಈಗ ಕಾಮಿಕ್ಸ್ ಚಾನೆಲ್‌ಗಳಲ್ಲಿ, ಪುಸ್ತಕಗಳಲ್ಲಿ ಬರುವಂಥ ಮಕ್ಕಳಿಗೆ ಹದಿಹರೆಯಕ್ಕಿಂತ ಮೊದಲೇ ಲೈಂಗಿಕ ಪ್ರಚೋದನೆಯನ್ನು ನೀಡುವ ಸಾಫ್ಟ್ ಪೋರ್ನ್ ಮಾದರಿಯ ಮುಂದುವರಿಕೆ ಎಂದು. ಈ ಕಾಮಿಕ್ಸ್‌ಗಳಲ್ಲಿ ನೀವು ಕಾಣುವ ಸೀತೆ ಸೀರೆಯನ್ನು ಹ್ಯಾಗೋ ಹೊದ್ದುಕೊಂಡಿದ್ದಾಳೆ. ಎಲ್ಲ ಫ್ರೇಮ್‌ಗಳಲ್ಲೂ ಯಾವಾಗಲೂ ಅವಳ ಎದೆ ಎದ್ದು ಕಾಣುತ್ತದೆ. ಅವಳು ಅಳುತ್ತಿರಲಿ, ಕೋಪದಲ್ಲಿರಲಿ, ದೇಹದ ಏರಿಳಿತಗಳು ರಾಚುವಂತೆ ಬರೆದಿರುವುದು ನಿಜಕ್ಕೂ ಹೌದೋ, ಅಥವಾ ನನ್ನ ಕಣ್ಣಿಗೇ ಹಾಗೆ ಕಾಣಿಸಿತೋ, ಗೊತ್ತಿಲ್ಲ; ನೀವೇ ತೀರ್ಮಾನಿಸಿ. &lt;br /&gt;ಇದು ರಾಮಾಯಣದ ಗತಿಯಾದರೆ, ನಮ್ಮ ಪುರಾಣಗಳಲ್ಲಿ ಬರುವ ದೇವಿಯ ಗತಿ ಏನಾಗಿರಬಹುದು ಎಂದು ನೀವು ಊಹಿಸಬಲ್ಲಿರಾ? ‘ದೇವಿ’ ಹೆಸರಿನ ಭಾರತೀಯ ಪರಂಪರೆಯನ್ನು ಬಿಂಬಿಸುವ ಕಾಮಿಕ್ಸ್ ಕೂಡಾ ಇದೇ ಕೊಳ್ಳುಬಾಕ ಕಾಮಿಕ್ಸ್ ಸರದಾರರಿಂದ ಹೊರಬಿದ್ದಿದೆ. ಈ ದೇವಿ ನೀವು ತಕ್ಷಣಕ್ಕೆ ಕಲ್ಪಿಸಿಕೊಳ್ಳುವಂತೆ ಹೇಗಿದ್ದಾಳೇನೋ. ಆದರೆ ಈ ಕಾಮಿಕ್ಸ್‌ಗಳಲ್ಲಿ ಮಾತ್ರ ಕೇವಲ ಅಗ್ನಿಯ ಸೆಳಕುಗಳನ್ನು ಹೊದ್ದುಕೊಂಡ ನಗ್ನದೇಹಿ. ಅಂದರೆ, ನೀವು (ಸಾರಿ ನಮ್ಮ ಮಕ್ಕಳು) ಇಡೀ ಕಾಮಿಕ್ಸ್‌ನಲ್ಲಿ ಇವಳನ್ನು ಆಲ್‌ಮೋಸ್ಟ್ ನಗ್ನವಾಗಿಯೇ ನೋಡುತ್ತೀರ. ಪ್ರತಿಯೊಂದೂ ಫ್ರೇಮ್‌ನಲ್ಲಿ ಅವರ ದೇಹದ ಹಾವಭಾವಗಳು, ಸೆಕ್ಸ್ ಭಾಷೆಯಲ್ಲಿ ಹೇಳಬೇಕೆಂದರೆ ಕರ್ವ್‌ಗಳು ಸ್ಫುಟವಾಗಿ ಕಾಣುತ್ತವೆ. ಬಹುಶಃ ಇದುವರೆಗೂ ಬಾಲಿವುಡ್‌ನಲ್ಲೂ ಈ ಥರದ ನಗ್ನವೇಷ ಬಂದಿಲ್ಲ. ಇವಳೂ ಮಾನವರ ಸಂರಕ್ಷಕಿ. ಇವಳನ್ನು ಕಂಡರೆ ಕೆಟ್ಟವರಿಗೆ (??) ನಡುಕ ಬರುತ್ತದೆ. ಎಲ್ಲೇ ಕೆಟ್ಟವರು ದಾಳಿ ಮಾಡಿದರೂ ಇವಳು ಮರು ಅಟಾಕ್ ಮಾಡುತ್ತಾಳೆ.&lt;br /&gt;ಹಾಗಾದರೆ ನಾನು ಖದೀಮರು, ಕೊಳ್ಳುಬಾಕರು ಎಂದು ಬೇಕಾಬಿಟ್ಟಿಯಾಗಿ ( ಈ ಅಂಕಣದಲ್ಲಿ ಹಿಂದೆಂದೂ ಬಳಸದ ಒರಟು ಭಾಷೆ ಇದು) ಜರೆದಿರುವ ವ್ಯಕ್ತಿಗಳು ಯಾರು ? &lt;br /&gt;ಮೊದಲನೆಯವರು ‘ಫೂಲನ್ ದೇವಿ’ ಚಿತ್ರದ ಖ್ಯಾತಿಯ ಶೇಖರ್ ಕಪೂರ್. ಇವರು ಇತ್ತೀಚೆಗಷ್ಟೇ ‘ಎಲಿಝಬೆತ್ ೨’ ಎಂಬ ಸಿನೆಮಾ ಮಾಡಿ ಪ್ರಖ್ಯಾತರಾಗಿದ್ದಾರೆ. ಎರಡನೆಯವರು, ಇಡೀ ವಿಶ್ವಕ್ಕೆಲ್ಲ ವೇದಾಂತದ ಬೋಧನೆ ಮಾಡುತ್ತ, ವ್ಯಕ್ತಿತ್ವ ವಿಕಸನದ ಬಗ್ಗೆ ಹತ್ತಾರು ಪುಸ್ತಕಗಳನ್ನು ಬರೆದಿರುವ ದೀಪಕ್ ಛೋಪ್ರಾ ಎಂಬ ಮಹಾಶಯರು. ಇವರು ಬರೆದಿರುವ ಪುಸ್ತಕಗಳೆಲ್ಲ ಲಕ್ಷಗಟ್ಟಳೆ ಪ್ರತಿಗಳಲ್ಲಿ ಮಾರಾಟವಾಗಿವೆ. ಇಂಡಿಯಾ ಅಥೆಂಟಿಕ್ (ಅಂದರೆ ಖಚಿತವಾಗಿಯೂ ಭಾರತ ಎಂಬ ಅರ್ಥ ಬರುತ್ತದೆ) ಎಂಬ ಜಾಲತಾಣದ ಮೂಲಕ ಭಾರತದ್ದು ಎನ್ನಲಾಗುವ ಉತ್ಪನ್ನಗಳನ್ನು (ಇವು ಹಾಡು, ವಿಡಿಯೋ ಸಿಡಿಗಳಿಂದ ಹಿಡಿದು ಎಲ್ಲವನ್ನೂ ಒಳಗೊಂಡಿವೆ)ಮಾರುತ್ತಿರುವವರೂ ಇವರೇ. ಇವರ ಜೊತೆಗೆ ಇನ್ನಷ್ಟು ಭಾರತೀಯ ಹೆಸರುಗಳೂ ಇವೆ: ಸಿದ್ಧಅರ್ಥ ಕೋಟಿಯಾನ್, ಮುಕೇಶ್ ಸಿಂಗ್, ರವಿಕಿರಣ್, ಮಹೇಶ್ ಕಾಮತ್, ಪ್ರಕಾಶಕ ಶರದ್ ವರದರಾಜನ್, ಮುಖ್ಯ ಸಂಪಾದಕ ಗೌತಮ್ ಛೋಪ್ರಾ, ಜೀವನ್ ಕಾಂಗ್, ಸಮರ್‌ಜಿತ್ ಚೌಧರಿ, ಸುರೇಶ್ ಸೀತಾರಾಮನ್.... &lt;br /&gt;“ವರ್ಜಿನ್ ಕಾಮಿಕ್ಸ್" ಹೆಸರಿನಲ್ಲಿ ಈಗ ಇಂಥ ಕಾಮಿಕ್ಸ್‌ಗಳು ಎಲ್ಲೆಡೆ ಮಾರಾಟಕ್ಕಿವೆ. ‘ವರ್ಜಿನ್’ ಎಂದಮೇಲೆ ಗೊತ್ತಾಯಿತಲ್ಲ, ವಿಶ್ವದ ಸಿರಿವಂತರಲ್ಲಿ ಒಬ್ಬನಾಗಿರುವ ಚಾರ್ಲ್ಸ್ ಬ್ರಾನ್‌ಸನ್ ಕೂಡಾ ಈ ಶೇಖರ್ ಕಪೂರ್, ದೀಪಕ್ ಛೋಪ್ರಾ ಜೊತೆಗೂಡಿದ್ದಾನೆ.&lt;br /&gt;ಈ ಕಾಮಿಕ್ಸ್‌ಗಳ ಬಗ್ಗೆ ನನಗೆ ಸುಳಿವು ಕೊಟ್ಟವರು ಕಳೆದ ವಾರವಷ್ಟೇ ಪರಿಚಿತರಾದ ಒಬ್ಬ ಮೆಕ್ಯಾನಿಕಲ್ ಇಂಜಿನಿಯರ್ ಯುವಕ. . ಅವರು ಖುಷಿ ಕೊಡದ ಇಂಜಿನಿಯರ್ ಕೆಲಸ ಬಿಟ್ಟು ವರಿ ಇಲ್ದೆ ಸದಾ ಸಮಾಧಾನ, ಸಂತಸ ಕೊಡೋ ಸದಭಿರುಚಿಯ ಕಾಮಿಕ್ಸ್‌ಗಳನ್ನು ಮಾಡಿ ಮಾರಾಟ ಮಾಡಲೇ ಹೆಣಗುತ್ತಿದ್ದಾರೆ ಎಂಬ ಕಥೆ ಬೇರೆ. &lt;br /&gt;ಪುರಾಣವಿರಲಿ ಇತಿಹಾಸವಿರಲಿ, ಯಾವುದೋ ಕಟ್ಟುಕಥೆ ಇರಲಿ, ಮಕ್ಕಳಿಗೆ ಯಾವ ರೀತಿಯಲ್ಲಿ ಕಥೆ ಹೇಳಬೇಕೆಂದು ಗೊತ್ತಿಲ್ಲದ, ನಗ್ನತೆ - ಲೈಂಗಿಕತೆಯೇ ಬಂಡವಾಳವಾಗಿರುವ ಇಂಥ ಪ್ರಚಾರಪುರುಷರ ಬೌದ್ಧಿಕ ದಿವಾಳಿತನವನ್ನು ನಾವು ಪ್ರತಿಭಟಿಸಬೇಕೆಂದು ನನಗಂತೂ ಆನ್ನಿಸುತ್ತದೆ. ಅಂತಿಮ ತೀರ್ಮಾನ ನಿಮ್ಮದೇ. &lt;br /&gt;ಅಂದಹಾಗೆ ದೀಪಕ್ ಛೋಪ್ರಾ ೨೦೦೮ರ ಕಾಮಸೂತ್ರ ಕ್ಯಾಲೆಂಡರ್ ಕೂಡಾ ರೂಪಿಸಿದ್ದಾರೆ. ನಿಮಗೆಲ್ಲರಿಗೂ ೨೦೦೮ರ ಕ್ಯಾಲೆಂಡರ್ ವರ್ಷದ ಶುಭಾಶಯಗಳು !&lt;br /&gt;&lt;br /&gt;&lt;br /&gt;ಗಮನಿಸಿ&lt;br /&gt;ವರ್ಜಿನ್ ಕಾಮಿಕ್ಸ್‌ಗಳಲ್ಲಿ ಇರುವ ಚಿತ್ರಗಳ ಸ್ಯಾಂಪಲ್‌ಗಳಿಗೆ ನನ್ನ beluru.googlepages.com/mitramaadhyama ಈ ಜಾಲತಾಣಕ್ಕೆ ಭೇಟಿ ಕೊಡಿ. &lt;br /&gt;ನೀವು ದೀಪಕ್ ಛೋಪ್ರಾಗೆ ಕಾಗದ ಬರೆಯುವುದಿದ್ದರೆ felicia@chopra.com ಇಲ್ಲಿಗೆ ಈ ಮೈಲ್ ಮಾಡಿ, ನನಗೂ ಒಂದು ಪ್ರತಿ ಕಳಿಸಿ. &lt;br /&gt;ನನ್ನ ಗೆಳೆಯರು ರೂಪಿಸಿದ ಸದಭಿರುಚಿಯ ಕಾಮಿಕ್ಸ್‌ಗಳನ್ನು ಉಚಿತವಾಗಿ ಓದಲು www.kidskhushi.com ಈ ಜಾಲತಾಣವನ್ನು ವೀಕ್ಷಿಸಿ."&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/6565981025284122780-8314934303433896680?l=teredamanasinaputagalu.blogspot.com' alt='' /&gt;&lt;/div&gt;</description><link>http://teredamanasinaputagalu.blogspot.com/2008/01/blog-post.html</link><author>noreply@blogger.com (ಶೀಲಾ)</author><thr:total xmlns:thr='http://purl.org/syndication/thread/1.0'>2</thr:total></item><item><guid isPermaLink='false'>tag:blogger.com,1999:blog-6565981025284122780.post-9153981314383890291</guid><pubDate>Sat, 15 Dec 2007 06:14:00 +0000</pubDate><atom:updated>2007-12-15T11:52:53.458+05:30</atom:updated><category domain='http://www.blogger.com/atom/ns#'>ಚಿತ್ರ ವಿಚಿತ್ರ</category><category domain='http://www.blogger.com/atom/ns#'>ವರ್ತಮಾನ</category><title>ಹರಕೆಯ ಕುರಿ- ಕಾಮಧೇನು!</title><description>ಈ ಪ್ರಪಂಚದಲ್ಲಿ ಚಿತ್ರ ವಿಚಿತ್ರ ಪರಂಪರೆಗಳು, ನಂಬಿಕೆಗಳು ಇನ್ನೂ ಚಾಲ್ತಿಯಲ್ಲಿವೆ ಎಂದರೆ ಆಶ್ಚರ್ಯವಾಗುತ್ತದೆ. ಒಂದುಕಡೆ ಬಹಳ ಮುಂದುವರೆದ ಆಧುನಿಕ ಜನಾಂಗ ಇನ್ನೊಂದೆಡೆ ಮೂಡ ನಂಬಿಕೆಯೋ, ಮತ್ತೇನೋ ಅಥವಾ ಪವಾಡಗಳೋ  ಎನ್ನುವಂತಹ ಉತ್ಸವಗಳು. ಹಳೆಯ ತರಂಗವನ್ನು ತಿರುವುತ್ತಿದ್ದಾಗ ಈ ಲೇಖನವು ನನ್ನನ್ನು ಸೆಳೆಯಿತು. ನನ್ನ ಬ್ಲಾಗಿನ ಹೆಸರೇ ತಿಳಿಸುವಂತೆ ನನ್ನ ಚಿತ್ತವನ್ನು ಕದಡುವ ಅಥವಾ ಪ್ರಸನ್ನಗೊಳಿಸುವ ಯಾವುದೇ ಸಂಗತಿಯನ್ನು ಇಲ್ಲಿ ದಾಖಲಿಸಬಯಸುತ್ತೇನೆ.  ಹಾಗಾಗಿ ಈ ಲೇಖನ. ಇದೇ  ೨೦೦೭ರ ಎಪ್ರಿಲ್ ತರಂಗದಲ್ಲಿ ಕಿಶನ್ ರಾವ್ ಕುಲಕರ್ಣಿ ಕುಪ್ಪಗಿಯವರ ಲೇಖನಿಯಿಂದ ಮೂಡಿ ಬಂದ ಈ ಲೇಖನದಿಂದ ಸಂಕ್ಷಿಪ್ತವಾಗಿ ಆಯ್ದು ಪ್ರಸ್ತುತ ಪಡಿಸಿದ್ದೇನೆ. &lt;br /&gt;&lt;br /&gt;&lt;br /&gt;&lt;br /&gt;        ಬೈಲಕೂರ ಎಂಬ ಊರು,. ಬಹುಶಃ ಉತ್ತರ ಕರ್ನಾಟಕದ ಒಂದು ಹಳ್ಳಿ. ಎಲ್ಲಾ ಊರಿನಲ್ಲಿ ನಡೆಯಿವಂತೆ ಈ ಊರಿನಲ್ಲೂ ಒಂದು ಜಾತ್ರೆ ನಡೆಯುತ್ತದೆ. ಆದರೆ ಈ ಜಾತ್ರೆಯು ಎಲ್ಲಾ ಕಡೆಯಲ್ಲಿ  ಇರುವಂತೆ ರಥೋತ್ಸವವೋ  ಅಥವಾ ದೀಪಾರಾಧನೆಯಿಂದಲೋ ಕಳೆಕಟ್ಟುವುದಿಲ್ಲ.......ಆದರೆ ಪೊರಕೆ ಏಟಿನಿಂದ,  ಅದೂ ಖುಷಿಯಿಂದ ತಿನ್ನುವ ಏಟುಗಳಿಂದ ಕಳೆಕಟ್ಟುತ್ತದೆ.  ಆದರೆ ನನ್ನನ್ನು ಸೆಳೆದದ್ದು ಇದಲ್ಲ. ಇಲ್ಲಿಯೇ ಪಾದುಕೆ ಸೇವೆ ಎಂದು ಮತ್ತೊಂದು ಹರಕೆಯ ಸೇವೆಯನ್ನು ಭಕ್ತರು ಹೊತ್ತುತ್ತಾರೆ. ಅದೂ ಯಾವ ದೇವರಿಗೆ ಅಂತಿರಾ....ಪವನಪುತ್ರ ಹನುಮಾನನಿಗೆ! ಇದರಲ್ಲೇನು ವಿಚಿತ್ರ ಎಂದುಕೊಳ್ತಿರಾ? ಸರಿ ಬಿಡಿ, ಇಂತಹ ಹರಕೆಗಳು ಭಾರತದ ಉದ್ದಗಲಕ್ಕೂ ನಡೆಯುತ್ತಿರುವುದರಿಂದ ಅದರಲ್ಲೇನೂ ಆಶ್ಚರ್ಯವೂ ಇಲ್ಲ ವಿಚಿತ್ರವೂ ಇಲ್ಲ. ವಿಪರ್ಯಾಸವಿರುವುದು ಭಕ್ತರು ಹರಕೆಯೆಂದು ಒಪ್ಪಿಸುವ ಪಾದುಕೆಯಲ್ಲಿ. &lt;br /&gt;  &lt;br /&gt;      ಈ ಪಾದುಕೆಗಳು ಸುಮಾರು ಒಂದು ಅಡಿಅಗಲ ಮತ್ತು ಎರಡು ಅಡಿ ಉದ್ದವಾಗಿದ್ದು ಮುತ್ತು, ಹವಳ, ಬಣ್ಣ ಬಣ್ಣದಬಟ್ಟೆ, ಗೆಜ್ಜೆ, ಮಿರಿಮಿರಿ ಮಿಂಚುವ ಕಾಗದಗಳಿಂದ  ಅಲಂಕೃತಗೊಂಡಿರುತ್ತದೆ. ಹರಕೆಹೊತ್ತವರು ಮಾರುತಿಯ ಗುಡಿಗೆ ತಮ್ಮ ತಲೆಯ ಮೇಲೆ ಈ ಪಾದುಕೆಗಳನ್ನು ಹೊತ್ತು ತರುತ್ತಾರೆ. ಇಲ್ಲಿ ಹರಕೆಯ  ಕಥೆ ಮುಗಿಯುವುದಿಲ್ಲ. ಈ ಪಾದುಕೆಗಳಿಂದ ಮೈಯಲ್ಲ ಹೊಡಕೊಳ್ಳುತ್ತಾರೆ. ಹೀಗೆ ಮಾಡಿದರೆ ಮೈ- ಕೈ ನೋವು, ಕೆಮ್ಮು, ದಮ್ಮು, ನೆಗಡಿಯಂತಹ ಕಾಯಿಗಳು ವಾಸಿಯಾಗುತ್ತದೆ ಅಲ್ಲದೆ ಭೂತ- ದೆವ್ವಗಳ ಕಾಟವೂ ಮಾಯವಾಗುತ್ತದೆ ಎಂದು ನಂಬುತ್ತಾರೆ. &lt;br /&gt;      ನಾ ಓದಿದಂತೆ ಕ್ರೂರತನವಿರುವುದು ಪಾದುಕೆಯಲ್ಲಿ. ಈ ಪಾದುಕೆಗಳನ್ನು ತಯಾರಿಸಲು ಕೊಂಬು, ಕಿವಿ, ಬಾಲ, ಹಲ್ಲು ಮುಕ್ಕಾಗಿರದ ಆರೋಗ್ಯವಂತ ಕಪಿಲೆ ಇಲ್ಲವೇ ಬಿಳಿ ಆಕಳಿನ ಚರ್ಮವೇ ಬೇಕು. ಈ ಮೆಟ್ಟನ್ನು  ಗುಡಿಗೆ ಒಪ್ಪಿಸುವಾಗ ಅದನ್ನು ತಯಾರಿಸಿದ ಚಮ್ಮಾರನಿಗೆ ಕಬ್ಬು, ಐದು ಬಗೆಯ ಧಾನ್ಯ, ದಕ್ಷಿಣೆ, ಹೋಳಿಗೆಯ ಉಲ್ಪಿ ಕೊಡುವುದು ಮಾತ್ರವಲ್ಲದೆ ಒಂದು ಪ್ರಾಣಿಯನ್ನು ಬಲಿ ನೀಡಿ ಪ್ರಸ್ಥ ಮಾಡಿಸಬೇಕು. ಇದಕ್ಕೆಲ್ಲಾ ಸುಮಾರು ಹದಿನೈದು ಸಾವಿರ ರೂಪಾಯಿ ಖರ್ಚು ಆಗುವುದೆಂದು ಲೇಖನ ಬರೆದ "ಕಿಶನ್ ರಾವ್ ಕುಲಕರ್ಣಿ ಕುಷ್ಟಗಿ" ಬರೆದಿದ್ದಾರೆ.&lt;br /&gt;         ಬೇಸರವೆಂದರೆ ಈ ಹರಕೆಯನ್ನು ಪೂರೈಸಲು ಒಂದು ಆರೋಗ್ಯವಂತ ದನವು ಬಲಿಯಾಗಬೇಕಾಗುತ್ತದೆ. ಇಂತಹ ಪರಂಪರೆಯ ಅಗತ್ಯ ನಮಗಿದೆಯೇ? ಎಂಬುದುದು ನನ್ನ ಪ್ರಶ್ನೆ. ನಮ್ಮ ರಾಜ್ಯದಲ್ಲಿ ಈಗಾಗಲೇ ಆಕಳುಗಳನ್ನು, ಅಪರೂಪದ ತಳಿಗಳನ್ನು ರಕ್ಷಿಸುವಂತಹ ಕಾರ್ಯಗಳು ನಡೆಯುತ್ತಿವೆ. ಗೋಮೂತ್ರದಿಂದ ಔಷಧ ಮಾತ್ರವಲ್ಲದೆ ಕೀಟನಾಶಕಗಳನ್ನೂ ತಯಾರಿಸುತ್ತಿದ್ದಾರೆ ಮತ್ತು ಅದರ ಪ್ರಚಾರವೂ ಆಗಿ ಜನರು ಇದರ ಪ್ರಯೋಜನವನ್ನೂ ಪಡೆಯುತ್ತಿದ್ದಾರೆ.  ಈ ಬೈಲಕೂರಿನ ಜನತೆಗೆ ತಿಳಿ ಹೇಳಿ ಆರೋಗ್ಯವಂತ ದನದ ಹತ್ಯೆಯ ಪರಂಪರೆಯನ್ನು ದೂರಮಾಡಿಸುವ ಪ್ರಯತ್ನಗಳು ನಡೆಯಬೇಕು.&lt;br /&gt;        ಕಾಮಧೇನುವನ್ನು ಪೂಜಿಸುವಂತ ಹಿರಿಮೆಯನ್ನು ಹೊತ್ತಿದ ಹಿಂದೂ ನಾಡಿನಲ್ಲೇ  ಹರಕೆಯ ಹೆಸರಿನಲ್ಲಿ ಹಸುವಿನ ಕ್ರೂರ ಹತ್ಯೆ......ಎಂತಹ ವಿಪರ್ಯಾಸ.&lt;br /&gt;   ಅಂದ ಹಾಗೆ ಇದೇ ಊರಿನಲ್ಲಿ ನಡೆಯುವ ಪೊರಕೆ ಜಾತ್ರೆಯೂ ಏನೂ ಕಡಿಮೆ ವಿಚಿತ್ರದಲ್ಲ. ಒಂದು ಸಮಾಧಾನವೆಂದರೆ ಇದರಲ್ಲಿಯಾವುದೇ ಪ್ರಾಣಿಯನ್ನು ಬಲಿ ಕೊಡುವುದಿಲ್ಲ. ಆ ವರ್ಣನೆ ಇನ್ನೊಂದು ಕಂತಿನಲ್ಲಿ.&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/6565981025284122780-9153981314383890291?l=teredamanasinaputagalu.blogspot.com' alt='' /&gt;&lt;/div&gt;</description><link>http://teredamanasinaputagalu.blogspot.com/2007/12/blog-post_14.html</link><author>noreply@blogger.com (ಶೀಲಾ)</author><thr:total xmlns:thr='http://purl.org/syndication/thread/1.0'>5</thr:total></item><item><guid isPermaLink='false'>tag:blogger.com,1999:blog-6565981025284122780.post-2524454909334831022</guid><pubDate>Thu, 06 Dec 2007 05:50:00 +0000</pubDate><atom:updated>2007-12-07T10:07:15.882+05:30</atom:updated><category domain='http://www.blogger.com/atom/ns#'>ಆಧ್ಯಾತ್ಮಿಕ ಚಿಂತನೆ</category><category domain='http://www.blogger.com/atom/ns#'>ಆಧ್ಯಾತ್ಮಿಕ ಅನುಭೂತಿ</category><title>ದೇವರಿದ್ದಾನೆಯೇ?-2</title><description>ಅಂದ ಹಾಗೆ ಇಷ್ಟೆಲ್ಲಾ ಮಕ್ಕಳಿಗೆ ಹೇಳಿದ ವಿಷಯ ಇಲ್ಲಿ ಯಾಕೆ ಹೇಳುತ್ತಿದ್ದೇನೆಂದರೆ ಇದು ನನ್ನ ಅನುಭವವನ್ನು ದಾಖಲಿಸುವ ಪ್ರಯತ್ನ.... ಮತ್ತು ಮುಂದೆ ಯಾರಿಗಾದರೂ ಉಪಯೋಗವೂ ಆಗಬಹುದೆಂಬ ದೂರಾಲೋಚನೆ. ಪಾಪ ಪುಣ್ಯಗಳ ಬಗ್ಗೆ ಅಷ್ಟೆಲ್ಲಾ ಹೇಳಿದ ಮೇಲೆ ಮಕ್ಕಳ ಮೇಲೆ ಅದರ ಯಾವುದೇ ರೀತಿಯ ದುಷ್ಪರಿಣಾಮವಾಗಬಾರೆಂದೆಂದು, ನಾವು ತಿಳಿಯದೇ ಅಥವಾ ಬೇರೆ ಉಪಾಯವಿಲ್ಲದೇ ಸುಳ್ಳು ಹೇಳಿದಾಗ ನಮಗೆ ಬರುವ ಪಾಪವನ್ನು ನಿವಾರಿಸಿಕೊಳ್ಳಲು ಸುಲಭೋಪಾಯವನ್ನೂ ತಿಳಿಸಿದೆ. ಅದೇನಂದರೆ ಪಶ್ಚಾತ್ತಾಪ ಪಡುವುದು ಮತ್ತು ನಮ್ಮಿಂದಾದಷ್ಟು ಬೇರೆಯವರಿಗೆ ಸಹಾಯ ಮಾಡುವುದು.  &lt;br /&gt;&lt;br /&gt;&lt;br /&gt;       ಸರಿ, ಈಗ ವಿಷಯಕ್ಕೆ ಬರೋಣ. ಸುಪ್ತದೀಪ್ತಿಯವರು ನಮ್ಮ ಅನುಭವವನ್ನು ತಿಳಿಸಲು ಹೇಳಿದ್ದಾರೆ. (ದೇವರ)   ಪ್ರತಿಯೊಬ್ಬರಿಗೂ ದೇವರ ಅಥವಾ ವಿಶೇಷ ಶಕ್ತಿಯ ಅನುಭವಂತೂ ಖಂಡಿತವಾಗುವುದು. (ಇಲ್ಲಿ ನಾನು ದೇವರನ್ನು ವಿಶೇಷ ಶಕ್ತಿಯೆಂದೂ ಗುರುತಿಸಲು ಇಷ್ಟಪಡುತ್ತೇನೆ.) ಕೆಲವೇಮಂದಿಗೆ ಅದನ್ನು ಗುರುತಿಸಲು ಶಕ್ಯವಾಗುವುದು. ಇಲ್ಲಿ ಇಂತಹ ಅನುಭವವಾಗಲು ಅವರೇನು ದೈವಭಕ್ತರಾಗಬೇಕೆಂದಿಲ್ಲ. ನಮ್ಮ ಪೂರ್ವಜನ್ಮದ ವಾಸನೆಯಿಂದ ನಮಗೆ ದೈವಿಕ ಅನುಭೂತಿಯನ್ನು ಅನುಭವಿಸುವ ಆನಂದವು ಲಭಿಸುವುದು. ಆದರೆ ಕೆಲವರು ಮಾತ್ರ ಇದನ್ನು ನಿಜ ಆನಂದದಿಂದ ಸೇವಿಸಲು ಯೋಗ್ಯರಾಗುತ್ತಾರೆ. ಯಾಕೆಂದರೆ ಇಂತಹ ಭಾವನೆಯನ್ನು ಅನುಭವಿಸಲು ಅವರು ಮಾನಸಿಕವಾಗಿ ಧ್ರಡವಾಗಿರಬೇಕು, ಅಲ್ಲದೇ ಸುಪ್ತವಾಗಿರುವ ಆರನೇ ಇಂದ್ರಿಯ ಜಾಗೃತವಾಗಿರಬೇಕು &lt;br /&gt;&lt;br /&gt;         ಪ್ರತಿದಿನ  ನಿಜ ಭಕ್ತಿಯಿಲ್ಲದೆ ಮಂತ್ರಗಳನ್ನು, ಭಜನೆಗಳನ್ನು ಪೂಜೆಗಳನ್ನು ಮಾಡುವುದರಿಂದ ನಮಗೆ ದೇವರ ಇರುವಿಕೆಯ ಅನುಭವವಾಗುವುದಿಲ್ಲ. ದೇವರು ನಮ್ಮಒಳಗೆ ಇರುತ್ತನಾದರೂ ಅವನನ್ನು ನಾವು ತೀರ್ಥಕ್ಷೇತ್ರಗಳಲ್ಲಿ, ದೇವಸ್ಥಾನಗಳಲ್ಲಿ ಹುಡುಕುತ್ತೇವೆ. ಭೀತಿಯಿಲ್ಲದೆ ಪಾಪಕಾರ್ಯಗಳನ್ನು ಮಾಡಿ ಅದನ್ನು ನಿವಾರಿಸಲು ದೇವರ ಮೂರ್ತಿಗೆ ವಜ್ರ ವೈಡೂರ್ಯಗಳನ್ನು ತೊಡಿಸುತ್ತೇವೆ. ಶಿಥಿಲವಾದ ನಮ್ಮ ಸಮಾಜಿಕ, ಮಾನವೀಯ, ನೈತಿಕ ಮೌಲ್ಯಗಳ ಉದ್ಧಾರ ಮಾಡದೇ ಕೋಟಿಗಟ್ಟಲೆ ಹಣ ಸುರಿಸಿ ದೇವಸ್ಥಾನಗಳ ಜೀರ್ಣೋದ್ಧಾರ ಮಾಡುತ್ತಿದ್ದೇವೆ. ಒಂದು ಕಡೆ ತಲೆಯ ಮೇಲೆ ಸೂರು ಇಲ್ಲದೆ, ಹೊಟ್ಟೆಗೆ ಗತಿಯಿಲ್ಲದೆ ಒದ್ದಾಡುತ್ತಿರುವವರಿದ್ದರೆ ಇನ್ನೊಂದೆಡೆ ಬಂಗಾರದ ದೇವಸ್ಥಾನಗಳು--- ಎಂತಹ ವಿಪರ್ಯಾಸ!     ಇದೇನು ಕಲಿಯುಗಕ್ಕೆ ಮಾತ್ರ ಸಂಬಂಧಿಸಿದಲ್ಲ, ಪ್ರತಿಯೊಂದು ಯುಗದಿಂದಲೂ ನಡೆಯುತ್ತಲೇ ಇರುವ ಕತೆಗಳು. ದೇವರ ಹುಡುಕಾಟವೂ ಹಾಗೆಯೇ ನಡೆಯುತ್ತಿದೆ. ಇದರಲ್ಲಿ ಜಯಪಡೆದ  ಯೋಗಿಗಳು ತಮ್ಮ ಅನುಭವವನ್ನು ಜನಸಾಮಾನ್ಯನಿಗೆ ಹೇಳುವ ಪ್ರಯತ್ನ ಮಾಡುತ್ತಿದ್ದರೂ ಲೌಕಿಕ ಭೋಗದಲ್ಲಿ ಮುಳುಗಿರುವ ನಮ್ಮ ಮಿದುಳಿಗೆಟುಕುವುದಿಲ್ಲೀ  ಭೋದನೆಗಳು!&lt;br /&gt;&lt;br /&gt;&lt;br /&gt;      &lt;span style="font-weight:bold;"&gt;&lt;blockquote&gt; ನಮ್ಮ ಒಳಗಿರುವ ಪರಮಾತ್ಮನನ್ನು ಕಾಣುವ ಆನಂದವು.&lt;/blockquote&gt;&lt;/span&gt;&lt;br /&gt;       ನಾನೂ ನನ್ನಲಿರುವ ಆನಂದ ಸ್ವರೂಪ ಶಕ್ತಿಯನ್ನು ಹುಡುಕುವ ಪ್ರಯತ್ನದಲ್ಲೇ ಇದ್ದೇನೆ. ಸಂಸಾರವೆಂಬ ಸಾಗರದಲ್ಲಿ ಈಜಾಡುತ್ತಲೇ    ಮೋಹ ಮಾಯೆಗಳೆಂಬ  ದೈತ್ಯ ಶಾರ್ಕಗಳಿಂದ  ಸುತ್ತುವರೆದಿರುವಾಗ ಭಗವಂತನ ಪೂರ್ಣರೂಪದ ದರ್ಶನ ನಮಗೆ ಲಭಿಸುದೆಂದೆಣಿಸುವುದಿಲ್ಲ. ಮತ್ತು ಆಶೆಯೂ ಪಡುವುದಿಲ್ಲ. ಯಾಕೆಂದರೆ ನಮ್ಮ ಸುತ್ತಲಿನ ಪ್ರಕೃತಿಯಲ್ಲೇ ಅಡಗಿರುವ ಪರಮಾತ್ಮನು ನಿತ್ಯವೂ ತನ್ನ ದರುಶನ ಕೊಡುತ್ತಿರುವಾಗ ಇಲ್ಲ ಸಲ್ಲದ ಹುಡುಕಾಟ ಬೇಕೇ?   ಈ ಪರಮಾತ್ಮನನ್ನು ಕಾಣಲು ನಮ್ಮ ಇಂದ್ರಿಯ ಬುದ್ಧಿಗಳನ್ನು ತೆರೆದಿಟ್ಟರೆ ಸಾಕು&lt;br /&gt;&lt;br /&gt;&lt;br /&gt;       ನಾನಂತೂ ಪ್ರತೀದಿನ ಬೆಳಿಗ್ಗೆ ಕಾಣುವ ಸೂರ್ಯನಿಂದ ಹಿಡಿದು ನಾನು ಮಾಡುವ ಎಲ್ಲಾ ಕಾರ್ಯಗಳನ್ನು ಬಲು ಆನಂದದಿಂದ ಮಾಡುತ್ತೇನೆ. ಕಸ ಗುಡಿಸುವ, ಪಾತ್ರೆ ತೊಳೆಯುವ, ಬಟ್ಟೆ ಒಗೆಯುವ, ಅಡುಗೆ ಮಾಡುವ ಇಂತಹ ಕೆಲಸಗಳು ಯಾರಿಗೆ ತಾನೆ ಇಷ್ಟ?  ನಾನು ಇದರ ಹೊರತಾಗಿರಲಿಲ್ಲ..... ಬೇಸರದಿಂದಲೇ ಮಾಡುತ್ತಿದೆ.  ಇದರ ಪರಿಣಾಮ ನನ್ನ ಜೀವನದಲ್ಲಿ ಸುಖವೆಂದರೆ ಮರೀಚಿಯಾಗಿತ್ತು... ಯಾವಾಗಲೂ ಸಿಡಿಮಿಡಿ, ಕೋಪ, ತಾಪ, ಅನಾರೋಗ್ಯ.... ಮೊದಲಾದವವುಗಳು ನನ್ನಲ್ಲಿ ಹಾಯಾಗಿ ಮನೆ ಮಾಡಿಕೊಂಡಿದ್ದವು. ಹಾ.... ಇದರ ಮಧ್ಯೆ ನನ್ನ ಮಂತ್ರ, ಸ್ತೋತ್ರಗಳ ಪಠನವೂ ಸಾಂಗವಾಗಿ ನಡೆದಿತ್ತು. ಇಷ್ಟೆಲ್ಲ ನಿನಗಾಗಿ ಮಾಡುವಾಗ ಯಾಕೆ ನೀನು ಕಣ್ಣು ಮುಚ್ಚಿ ಕುಳಿತಿರುವೆ? ನಿನ್ನನ್ನು ಭಕ್ತ ವತ್ಸಲನೆಂದು ಯಾಕಾಗಿ ದಾಸರು ಕರೆದರೋ? ಎಂದೆಲ್ಲಾ ಪ್ರಶ್ನೆಗಳನ್ನು ದೇವರಲ್ಲಿ ಕೇಳುತ್ತಿದ್ದೆ.  &lt;br /&gt;&lt;br /&gt;           ಇಂತಹ ಸಮಯದಲ್ಲೇ ನನ್ನಲ್ಲಿ ಜಿಜ್ಞಾಸೆಗಳು ಮೂಡಲು ಪ್ರಾರಂಭವಾಯಿತು.....ಪ್ರಶ್ನೆಗಳ ಮೇಲೆ ಪ್ರಶ್ನೆಗಳು ಬರಲು ಪ್ರಾರಂಭವಾಯಿತು. ಹಾಗೆಯೇ ಉತ್ತರಗಳ ಹುಡುಕಾಟವೂ...... ಇಂತಹ ಹುಡುಕಾಟದಲ್ಲೇ ನನಗೆ ನನ್ನ ಒಳಗೇ ಇರುವಿಕೆಯ ಆನಂದದ ಅರಿವಾಯಿತು. ಇದನ್ನು ಪಡಿಯಬೇಕಾದರೆ ನಾವು ಎಲ್ಲದರಲ್ಲಿಯೂ ಭಗವಂತನನ್ನೇ ಕಾಣಬೇಕೆಂಬ ಜ್ಞಾನೋದಯವಾಯಿತು.&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/6565981025284122780-2524454909334831022?l=teredamanasinaputagalu.blogspot.com' alt='' /&gt;&lt;/div&gt;</description><link>http://teredamanasinaputagalu.blogspot.com/2007/12/blog-post_05.html</link><author>noreply@blogger.com (ಶೀಲಾ)</author><thr:total xmlns:thr='http://purl.org/syndication/thread/1.0'>0</thr:total></item><item><guid isPermaLink='false'>tag:blogger.com,1999:blog-6565981025284122780.post-6010318792127008592</guid><pubDate>Wed, 05 Dec 2007 05:38:00 +0000</pubDate><atom:updated>2007-12-07T10:06:52.018+05:30</atom:updated><category domain='http://www.blogger.com/atom/ns#'>ಆಧ್ಯಾತ್ಮಿಕ ಚಿಂತನೆ</category><category domain='http://www.blogger.com/atom/ns#'>ಆಧ್ಯಾತ್ಮಿಕ ಅನುಭೂತಿ</category><title>ದೇವರಿದ್ದಾನೆಯೇ?-1</title><description>&lt;span style="font-weight:bold;"&gt; ದೇವರಿದ್ದಾನೆಯೇ?&lt;span style="font-weight:bold;"&gt;&lt;span style="font-style:italic;"&gt;&lt;/span&gt;&lt;/span&gt;&lt;/span&gt;  &lt;br /&gt;&lt;br /&gt;           ದೇವರು ಇದ್ದಾನೆ ಅಥವಾ ಇಲ್ಲವೇ ಇಂದು ಅವರವರ ನಂಬಿಕೆಗೆ  ಸಂಬಂಧ ಪಟ್ಟದ್ದು. ಕೆಲವರಿಗೆ ದೇವರು ಅವರವರ ಭಾವಕ್ಕೆ ತಕ್ಕಂತೆ ಬದಲಾಗುತ್ತಾರೆ. ಕೆಲವರಿಗೆ ಕಷ್ಟದಲ್ಲಿ ಸಹಾಯ ಮಾಡಿದವರೇ ದೇವರು, ಅಂದರೆ ಅವರಿಗೆ ಪರಮಾತ್ಮ ಮಾನವ ರೂಪದಲ್ಲೇ ಗೋಚರಿಸುತ್ತಾನೆ. ಕೆಲವರಿಗೆ ಪ್ರಕೃತಿಯೇ ದೇವರು, ತಮ್ಮಸುತ್ತಲಿನ ವಾತಾವರಣದಲ್ಲಿರುವ ಎಲ್ಲಾ ಭೌತಿಕ ವಸ್ತುಗಳಲ್ಲಿ ದೇವರು ಗೋಚರನಾಗುತ್ತಾನೆ.  ಮತ್ತೂ ಕೆಲವರಿಗೆ ಕಾಯಕವೇ ದೇವರು, ತಮ್ಮ ಕರ್ತವ್ಯ, ಕೆಲಸದಲ್ಲೇ ಮಗ್ನರಾಗಿ ಭಗವಂತನ ಸಾನಿಧ್ಯವನ್ನು ಆನಂದಿಸುತ್ತಾರೆ.&lt;br /&gt;&lt;br /&gt;             ಮೇಲೆ ತಿಳಿಸಿರುವಂತೆ ದೇವರು ಭಕ್ತರಿಗೆ ಅವರವರ ಭಾವಕ್ಕೆ, ಭಕ್ತಿಗೆ ಅನುಗುಣವಾಗಿಕಾಣಿಸುತ್ತಾನೆ. ಮತ್ತು ಅದು ಸರಿಯೂ ಹೌದು ಎಂದು ಹೇಳಬಹುದು. ಯಾಕೆಂದರೆ ಇದಕ್ಕೆಲ್ಲಾ ನಾವು ನಮ್ಮ ಪುರಾಣದಲ್ಲಿ ಉದಾಹರಣೆಯನ್ನು ಕಾಣಬಹುದು.   ಸಂತರಾದ ಸಖೂಬಾಯಿ, ತುಕಾರಾಮ, ಜ್ಞಾನದೇವ, ಮುಕ್ತಾಬಾಯಿ, ಪುರಂದರದಾಸ, ರಾಮಕೃಷ್ನ ಪರಮಹಂಸ, ಶಾರದಾ ದೇವಿ ಮೊದಲಾದವರೆಲ್ಲಾ ಸಂಸಾರವನ್ನು ತ್ಯಜಿಸದೇ ದೇವರ ಇರುವಿಕೆಯನ್ನು ಅನುಭವಿಸಿಲ್ಲವೇ? &lt;br /&gt;    &lt;br /&gt;          ಈ ವಿಷಯ ಯಾಕೆ ಬಂತೆಂದರೆ, ಸುಪ್ತದೀಪ್ತಿಯವರು ತಮ್ಮ ಬ್ಲಾಗಿನಲ್ಲಿ ದೇವರು ಇದ್ದಾನೆಯೇ ಎಂದು ಓದುಗರನ್ನು ಪ್ರಶ್ನಿಸಿದ್ದಾರೆ ಅಲ್ಲದೇ ನನ್ನ ವಿದ್ಯಾರ್ಥಿಗಳು ನನ್ನನ್ನೂ ಇದೇ ಪ್ರಶ್ನೆಯನ್ನು ಕೇಳಿದ್ದರು.( ನನ್ನಲ್ಲಿ ಮನೆ ಪಾಠಕ್ಕೆಂದು ಬರುವ ಮಕ್ಕಳಿಗೆ ಪಾಠವಾದ ನಂತರ ನಾನು ನೀತಿ ಮತ್ತು ಪ್ರಕೃತಿಯ ರಕ್ಷಣೆಯ ವಿಷಯಗಳನ್ನು ಕತೆಯ ರೂಪದಲ್ಲಿ ಹೇಳುತ್ತಿದ್ದೇನೆ) ಮಕ್ಕಳಿಗೆ  ಅವರ ಅರ್ಥವಾಗುವ ಸಾಮರ್ಥ್ಯಕ್ಕೆ ಅನುಗುಣವಾಗಿ ದೇವರು ಮೇಲೆ ಸ್ವರ್ಗದಲ್ಲಿದ್ದಾನೆ ಮತ್ತು ನಾವು ಮಾಡುವ ಕರ್ಮಗಳನ್ನು ಪ್ರತಿಯೊಂದು ಗಳಿಗೆಗೂ ಬರೆಯುತ್ತಿದ್ದಾನೆ ಎಂದೂ , ಅದಕ್ಕೆ ಅನುಗುಣವಾಗಿ ನಮಗೆ ಪುಣ್ಯ ಪಾಪದ ಫಲಗಳು ದೊರೆಯುವುದೆಂದು ಹೇಳಿದ್ದೇನೆ.  ಹೀಗೆ ಯಾಕೆ ಹೇಳಬೇಕಾಯಿತೆಂದರೆ ಆ ಮಕ್ಕಳು ಒಳ್ಳೆಯ ಮನೆತನದವರಾದರೂ, ದೇವರ ಸ್ತೋತ್ರ, ಭಜನೆ ಹೇಳುವ ತಂದೆ , ತಾಯಿಯರ ಕುಡಿಯಾದರೂ ಮನೆಯ ಹೊರಗೆ ಅವರು ಮಾಡುವ ಕೆಲಸಗಳನ್ನು ನೋಡಿದರೆ ಇಂತವರ ಕೈಯಲ್ಲಿ ನಮ್ಮ ದೇಶದ ಭವಿಷ್ಯ ಏನಾಗುವುದೋ ಎಂದು ಹೆದರಿಕೆ ಹುಟ್ಟಿಸಿರುವಂತಿತ್ತು. ಹೀಗಾಗಿ ನಾನು ನನ್ನ ಪಾಠ ಹೇಳುವ ಕೆಲಸದ ಜೊತೆ ಅವರನ್ನು ನೀತಿವಂತರನ್ನಾಗಿ ಮಾಡುವ ಪ್ರಯತ್ನದಲ್ಲಿ  ನಮ್ಮ ಪುರಾಣದ ಕತೆಗಳನ್ನು ಹೇಳುವ ಕಾಯಕ ಪ್ರಾರಂಭಿಸಿದ್ದೇನೆ.  &lt;br /&gt;     &lt;br /&gt;        ಪುಸ್ತಕಗಳಲ್ಲಿ ಸರಸ್ವತಿಯ ವಾಸವಿರುವುದರಿಂದ ನಾವು ಯಾವಾಗಲೂ ಅವಳನ್ನು ಚೆನ್ನಾಗಿಡಬೇಕು ಹಾಗು ನಮ್ಮ ಅಕ್ಷರ ಚೆನ್ನಾಗಿದ್ದರೆ ಸರಸ್ವತಿಯು ನಮಗೆ ಬಲುಬೇಗ ಒಲಿಯುತ್ತಾಳೆ.( ಅಂದರೆ ಬಾಯಿಪಾಠವಾಗುತ್ತದೆ)  ಹೀಗೆಲ್ಲಾ ಹೇಳಿದ ಮೇಲೆ ಒಂದಿಷ್ಟು ಸುಧಾರಿಸಿದ್ದಾರೆ. ಸತ್ಯವಾನ್ ಹರಿಶ್ಚಂದ್ರನ ಕತೆ ಹೇಳಿ  ಆ ನಾಟಕ ನೋಡಿದ ಗಾಂಧೀಜಿ ತಮ್ಮ ಕೆಟ್ಟಚಟಗಳ್ಳನ್ನು ಬಿಟ್ಟು ಸತ್ಯವನ್ನೇ ಹೇಳುವ ಪ್ರತಿಜ್ಞೆಯನ್ನು ಮಾಡಿದ ಕತೆ ಹಾಗು ಬಾಲಕರಾದ ಪ್ರಹ್ಲಾದ, ದ್ರುವರ ಕತೆಗಳು ಮಕ್ಕಳ ಮೇಲೆ ತುಂಬಾ ಪ್ರಭಾವ ಬೀರಿತು. ಇಂದಿಗೂ ಮಕ್ಕಳು ದೇವರು ನಾವು ಕೋಣೆಯಲ್ಲಿದ್ದಾನೆಯೇ, ನಮ್ಮನ್ನು ನೋಡುತ್ತಿದ್ದಾನೆಯೇ ಎಂದು ಕೇಳುತ್ತಿದ್ದಾರೆ..... ನಾನು ಅವರಿಗೆ ಹೌದೆಂದು ಹೇಳುವಾಗ ನನ್ನ ಆತ್ಮ ನನ್ನನ್ನು " ನೀನು ನಿಜವನ್ನೇ ಹೇಳುತ್ತಿದ್ದಿಯೇ" ಎಂದು ಕೇಳುವ ಹಾಗೆ ನನಗೆ ಅನಿಸಿತು. &lt;br /&gt;          &lt;br /&gt;       ನಾನು ಈ ಬಾಲಕರಿಗೆ ಹೇಳಿದ ಹಾಗೆ ಬಾಲ್ಯದಲ್ಲಿ ಪಾಪ ಪುಣ್ಯಗಳ ಪ್ರಭಾವವನ್ನು ನಂಬಿದ್ದೆ.... ಹಾಗಾಗಿ ತಪ್ಪು ಮಾಡುವಾಗ ನನ್ನ ಮನಸ್ಸು ಚುಚ್ಚುತ್ತಿದ್ದರಿಂದ ನನ್ನಿಂದ ನಡೆಯುವ ಕರ್ಮಗಳಲ್ಲಿ ತಪ್ಪುಗಳ ಸಂಖ್ಯೆ ಕಡಿಮೆಯಿರುತ್ತಿತ್ತು. ಅಲ್ಲದೆ ನನ್ನ ಮಕ್ಕಳಿಗೂ ನಾನು ಹಾಗೆಯೇ ಉಪದೇಶಿಸಿದೆ. ದೇವರು ನಮ್ಮ ಕರ್ಮಗಳ ಅನುಸಾರವಾಗಿ ನಮಗೆ ಮುಂದಿನ ಜನ್ಮ ಕೊಡುತ್ತಾನೆ..... ಅಂದರೆ ನಾವು ಅನಾವಶ್ಯಕವಾಗಿ ಮತ್ತೊಂದು ಜೀವಿಗೆ ತೊಂದರೆ ಕೊಟ್ಟರೆ ಮುಂದಿನ ಜನ್ಮದಲ್ಲಿ ನಾವು ಕೆಟ್ಟ ಜನ್ಮ ( ಏನಾದರು ಪ್ರಾಣಿಯಾಗಿ---- ನಾಯಿ , ಬೆಕ್ಕುಹಾವು...ಇತ್ಯಾದಿ. ) ಪಡೆಯುತ್ತೇವೆ. ನಮಗೆಲ್ಲಾ ತಿಳಿದೇ ಇದೆ ಮನುಜ ಜನ್ಮ ಶ್ರೇಷ್ಠವೆಂದು. ಇಂತಹ ಹೆದರಿಕೆ ನಮ್ಮನ್ನು ಕೆಟ್ಟ ಕಾರ್ಯ ಮಾಡದಂತೆ ತಡೆಯುತ್ತದೆ. ಅಥವಾ ಕಡಿಮೆ ಮಾಡುತ್ತದೆ.     &lt;br /&gt;&lt;br /&gt;    ...........ಇನ್ನೂ ಇದೆ........&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/6565981025284122780-6010318792127008592?l=teredamanasinaputagalu.blogspot.com' alt='' /&gt;&lt;/div&gt;</description><link>http://teredamanasinaputagalu.blogspot.com/2007/12/blog-post.html</link><author>noreply@blogger.com (ಶೀಲಾ)</author><thr:total xmlns:thr='http://purl.org/syndication/thread/1.0'>2</thr:total></item><item><guid isPermaLink='false'>tag:blogger.com,1999:blog-6565981025284122780.post-1416580447338234612</guid><pubDate>Tue, 20 Nov 2007 06:56:00 +0000</pubDate><atom:updated>2007-12-06T12:17:01.454+05:30</atom:updated><category domain='http://www.blogger.com/atom/ns#'>ಆಧ್ಯಾತ್ಮಿಕ ಅನುಭೂತಿ</category><title>ಅಧ್ಯಾತ್ಮ ಲೋಕದಲ್ಲಿ ಕಂಡ ಅನುಭೂತಿ!</title><description>&lt;span style="font-weight:bold;"&gt;  ಅಧ್ಯಾತ್ಮ ಲೋಕದಲ್ಲಿ ಕಂಡ ಅನುಭೂತಿ!&lt;span style="font-weight:bold;"&gt;&lt;/span&gt;&lt;/span&gt;&lt;br /&gt;   &lt;br /&gt;            ನಾನು ಬೆಳೆದ ವಾತಾವರಣವು ತುಂಬಾ ಭಕ್ತಿಮಯ ಅಥವಾ ಸಂಪ್ರದಾಯಮಯವಾಗಿತ್ತೆಂದೇ ಹೇಳಬಹುದು. ಹಾಗಾಗಿ ಪ್ರತಿದಿನ ಕೆಲವೊಂದು ಸ್ತೋತ್ರಗಳು ಮತ್ತು ಪ್ರಾರ್ಥನೆ, ಭಜನೆಗಳು ಕಡ್ಡಾಯವಾಗಿದ್ದವು. ಎಷ್ಟು ಅಭ್ಯಾಸವಾಗಿದೆಯೆಂದರೆ ಈಗಲೂ ಶ್ಲೋಕಗಳನ್ನು ಹೇಳಲಾಗದ ದಿನಗಳು ಅಪೂರ್ಣವೆನಿಸುತ್ತದೆ.   ಆದರೆ ನಾವು ದೊಡ್ಡವರು ಹೇಳಿದಕ್ಕೆ ಎಲ್ಲವನ್ನೂ ಭಯದಿಂದ ಮಾಡುತ್ತಿದೆವು   ಹೊರತು.... ಅದರಲ್ಲಿ ಯಾವುದೇ ರೀತಿಯ ಭಕ್ತಿ ಭಾವವಿರುತ್ತಿರಲಿಲ್ಲ.  ದಿನಕಳೆದ ಹಾಗೆ ನಮ್ಮ ದಿನನಿತ್ಯ ಮಾಡುವ ಕೆಲಸದ ಜೊತೆ ಇದೂ ಒಂದು ಕೆಲಸದ ಹಾಗೆ ಆಗಿಹೋಯ್ತು. &lt;br /&gt;        ನನ್ನ ತಾಯಿಗೆ ಪ್ರವಚನಕ್ಕೆ ಹೋಗುವ ಅಭ್ಯಾಸವಿತ್ತು. ಅವರ ಜೊತೆ ನಾವೂ ಹೋಗುತ್ತಿದ್ದೆವು, ಹರಿಕತೆ ಕೇಳಲು ಸಂತೋಷದಿಂದಲೇ ಹೋಗುತ್ತಿದ್ದೆವು.. ಹಾಗೆ   ಒಂದು ದಿನ ಬನ್ನಂಜೆ ಗೋವಿಂದಾಚಾರ್ಯರ ಪ್ರವಚನ ಕೇಳುವ ಭಾಗ್ಯ ದೊರೆಯಿತು. ಇಲ್ಲಿಂದ  ಪರಮಾತ್ಮನ ಬಗ್ಗೆ ನನ್ನ ದೃಷ್ಟಿಕೋನವು ಬದಲಾಗಿ ಹೋಯಿತು. ಅಲ್ಲಿಂದ ರಾಮ, ಕೃಷ್ಣರು ನನ್ನ ಗೆಳೆಯರಾದರು. ಭಯವು ದೂರವಾಯಿತು. ಅಲ್ಲಿಂದ ಮುಂದೆ ನನಗೆ ಅನೇಕ ಆಧುನಿಕ ಅಧ್ಯಾತ್ಮಿಕ ಗುರುಗಳ ಬೋಧನೆ ಕೇಳುವ, ಓದುವ ಅವಕಾಶ ದೊರೆಯಿತು. ಇವರ ಮೂಲಕ   ಭಗವಂತ ನಿಜ ರೂಪದ ದರ್ಶನವಾಯಿತು. ಪರಮಾತ್ಮನ ಅಸ್ತಿತ್ವದ  ಅಲೌಕಿಕ  ಅನುಭೂತಿ ದೊರೆಯಿತು.  ಈ ಲೋಕವನ್ನು ಯಾವುದೋ ಒಂದು ಶಕ್ತಿ ನಿಯಂತ್ರಿಸುತ್ತದೆ. ಆ ಶಕ್ತಿಯನ್ನು ಅರಿಯುವುದು ನಮ್ಮನ್ನು ನಾವೇ ಸರಿಯಾಗಿ ತಿಳಿಯುವುದೆಂದೇ ನನ್ನ ಅನಿಸಿಕೆ.  ಈ ಹುಡುಕಾಟದಲ್ಲಿ ನನಗೆ ದಾರಿದೀಪವಾಗಿ ಕಂಡಂತಹ ಕೆಲವು ಗುರುಗಳ ಮಾತನ್ನು ಯಥಾವತ್ತಾಗಿ ಇಲ್ಲಿ ಮೂಡಿಸಿದ್ದೇನೆ.  ಸ್ವಾಮಿ ಸುಖಬೋಧಾನಂದ, ಶ್ರೀಶ್ರೀಶ್ರೀ ರವಿಶಂಕರ, ಇಶೋನವರು ಕಂಡ ಸತ್ಯಗಳು ನನ್ನನ್ನು ಬಲುವಾಗಿ ಸೆಳೆದಿದೆ.  ಪ್ರಾಪಂಚಿಕ ಸುಖದ ಸಮುದ್ರದ ಲೋಕದಲ್ಲಿ ಮುಳುಗಿರುವ ನಮಗೆ ಜೀವನದ ನಿಜವಾದ ದರ್ಶನ     ಈ ಗುರುಗಳ ಬೋಧನೆಯಲ್ಲಿ ಕಾಣಬರುವುದು.  ನನಗೆ ತಿಳಿದುದನ್ನು ಲೋಕಕ್ಕೆ ಹಂಚಬೇಕೆಂಬ ತುಡಿತದಿಂದ ಈ ದಿವ್ಯ ರತ್ನಗಳನ್ನು ನನ್ನ ಬ್ಲಾಗ್ ಮೂಲಕ ಹರಡಿದ್ದೇನೆ. ದಾರಿ ತಪ್ಪಿ ಇಲ್ಲಿ ಬಂದವರು ಆರಿಸಿಕೊಳ್ಳಬಹುದು ಹಾಗು ತಮ್ಮ ಅಭಿಪ್ರಾಯವನ್ನೂ  ಬಿಟ್ಟುಹೋಗಬಹುದು.&lt;br /&gt;&lt;br /&gt;                  *  *   *   *  *&lt;br /&gt;&lt;br /&gt;&lt;br /&gt;    ಸ್ವಾಮಿ ಸುಖಬೋಧಾನಂದರ  "  ಓ ಜೀವನವೇ ರಿಲ್ಯಾಕ್ಸ್ ಪ್ಲೀಸ್"      -----ಇದನ್ನು ಸುಧಾ ಪತ್ರಿಕೆಯಿಂದ ಆರಿಸಲಾಗಿದೆ.&lt;br /&gt;&lt;br /&gt;        * ನಾವೇಕೆ ಸಮಸ್ಯೆಗಳನ್ನು ಸೃಷ್ಟಿಸಿಕೊಳ್ಳುತ್ತೇವೆ?&lt;br /&gt;          &lt;br /&gt;&lt;br /&gt;                   ನಮ್ಮ ಮನಸ್ಸು ಇದ್ದುದರಲ್ಲಿ ತೃಪ್ತವಾಗಿಲ್ಲದಿರುವುದರಿಂದ ನಾವು ಸಮಸ್ಯೆಗಳನ್ನು ಸೃಷ್ಟಿಸಿಕೊಳ್ಳುತ್ತೇವೆ. ನಮ್ಮ ದುರಾಸೆ ವರ್ತಮಾನಕ್ಕಿಂತ ಮುಂದಿನ ಭವಿಷ್ಯ ಚೆನ್ನಾಗಿರುವುದೆಂಬ ಭ್ರಮೆ ಹುಟ್ಟಿಸುತ್ತದೆ.  ಅದೇ ರೀತಿ ನಮ್ಮ ಭೂತಕಾಲ ಹೀಗಿರಬೇಕಾಗಿತ್ತು ಎಂಬ ಭ್ರಮೆ ಹುಟ್ಟಿಸಿ ನಮ್ಮನ್ನು ಅಪೂರ್ಣರಾಗಿ ಮಾಡುತ್ತದೆ. &lt;br /&gt;     ಅದರಿಂದ ಇಂಥ ಮನಸ್ಸಿದ್ದರೆ ನಾವು ಭಿನ್ನವಾಗಿರಲು ಸಾಧ್ಯವಿಲ್ಲ. ಕಾಲಿನಲ್ಲಿ ಕೊಳಕಾದ ಕಾಲುಚೀಲಗಳನ್ನು ಧರಿಸಿಕೊಂಡಿದ್ದರೆ, ಗುಲಾಬಿಯ ಪರಿಮಳ ಬೀರಲು ಸಾಧ್ಯವಿಲ್ಲ.&lt;br /&gt;    ಸ್ವೀಕಾರದ ಆನಂದವನ್ನು ಅನುಭವಿಸಲು ನಮ್ಮ ಮನಸ್ಸು ಇನ್ನೂ ಕಲಿತಿಲ್ಲ. ಇಂಥ ಅಸ್ವೀಕಾರದ ಮನಸ್ಸಿರುವಾಗ ಒಂದು ಬಿಳಿ ಕೂದಲು, ಮುಖದ ಮೇಲಿನ ಒಂದು ಸಣ್ಣ ಸುಕ್ಕು ಸಹ ನಮ್ಮ ಪಾಲಿಗೆ ದುಃಖದ ಸಂಗತಿಯಾಗುತ್ತದೆ. ಇಂಥ ಮನಸ್ಸನ್ನು ಬದಲಾಯಿಸಬೇಕಾಗಿದೆ. &lt;br /&gt;        * * * * *&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/6565981025284122780-1416580447338234612?l=teredamanasinaputagalu.blogspot.com' alt='' /&gt;&lt;/div&gt;</description><link>http://teredamanasinaputagalu.blogspot.com/2007/11/blog-post.html</link><author>noreply@blogger.com (ಶೀಲಾ)</author><thr:total xmlns:thr='http://purl.org/syndication/thread/1.0'>1</thr:total></item><item><guid isPermaLink='false'>tag:blogger.com,1999:blog-6565981025284122780.post-4694162008310549897</guid><pubDate>Wed, 31 Oct 2007 06:20:00 +0000</pubDate><atom:updated>2007-11-20T11:39:26.499+05:30</atom:updated><category domain='http://www.blogger.com/atom/ns#'>ರಾಜಕೀಯ</category><category domain='http://www.blogger.com/atom/ns#'>ವರ್ತಮಾನ</category><title></title><description>&lt;span style="font-weight:bold;"&gt;&lt;span style="font-weight:bold;"&gt;  ಕರ್ನಾಟಕದ  ಹಣೆಬರಹ!&lt;/span&gt;&lt;/span&gt;&lt;br /&gt;&lt;br /&gt;      &lt;br /&gt;&lt;br /&gt;ಅಂತೂ ಇಂತೂ ಕರ್ನಾಟಕದ ರಾಜ ಭವನದಲ್ಲಿ ಮತ್ತೆ ಬಿರುಸಿನ ಚಟುವಟಿಕೆಗಳು ಪ್ರಾರಂಭವಾಗಿವೆ. ಯಡ್ಯೂರಪ್ಪನವರ ತಂಡ ಮತ್ತೆ ಬಣ್ಣಹಚ್ಚಿಕೊಂಡಿದೆ, ಗೆಜ್ಜೆ ಗಿಜ್ಜೆ ಎಲ್ಲಾ ಕಟ್ಟಿಯಾಯಿತು. ಹೊಸ ಪ್ರಸಂಗ! ಇನ್ನೇನೂ ಠಾಕೂರರ  ಮತ್ತು ದೆಹಲಿಯಿಂದ ಒಪ್ಪಿಗೆ ಮಾತ್ರ ಬರುವುದು ಬಾಕಿ! ದೆಹಲಿ ಒಡೆಯರು ಒಪ್ಪಿಗೆ ಕೊಡುವುದು ಮಾತ್ರ ಸಂಶಯ.&lt;br /&gt;&lt;br /&gt;      ಕುಮಾರಸ್ವಾಮಿಯ ಸಂಧಾನ ಕಾರ್ಯ ಯಶಸ್ವಿಯಾಯಿತೆಂದು ತೋರುತ್ತದೆ.  ಸ್ವಲ್ಪವೇ ದಿನಗಳ ಹಿಂದೆ ಒಬ್ಬರ ಮೇಲೊಬ್ಬರು ವಾಗ್ಭಾಣವನ್ನು ಬಿಡುತ್ತಿದ್ದವರು ಈಗ ಮತ್ತೊಮ್ಮೆ ಒಂದಾಗಿದ್ದಾರೆ.. ಎಷ್ಟು ವಿಚಿತ್ರ! ರಾಜಕಾರಣದಲ್ಲಿ ಯಾವಾಗ ದೋಸ್ತಿಗಳಾಗುತ್ತಾರೆ, ಯಾವಾಗ ವೈರಿಗಳಾಗುತ್ತಾರೆ ಎಂದು ಹೇಳಲು ಸಾಧ್ಯವಿಲ್ಲ..ಒಂದಂತೂ ಸತ್ಯ ... ಬಿ.ಜೆ.ಪಿಗೆ ಇನ್ನೂ ಬುದ್ಧಿ ಬಂದಿಲ್ಲ. ಈ ಜೆಡಿ(ಯೆಸ್) ನವರು ಯಾವಾಗ ಕಾಲೆಳೆಯುತ್ತಾರೆಂದು ಹೇಳಲು ಸಾಧ್ಯವಿಲ್ಲ. ಆದರೂ ಗದ್ದುಗೆಯ  ಅಸೆ!  &lt;br /&gt;   ಗೌಡನವರ ಆಲೋಚನೆಯೇನೋ? ಇಲ್ಲದ್ದಿದ್ದರೆ  ಬಿ.ಜೆ. ಪಿಗೆ ಅಧಿಕಾರ ಕೊಡುತ್ತಿರಲ್ಲಿಲ್ಲ!&lt;br /&gt;   ಧರ್ಮಯುದ್ಧ, ನ್ಯಾಯಯುದ್ಧ ಎಲ್ಲಾ ಬದಿಗೆ ಸರೆಯಿತು... ಈಗ ಹೊಸ ಆಟ!  &lt;br /&gt;&lt;br /&gt;ಕೆಲವು ದಿನಗಳ ಹಿಂದೆ ಪೇಪರ್ ನಲ್ಲಿಯೆಡ್ಯೂರಪ್ಪ ನವರಿಗೆ ಮುಖ್ಯ ಮಂತ್ರಿಯಾಗುವ ಯೋಗವಿಲ್ಲವೆಂದು ಒಬ್ಬ ಜ್ಯೋತಿಷಿಗಳು ಭವಿಷ್ಯ ನುಡಿದಿದ್ದರು.. ಯಡ್ಯೂರಪ್ಪರ ಪಟ್ಟಾಭಿಷೇಕವಾಗುತ್ತದೆಯೋ ಎಂದು ಕಾದು ನೋಡಬೇಕು!&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/6565981025284122780-4694162008310549897?l=teredamanasinaputagalu.blogspot.com' alt='' /&gt;&lt;/div&gt;</description><link>http://teredamanasinaputagalu.blogspot.com/2007/10/blog-post_30.html</link><author>noreply@blogger.com (ಶೀಲಾ)</author><thr:total xmlns:thr='http://purl.org/syndication/thread/1.0'>3</thr:total></item><item><guid isPermaLink='false'>tag:blogger.com,1999:blog-6565981025284122780.post-8527146262832765599</guid><pubDate>Wed, 31 Oct 2007 05:39:00 +0000</pubDate><atom:updated>2007-10-31T11:55:12.297+05:30</atom:updated><category domain='http://www.blogger.com/atom/ns#'>ವರ್ತಮಾನ</category><title></title><description>&lt;span style="font-weight:bold;"&gt;&lt;span style="font-weight:bold;"&gt;ಪ್ರೇಮಾ ಕಾರಂತರಿಗೆ ಶೃದ್ಧಾಂಜಲಿ!&lt;/span&gt;&lt;/span&gt;&lt;br /&gt;&lt;br /&gt;  ರಂಗಭೂಮಿಯ ಹಿರಿಯ ತಾರೆ ಪ್ರೇಮಾ ಕಾರಂತ ತೆರೆಮರೆಗೆ ಸರಿದರು. ಅವರಿಗಿದೋ ಭಾವಪೂರ್ಣ ಶೃದ್ಧಾಂಜಲಿ! ಪತಿ ದಿವಂಗತ  ಬಿ.ವಿ. ಕಾರಂತರ ಜತೆ ರಂಗಭೂಮಿಗೆ ೪೦ವರ್ಷಗಳಿಗಿಂತಲೂ ಹೆಚ್ಚು ಕಾಲ ಸೇವೆ ಸಲ್ಲಿಸಿ ನಮಗೆ ಅನೇಕ ನಾಟಕಗಳ ಸವಿಯುಣ್ಣಿಸಿದರು. " ಬೆನಕ ಮಕ್ಕಳ ಕೇಂದ್ರ" ಸ್ಥಾಪಿಸಿ ಮಕ್ಕಳ ರಂಗಭೂಮಿಗೆ ಅಪಾರ ಸೇವೆ ಸಲ್ಲಿಸಿದ್ದ ಇವರು ಫಣಿಯಮ್ಮ, ಹಂಸಗೀತೆ, ಗೋಧೂಳಿ, ಕುದುರೆ ಮೊಟ್ಟೆ ಮೊದಲದ ಚಲನ ಚಿತ್ರಗಳಿಗೆ ವಸ್ತ್ರವಿನ್ಯಾಸ ಮಾಡಿ ಪ್ರಸಿದ್ಧರಾಗಿದ್ದಾರೆ. &lt;br /&gt;  ಸ್ವಲ್ಪ ಸಮಯದ ಹಿಂದೆ ನಾವು ತೇಜಸ್ವಿಯವರನ್ನು ಕಳೆದುಕೊಂಡೆವು. ಈಗ ಮತ್ತೊಂದು ಭರಿಸಲಾಗದ ನಷ್ಟ. ಇಂತವರು ಕನ್ನಡ ನಾಡಿನಲ್ಲೇ ಮತ್ತೊಮ್ಮೆ ಹುಟ್ಟಿ ಬರಲಿ ಎಂದು ಹಾರೈಸೋಣ!&lt;br /&gt;              ******************************************************&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/6565981025284122780-8527146262832765599?l=teredamanasinaputagalu.blogspot.com' alt='' /&gt;&lt;/div&gt;</description><link>http://teredamanasinaputagalu.blogspot.com/2007/10/blog-post.html</link><author>noreply@blogger.com (ಶೀಲಾ)</author><thr:total xmlns:thr='http://purl.org/syndication/thread/1.0'>0</thr:total></item><item><guid isPermaLink='false'>tag:blogger.com,1999:blog-6565981025284122780.post-7095843629658315336</guid><pubDate>Sat, 29 Sep 2007 10:06:00 +0000</pubDate><atom:updated>2007-11-20T11:21:13.923+05:30</atom:updated><category domain='http://www.blogger.com/atom/ns#'>ಪ್ರದರ್ಶನ</category><category domain='http://www.blogger.com/atom/ns#'>ಕಲೆ</category><title>ಕುಂಚ ಬೆರಳುಗಳ ಆಟ ಓಟ!</title><description>&lt;a onblur="try {parent.deselectBloggerImageGracefully();} catch(e) {}" href="http://bp0.blogger.com/_0OuRE6GJbt8/Rv4qjlu-AQI/AAAAAAAAAI0/epOeplJwH9E/s1600-h/IMG_1670.JPG"&gt;                                                                               ಆತ್ಮ ತೃಪ್ತಿ ಕೊಟ್ಟ            &lt;img style="margin: 0px auto 10px; display: block; text-align: center; cursor: pointer;" src="http://bp0.blogger.com/_0OuRE6GJbt8/Rv4qjlu-AQI/AAAAAAAAAI0/epOeplJwH9E/s400/IMG_1670.JPG" alt="" id="BLOGGER_PHOTO_ID_5115573017652363522" border="0" /&gt;                                   &lt;/a&gt;&lt;br /&gt;&lt;br /&gt;&lt;div style="text-align: center;"&gt;&lt;a onblur="try {parent.deselectBloggerImageGracefully();} catch(e) {}" href="http://bp1.blogger.com/_0OuRE6GJbt8/Rv4o41u-AOI/AAAAAAAAAIk/WQv5w8-szjw/s1600-h/IMG_1664.JPG"&gt;&lt;img style="margin: 0px auto 10px; display: block; text-align: center; cursor: pointer;" src="http://bp1.blogger.com/_0OuRE6GJbt8/Rv4o41u-AOI/AAAAAAAAAIk/WQv5w8-szjw/s400/IMG_1664.JPG" alt="" id="BLOGGER_PHOTO_ID_5115571183701328098" border="0" /&gt;&lt;/a&gt;                                                                        ‌                                                                                                                                                                           &lt;------ಮುಗಿಸದಚಿತ್ರ                                                                                                                                                                                                                                                                                     &lt;a onblur="try {parent.deselectBloggerImageGracefully();} catch(e) {}" href="http://bp2.blogger.com/_0OuRE6GJbt8/Rv4oKFu-ANI/AAAAAAAAAIc/6lhD24dnZ40/s1600-h/IMG_0015-1.JPG"&gt;&lt;img style="margin: 0pt 10px 10px 0pt; float: left; cursor: pointer;" src="http://bp2.blogger.com/_0OuRE6GJbt8/Rv4oKFu-ANI/AAAAAAAAAIc/6lhD24dnZ40/s400/IMG_0015-1.JPG" alt="" id="BLOGGER_PHOTO_ID_5115570380542443730" border="0" /&gt;&lt;/a&gt; &lt;/div&gt;&lt;a onblur="try {parent.deselectBloggerImageGracefully();} catch(e) {}" href="http://bp3.blogger.com/_0OuRE6GJbt8/Rv4klVu-AJI/AAAAAAAAAH8/mbxxy02yge0/s1600-h/IMG_0026-2.JPG"&gt;&lt;img style="cursor: pointer;" src="http://bp3.blogger.com/_0OuRE6GJbt8/Rv4klVu-AJI/AAAAAAAAAH8/mbxxy02yge0/s320/IMG_0026-2.JPG" alt="" id="BLOGGER_PHOTO_ID_5115566450647367826" border="0" /&gt;&lt;/a&gt;&lt;br /&gt;&lt;br /&gt;&lt;a onblur="try {parent.deselectBloggerImageGracefully();} catch(e) {}" href="http://bp3.blogger.com/_0OuRE6GJbt8/Rv4klVu-AJI/AAAAAAAAAH8/mbxxy02yge0/s1600-h/IMG_0026-2.JPG"&gt;      &lt;-------ಮೊದಲ ಚಾರ್ ಕೋಲ್ ಚಿತ       &lt;/a&gt;&lt;br /&gt;&lt;br /&gt;&lt;br /&gt;&lt;br /&gt;&lt;div style="text-align: left;"&gt;&lt;a onblur="try {parent.deselectBloggerImageGracefully();} catch(e) {}" href="http://bp0.blogger.com/_0OuRE6GJbt8/Rv4ljlu-ALI/AAAAAAAAAIM/N1usDfJs5Yc/s1600-h/IMG_0008.JPG"&gt;&lt;img style="margin: 0px auto 10px; display: block; text-align: center; cursor: pointer;" src="http://bp0.blogger.com/_0OuRE6GJbt8/Rv4ljlu-ALI/AAAAAAAAAIM/N1usDfJs5Yc/s320/IMG_0008.JPG" alt="" id="BLOGGER_PHOTO_ID_5115567520094224562" border="0" /&gt;&lt;/a&gt;&lt;br /&gt;&lt;/div&gt;&lt;br /&gt;&lt;br /&gt;&lt;br /&gt;&lt;br /&gt;&lt;br /&gt;&lt;br /&gt;&lt;br /&gt;ನನ್ನ ಮೊದಲನೇ ಮತ್ತು ಕೊನೆಯ ತೈಲ ಚಿತ್ರ!----&gt;      &lt;a onblur="try {parent.deselectBloggerImageGracefully();} catch(e) {}" href="http://bp0.blogger.com/_0OuRE6GJbt8/Rv4j0lu-AII/AAAAAAAAAH0/enx_LLmcuSE/s1600-h/IMG_0029-1.JPG"&gt;&lt;img style="margin: 0pt 0pt 10px 10px; float: right; cursor: pointer;" src="http://bp0.blogger.com/_0OuRE6GJbt8/Rv4j0lu-AII/AAAAAAAAAH0/enx_LLmcuSE/s400/IMG_0029-1.JPG" alt="" id="BLOGGER_PHOTO_ID_5115565613128745090" border="0" /&gt;&lt;/a&gt;&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/6565981025284122780-7095843629658315336?l=teredamanasinaputagalu.blogspot.com' alt='' /&gt;&lt;/div&gt;</description><link>http://teredamanasinaputagalu.blogspot.com/2007/09/blog-post_29.html</link><author>noreply@blogger.com (ಶೀಲಾ)</author><media:thumbnail xmlns:media='http://search.yahoo.com/mrss/' url='http://bp0.blogger.com/_0OuRE6GJbt8/Rv4qjlu-AQI/AAAAAAAAAI0/epOeplJwH9E/s72-c/IMG_1670.JPG' height='72' width='72'/><thr:total xmlns:thr='http://purl.org/syndication/thread/1.0'>14</thr:total></item><item><guid isPermaLink='false'>tag:blogger.com,1999:blog-6565981025284122780.post-3479167225403817267</guid><pubDate>Mon, 03 Sep 2007 06:17:00 +0000</pubDate><atom:updated>2007-11-20T11:20:21.967+05:30</atom:updated><category domain='http://www.blogger.com/atom/ns#'>ಆಚರಣೆ</category><category domain='http://www.blogger.com/atom/ns#'>ಹಬ್ಬ</category><title>ನಂದ ಕಿಶೋರನ ಹುಟ್ಟುಹಬ್ಬ!</title><description>ಅನಿಕೇತ, ಬ್ರ್ಹಹ್ಮಜ್ಞಾನಿ, ಗೋಪಿ ವಲ್ಲಭ, ಮುರಲಿಮನೋಹರನಾದ ಶ್ರೀಕೄಷ್ಣನ ಜನ್ಮದಿನದ ಶುಭಾಶಯಗಳು! ಮಹಾವಿಷ್ಣುವಿನ ಪರಿಪೂರ್ಣಾವತಾರವಾದ ಶ್ರೀಕೄಷ್ಣನು ಭಗವದ್ಗೀತೆಯಲ್ಲಿ ಎಲ್ಲಾ ರೀತಿಯ ಮಾನವರಿಗೆ ಹೊಂದುವಂತೆ ವಿವಿದ ರೀತಿಯಲ್ಲಿ ಜ್ಞಾನೋಪದೇಶ ಮಾಡುತ್ತಾನೆ. ಭಕ್ತಿ, ಜ್ಞಾನವಿಜ್ಞಾನ, ಧ್ಯಾನ, ಕರ್ಮ ಯೋಗಗಳ ಮುಲಕ ಅರ್ಜುನನೊಂದಿಗೆ ಎಲ್ಲಾ ಮಾನವ ಕುಲಕ್ಕೂ ವಿಶ್ವ ದರ್ಶನ ಮಾಡಿಸುತ್ತಾನೆ. ಮೋಕ್ಷ ಪ್ರಾಪ್ತಿಗೆ ಸುಲಭವಾದ ಭಕ್ತಿ ಮತ್ತು ಕರ್ಮದ ಮಾರ್ಗ ತೋರಿಸಿದ್ದಾನೆ. &lt;br /&gt;                   ನಮ್ಮ ಪ್ರತಿಯೊಂದು ಕೆಲಸದಲ್ಲಿ ಪ್ರಾಮಾಣಿಕತನ, ಪ್ರೀತಿ ಮತ್ತು ಭಕ್ತಿಯಿರಲಿ ಎಂದು ಉಪದೇಶಿಸುತ್ತಾನೆ. ನೂರಾರು ಹರಕೆ   ಹೊತ್ತು ಎಲ್ಲಾ ದೇವಸ್ಥಾನದ ಭೇಟಿ ಮಾಡಿ ತೋರಿಕೆಯ ಭಕ್ತಿಗಿಂತ ಒಂದೇ ತುಲಸೀ ದಳದ ಅರ್ಪಣೆ ಮೇಲು ಎನ್ನುತ್ತಾನೆ! ತಾಳ ಜಾಗಟೆ ಶಂಖ ಘಂಟೆ ಮೊದಲಾದ ವಾದ್ಯಗಳಿಗಿಂತ ನಿಷ್ಕಳಂಕಿತ ಪ್ರೀತಿ ತೋರಿಸಿ ಎನ್ನುತ್ತಾನೆ.ಪ್ರತಿಯೊಬ್ಬರೂ ತಮ್ಮ ತಮ್ಮ ಕರ್ತವ್ಯವನ್ನು ಮಾಡಿ, ಫಲಾಫಲಗಳನ್ನು ಹರಿಯ ಇಚ್ಚೆಗೆ ಬಿಡಿ, ಎಲ್ಲವೂ ಸರಿಯಾಗುತ್ತದೆ ಎಂದು ಭರವಸೆ ಕೊಡುತ್ತಾನೆ.&lt;br /&gt;                 ಪ್ರಕೄತಿಯಲ್ಲಿ ವಾಸಿಸುವ ಪ್ರತಿಯೊಂದು ಜೀವಿಯನ್ನು ಪ್ರೀತಿಸಿ, ಮಾನವೀಯತೆ ತೋರಿಸಿದರೆ ನಾವು ಭಗವಂತನನ್ನೇ ಆರಾದಿಸಿದಂತಾಗುತ್ತದೆ. ಎಲ್ಲರಿಗೂ ಸನ್ಮಂಗಳವಾಗಲಿ. ವಿಶ್ವ ಶಾಂತಿ ನೆಲೆಸಲಿ. ಎಲ್ಲಾ ಧರ್ಮ, ಜಾತಿಯನ್ನು ಮೀರಿ ಮಾನವ ಜಾತಿಯೊಂದೇ ಮುಖ್ಯವಾಗಲಿ! ಮಾನವೀಯತೆಯೇ ಮುಖ್ಯ ಗುಣವಾಗಲಿ, ಭಗವಂತನ ಆರಾಧನೆಯ ರೂಪವಾಗಲಿ.&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/6565981025284122780-3479167225403817267?l=teredamanasinaputagalu.blogspot.com' alt='' /&gt;&lt;/div&gt;</description><link>http://teredamanasinaputagalu.blogspot.com/2007/09/blog-post.html</link><author>noreply@blogger.com (ಶೀಲಾ)</author><thr:total xmlns:thr='http://purl.org/syndication/thread/1.0'>0</thr:total></item><item><guid isPermaLink='false'>tag:blogger.com,1999:blog-6565981025284122780.post-5812134691234586236</guid><pubDate>Thu, 16 Aug 2007 05:12:00 +0000</pubDate><atom:updated>2007-11-20T11:19:16.840+05:30</atom:updated><category domain='http://www.blogger.com/atom/ns#'>ಆಧ್ಯಾತ್ಮಿಕ ಚಿಂತನೆ</category><title>ನಾಲ್ಕು ಮುದ್ರೆಗಳು!</title><description>ನಿನ್ನೆ "The Times of India"ದಲ್ಲಿ, ಮಾತನಾಡುವ ಮರದಲ್ಲಿ ಬರುವ ಓಶೋನವರ ಬರಹ ಓದಿದೆ.  ನಮ್ಮ ಆಧುನಿಕ ಜೀವನ ಶೈಲಿಗೆ  ಹೇಳಿಸಿದ ಬರಹ ಎಂದು ಅನಿಸಿತು. ಆ ನಾಲ್ಕು ಮುದ್ರೆಗಳು ನಮ್ಮ ಹುಚ್ಚು ಮನಸಿಗೆ ಓಟಕ್ಕೆ ಕಡಿವಾಣ ಹಾಕಿತು ಎಂದು ಅನಿಸಿ, ಎಲ್ಲರಿಗೂ ತಿಳಿಸುವ ಎಂದು ಈ ನನ್ನ ಮೊದಲ ಬ್ಲಾಗ್ ಪ್ರಾರಂಭಿಸುತಿದ್ದೇನೆ.&lt;br /&gt;       ಅಂತಿಮವಾಗಿ ಮುಕ್ತಿ ಪಡೆಯಲು ಮಾನವನು ನಾಲ್ಕು ದ್ವಾರಗಳನ್ನು ಅವುಗಳ ಬೀಗಗಳನ್ನು ಮುರಿದು ದಾಟಬೇಕು. ಮೊದಲನೇ ಮುದ್ರೆ  ಕರ್ಮ ಮುದ್ರೆ,  ನಮ್ಮ ಹೊರ ಕವಚ. ನಾವು ಯಾವ ಕೆಲಸ ಮಾಡುತ್ತಿದ್ದೇವೆಯೋ ಅದು ನಮಗೆ ಚೆನ್ನಾಗಿ ತಿಳಿದಿರಬೇಕು. ಕೋಪವೋ , ತಾಪವೋ ಸುಖವೋ ದುಃಖವೋ ಆದು ನಮಗೆ ಸರಿಯಾಗಿ ತಿಳಿದರೆ ನಾವು ಕೆಟ್ಟದನ್ನು ಬಿಡಬಹುದು. ನಮಗೆ ಚೆನ್ನಾಗಿ ತಿಳಿಯದ ವಿಷಯಗಳು ನಮ್ಮ ಸುತ್ತಲೇ ತಿರುಗುತ್ತದೆ. ಎರಡನೇದು ಜ್ಞಾನ ಮುದ್ರೆ, ಸ್ವಲ್ಪ ಕೆಳಭಾಗದಲ್ಲಿರುವುದು.  ನಾವು ಮಾಡುವ ಕರ್ಮ ಎಲ್ಲರ ಕಣ್ಣಿಗೆ ಕಾಣುತ್ತದೆ. ಆದರೆ ನಮ್ಮ ಭಾವನೆ ಯಾರಿಗೂ ಕಾಣುವುದಿಲ್ಲ! ನಾವು ಯಾವಾಗಲೂ ನಮಗೆ ಗೊತ್ತಿರುವುದನ್ನೇ ನಂಬಬೇಕು. ಉದಾಹರೆಣೆಗೆ ಯಾರಾದರು ನಮಗೆ ದೇವರಿರುವನೇ ಎಂದು ಕೇಳಿದರೆ ನಾವು ನಮಗೆ ನಿಜವಾಗಿ ಗೊತ್ತಿದ್ದ ವಿಷಯ ಹೇಳಬೇಕು. ನಮ್ಮ ಉತ್ತರದಲ್ಲಿ ಯಾವಾಗಲು ಪ್ರಾಮಾಣಿಕತನವಿರಬೇಕು.  ಈ  ಭಾವನೆ ಬೆಳೆಸಿಕೊಂಡಾಗ , ನಮಗೆ ನಿಜವಾದ ಸ್ವಾತಂತ್ರ್ಯದ ಅನುಭವವಾಗುವುದು. &lt;br /&gt;             ಸರಿ ಮುರನೇ ಮುದ್ರೆ ಸಮಯ ಮುದ್ರೆ.  ನಾವೂ ಈಗ ಕಾಲದಲ್ಲಿದ್ದೇವೆ. ಭೂತ ಕಾಲ ಕಳೆದಿದೆ, ಭವಿಷತ್ ಕಾಲ ನಮಗೆ ತಿಳಿದಿಲ್ಲ. ಭೂತ, ಭವಿಷ್ಯಯದ ಬಗ್ಗೆ ನಾವು ಚಿಂತಿಸಿದರೆ ಇಲ್ಲಾ  ನಾವು ನೆನಪಿನಲ್ಲಿರುತ್ತೇವೆ ಅಥವಾ ಸ್ವಪ್ನದಲ್ಲಿರುತ್ತೇವೆ. ಇವೆರಡರನ್ನು ಒಡೆದರೆ ನಾವು ಮುರನೇ ಕದ ತೆರದ ಹಾಗೆ.&lt;br /&gt;      ನಾಲ್ಕನೇ ಬಾಗಿಲು, ಮಹಾಮುದ್ರೆ. ಪವಿತ್ರವಾದ ನಮ್ಮ ಬಹಳ ಒಳಗಿನ ಭಾಗ. ಚಂಡಮಾರುತದ ಕೇಂದ್ರ. ಆಕಾಶದ ಹಾಗೆ ಖಾಲಿ ಜಾಗವಿದೆ ಈ ಒಳಭಾಗದಲ್ಲಿ. ಇದಕ್ಕೆ ಕಾಲ, ಜ್ಞಾನ, ಕರ್ಮದ ಪದರಗಳು. ಈ ಪದರಗಳನ್ನು ಒಡೆದಾಗ ನಾವು ಮುಕ್ತಿಯನ್ನು ಪಡೆಯಬಲ್ಲಿವು!&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/6565981025284122780-5812134691234586236?l=teredamanasinaputagalu.blogspot.com' alt='' /&gt;&lt;/div&gt;</description><link>http://teredamanasinaputagalu.blogspot.com/2007/08/blog-post.html</link><author>noreply@blogger.com (ಶೀಲಾ)</author><thr:total xmlns:thr='http://purl.org/syndication/thread/1.0'>3</thr:total></item></channel></rss>