ನಮಗೆ ನಮ್ಮ ಆಲೋಚನೆಗಳನ್ನು ಮತ್ತು ಜೀವನಕ್ರಮವನ್ನು ಉತ್ತಮಗೊಳಿಸಲು ಸಮಯವಿಲ್ಲವೆಂದರೆ ತುಂಬಾ ದೂರದ ಪ್ರಯಾಣದ ಮಧ್ಯೆ ಇಂದನವನ್ನು ತುಂಬಿಸಲು ಸಮಯವಿಲ್ಲವೆಂದೇ ತಾನೆ! ಪ್ರಯಾಣ ಎಲ್ಲಿ ನಿಲ್ಲುತ್ತದೆಂಬುದು ಯಾರಿಗೆ ಗೊತ್ತು?

31 December, 2014

ರಾಧೆಯ ಪತ್ರ..

ಕೃಷ್ಣ,

ಸೂಜಿ-ದಾರದ ಹಂಗಿಲ್ಲದ ನಮ್ಮೀ ಬಂಧ
ಜತೆಯಿರದೆಯೂ ಜತೆಗೆ ಉಳಿದ ಸಂಬಂಧ..

ಸಪ್ತಪದಿಯ ನಡೆಯಿಲ್ಲ, ಮಂತ್ರ ಘೋಷವಿಲ್ಲದ ಬಂಧ..
ಯುಗಯುಗದಲೂ ಮರಳುವ ಅನುಬಂಧ..

ಪಾರಿಜಾತದ ಘಮದಲಿ ಮಿಂದೇಳುವ ಒಲವು..
ಮುರಳಿಯ ನಾದದಲಿ ನಲಿಯುವ ಒಲವು..

ರಂಗಿನ ಗರಿಯ ಒಲುಮೆಯ ನೋಟದ ಕಚುಕುಳಿಯು..
ನಿನ್ನೀ ರಾಧೆಗೆ ಅದೇ ನೂರಾನೆಗಳ ಬಲವು!

No comments:

ಈ ಬರಹಗಳೂ ನಿಮಗಿಷ್ಟವಾಗಬಹುದು!

Related Posts Plugin for WordPress, Blogger...