ನಮಗೆ ನಮ್ಮ ಆಲೋಚನೆಗಳನ್ನು ಮತ್ತು ಜೀವನಕ್ರಮವನ್ನು ಉತ್ತಮಗೊಳಿಸಲು ಸಮಯವಿಲ್ಲವೆಂದರೆ ತುಂಬಾ ದೂರದ ಪ್ರಯಾಣದ ಮಧ್ಯೆ ಇಂದನವನ್ನು ತುಂಬಿಸಲು ಸಮಯವಿಲ್ಲವೆಂದೇ ತಾನೆ! ಪ್ರಯಾಣ ಎಲ್ಲಿ ನಿಲ್ಲುತ್ತದೆಂಬುದು ಯಾರಿಗೆ ಗೊತ್ತು?

18 November, 2015

ಮಾಂತ್ರಿಕ ಸ್ಪರ್ಶ!

ಹಕ್ಕಿಯ ಗೂಡು
ಕಾವು ಕೊಟ್ಟ ಮನಸು
ಮಾಂತ್ರಿಕ ಸ್ಪರ್ಶ!


ಆಡಿಸಿದಳೆಶೋಧ... ಜಗದೋದ್ಧಾರನ!


||ಭಜ ಗೋವಿಂದಮ್||

ಮಾ ಕುರು ಧನಜನ ಯೌವನ ಗರ್ವಂ
ಹರತಿ ನಿಮೇಷಾತ್-ಕಾಲಃ ಸರ್ವಮ್|
ಮಾಯಾಮಯಮಿದಮ್-ಅಖಿಲಂ ಹಿತ್ವಾ
ಬ್ರಹ್ಮಪದಂ ತ್ವಂ ಪ್ರವಿಶ ವಿದಿತ್ವಾ||

-       ಶ್ರೀ ಶಂಕರಾಚಾರ್ಯ

07 November, 2015

ಯಾಕೆ ಹೀಗೆ ನನ್ನೊಲವೇ?


ಯಾಕೆ ಹೀಗೆ ನನ್ನೊಲವೇ,
ಕ್ಷಣದ ಹಿಂದೆ ನಡೆದುದನು ಬದಲಾಯಿಸಲಾಗದವರು
ಕ್ಷಣದ ನಂತರ ನಡೆಯುವುದನು ತಿಳಿಯದವರು
ಭ್ರಮೆಯಲಿ ಹುಕುಂ ಚಲಾಯಿಸಿದರೆ
ಜೋರಾಗಿ ನಗದೇ ಇನ್ನೇನು ಮಾಡಲಿ, ಹೇಳು!

06 November, 2015

ಲಕ್ಷ್ಮಣ ರೇಖೆಗಳ ದಾಟಿದವಳು..

"So many lines are drawn at threshhold...  am I seethe!", she was wondering..

ಅವಳ ದೃಷ್ಟಿ  ಹೊಸ್ತಿಲ ಬಳಿ ಎಳೆದ ರೇಖೆಗಳ ಮೇಲೆ..
ಅವಳಿವಳು ಅವನಿವನು ಅಡ್ಡಾದಿಡ್ಡಿ ರೇಖೆಗಳನ್ನೆಳೆದು ಬಿಟ್ಟಿದ್ದಾರೆ..
ಇವು ಲಕ್ಷ್ಮಣ ರೇಖೆಗಳೇ!

ಅಂಗಣದಾಚೆ ಇರುವವರೆಲ್ಲಾ ರಾವಣರೇ, ಶೂರ್ಪನಖಿಯರೇ?
ಇಲ್ಲಿಲ್ಲ..
ರಾಮನೂ, ಕೃಷ್ಣನೂ ಇರುವರಲ್ಲಿ
ರಾವಣ, ದುಶ್ಯಾಸನರ ನಡುವಿನಲ್ಲಿ..
ಮತ್ತೆ ಸೀತೆಯೂ, ರಾಧೆಯೂ
ಶೂರ್ಪನಖಿ,  ಮಂಥರೆಯರೆಡೆಯಲ್ಲಿ

ಹೆಜ್ಜೆ ಮೊದಲು ತಡವರಿಸಿತು...
ಆದರೆ,
ತಂಗಾಳಿ ಮುಂಗುರಳ ಸರಿಸಿತು..
ಗಂಧವಿಳಿಯಿತು ಎದೆಯೊಳಗೆ
ರತಿ ಮದನರ ಸಲ್ಲಾಪ ಹೂಗಿಡಗಳೆಡೆಯಲ್ಲಿ..
ದೂರದಲ್ಲಿ ಕೋಗಿಲೆಯ ಪಂಚಮ ಗಾನ..
ಎದೆಯೊಳಗೇಕೆ ಮಿಂಚಿನ ಸಂಚು!

ಒಲವಿನ  ಕರೆಯೇ...
ಕ್ಷಣ ಮಾತ್ರದಲಿ
ದಾಟಿ ನಡೆದವಳು ರೇಖೆಗಳನು..
ಕೊನೆಗೂ ಆತ್ಮಕರೆಗೆ ಮಣಿದಳು!

ಗೋಪಿಯಾದಳು  ಗೋಪಾಲನ ಮುರಳಿಯ ನಾದಕೆ..
ಶಿವೆಯಾದಳು ಸದಾಶಿವನ ಡಮರಿನ ನಾದಕೆ..
ನದಿಯಾದಳು ಸಾಗರನ ಶಂಖ ನಾದಕೆ..
ಬದುಕನ್ನೇ ಪಣಕ್ಕಿಟ್ಟು
ಅಮರಳಾದಳು ಒಲವಿನ ಅಮೃತಕೆ!

05 November, 2015

ಮೂರ್ತನಾದ ನಿನ್ನಲ್ಲೂ ಕಂಡೆ ಅವನದೇ ಬಿಂಬ!

“Don’t you feel tired!” He inquired.

ಹ್ಮ್.. ಹಿಂದೊಮ್ಮೆ ಹೇಳಿದನ್ನೇ ಪುನರುಚ್ಚರಿಸಲು ಇಲ್ಲ ಒಂದಿನಿತೂ  ಬೇಸರ,
   
 “ಒಲವೇ,
ನಿನ್ನ ಹಾದಿಯ ಪಯಣಿಗಳಾಗಲು,
ಇರುವ ನಿನ್ನ ಕರಾರುಗಳಿಗೆಗೆಲ್ಲ
ನನ್ನ ತಕರಾರುಗಳಿಲ್ಲ!”

ಹಾಗೂ ನನಗಿದರದೂ ಅರಿವಿದೆ,
ಒಲವು ಕೊಡಲೂ ಮತ್ತು ಪಡೆಯಲೂ
ಪೂರ್ಣ ಶರಣಾಗತಿ ಸ್ಥಿತಿಯೇ ಸರಿ!

ಅಮೂರ್ತನಾದ “ಅವನಿ”ಗೂ
ಮೂರ್ತನಾದ ನಿನಗೂ ಇದು ಅನ್ವಯ,
ಹುಬ್ಬೇರಿಸಬೇಡ,
ಕಂಡಿರುವೆ ನಿನ್ನಲ್ಲೂ “ಅವನ”ದೇ ಬಿಂಬ!

04 November, 2015

ಮತ್ತೆ ಮುಗುಳುನಗದೇ ಇನ್ನೇನು ಮಾಡಲಿ!

ಒಲವೇ,

ಮುಗುಳುನಗದೇ ಮತ್ತೇನು ಮಾಡಲಿ,
ಸುಖಾ ಸುಮ್ಮನೆ ಗಂಟಲು ಹರಿದುಕೊಳ್ಳುವಿಯಲ್ಲ..
ಮತ್ತೆ ಮತ್ತೆ ಅದೇ ಹೇಳುತ್ತ, ಗೊಣಗುತ್ತ
ನಿನ್ನ ಸಾಧನೆಯಲ್ಲ ಮಣ್ಣು ಪಾಲಾಯಿತು, ಅಷ್ಟೇ!

ತ್ಯಾಗ ಬಲದಲ್ಲಿ ತ್ರಿವಿಕ್ರಮನೆತ್ತರಕೆ
ನೀನು ಬೆಳೆದದು ನೋಡುತ್ತಾ
ಕುತ್ತಿಗೆ ಉಳುಕಿದೆ ಅವನದು, ಇವನದು, ಅವರದು..
ಅದರ ಮೇಲೆ ಅಹಂಗೆ ಉಳಿಯ ಧಾಳಿ

ಅವನೊಬ್ಬನೇ ಅಲ್ಲ... ನೋಡು,
ಅವನಂತವರ ದಂಡೇ ಇದೆ ಮುಂದೆ, ಹಿಂದೆ...
ಹೆಣ್ಣು ಮುಷ್ಟಿಯೊಳಗೇ ಇರಲಿ
ಎಂಬ ಹಂಬಲ ಅವರಿಗೆಲ್ಲ

ಮತ್ತೆ ಮುಗುಳುನಗದೇ ಏನು ಮಾಡಲಿ ಹೇಳು!

29 October, 2015

ಗಾಂಧಿ-ಆತ್ಮ ಕತೆಯಿಂದ...

ಕೈನಿಂದ ಕೆಟ್ಟದಾಗಿ ಬರೆಯುವುದನ್ನು ದೋಷಯುಕ್ತ ಶಿಕ್ಷಣದ ಗುರಿಯೆಂದು ಭಾವಿಸಬೇಕು. ಹೇಗೆ ಬರೆಯಬೇಕು ಎಂದು ಕಲಿಸುವಮುಂಚೆ ಮಕ್ಕಳಿಗೆ ಮೊದಲು ಚಿತ್ರ ಕಲೆಯನ್ನು ಕಳಿಸಿಕೊಡಬೇಕೆಂದು ನನ್ನ ಈಗಿನ ಅಭಿಪ್ರಾಯವಾಗಿದೆ. ಮಕ್ಕಳು ಬೇರೆಬೇರೆ ವಸ್ತುಗಳನ್ನು ಅಂದರೆ ಹೂವುಗಳು, ಪಕ್ಷಿಗಳು ಮುಂತಾದವನ್ನು ನೋಡುವಂತೆ ಅಕ್ಷರಗಳನ್ನು ಸೂಕ್ಷ್ಮವಾಗಿ ನೋಡಿ ಕಲಿಯಲಿ. ವಸ್ತುಗಳನ್ನು ಚಿತ್ರಿಸುವುದನ್ನು ಕಲಿತ ಮೇಲೆ ಮಗು ಕೈಬರಹವನ್ನು ಕಲಿಯಲಿ. ಆಗ ಮಗು ಸುಂದರವಾಗಿ ರೂಪು ಪಡೆದ ಕೈಯಿಂದ ಬರೆಯುವುದು.

-ನನ್ನ ಸತ್ಯಶೋಧನೆಯಲ್ಲಿ ಕಥೆ
(ಮೋಹನದಾಸನ ಕರಮಚಂದ್ ಗಾಂಧೀಯವರ ಕನ್ನಡ ಅನುವಾದ-ಜಿ.ಎಮ್.ಕೃಷ್ಣಮೂರ್ತಿ)

ಝುಮಕಿ!



10 October, 2015

ಒಲವೆಳೆವ ಗೆರೆಗಳು!


ದಿಂಬಿಗೊರಗಿದ ಅವಳ ಮುಚ್ಚಿದ ಕಣ್ರೆಪ್ಪೆಯೊಳಗಿನ ಕೊಳ ಬಲು ಶುಭ್ರ

ಬೆಳದಿಂಗಳಲಿ ಕುಂಚವನದ್ದಿ ಒಲವೆಳೆವ ತೇಲುವ ಗೆರೆಗಳಲಿ ಆ ಬಿಂಬ ಭದ್ರ!

09 October, 2015

ಅವನ ಮಿಣುಕು ನೋಟವೇ ನನ್ನ ನಂದಾದೀಪ!

I seek the light only from YOU... So she says!

ಅವ
ವಿದ್ಯುತ್ ಮೊಬಲಗು ಕಟ್ಟಿರಲಿಲ್ಲವೋ ಅಥವಾ ಬೆಳಗಿನಿಂದ ಬೀಸಿ ಸುರಿದ ಗಾಳಿ-ಮಳೆಗೋ, ಇನ್ನೇನೋ ಕಾರಣವೋ.. ಮನೆಯಲ್ಲಿ ಹಚ್ಚಿಟ್ಟ ಮೊಂಬತ್ತಿಗಳು ಕಣ್ಣುಮುಚ್ಚಾಲೆಯಾಡುತ್ತಿದ್ದವು.
ಕತ್ತಲು ತುಂಬಿದ ಕೋಣೆಯ ಕಿಟಿಕಿಯ ಸರಳುಗಳಿಗೆ ಮುಖವೊತ್ತಿ ದೂರ ಆಗಸದತ್ತ ನೋಟ ಚೆಲ್ಲಿದ್ದಳು, ಅದ್ಯಾವುದೋ ನಿರೀಕ್ಷೆ ಕಪ್ಪು ಬಳಿದ ಕಣ್ಣುಗಳಲ್ಲಿ...
"ಅಲ್ಲೇನು ಕಿಟಿಕಿಯ ಬಳಿ ನಿಂತಿದ್ದಿಯೇ! ಬಾ, ಹಾಲು ಚೆಲ್ಲಿರುವ ಅಂಗಣದ ಚೆಲುವ ನೋಡು"
 'ಹ್ಮ್, ಇವರಿಗರಿವಾಗುವುದಾದರೂ ಹೇಗೆ,  ಅನತಿ ದೂರವಿರುವ ಆ ಚುಕ್ಕಿಯ ಮಿಣುಕು ನೋಟವೇ ನನ್ನ ಮನದ ಗುಡಿಯ ನಂದಾದೀಪ'

-ಅವಳ ಡೈರಿಯ ಪುಟಗಳಿಂದ

16 September, 2015

ಗೌರಿ ಗಣೇಶ!




ಕಡೆಗಣಿಸಬೇಡ, ನನ್ನೊಲವೇ!

ಒಲವೇ,

ಕಡೆಗಣಿಸಬೇಡವೇ,
ದೂರದ, ಕೈಗೆಂದೂ ನಿಲುಕದ
ಚುಕ್ಕಿಯ ಹೊಳಪಿಗೆ ಮರುಳಾಗಿ
ಬದುಕು ನಿನ್ನ ಸೆರಗಿನ ಅಂಚಿಗೆ
ಗಂಟು ಹಾಕಿದ ಮುತ್ತು, ಮಾಣಿಕ್ಯಗಳ ಕಡೆಗಣಿಸಬೇಡವೆ,
ಆ ಮುತ್ತು, ಮಾಣಿಕ್ಯಗಳ!

ಕೇಳಿಲ್ಲಿ, ನಿನಗರಿವಿದೆ ತಾನೇ,
ಆ ಚುಕ್ಕಿಯ ವ್ಯಾಪ್ತಿ
ನಿನ್ನ ನನ್ನ ಎಣಿಕೆಗೂ
ಮೀರಿದ್ದು.
ಮತ್ತು ಅದು ನೀಡುವ
ಅನುಪಮ
ಬೆಳಕಷ್ಟೇ ನಮಗೆ
ಸೇರಿದ್ದು!

07 September, 2015

ಕ್ಷಮೆಯಿರಲಿ ಒಲವೇ,

 


ಒಲವೇ,

ಕ್ಷಮಿಸಿ ಬಿಡು,
ಅಂದಿನ ದಿನ ಹಾಗೇ ಉಳಿದಿದೆಯೆಂಬ ಭ್ರಮೆ..
ಒಂದಿಷ್ಟು ಅತಿಕ್ರಮಿಸಲು ಹೊರಟೆ
ಹ್ಮ್.. ನನ್ನ ನಗುವಿನ ಪಾಲು ನಿನಗೂ ಕೊಡಲಷ್ಟೇ.

ಇರಲಿ ಬಿಡು, ನಿನ್ನ ಬದುಕು ನಿನ್ನದು.
ನೆನಪಿರಲಿ, ನನ್ನ ಒಲವು
ಬದಲಾಗದು..
ನಾನಳಿಯುವರೆಗೂ ನನ್ನಲ್ಲಿಯೇ

ಅದರ ಬೀಡು!

03 September, 2015

ಕಾಲ ಚಕ್ರ!

ಒಲವೇ,
ಹೌದು, ಈಗೀಗ ದಿನಗಳು ಬಲು ಕಠಿಣ,
ಎಲ್ಲರ ತಪ್ಪುಗಳಿಗೂ ನೀನೇ ಹೊಣೆ ಅನ್ನುವವರೇ ಸುತ್ತಲೂ

ಆಪಾದನೆಗಳ ಬೆಟ್ಟದ ಭಾರ ಇನ್ನು ಹೊರಲಾರೆ
ಎಂದು ಬೆನ್ನು ಹಾಕಿ ಹೊರಟೆಯಲ್ಲ,

ಸ್ವಲ್ಪ ತಡೆ, ಕೊನೆಯ ಮಾತು ಕೇಳು
ಬಹುಶಃ ನೀನು ಮರೆತಿರುವೆ,

ಕಾಲ ಮತ್ತು ಹಾದಿ, ಬದಲಾಗುವಿಕೆ
“ಆತನ” ನಿಯಮ!
-ರೂಮಿ ಪ್ರೇರಣೆ

When you go through a hard period,
 When everything seems to oppose you,
When you feel you cannot even bear one more minute,
Never give up,

Because it is the time and place that the course will divert.

01 September, 2015

ಕಠಿಣ ಶ್ರಮ ಮತ್ತು ಪ್ರಾಮಾಣಿಕ ಯತ್ನವಿಲ್ಲದೆ ಕಾರ್ಯ...

ಯಥಾ ಏಕೇನ ಹಸ್ತೇನ ತಾಲಿಕಾ ನ ಸಂಪ್ರಪದ್ಯತೆ|
ತಥೋದ್ಯಮ ಪರಿತ್ಯಕ್ತ ಕರ್ಮಂ ನೋತ್ಪಾದ್ಯತೆ ಫಲಂ||

ಒಂದು ಹಸ್ತವು ಚಪ್ಪಾಳೆಯನ್ನು ಉತ್ಪಾದಿಸದು. ಅಂತೆಯೇ, ಕಠಿಣ ಮತ್ತು ಪ್ರಾಮಾಣಿಕ ಯತ್ನವಿಲ್ಲದ ಕಾರ್ಯ 

29 August, 2015

||ವಿನಾಶ ಕಾಲೇ ವಿಪರೀತ ಬುದ್ಧಿಃ||

ಪೌಲಸ್ತ್ಯಃ ಕಥಮನ್ಯದಾರಹರಣೆ ದೋಷಂ ನ ವಿಜ್ಞಾತವಾನ್
ರಾಮೇಣಾಪಿ ಕಥಂ ನ ಹೇಮಹರಿಣಸ್ಯಾಸಂಭವೋsಲಕ್ಷಿತಃ|
ಅಕ್ಷೈಶ್ಚಾಪಿ ಯುಧಿಷ್ಠಿರೇಣ ಸಹಸಾ ಪ್ರಾಪ್ತೋ ಹಯನರ್ಥಃ ಕಥಮ್
ಪ್ರತ್ಯಾಸನ್ನವಿಪತ್ತಿಮೂಢಮನಸಾಂ ಪ್ರಾಯೋ ಮತಿಃ ಕ್ಷೀಯತೆ||
-ಪಂಚತಂತ್ರ
ಕಠಿಣ ತಪಗೈದು ಶಿವನನ್ನೇ ಒಲಿಸಿದ ಪೌಲಸ್ತ್ಯನು ಪರಪತ್ನಿಯನ್ನು ಅಪಹರಿಸುವಂತ ನೀಚ ಕಾರ್ಯ ಮಾಡಿದನೇಕೆ,
ಸುವರ್ಣ ಚಿಂಕೆಯೆಂಬುವುದಿಲ್ಲವೆಂದು ರಾಮನಿಗೆ ಅರಿವಾಗಲಿಲ್ಲ ಅದೇಕೆ,
ದ್ಯೂತವು ಕಷ್ಟಗಳ ಸಾಗರವನ್ನೇ ಹೊತ್ತುತರುವುದೆಂಬ ವಿವೇಕ ಯುಧಿಷ್ಠಿರನಿಗೆ ಇರಲಿಲ್ಲವೇಕೆ,
ಪ್ರಾಯಃ ವಿಧಿಯ ಕಪಿಮುಷ್ಠಿಯಲ್ಲಿ ಸಿಲುಕಿದರೆ ಇಂದ್ರಿಯಗಳು ಮಂಕಾಗಿ ಬುದ್ಧಿ ಬಲಹೀನವಾಗುತ್ತದೆ!

-ಪಂಚತಂತ್ರ

28 August, 2015

ಸತ್ಯ ದರ್ಶನ!


    ಮನುಷ್ಯನ ದುಃಖಕ್ಕೆ ಮೂಲ ಕಾರಣ ಆತನ ಕ್ಷುದ್ರ ಬಯಕೆಗಳು. ತನ್ನ ಬಯಕೆ ಈಡೇರದೇ ಇದ್ದಾಗ  ದುಃಖ ಕೋಪ ಇತ್ಯಾದಿ ಆರಂಭವಾಗುತ್ತದೆ. ಇದರಿಂದ ಆತ ತನ್ನ ಜೀವನವನ್ನು, ಬಂಧು ಮಿತ್ರರ ಜೀವನವನ್ನೂ ನರಕವನ್ನಾಗಿ ಮಾಡುತ್ತಾನೆ. ಇಂತಹ ಸ್ಥಿತಿಯಲ್ಲಿ ಆತನಿಗೆ ತನ್ನೊಳಗಿರುವ ಅಪೂರ್ವ ಶಕ್ತಿಯ ಬಗ್ಗೆ ಅರಿವಿರುವುದಿಲ್ಲ.
    ಸ್ಥಿತಪ್ರಜ್ಞನಾದವನು ಈ ಜಂಜಾಟದಲ್ಲಿ ಸಿಲುಕದೇ, ತನ್ನಂತರಂಗದಲ್ಲಿನ ಆ ಮಹದಾನಂದವನ್ನು ಸದಾ ಸವಿಯುತ್ತಾ ಸಂತೋಷವಾಗಿರುತ್ತಾನೆ. ಆತ ಕಾಮನೆಗಳಿಗೆ ಬೆಂಬೀಳುವುದಿಲ್ಲ. ಬೇಕು ಎನ್ನುವ ಬಯಕೆ ಆತನನ್ನು ಕಾಡುವುದಿಲ್ಲ. ಆತನ ಮನಸ್ಸು ಸದಾ ಪ್ರಸನ್ನವಾಗಿರುತ್ತದೆ. ಜೀವನದಲ್ಲಿ ಎಂತಹ ಸಮಸ್ಯೆ ಬಂದರೂ ಆತ ಉದ್ವೇಗಕ್ಕೆ ಒಳಗಾಗುವುದಿಲ್ಲ. ಆತನ ಮನಸ್ಸು ಗಟ್ಟಿಯಾಗಿರುತ್ತದೆ ಮತ್ತು ಇದರಿಂದ ಆತ ಯಶಸ್ಸನ್ನು ಕಾಣಬಲ್ಲ.
-ವಿದ್ಯಾ ವಾಚಸ್ಪತಿ ಬನ್ನಂಜೆ ಗೋವಿಂದಾಚಾರ್ಯ

ಹಾಳು ಮೋಹ.. ಬುದ್ಧಿ ಮಂಕು!

ಧ್ಯಾಯತೋ ವಿಷಯಾನ್ ಪುಂಸಃ ಸಂಗಸ್ತೇಷೂಪಜಾಯತೇ|
ಸಂಗಾತ್ ಸಂಜಾಯತೇ ಕಾಮಃ ಕಾಮಾತ್ ಕ್ರೋಧೋsಭಿಜಾಯತೇ||

ಕ್ರೋಧಾತ್ ಭವತಿ ಸಮ್ಮೋಹಃ ಸಮ್ಮೋಹಾತ್ ಸ್ಮೃತಿವಿಭ್ರಮಃ|
ಸ್ಮೃತಿಭ್ರಂಶಾತ್ ಬುದ್ಧಿನಾಶೋ ಬುದ್ಧಿನಾಶಾತ್ ವಿನಶ್ಯತಿ||

||ವಿಷಯಗಳನ್ನೇ ನೆನೆಯುತ್ತಿರುವ ಮನುಷ್ಯನಿಗೆ ಅವುಗಳ ನಂಟು ಬೆಳೆಯುತ್ತದೆ. ನಂಟಿನಿಂದ ಆಸೆ ಕುದುರುತ್ತದೆ. ಆಸೆಗೆ ಅಡ್ಡಿಯಾದಾಗ ರೊಚ್ಚು ಮೂಡುತ್ತದೆ.
ರೊಚ್ಚಿನಿಂದ ಮಾಡಬಾರದನ್ನು ಮಾಡುವ ಬಯಕೆ (ತಪ್ಪು ಗ್ರಹಿಕೆ). ಅಂತಹ ಬಯಕೆಗಳಿಂದ ವಿಧಿ-ನಿಷೇಧಗಳ ಮರೆವು. ಮರೆವಿನಿಂದ ತಿಳಿಗೇಡಿತನ, ತಿಳಿಗೇಡಿತನದಿಂದ ಸರ್ವನಾಶ||


-ಶ್ರೀಮದ್ಭಗವದ್ಗೀತಾ ದ್ವಿತಿಯೋಧ್ಯಾಯಃ

22 August, 2015

ಅವನೊಲವಿನ ಭಾವದಲಿ ನಾನು ಪರವಶ!

ಚುಕ್ಕಿಗಳು ಕಪ್ಪುಕುಳಿಯಕ್ಕಾಳಕ್ಕಿಳಿದು ಮಾಯವಾಗಿ,
ಕತ್ತಲೆಯ ಕರಾಳ ಬಾಹು ಚಂದ್ರಮನ ನುಂಗಿ,
ನಭವು ಸೂತಕದಾಚರಣೆಯಲಿರುವ ತನಕ
ನಾನು ಅವನೊಲವಿನ ಭಾವದಲೇ ಪರವಶ.


-      ಪ್ರೇರಣೆ  ಡಬ್ಲ್ಯು ಬಿ ಯೀಟ್ಸ್ ಅವರ ಕವನ!

ನೋವುಗಳ ನಿವಾರಣೆಯ ಹೊಣೆ ನಿನ್ನದೇ, ಒಲವೇ!

ಏ ಮಾಲಿಕ್, ತೆರೆ ಬಂದೆ ಹಮ್..

ಒಲವೇ,
ಚಂಚಲ ಚಿತ್ತನೀ ಮರ್ತ್ಯ,
ಜತೆಗೆ ನೂರಾರು ನ್ಯೂನತೆಗಳು..
ಆದರೂ ನಿನ್ನೀ ಸಾಮಿಪ್ಯ,
ಸದಾ ತೋರುವ  ಅನುಕಂಪ,
ಅನುರಾಗ ತುಂಬಿದೆ ಇಲ್ಲಿ,
ಇಳೆಯ ಬೆಚ್ಚಗಿನ ಮಡಲಲ್ಲಿ;
ಉಸಿರಿತ್ತಾಗಲೇ ಬೊಗಸೆ
ತುಂಬಾ ಉಡುಗೊರೆ
ಮತ್ತಿನ್ನೇನು,
ನೋವುಗಳ ನಿವಾರಣೆಯೂ
ನಿನ್ನದೇ ಹೊಣೆ
ನನಗಿದೆ ದೃಢ ನಂಬಿಕೆ!

ಏ ಮಾಲಿಕ್, ತೆರೆ ಬಂದೆ ಹಮ್

21 August, 2015

ಚೂಡಿ- ಶ್ರಾವಣ ಸಂಭ್ರಮ


ವಿಷ್ಣು ನಾಮ ಸ್ಮರಣಂ

||ನ ವಾಸುದೇವ ಭಕ್ತಾನಾಮಶುಭಂ ವಿದ್ಯತೇ ಕ್ವಚಿತ್ |
ಜನ್ಮಮೃತ್ಯುಜರಾವ್ಯಾಧಿಭಯಂ ನೈವೋಪಜಾಯತೇ||

18 August, 2015

ಕನಸು ನನಸಾಗಲು...

||All things come through desire and every sincere prayer is answered||
-anonymous

ತೀವ್ರ ಹಂಬಲ
ಹೃತ್ಪೂರ್ವಕ ನಿವೇದನೆ
ಸಾಕು, ಕನಸೆಲ್ಲ ನನಸು.ಹ

17 August, 2015

ತುಜ್ಸೆ ನಾರಾಸ್ ನಹಿ ಜ಼ಿಂದಗಿ...

ಇಲ್ಲ ಬದುಕೇ,
ನಿನ್ನ ಮೇಲೇನೂ ಕೋಪವಿಲ್ಲ
ಚಕಿತಳಾಗಿರುವೆ ನಾ ಚಕಿತಳಾಗಿರುವೆ
ನಿನ್ನೆಲ್ಲ ಮುಗ್ಧ ಪ್ರಶ್ನೆಗಳಿಗೆ||

ಚಿಂತಿಸಿರಲಿಲ್ಲ ಬದುಕಲು
ನೋವುಗಳನು ಹೊರಬೇಕಾಗುವುದೆಂದು
ನಸುನಕ್ಕರೂ, ನಗುವಿನ ಋಣ ತೀರಿಸಬೇಕಾಗುವುದೆಂದು
ಭಯವೀಗೀಗ ನನಗೆ ಮುಖವರಳಿಸಿದರೂ ಎಲ್ಲಾದರು
ತುಟಿಯ ಮೇಲೆ ಋಣ ಭಾರವಿರಿಸುವೆನೆಂದು ||

ಹಾಗಂತ ಬದುಕೇ,  ಇಲ್ಲ
ನಿನ್ನ ಮೇಲಿಷ್ಟೂ ಕೋಪವಿಲ್ಲ
ಚಕಿತಳಾಗಿರುವೆ ನಾ ಬರೇ ಚಕಿತಳಾಗಿರುವೆ
ನಿನ್ನೆಲ್ಲ ಮುಗ್ಧ ಪ್ರಶ್ನೆಗಳಿಗೆ||

ತುಂಬಿದರೆ ಇಂದು ಹೊರಲಾರದಷ್ಟು
ದಪ್ಪದ ಹನಿಗಳು ಉದುರುವವು
ನಾಳೇನಾಗುವುದೇನೋ
ಅದರರಿವಿಲ್ಲವೀ ಹನಿಗಳಿಗೆ
ಹಂಬಲಿಸುವವೇನೋ ಕಣ್ಣೂಗಳು
ಎಲ್ಲಿ ಯಾವಾಗ ಹೋಗಿದೆಯೇನೋ ಕಳೆದು
ಬಚ್ಚಿದ್ದೆ ಕಂಬನಿಯೊಂದನು||

ಹಾಗಂತ ಬದುಕೇ,  ಇಲ್ಲ
ನಿನ್ನ ಮೇಲಿಷ್ಟೂ ಕೋಪವಿಲ್ಲ
ಚಕಿತಳಾಗಿರುವೆ ನಾ ಬರೇ ಚಕಿತಳಾಗಿರುವೆ
ನಿನ್ನೆಲ್ಲ ಮುಗ್ಧ ಪ್ರಶ್ನೆಗಳಿಗೆ||

13 August, 2015

ಸಾವಿರ ದಾಟಿದ ಖುಷಿ!

2004ರಿಂದ ಶುರುವಾದ ಹೊಸ ನಂಟು, ಹೊಸ ನೋಟ, ನಾಲ್ಕು ಗೋಡೆಯೊಳಗಿದ್ದುಕೊಂಡೇ ಒಂದು ಸಣ್ಣ ಕಿಟಿಕಿಯ ಮೂಲಕ ಪ್ರಪಂಚದ ತಿರುಗಾಟ, ಹೊಸ ಹೊಸ ವಿಷಯ, ತಾಂತ್ರಿಕತೆ, ಜೊತೆಗೆ ಹೊಸ ದಿಕ್ಕಿಗೆ ತೆರೆದುಕೊಳ್ಳುವ ಲಾಲಸೆ, ಎಲ್ಲೋ ಕಳೆದು ಹೋದ ಸಾಹಿತ್ಯದ ಸಂಗ ಮತ್ತೆ ಕೈಗೆಟುಕುವಷ್ಟು ಸಮೀಪ- ಮತ್ತೆ ಕೀ ಬೋರ್ಡ್ ಕುಟ್ಟಿ ಕುಟ್ಟಿ ಕಲಿತೆ. ಬರೆದೆ. ಬರೆದದನ್ನು ಇಲ್ಲಿ ಹಾಕುತ್ತ ಹೋದೆ. ಮನಸ್ಸಿಗೆ ಬಂದುದು ಯಾವ ಅಡೆತಡೆಯಿಲ್ಲದೆ ಆತಂಕವಿಲ್ಲದೆ "ತೆರೆದ ಮನಸಿನ ಪುಟಗಳ"ಲಿ ಮೂಡಿ ಬಂತು! 2007ರ ಆಗಸ್ಟ್ 15ರಂದು ಪ್ರಾರಂಭವಾದ ಬ್ಲಾಗ್ ಬರಹ 2011ರಿಂದ ಕವನ, ಕತೆ, ಛಾಯಾಚಿತ್ರಗ್ರಹಣ, ಬಣ್ಣಗಳಿಂದ ಕಳೆಗಟ್ಟಿತು. ಯಾರು ಏನನನ್ನುತ್ತಾರೋ ಎಂಬ ಸಂಕೋಚಕ್ಕೆಡೆಯಿಲ್ಲ. ಮುಕ್ತ ವಾತಾವರಣ. ಪ್ರೋತ್ಸಾಹ ಇದೆಯೋ ಇಲ್ಲವೋ.. ಯಾವುದರ ನಿರೀಕ್ಷೆಯಿಲ್ಲ. ಇಂದಿಗೆ ಸಾವಿರ ಪೋಸ್ಟ್ ದಾಟಿತು. So its celebration time!

ಸಾವಿರ ಒಂದನೆಯ ಪೋಸ್ಟ್!!! ಜೇಡ (ಫೋಟೋಗ್ರಾಫಿ)

Oxyopidae species..

Lynx spider


ಜೇಡ (ಫೋಟೋಗ್ರಾಫಿ)


Neoscona rumpfi


12 August, 2015

ಜೇಡ- ಬಲೆ (ಫೋಟೋಗ್ರಾಫಿ)



 Tetragnata viridorufa






leucauge decorata

ಜ಼ಿಂದಗಿ ಪ್ಯಾರ್ ಕಾ ಗೀತ್ ಹೈ!



ಈ ಬದುಕೊಂದು ಒಲವಿನ ಗೀತೆ
ತಾಳ ಮೇಳದಲಿ ಹಾಡಲುಬೇಕು|
ಈ ಬದುಕೊಂದು ಒಲವಿನ ಗೀತೆ
ತಾಳ ಮೇಳದಲಿ ಹಾಡಲುಬೇಕು|
ಈ ಬದುಕು ನೋವಿನ ಆಗರವು
ನಗುನಗುತಲೇ ಪಾಗರ ದಾಟಬೇಕು||


ಈ ಬದುಕೊಂದು ಅನುಭೂತಿ
ಭಗ್ನ ಮನಕೊಂದು ಆಶಾದೀಪ್ತಿ|
ಈ ಬದುಕೊಂದು ಅನುಭೂತಿ
ಭಗ್ನ ಮನಕೊಂದು ಆಶಾದೀಪ್ತಿ|
ಈ ಬದುಕೊಂದು ಪರವೂರು
ಕಾಲನಾಣತಿಯಂತೆ ಮರಳಲೇಬೇಕು||

ಈ ಬದುಕೊಂದು ಒಲವಿನ ಗೀತೆ
ತಾಳ ಮೇಳದಲಿ ಹಾಡಬೇಕು||

ಈ ಬದುಕಿಗೊಂದಿಷ್ಟೂ ನಿಷ್ಠೆಯಿಲ್ಲ ಆದರೂ ಏನಂತೆ
ನಮ್ಮವರೆಲ್ಲ ಆಗ್ರಹವನೆದುರಿಸುವೆನು ಛಲದಿಂದಲೇ|
ಈ ಬದುಕಿಗೊಂದಿಷ್ಟೂ ನಿಷ್ಠೆಯಿಲ್ಲ ಆದರೂ ಏನಂತೆ
ನಮ್ಮವರೆಲ್ಲ ಆಗ್ರಹವನೆದುರಿಸುವೆನು ಛಲದಿಂದಲೇ|
ನಮ್ಮಿಬ್ಬರ ಕೈಗಳು ಬೆಸೆಯದಿದ್ದರೇನಂತೆ
ಮನದ ಬೆಸುಗೆಗೆ ತಡೆಯಿಲ್ಲವಂತೆ||

ಈ ಬದುಕೊಂದು ಒಲವಿನ ಗೀತೆ
ತಾಳ ಮೇಳದಲಿ ಹಾಡಲುಬೇಕು||

ಈ ಬದುಕೊಂದು ಮಂದಸ್ಮಿತೆಯಂತೆ
ನೋವಿನ ಅಸ್ಮಿತೆಯೂ ಹೌದಂತೆ|
ಈ ಬದುಕೊಂದು ಮಂದಸ್ಮಿತೆಯಂತೆ
ನೋವಿನ ಅಸ್ಮಿತೆಯೂ ಹೌದಂತೆ|
ಈ ಬದುಕೊಂದು ಅತಿಥಿಯಂತೆ
ಒಡೆಯನಿಗೆ ಮರಳಿ ಒಪ್ಪಿಸಲೇಬೇಕಂತೆ||

ಈ ಬದುಕೊಂದು ಒಲವಿನ ಗೀತೆ
ತಾಳ ಮೇಳದಲಿ ಹಾಡಲುಬೇಕು||
ಈ ಬದುಕು ನೋವಿನ ಆಗರವು
ನಗುನಗುತಲೇ ಪಾಗರ ದಾಟಬೇಕು||





11 August, 2015

ಹಿಗ್ಗುವಿಕೆ ಅಥವಾ ಕುಗ್ಗುವಿಕೆಯ ಪ್ರಮಾಣ!

ಬದುಕಿನ ಹಿಗ್ಗುವಿಕೆ ಅಥವಾ ಕುಗ್ಗುವಿಕೆಯ ಪ್ರಮಾಣ ಅವರವರ "ಎದೆಗಾರಿಕೆ"ಯ ಮೇಲೆ ಅವಲಂಬಿತ!

Life shrinks or expands in proportion to one's courage!

10 August, 2015

ಬರಹ ಹುಟ್ಟುವ ಕಥನ...

ಓದುವ ಹವ್ಯಾಸ

ಕೆಲವು ಘಳಿಗೆಗಾದರೂ ಅಂದು ನಾ ಹೋಗುತ್ತಿದ್ದ ಸರಕಾರಿ ಗ್ರಂಥಾಲಯದ ಹಳೆಯ ಕಪಾಟುಗಳ ಎದುರು ಇಲ್ಲಿಂದಲೇ ಮತ್ತೆ ಪುಟಗಳನು ತಿರುಗಿಸುವ ಅವಕಾಶ ಕೊಟ್ರಿ!

ಸಾಹಿತ್ಯ ಹುಟ್ಟುವ, ಅಕ್ಷರಕ್ಕಿಳಿಯುವ ಪರಿಯು ಅಚ್ಚರಿಯೇ ಹೌದು! ಕಲ್ಪನೆ ಕಾಗದಕ್ಕಿಳಿಯುತ್ತಾ ಅನುಭೂತಿಗೆ ದಕ್ಕುವ ಅನನ್ಯತೆಯ ವಿವರಣೆ ಶ್ಲಾಘನೀಯ!

ತುಂಬು ಮನದ ಧನ್ಯವಾದ ನರೇಂದ್ರ ಪೈ!

08 August, 2015

ಶಿಷ್ಯಳ ಕೈಚಳಕ!


ಪೂರ್ವಜನ್ಮದ ಸುಕ್ರತ ಫಲವಲ್ಲದೇ ಇನ್ನೇನು!

ಪೂರ್ವಜನ್ಮದ ಸುಕ್ರತ ಫಲವಲ್ಲದೇ ಇನ್ನೇನು!

ಹೀಗೆ ಗುರು ಸ್ಥಾನಕ್ಕೇರಿಸಿದ್ದು ಮಾತ್ರವಲ್ಲ, ಗೌರವಕ್ಕಾರ್ಹತೆ ಪಡೆದದ್ದೂ!

ವರ್ಷ ವರ್ಷ ಗುರುಪೂರ್ಣಿಮೆ ದಿನ ಕಾಣಿಕೆ ಹಾಗೂ ವಂದನೆ ಸಲ್ಲಿಸುವ ಶ್ರೀಧರ್ ಈ ವರ್ಷ ಬಂದಿರಲಿಲ್ಲ. ಅರ್ಹತೆ ಕಳೆದುಕೊಂಡೆನೆ ಅಂತ ಅನಿಸಿದ್ದರೂ ಅದೂ "ಅವನ" ಲೀಲೆಯೇ ಅಂತ ಮರೆತುಬಿಟ್ಟಿದ್ದೆ.

ಶನಿವಾರದ ಡ್ರಾಯಿಂಗ್ ತರಗತಿಗೆ ಎಂದಿನಂತೆ ಬಂದವನು ಮೊದಲು ಕಾಲಿಗೆ ಬಿದ್ದು ಕ್ಷಮೆ ಬೇಡಿದವನು ತನಗೆ ಸೌಖ್ಯವಿಲ್ಲದ ಕಾರಣ ಗುರುಪೂರ್ಣಿಮೆ ದಿನ ಬರಲಾಗಲಿಲ್ಲವೆಂದವನಿಗೆ ಆಶೀರ್ವಾದವನ್ನೂ ಕೊಡಲೂ ಮರೆತು ಬಿಟ್ಟು ಬೆಪ್ಪಾಗಿ ನಿಂತಿದ್ದೆ.

ಏನಿದು ನಿನ್ನ ಲೀಲೆ ನನ್ನೊಡೆಯ! ನಿನ್ನೊಲವನ್ನು ಯಾವುದ್ಯಾವುದೋ ರೂಪದಲ್ಲಿ ತೋರಿಸುವಿ, ಮತ್ತೆ ಮತ್ತೆ ನನ್ನನ್ನು ಧನ್ಯಳನ್ನಾಗಿ ಮಾಡುವಿಯಲ್ಲೋ!!!

31 July, 2015

ಅನಗತ್ಯ ಪ್ರಶ್ನೆಗಳು!

ಒಲವೇ,

“ಅದ್ಯಾವ ನೆಂಟು ನನ್ನದು ನಿನ್ನದು,

ಇರಲಿಕ್ಕಿಲ್ಲ ಬರೇ ಈ ಜನುಮದು!”

ಕಾಲಗರ್ಭ ಅಗೆಯಲು ಹೊರೆಟೆ ನಾನು.

ಒಲವು ನಸುನಕ್ಕಿತು, “ನಿಧಿ ನಿನ್ನದು,

ಮತ್ಯಾಕೆ ಈ ಅನಗತ್ಯ ಪ್ರಶ್ನೆಗಳು!”

ಒಲವೇ, ನಿನ್ನೀ ಮುಗುಳ್ನಗು..

ಒಲವೇ,
ಪರೀಕ್ಷೆಗಳು ಕಠಿಣ ಅನಿಸಿದರೂ...
ಹಾದಿಯಲಿ ಹರಡಿದ ಮುಳ್ಳುಗಳ ಅಡಗಿಸುವ ಗುಲಾಬಿ ಹಾಸು
ನಿನ್ನ ಮುಗುಳ್ನಗು!

ನಿನ್ನೀ ಪರಿಗೆ ನಾ ಬೆರಗು!

ಒಲವೇ,
ಹರಿದು ಚೂರಾದಂತೆ ಅನಿಸಿದರೂ...
ಸೂಜಿ-ದಾರವಿತ್ತು ಸಂತೈಸುವ ನಿನ್ನ ಪರಿಗೆ ನಾ ಬೆರಗು

ನಿನಗದು ಮೆರಗು!

ಗುರುವಿನ ಗುಲಾಮನಾಗುವ ತನಕ ದೊರೆಯದಣ್ಣ ಮುಕುತಿ!


30 July, 2015

ಒಲವು ಮತ್ತು ಸಲ್ಲಾಪ

ಒಲವಿಲ್ಲದ ಸರಸ ಸಲ್ಲಾಪ ಕೃಷ್ಣಪಕ್ಷದ ಚಂದಿರನಂತೆ..
ಸರಸವಿಲ್ಲದ ಒಲವೂ ಮೋಡ ಮುಸುಕಿದ ಚಂದಿರನಂತೆ..
ಒಲವೂ ಸರಸವೂ ಜತೆಯಾದರೆ ನಿತ್ಯ ಹುಣ್ಣಿಮೆ, ನಿತ್ಯ ವಸಂತಮಾಸ!

-ಜೇಮ್ಸ್ ಟಿ. ಎಡೆರ್(ಭಾವಾನುವಾದ)

ಪದ್ಯವಲ್ಲ, ಗದ್ಯವೂ ಅಲ್ಲವಂತೆ; ಮತ್ಯಾವುದಿವು?

ಹೀಗೇ.. ಸುಮ್ಮನೆ!

ಒಲವೇ,
ನಾ ಬರೆದುದನು ಪದ್ಯವೆನ್ನೋ ಹಾಗಿಲ್ಲ.. ಅಂತಾರಲ್ಲಪ್ಪ
ಹಾಗಾದರೆ ಅದು ಗದ್ಯವೇನು.. ತಲೆ ತಿರುಗಿಸ್ತಾರಪ್ಪ

ನಾ ಅವನ್ನು ಹೃದ್ಯವೆನ್ನಲೇನು? ಮೌನಿಯಾಗ್ತಾರಪ್ಪ!

ತಿರುವಿನ ಹಾದಿ ಮತ್ತು ಹೆಜ್ಜೆಗಳು!

ಒಲವೇ,
ಆ ತಿರುವಿನ ಹಾದಿಯಲಿ ನೀ ಎದುರಾದೆ,
ನಮ್ಮ ಹೆಜ್ಜೆಗಳು ಸದ್ದಿಲ್ಲದೆ ಜತೆಗೂಡಿದವು.
ಅದೊಂದು ದಿನ ಹಾದಿ ಕವಲೊಡೆಯಿತು,

ಮತ್ತು  ಹೆಜ್ಜೆಗಳು ಅಲ್ಲೇ ಬಾಕಿ ಉಳಿದವು!

ಕೇಳಿದೆಲ್ಲ ಕೊಡದವನು ಅವನು..

ಒಲವೇ,
ಹೇಳುತ್ತಾರಲ್ಲ
ದೊರೆಯುವುದೆಲ್ಲವು
ಪ್ರಾರ್ಥಿಸುವುದರಿಂದ
ಆದರೂ
ಅದ್ಯಾಕೆ
ಕೊಡನವನು
ನಾ
ಕೇಳಿದುದನೆಲ್ಲ!

ತಣ್ಣಗಿನ ನೆರಳು ನನ್ನೊಲವು!

ಒಲವೇ,
ಅನಿಸುತದೆ ನಿನ್ನ ನೋಡಿದಾಗಲೆಲ್ಲ ಕೇಳಬೇಕು ಎಂದು
ಬಿರುಬಿಸಿಲಿನ ಈ ಬದುಕಿಗೆ ತಣ್ಣಗಿನ ನೆರಳಾಗಿ ನೀ ಬರುವೆಯಾ ಎಂದು


ಮೂಡಣದ ರಂಗಿನ ರಥ!

ಮೂಡಣ ದಿಕ್ಕಿನಲಿ ಧೂಳೆಬ್ಬಿಸುವ ಪಥ

ಕಾಣುತಿದೆ ರಂಗು ತುಂಬಿಹ ಡಬ್ಬಿಗಳ ರಥ!

29 July, 2015

ಒಲವಿಲ್ಲದೆ...

ಒಲವಿಲ್ಲದೆ ಬಕುತಿಯಿಲ್ಲ...
ಬಕುತಿಯಿಲ್ಲದೆ ಮುಕುತಿಯಿಲ್ಲ!

ಮಹಾಕಾವ್ಯ ಒಲವು

ಶಬ್ದಗಳಿಗೆ ನಿಲುಕದ ಮಹಾಕಾವ್ಯ ಒಲವು, ಸುಮ್ಮನಿರುವುದೆ ಒಳಿತು
ಹೋಳಿಗೆ ಮೆದ್ದ ಮೂಕ ಸುಮ್ಮನೆ ಹಲ್ಲು ಕಿಸಿದನಂತೆ ಅರಿತು!
-ಕಬೀರ (ಭಾವಾನುವಾದ)

ಬೆಳ್ಳಿಯ ಅಡ್ಡಾದಿಡ್ಡಿ ರೇಖೆಗಳು..

ಒಲವೇ, 
ನಿಂಗೊತ್ತಾ...
ನಿಶೆಯ ಮಡಿಲಲಿ ಅವಳು ಬಚ್ಚಿಟ್ಟ ಹನಿಗಳು
ಭಾನು ಚೆಲ್ಲಿದ ರಂಗಿನ ಹುಡಿಯಲಿ ಬೆರೆತವು;
ಮುಗಿಲ ತುಂಬಾ ಮುಂಜಾವು ಎಳೆದ
ಬೆಳ್ಳಿಯ ಅಡ್ಡಾದಿಡ್ಡಿ ರೇಖೆಗಳನು ಬೆಸೆದವು!

ಭಲೆ ಬಲೆ!



ಆಷಾಢದ ಹನಿಗಳು..




ಸಲ್ಲಾಪ...


28 July, 2015

ಕನಸುಗಳು ಅಕ್ಷರಗಳಾಗಿ...

ಇಣುಕುತಿವೆ ಕನಸುಗಳು ಅಕ್ಷರಗಳಾಗಿ
ಮನದ ಗೂಡ ಹೊರಗೆ ನನಸಾಗಿ!

ಸಹಕಾರವಿರಲಿ ನಿಯತಿಯೇ, ಒಂದಿಷ್ಟು
ಒಲವಿರಲಿ ಬಂಧುಗಳೇ, ಬಹಳಷ್ಟು!

ಕುಂದರಿರಲಿ ಬಲವು ಏಳ್ಳಷ್ಟು

ಬರೆಯುತ್ತಲೇ ಇರುವೆ ನನಗಾಗುವಷ್ಟು!

24 July, 2015

ಲೋಟ್ ಕೆ ಆಜ ಮೆರೆ ಪ್ರೀತ್... ಆಹಾ!!!

ಬರಸೆ ಗಗನ್ ಮೆರೆ
ಬರಸೆ ನಯನ್
ದೆಖೊ ತರಸೆ ಹೆ ಮನ್
ಅಬ್ ತೊ ಆಜಾ|
ಶೀತಲ್ ಪವನ್ 
ಎ  ಲಗಾಯೆ ಅಗನ್ ಹೊ
ಸಜನ್ ಅಬ್ ತೊ
ಮುಖಡಾ ದಿಖಾಜಾ|
ತುನೆ ಭಲೆ ರೆ ನಿಭಾಯೆ ಪ್ರೀತ್
ತುಜೆ ಮೆರಿ ಗೀತ್ ಬುಲಾತೆ ಹೈ
ಆ ಲೋಟಕೆ ಆಜಾ ಮೆರಿ ಮೀತ್|
ಎಕ ಪಲ್ ಹೈ ಹಸನಾ
ಎಕ ಪಲ್ ಹೈ ರೋನಾ
ಕೈಸಾ ಹೈ ಜೀವನ್ ಕಾ ಖೇಲಾ...
ಎಕ ಪಲ್ ಹೈ ಮಿಲನಾ
ಎಕ ಪಲ್  ಬಿಛಡನಾ

ದುನಿಯಾ ಹೈ ದೋ ದಿನೋಕೆ ಮೇಲಾ,... 

https://www.youtube.com/watch?v=-_dqxw_sH3M

ಈ ಬರಹಗಳೂ ನಿಮಗಿಷ್ಟವಾಗಬಹುದು!

Related Posts Plugin for WordPress, Blogger...