ನಮಗೆ ನಮ್ಮ ಆಲೋಚನೆಗಳನ್ನು ಮತ್ತು ಜೀವನಕ್ರಮವನ್ನು ಉತ್ತಮಗೊಳಿಸಲು ಸಮಯವಿಲ್ಲವೆಂದರೆ ತುಂಬಾ ದೂರದ ಪ್ರಯಾಣದ ಮಧ್ಯೆ ಇಂದನವನ್ನು ತುಂಬಿಸಲು ಸಮಯವಿಲ್ಲವೆಂದೇ ತಾನೆ! ಪ್ರಯಾಣ ಎಲ್ಲಿ ನಿಲ್ಲುತ್ತದೆಂಬುದು ಯಾರಿಗೆ ಗೊತ್ತು?

08 August, 2015

ಪೂರ್ವಜನ್ಮದ ಸುಕ್ರತ ಫಲವಲ್ಲದೇ ಇನ್ನೇನು!

ಪೂರ್ವಜನ್ಮದ ಸುಕ್ರತ ಫಲವಲ್ಲದೇ ಇನ್ನೇನು!

ಹೀಗೆ ಗುರು ಸ್ಥಾನಕ್ಕೇರಿಸಿದ್ದು ಮಾತ್ರವಲ್ಲ, ಗೌರವಕ್ಕಾರ್ಹತೆ ಪಡೆದದ್ದೂ!

ವರ್ಷ ವರ್ಷ ಗುರುಪೂರ್ಣಿಮೆ ದಿನ ಕಾಣಿಕೆ ಹಾಗೂ ವಂದನೆ ಸಲ್ಲಿಸುವ ಶ್ರೀಧರ್ ಈ ವರ್ಷ ಬಂದಿರಲಿಲ್ಲ. ಅರ್ಹತೆ ಕಳೆದುಕೊಂಡೆನೆ ಅಂತ ಅನಿಸಿದ್ದರೂ ಅದೂ "ಅವನ" ಲೀಲೆಯೇ ಅಂತ ಮರೆತುಬಿಟ್ಟಿದ್ದೆ.

ಶನಿವಾರದ ಡ್ರಾಯಿಂಗ್ ತರಗತಿಗೆ ಎಂದಿನಂತೆ ಬಂದವನು ಮೊದಲು ಕಾಲಿಗೆ ಬಿದ್ದು ಕ್ಷಮೆ ಬೇಡಿದವನು ತನಗೆ ಸೌಖ್ಯವಿಲ್ಲದ ಕಾರಣ ಗುರುಪೂರ್ಣಿಮೆ ದಿನ ಬರಲಾಗಲಿಲ್ಲವೆಂದವನಿಗೆ ಆಶೀರ್ವಾದವನ್ನೂ ಕೊಡಲೂ ಮರೆತು ಬಿಟ್ಟು ಬೆಪ್ಪಾಗಿ ನಿಂತಿದ್ದೆ.

ಏನಿದು ನಿನ್ನ ಲೀಲೆ ನನ್ನೊಡೆಯ! ನಿನ್ನೊಲವನ್ನು ಯಾವುದ್ಯಾವುದೋ ರೂಪದಲ್ಲಿ ತೋರಿಸುವಿ, ಮತ್ತೆ ಮತ್ತೆ ನನ್ನನ್ನು ಧನ್ಯಳನ್ನಾಗಿ ಮಾಡುವಿಯಲ್ಲೋ!!!

No comments:

ಈ ಬರಹಗಳೂ ನಿಮಗಿಷ್ಟವಾಗಬಹುದು!

Related Posts Plugin for WordPress, Blogger...